Wednesday, May 8, 2024
Homeರಾಜ್ಯಚಿತ್ರದುರ್ಗ; ಖಾಸಗಿ ಬಸ್ ಪಲ್ಟಿ, ಮೂವರ ಸಾವು..

ಚಿತ್ರದುರ್ಗ; ಖಾಸಗಿ ಬಸ್ ಪಲ್ಟಿ, ಮೂವರ ಸಾವು..

ಚಿತ್ರದುರ್ಗ, ಏ.7- ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಹೊಳಲ್ಕೆರೆ ಸಮೀಪದ ಹನುಮಂತ ಕಣಿವೇ ತಿರುವಿನ ಬಳಿ ಉರುಳಿಬಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿ 17ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ನಡೆದಿದೆ.

ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್ ಟ್ರಾವಲ್ಸ್‍ನ ಬಸ್‍ನಲ್ಲಿ ಸುಮಾರು 50 ಜನರು ಪ್ರಯಾಣಿಸುತ್ತಿದ್ದರು ಹೊಳಲ್ಕೆರೆ ಪಟ್ಟಣ ಹೊರವಲಯದ ಅರಣ್ಯ ಕಚ್ಚೇರಿ ಸಮೀಪ ಮುಂಜಾನೆ 4.30ರ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಮೃತರನ್ನು ಸಾಗರದ ಜಗದೀಶ್ ,ಹೊನಾವರ ಮೂಲದ ಗಣೇಶ್ ಎಂದು ಗುರುತಿಸ ಲಾಗಿದೆ ಹಾಗೂ ಮತ್ತೊಬ್ಬ ಪುರುಷನ ಗುರುತು ಪತ್ತೆ ಹಚ್ಚಲಾಗುತ್ತಿದೆ ಗಾಯಾಳುಗಳಲ್ಲಿ 10 ಮಂದಿ ಮಹಿಳೆಯರು 6 ಮಕ್ಕಳಿದ್ದು ಎಲ್ಲರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ,

ಚಾಲಕ ತಿರುವಿನಲ್ಲಿ ಎಚ್ಚರ ತಪ್ಪಿದ್ದರಿಂದ ಈ ದುರಂತ ಸಂಭವಿಸಿದೆ .ಬಸ್ ಉರಿಳಿದಾಗ ಕೆಲವರು ನಿದ್ರಿಸುತ್ತಿದ್ದರು ಇದರಿಂದ ಸಾವು ನೋವು ಹೆಚ್ಚಾಗಿದೆ,ಪ್ರಯಾಣಿರ ವಸ್ತುಗಳು ಚಲಾಪಿಲ್ಲಿಯಾಗಿ ಬಿದ್ದಿದ್ದು ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಹೊಳಲ್ಕೆರೆ ಪಿಎಸ್ ಐ ಸುರೇಶ್ ಮತ್ತವರ ತಂಡ,ಅಗ್ನಿಶಮಕ ಸಿಬ್ಭಂದಿ ಭೇಟಿ ನೀಡಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ, ಆಂಬುಲೆನ್ಸ್‍ಗಳನ್ನು ಕರೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.ಅಪಘಾತದ ರಭಸಕ್ಕೆ ಬಸ್ ನಜ್ಜುಗುಜ್ಜಾಗಿದೆ .ಈ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News