Monday, May 6, 2024
Homeರಾಜ್ಯಸ್ನೇಹಿತರ ದ್ವಿಚಕ್ರ ವಾಹನಗಳ ನಡುವೆಯೇ ಅಪಘಾತ : ಐಟಿಸಿ ಉದ್ಯೋಗಿ ಸಾವು

ಸ್ನೇಹಿತರ ದ್ವಿಚಕ್ರ ವಾಹನಗಳ ನಡುವೆಯೇ ಅಪಘಾತ : ಐಟಿಸಿ ಉದ್ಯೋಗಿ ಸಾವು

ಬೆಂಗಳೂರು,ಫೆ.17- ಸ್ನೇಹಿತರಿಬ್ಬರು ತಮ್ಮ ತಮ್ಮ ದ್ವಿಚಕ್ರ ವಾಹನದಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ ಒಬ್ಬಾತನ ಬೈಕ್ ಗೆಳೆಯನ ಸ್ಕೂಟರ್‍ಗೆ ಡಿಕ್ಕಿ ಹೊಡೆದಿದ್ದರಿಂದ ಆತ ಮೃತಪಟ್ಟಿರುವ ಘಟನೆ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಯಲಹಂಕದ ಮೀನಕುಂಟೆ ಹೊಸೂರು ನಿವಾಸಿ ದೇವರಾಜ್(32) ಮೃತಪಟ್ಟವರು.

ಸ್ನೇಹಿತರಾದ ರಾಜೇಶ್ ಮತ್ತು ದೇವರಾಜು ಅವರು ಐಟಿಸಿ ಕಂಪನಿಯ ಉದ್ಯೋಗಿಗಳು. ನಿನ್ನೆ ಕೆಲಸ ಮುಗಿಸಿಕೊಂಡು ರಾಜೇಶ್ ಬೈಕ್‍ನಲ್ಲಿ ಹಾಗೂ ದೇವರಾಜ್ ಅವರು ಸ್ಕೂಟರ್‍ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದರು. ಬಚ್ಚನಹಳ್ಳಿ ಬಳಿ ರಾಜೇಶ್ ಬೈಕ್ ನಿಯಂತ್ರಣ ತಪ್ಪಿ ಗೆಳೆಯನ ಸ್ಕೂಟರ್‍ಗೆ ಡಿಕ್ಕಿ ಹೊಡೆದ ಪರಿಣಾಮ ದೇವರಾಜ ಅವರು ಗಂಭೀರ ಗಾಯಗೊಂಡರು.

ಲೋಕಸಭಾ ಚುನಾವಣೆಗೆ ಕಮಲ ಕಹಳೆ, ದೆಹಲಿಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಾವೇಶ

ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಬೈಕ್ ಸವಾರ ರಾಜೇಶ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

RELATED ARTICLES

Latest News