Sunday, October 27, 2024
Homeರಾಷ್ಟ್ರೀಯ | Nationalಮಲಮಗನನ್ನು ಕೊಂದು ಶವವನ್ನು ತೊಟ್ಟಿಯಲ್ಲಿ ಬಚ್ಚಿಟ್ಟಿದ್ದ ಮಲತಾಯಿ

ಮಲಮಗನನ್ನು ಕೊಂದು ಶವವನ್ನು ತೊಟ್ಟಿಯಲ್ಲಿ ಬಚ್ಚಿಟ್ಟಿದ್ದ ಮಲತಾಯಿ

ಗಾಜಿಯಾಬಾದ್, ಅ.17- ಮಲತಾಯಿ ತನ್ನ ಮಲಮಗನನ್ನು ಹತ್ಯೆ ಮಾಡಿ ಶವವನ್ನು ಒಳಚರಂಡಿ ತೊಟ್ಟಿಯಲ್ಲಿ ಬಚ್ಚಿಟ್ಟಿದ್ದ ಘಟನೆ ಇಲ್ಲಿನ ಗೋವಿಂದ್‍ಪುರಿಯಲ್ಲಿ ನಡೆದಿದೆ. ಮಲತಾಯಿಯಿಂದಲೇ ಹತ್ಯೆಯಾದ ಮಲಮಗನನ್ನು 11 ವರ್ಷದ ಬಾಲಕ ಶಾದಾಬ್ ಎಂದು ಗುರುತಿಸಲಾಗಿದ್ದು, ಮಲತಾಯಿ ರೇಖಾಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ 15 ರಂದು ಶಾದಾಬ್ ನಾಪತ್ತೆಯಾಗಿದ್ದ ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಆತ ಮನೆಯಿಂದ ಹೊರಬಾರದಿರುವುದು ಪತ್ತೆಯಾಗಿತ್ತು. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಪೊಲೀಸರು ಮನೆಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಒಳಚರಂಡಿ ತೊಟ್ಟಿಯಲ್ಲಿ ಅಪ್ರಾಪ್ತನ ಶವ ಪತ್ತೆಯಾಗಿದೆ ಎಂದು ಹೆಚ್ಚುವರಿ ಆಯುಕ್ತ (ಮೋದಿ ನಗರ ವೃತ್ತ) ಜ್ಞಾನ್ ಪ್ರಕಾಶ್ ರೈ ತಿಳಿಸಿದ್ದಾರೆ.

ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ, ಆತನ ಮಲತಾಯಿ ರೇಖಾ ತನ್ನ ಸ್ನೇಹಿತೆ ಪೂನಂ ಸಹಾಯದಿಂದ ಶಾಬಾದ್‍ನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಅವರು ಹೇಳಿದರು.

ವಿಶ್ವಕ್ಕೆ ಹೆಚ್ಚಿನ ಕೊಡುಗೆ ನೀಡುವ ಸಾಮರ್ಥ್ಯ ಭಾರತಕ್ಕಿದೆ : ಜೈಶಂಕರ್

ಇದು ಪೂರ್ವಯೋಜಿತ ಕೊಲೆ ಎಂದು ರೇಖಾ ಪೊಲೀಸರಿಗೆ ತಿಳಿಸಿದ್ದು, ಶಾಬಾದ್ ಹೊರಗೆ ಆಟವಾಡಿದ ನಂತರ ಮನೆಗೆ ಹಿಂದಿರುಗಿದಾಗ ತಾನು ಅಪರಾಧ ಮಾಡಿದ್ದೇನೆ ಎಂದು ಪೊಲೀಸರು ತಿಳಿಸಿದ್ದಾರೆ, ರಾಹುಲ್ ಸೇನ್ ಅವರ ಎರಡನೇ ಪತ್ನಿ ರೇಖಾ ಅವರು ತಮ್ಮ ಮಲಮಗನನ್ನು ಇಷ್ಟಪಡಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಸೇನ್ ಅವರು ಸಲೂನ್ ನಡೆಸುತ್ತಿದ್ದಾರೆ ಮತ್ತು ಮೂರು ವರ್ಷಗಳ ಹಿಂದೆ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದರು.

ರೇಖಾ ತನ್ನ ಪತಿ ಮತ್ತು ಅತ್ತೆಯ ಮುಂದೆ ತನ್ನ ಮಲಮಗನ ಅಪಹರಣದ ಕಥೆಯನ್ನು ಹೆಣೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಬಾದ್ ಹತ್ಯೆಗೆ ಸಹಕರಿಸಿದ ರೇಖಾ ಮತ್ತು ಆಕೆಯ ಸ್ನೇಹಿತೆ ಪೂನಂ ಅವರನ್ನು ಇಂದು ಸಂಜೆ ಜೈಲಿಗೆ ಕಳುಹಿಸಲಾಗಿದೆ ಎಂದು ಎಸಿಪಿ ರೈ ತಿಳಿಸಿದ್ದಾರೆ.

RELATED ARTICLES

Latest News