Saturday, July 27, 2024
Homeಜಿಲ್ಲಾ ಸುದ್ದಿಗಳುತುಮಕೂರು : ಕರ್ತವ್ಯಲೋಪವೆಸಗಿದ ಐವರು ಪೊಲೀಸರ ಅಮಾನತು

ತುಮಕೂರು : ಕರ್ತವ್ಯಲೋಪವೆಸಗಿದ ಐವರು ಪೊಲೀಸರ ಅಮಾನತು

ತುಮಕೂರು, ಜೂ.11- ಕ್ರಿಮಿನಲ್‌ಗಳಿಗೆ ಪೊಲೀಸ್‌‍ ಇಲಾಖೆಯ ಮಾಹಿತಿ ಸೋರಿಕೆ ಆರೋಪದಡಿ ಒಂದೇ ದಿನ ಐವರು ಪೊಲೀಸ್‌‍ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಅಶೋಕ್‌ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಕ್ಯಾತಸಂದ್ರ ಪೊಲೀಸ್‌‍ ಠಾಣೆಯ ಇಬ್ಬರು, ಜಯನಗರ ಠಾಣೆಯ ಓರ್ವ, ಟ್ರಾಫಿಕ್‌ ಠಾಣೆಯ ಕಾನ್‌ಸ್ಟೆಬಲ್‌‍, ಎಸ್‌‍ಪಿ ಕಚೇರಿಯ ಒಬ್ಬ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.ಅಮಾನತಾದ ಸಿಬ್ಬಂದಿ ಮಂಜುನಾಥ್‌ ರೆಡ್ಡಿ, ನವೀನ್‌, ನರಸಿಂಹ ಮೂರ್ತಿಗೆ ಮಾಹಿತಿ ಸೋರಿಕೆ ಮಾಡಿದರು ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.

ನವೀನ್‌ ಮಂಜುನಾಥ್‌ ರೆಡ್ಡಿ, ನರಸಿಂಹ ಮೂರ್ತಿ ಈ ಮೂವರು ಆರೋಪಿಗಳ ವಿರುದ್ಧ ದಂಡಿನಶಿವರ ಹಾಗೂ ತಿಲಕ್‌ ಪಾರ್ಕ್‌ ಪೊಲೀಸ್‌‍ ಠಾಣೆಯಲ್ಲಿ ಕೊಲೆ ಸಂಚು, ಹಲ್ಲೆ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು.ವಾಟ್ಸಾಪ್‌ ಮೂಲಕ ಆರೋಪಿಗಳಿಗೆ ಮಾಹಿತಿ ರವಾನಿಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

RELATED ARTICLES

Latest News