Sunday, September 8, 2024
Homeರಾಷ್ಟ್ರೀಯ | Nationalಟಿಎಂಸಿ ಕಾರ್ಯಕರ್ತರಿಂದ ಅಡ್ಡಿ : ಮತದಾನ ಅವಕಾಶ ವಂಚಿತರನ್ನು ಭೇಟಿ ಮಾಡಿದ ರಾಜ್ಯಪಾಲರು

ಟಿಎಂಸಿ ಕಾರ್ಯಕರ್ತರಿಂದ ಅಡ್ಡಿ : ಮತದಾನ ಅವಕಾಶ ವಂಚಿತರನ್ನು ಭೇಟಿ ಮಾಡಿದ ರಾಜ್ಯಪಾಲರು

ಕೋಲ್ಕತ್ತಾ, ಜು.17 (ಪಿಟಿಐ) – ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತಣಮೂಲ ಕಾಂಗ್ರೆಸ್‌‍ ಕಾರ್ಯಕರ್ತರು ಮತ ಚಲಾಯಿಸಲು ಅವಕಾಶ ನೀಡಲಿಲ್ಲ ಎನ್ನಲಾದ ಸುಮಾರು 100 ಮಂದಿಯನ್ನು ರಾಜ್ಯಪಾಲ ಸಿವಿ ಆನಂದ ಬೋಸ್‌‍ ಅವರನ್ನು ಇಂದು ಭೇಟಿಯಾಗಿ ವಿವರಣೆ ಪಡೆದುಕೊಂಡರು.

ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ನೇತತ್ವದಲ್ಲಿ ಉಪಚುನಾವಣೆ ಹಾಗೂ ಲೋಕಸಭೆ ಚುನಾವಣೆ ವೇಳೆಯೂ ಮತದಾನ ಮಾಡಲು ಅವಕಾಶ ನೀಡಿಲ್ಲ ಎಂದು ಅವರು ಆರೋಪಿಸಿದರು.ನಿನ್ನೆ ನಡೆದ ಸಭೆಯಲ್ಲಿ ಬೋಸ್‌‍ ಅವರೊಂದಿಗೆ ಸಂವಾದ ನಡೆಸಿ, ಈ ವಿಷಯವನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು.

ರಾಜಭವನದಲ್ಲಿ ಬೋಸ್‌‍ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಅಪಾಯಿಂಟ್‌ಮೆಂಟ್‌ ಕೇಳುವುದಾಗಿ ಮತ್ತು ಈ ಮತದಾರರನ್ನು ಅವರ ಬಳಿಗೆ ಕರೆದೊಯ್ಯುವುದಾಗಿ ಹೇಳಿದರು.

ರಾಷ್ಟ್ರಪತಿಯವರು ದೇಶದ ಸಾಂವಿಧಾನಿಕ ಮುಖ್ಯಸ್ಥರಾಗಿದ್ದಾರೆ ಮತ್ತು ಪಶ್ಚಿಮ ಬಂಗಾಳದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಇದನ್ನು ಮುಂದುವರಿಸಲು ಅನುಮತಿಸಲಾಗುವುದಿಲ್ಲ. ನಾನು ಅವರೊಂದಿಗೆ ಅಪಾಯಿಂಟೆಂಟ್‌ ಕೇಳುತ್ತೇನೆ ಮತ್ತು ಈ ಐದು ಜನರನ್ನು ಅವರನ್ನು ಭೇಟಿ ಮಾಡಲು ಕರೆದುಕೊಂಡು ಹೋಗುತ್ತೇನೆ ಎಂದು ಅವರು ಹೇಳಿದರು.

RELATED ARTICLES

Latest News