Wednesday, July 23, 2025
Homeರಾಷ್ಟ್ರೀಯ | Nationalಧನ್‌ಕರ್‌ ಉತ್ತರಾಧಿಕಾರಿಯಾಗಿ ಹಿಂದುಳಿದ ಅಥವಾ ಅತ್ಯಂತ ಹಿಂದುಳಿದ ವರ್ಗಗಳ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆ

ಧನ್‌ಕರ್‌ ಉತ್ತರಾಧಿಕಾರಿಯಾಗಿ ಹಿಂದುಳಿದ ಅಥವಾ ಅತ್ಯಂತ ಹಿಂದುಳಿದ ವರ್ಗಗಳ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆ

Who will be India’s next Vice Prez? Is NDA mulling a backward class candidate

ನವದೆಹಲಿ,ಜು.23- ಉಪಾಧ್ಯಕ್ಷ ಜಗದೀಪ್ ಧನ್ಕರ್ ಅನಾರೋಗ್ಯದ ಕಾರಣ ನೀಡಿ ಹಠಾತ್ತನೆ ರಾಜೀನಾಮೆ ನೀಡಿದ ಒಂದು ದಿನದ ನಂತರ, ಎನ್‌ಡಿಎ ಹಿಂದುಳಿದ ಅಥವಾ ಅತ್ಯಂತ ಹಿಂದುಳಿದ ವರ್ಗಗಳ ಅಭ್ಯರ್ಥಿಯನ್ನು ಅವರ ಉತ್ತರಾಧಿಕಾರಿಯಾಗಿ ಕಣಕ್ಕಿಳಿಸುವ ಸಾಧ್ಯತೆಯಿದೆ.

ಈ ನಡುವೆ ಭಾರತದ ಮುಂದಿನ ಉಪರಾಷ್ಟ್ರಪತಿ ಯಾರಾಗಬಹುದು ಎಂಬ ಬಗ್ಗೆ ಸಾಮಾಜಿಕ ಮಾಧ್ಯಮ ಮತ್ತು ರಾಜಕೀಯ ವಲಯಗಳಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ರಿಂದ ಹಿಡಿದು ಕಾಂಗ್ರೆಸ್ ಸಂಸದ ಶಶಿ ತರೂ‌ರ್ ವರೆಗೆ ಜಗದೀಪ್ ಧನ್ಗರ್ ಅವರ ಉತ್ತರಾಧಿಕಾರಿ ಯಾರು ಎಂಬ ಬಗ್ಗೆ ಹಲವಾರು ಹಿರಿಯ ನಾಯಕರುಗಳ ಹೆಸರುಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ಬಿಹಾರ ಸಿಎಂ ಹಾಗೂ ಎನ್‌ಡಿಎ ಮಿತ್ರ ಕೂಟದ ನಾಯಕ ನಿತೀಶ್ ಕುಮಾರ್ ಅವರ ಹೆಸರು ಮುಂಚೂಣಿಯಲ್ಲಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಸದ್ಯ, ಬಿಹಾರದಲ್ಲಿ ಚುನಾವಣೆ ಇದೆ. ಆ ನಿಟ್ಟಿನಲ್ಲಿ ಬಿಹಾರದಲ್ಲಿ ಜೆಡಿಯು ಹಾಗೂ ಬಿಜೆಪಿ ಮೈತ್ರಿ ಚುನಾವಣೆಯನ್ನು ಎದುರಿಸುತ್ತಿದೆ. ಮುಂದೆ ಒಂದುವೇಳೆ ಅಧಿಕಾರಕ್ಕೆ ಬಂದರೆ ನಿತೀಶ್ ಕುಮಾ‌ರ್ ಅವರು ತಾವು ಸಿಎಂ ಆಗಬೇಕು ಎಂದು ಪಟ್ಟುಹಿಡಿಯುವ ಸಾಧ್ಯತೆ ಇರುವುದರಿಂದ ಅವರನ್ನು ಉಪರಾಷ್ಟ್ರಪತಿ ಮಾಡುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.

ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲಿ ಏನಾದರೂ ಬಿಜೆಪಿ ಹಾಗೂ ಜೆಡಿಯು ಅಧಿಕಾರಕ್ಕೆ ಬಂದರೆ ಬಿಜೆಪಿ ಪಕ್ಷದ ನಾಯಕ ಸಿಎಂ ಸ್ಥಾನಕ್ಕೇರುವ ಸಾಧ್ಯತೆ ಇದೆ ಹಾಗೂ ಜೆಡಿಯುಗೆ ಉಪಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲಿದೆ. ಅದರಲ್ಲೂ ನಿತೀಶ್ ಅವರ ಮಗ ನಿಶಾಂತ್ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಬಹುದು ಎಂದು ಹಿರಿಯ ರಾಜಕೀಯ ವಿಮರ್ಶಕರು ವಿಮರ್ಶೆ ಮಾಡುತ್ತಿದ್ದಾರೆ.

ಆಡಳಿತ ಮೈತ್ರಿಕೂಟವು ಹಿಂದುಳಿದ ಸಮುದಾಯಗಳ ಅಭ್ಯರ್ಥಿಯತ್ತ ಒಲವು ತೋರುತ್ತಿದೆ. ಚಲಾವಣೆಯಲ್ಲಿರುವ ಹೆಸರುಗಳ ಪೈಕಿ, ಕೃಷಿ ರಾಜ್ಯ ಸಚಿವ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಕರ್ಪೂರಿ ಠಾಕೂರ್ ಅವರ ಪುತ್ರ ರಾಮ್ನಾಥ್ ಠಾಕೂರ್ ಅವರ ಹೆಸರು ಮುಂಚೂಣಿಯಲ್ಲಿದೆ. ಅತಿ- ವಿಚಾರ ವರ್ಗದ ನಯಿ (ಸವಿತಾ ಸಮಾಜ) ಸಮುದಾಯಕ್ಕೆ ಸೇರಿದ ಠಾಕೂರ್ ಅವರನ್ನು ಪರಿಗಣಿಸಲಾಗುತ್ತಿದೆ ಎಂದು ಎನ್‌ಎಯ ಹಲವಾರು ಸಂಸದರು ತಿಳಿಸಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೆಸರು ಕೂಡ ಕೇಳಿ ಬಂದಿದೆ ಎಂದು ವರದಿಯಾಗಿದೆ. ನಡ್ಡಾ ಆಯ್ಕೆಯಾದರೆ ಯಾವುದೇ ಔಪಚಾರಿಕ ಘೋಷಣೆಗೆ ಮುಂಚಿತವಾಗಿ ಸಂಪುಟ ಪುನರ್ರಚನೆ ನಡೆಯಬಹುದು ಎಂದು ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ.

ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೆ, ಬಿಹಾರ ರಾಜ್ಯವಾಲ ಮೊಹಮ್ಮದ್ ಆರಿಫ್ ಖಾನ್, ಮಾಜಿ ಕೇಂದ್ರ ಸಚಿವ ಮುಖಾರ್ ಅಬ್ಬಾಸ್ ನನ್ನ ಮತ್ತು ರಾಜ್ಯ ಸಭಾ ಉಪಾಧ್ಯಕ್ಷ ಹರಿವಂತ್ ಕೂಡ ಆಕಾಂಕ್ಷಿಗಳೆಂದು ಹೇಳಲಾಗುತ್ತಿದೆ. ಬಿಹಾರ ಸಿಎಂ ನಿತೀಶ್ ಕುಮಾರ್ ಬಗ್ಗೆ ಊಹಾಪೋಹಗಳು ಸ್ವಲ್ಪ ಸಮಯದವರೆಗೆ ಸುಳಿದಾಡುತ್ತಿದ್ದರೂ, ಜೆಡಿಯು ಮುಖಂಡರು ಅದನ್ನು ತಳ್ಳಿಹಾಕಿದ್ದಾರೆ. ಇದು ನಡೆಯಲು ಸಾಧ್ಯವಿಲ್ಲ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದರು.

ಎರಡೂ ಸದನಗಳಲ್ಲಿ ಎನ್‌ಡಿಎ 422 ಸಂಸದರನ್ನು ಹೊಂದಿರುವುದರಿಂದ ಮುಂದಿನ ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ಅಗತ್ಯವಿರುವ 394 ಮತಗಳು ಇರುವುದರಿಂದ ಎನ್‌ಡಿಎ ಮೈತ್ರಿ ಕೂಟ ಆರಾಮವಾಗಿದೆ. ಒಮ್ಮತದ ಅಭ್ಯರ್ಥಿಗೆ ಆದ್ಯತೆ ನೀಡುವುದಾಗಿ ಸರ್ಕಾರಿ ಮೂಲಗಳು ತಿಳಿಸಿವೆ. ಜು.26 ರ ನಂತರ ನಿರ್ಧಾರ ನಿರೀಕ್ಷಿಸಲಾಗಿದೆ.ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷಗಳು ಮಂಡಿಸಿದ ನಿರ್ಣಯವನ್ನು ಧನ್ಗರ್ ಒಪ್ಪಿಕೊಂಡ ಕೆಲವೇ ಗಂಟೆಗಳ ನಂತರ ಅವರು ಹಠಾತ್ ರಾಜೀನಾಮೆ ನೀಡಿದರು.

ನಿರ್ಣಯವನ್ನು ಒಪ್ಪಿಕೊಳ್ಳುವ ಅವರ ನಿರ್ಧಾರವು ಸರ್ಕಾರದ ಸ್ವಂತ ಕಾರ್ಯತಂತ್ರಕ್ಕೆ ವಿರುದ್ಧವಾಗಿರಬಹುದು ಎಂದು ಕೆಲವರು ನಂಬುತ್ತಾರೆ. ಇದು ಪ್ರತ್ಯೇಕ ಕ್ರಮದ ಮೇಲೆ ಕೇಂದ್ರೀಕೃತವಾಗಿತ್ತು ಎಂದು ವರದಿಯಾಗಿದೆ.63 ವಿರೋಧ ಪಕ್ಷದ ಸಂಸದರು ಸಹಿ ಮಾಡಿದ ಮತ್ತು ಧನ್ಯರ್ ಅವರು ಒಪ್ಪಿಕೊಂಡ ರಾಜ್ಯ ಸಭಾ ಸೂಚನೆಯು ಕಾರ್ಯ ವಿಧಾನದ ಕ್ರಮಗಳನ್ನು ಪ್ರಾರಂಭಿಸಲು ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದೆ.

ಸೋಮವಾರ ಧನ್ಗ‌ರ್ ಅಧ್ಯಕ್ಷತೆಯಲ್ಲಿ ನಡೆದ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಸಚಿವರಾದ ನಡ್ಡಾ ಮತ್ತು ಕಿರಣ್ ರಿಜಿಜು ಅನುಪಸ್ಥಿತಿಯು ಬೆಂಕಿಗೆ ತುಪ್ಪ ಸುರಿಯುವಂತೆ ಮಾಡಿತು. ಇದರಿಂದ ಉಪ ರಾಷ್ಟ್ರಪತಿಗಳು ಸ್ಪಷ್ಟವಾಗಿ ಅಸಮಾಧಾನಗೊಂಡರು ಎಂದು ಹಿರಿಯ ವಿರೋಧ ಪಕ್ಷದ ವ್ಯಕ್ತಿಯೊಬ್ಬರು ಹೇಳಿದರು. ಧನ್ಯರ್ ಉತ್ತರಾಧಿಕಾರಿ ಪೂರ್ಣ ಅವಧಿಯ ಅಧಿಕಾರಾವಧಿಯನ್ನು ಪೂರೈಸುತ್ತಾರೆ ಎಂದು 67ನೇ ವಿಧಿ ಹೇಳುತ್ತದೆ, ಉಪರಾಷ್ಟ್ರಪತಿಗಳು ತಮ್ಮ ಹುದ್ದೆಗೆ ಬಂದ ದಿನಾಂಕದಿಂದ ಐದು ವರ್ಷಗಳ ಅವಧಿಗೆ ಅಧಿಕಾರ ವಹಿಸಿಕೊಳ್ಳುತ್ತಾರೆ.ವಿಧಿ 68 ರ ಪ್ರಕಾರ, ಅವರ ಮರಣ, ರಾಜೀನಾಮೆ, ಪದಚ್ಯುತಿಗೆ ಸಂಬಂಧಿಸಿದಂತೆ ಉಪರಾಷ್ಟ್ರಪತಿ ಹುದ್ದೆಗೆ ಅದಷ್ಟು ಶೀಘ್ರವಾಗಿ ಚುನಾವಣೆಯನ್ನು ನಡೆಸಬೇಕು. ಚುನಾವಣಾ ಆಯೋಗವು ಖಾಲಿ ಹುದ್ದೆಯನ್ನು ಸೂಚಿಸಿದ ನಂತರ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ ಮತ್ತು 32 ದಿನಗಳಲ್ಲಿ ಕೊನೆಗೊಳ್ಳುತ್ತದೆ.

RELATED ARTICLES

Latest News