Saturday, July 27, 2024
Homeಬೆಂಗಳೂರುಎಎಸ್ಐಗೆ ಬಾಟಲಿನಿಂದ ಇರಿದ ಮಹಿಳೆ

ಎಎಸ್ಐಗೆ ಬಾಟಲಿನಿಂದ ಇರಿದ ಮಹಿಳೆ

ಬೆಂಗಳೂರು,ಮಾ.31- ಆಸ್ತಿ ವಿಚಾರವಾಗಿ ನ್ಯಾಯಕ್ಕಾಗಿ ಹಲವು ಬಾರಿ ಪೊಲೀಸ್ ಠಾಣೆಗೆ ಬಂದರೂ ನ್ಯಾಯ ದೊರಕಲಿಲ್ಲ ಎಂದು ಆರೋಪಿಸಿ ಮಹಿಳೆಯೊಬ್ಬರು ಗಂಗಮ್ಮನಗುಡಿ ಪೊಲೀಸ್ ಠಾಣೆಯ ಎಎಸ್ಐ ಅವರಿಗೆ ಬಾಟಲಿಯಿಂದ ಇರಿದಿರುವ ಘಟನೆ ನಡೆದಿದೆ.

ಹಲವು ವರ್ಷಗಳಿಂದ ಆಸ್ತಿ ವಿಚಾರವಾಗಿ ಮಹಿಳೆ ಮತ್ತು ಅವರ ಅಣ್ಣನ ನಡುವೆ ಗಲಾಟೆ ನಡೆಯುತ್ತಿದೆ. ಈ ವಿಚಾರವಾಗಿ ಮಹಿಳೆ ಹಲವು ಸಲ ಗಂಗಮ್ಮನಗುಡಿ ಪೊಲೀಸ್ ಠಾಣೆಗೆ ಬಂದಿದ್ದಾರೆ.

ಶನಿವಾರ ಈ ಮಹಿಳೆ ಠಾಣೆಗೆ ಬಂದು ಎಎಸ್ಐ ನಾಗರಾಜು ಬಳಿ ಸಮಸ್ಯೆಯನ್ನು ಹೇಳಿಕೊಂಡು ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಠಾಣೆಗೆ ಅಲೆದು ಅಲೆದು ಸುಸ್ತಾದ ಮಹಿಳೆ ನ್ಯಾಯ ದೊರಕಿಸಿಲ್ಲ ಎಂದು ಸಿಟ್ಟಿಗೆದ್ದು ಎಎಸ್ಐ ಅವರ ಬಲಗೈಗೆ ಗಾಜಿನ ಬಾಟಲಿಯಿಂದ ಇರಿದಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರಗೆ ದಾಖಲಿಸಲಾಗಿದೆ. ಆಕೆಯನ್ನೂ ಸಹ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಗಂಗಮ್ಮನಗುಡಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

RELATED ARTICLES

Latest News