Thursday, May 2, 2024
Homeರಾಷ್ಟ್ರೀಯಮಧ್ಯಪ್ರದೇಶದಲ್ಲಿ ಆಯ್ಕೆಯಾದ 230 ಶಾಸಕರಲ್ಲಿ 90 ಮಂದಿ ಕ್ರಿಮಿನಲ್‌ ಆರೋಪಿಗಳು

ಮಧ್ಯಪ್ರದೇಶದಲ್ಲಿ ಆಯ್ಕೆಯಾದ 230 ಶಾಸಕರಲ್ಲಿ 90 ಮಂದಿ ಕ್ರಿಮಿನಲ್‌ ಆರೋಪಿಗಳು

ಭೋಪಾಲ್, ಡಿ 7 (ಪಿಟಿಐ) ಮಧ್ಯಪ್ರದೇಶದಲ್ಲಿ ಹೊಸದಾಗಿ ಚುನಾಯಿತರಾದ 230 ಶಾಸಕರ ಪೈಕಿ ಸುಮಾರು ಶೇ.39 ರಷ್ಟು ಶಾಸಕರು ಅಂದರೆ ಸುಮಾರು 90 ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ, 34 ಮಂದಿ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದು ಗರಿಷ್ಠ ಐದಕ್ಕಿಂತ ಹೆಚ್ಚು ವರ್ಷ ಜೈಲುವಾಸ ಅನುಭವಿಸಿ ಬಂದವರಾಗಿದ್ದಾರೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್ಸರ್ (ಎಡಿಆರ್) ಪ್ರಕಾರ 94 ಶಾಸಕರು ಅಥವಾ ಒಟ್ಟು ಶೇ, 41 ರಷ್ಟು ಜನರು ಹಿಂದಿನ ಚುನಾವಣೆಗಳು ನಡೆದಾಗ 2018 ರಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದ್ದರು ಎಂದು ಘೋಷಿಸಿದೆ.

2023 ರಲ್ಲಿ, ಈ ಸಂಖ್ಯೆಯು 90 ಕ್ಕೆ ಇಳಿದಿದೆ, 230-ಸದಸ್ಯ ಸದನದ ಸುಮಾರು 39 ಮಂದಿಯಲ್ಲಿ 34 ಶಾಸಕರು ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದು, ಐದು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ ಅನುಭವಿಸಿದ್ದರು ಎಂದು ವರದಿ ಹೇಳಿದೆ. 2018 ರಲ್ಲಿ ಈ ಸಂಖ್ಯೆ 47 ಆಗಿತ್ತು.

ಶಿವಪುರಿ ಜಿಲ್ಲೆಯ ಪಿಚೋರ್‍ನಿಂದ ಬಿಜೆಪಿ ಟಿಕೆಟ್‍ನಿಂದ ಆಯ್ಕೆಯಾಗಿರುವ ಪ್ರೀತಮ್ ಲೋ ಕೊಲೆ ಆರೋಪ ಎದುರಿಸುತ್ತಿರುವ ಏಕೈಕ ಶಾಸಕರಾಗಿದ್ದಾರೆ. ಹೊಸದಾಗಿ ಆಯ್ಕೆಯಾದ ಐವರು ಶಾಸಕರು ಕೊಲೆ ಯತ್ನದ ಆರೋಪ ಎದುರಿಸುತ್ತಿದ್ದಾರೆ. ಮೂವರು ಅಭ್ಯರ್ಥಿಗಳು ಮಹಿಳೆಯರಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳನ್ನು ಘೋಷಿಸಿದ್ದಾರೆ ಎಂದು ವರದಿ ತಿಳಿಸಿದೆ.

ಬಡತನದಲ್ಲಿದ್ದಾರಂತೆ ವಿಶ್ವದ 40 ಶ್ರೀಮಂತ ರಾಷ್ಟ್ರಗಳ 69 ಮಿಲಿಯನ್ ಮಕ್ಕಳು

ಬಿಜೆಪಿ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 163 ಸ್ಥಾನಗಳನ್ನು ಗೆದ್ದು, 2018 ರಲ್ಲಿ 109 ರಿಂದ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. 2018 ರಲ್ಲಿ 114 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ 66 ಕ್ಕೆ ಇಳಿದಿದ್ದರೆ, ಹೊಸದಾಗಿ ಪ್ರವೇಶಿಸಿದ ಭಾರತ್ ಆದಿವಾಸಿ ಪಕ್ಷವು ಒಂದು ಕ್ಷೇತ್ರದಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

163 ಬಿಜೆಪಿ ಶಾಸಕರ ಪೈಕಿ 51 ಮಂದಿ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದು, ಅವರಲ್ಲಿ 16 ಮಂದಿ ಗಂಭೀರ ಅಪರಾಧಗಳನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್‍ನ ಈ ಸಂಖ್ಯೆಯು 38 ಶಾಸಕರಾಗಿದ್ದು, ಇದರಲ್ಲಿ 17 ಮಂದಿ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಎಡಿಆರ್ ಹೇಳಿದೆ.ಭಾರತ ಆದಿವಾಸಿ ಪಕ್ಷದ ಏಕೈಕ ವಿಜೇತ ಅಭ್ಯರ್ಥಿಯೂ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ.

ಚಿಂದ್ವಾರದಿಂದ ಚುನಾಯಿತರಾಗಿರುವ ಸಂಸದ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಅವರು ಭೋಪಾಲ್ ಮತ್ತು ಇಂದೋರ್‍ನಲ್ಲಿ ತಮ್ಮ ವಿರುದ್ಧ ನಕಲಿ ಮತ್ತು ವಂಚನೆಯ ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಘೋಷಿಸಿದ್ದಾರೆ. ಎರಡೂ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಆರೋಪ ಹೊರಿಸಲಾಗಿಲ್ಲ ಎಂದು ವರದಿ ತಿಳಿಸಿದೆ. ಬ್ನುಯಿಂದ ಆಯ್ಕೆಯಾದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಯಾವುದೇ ಪ್ರಕರಣ ಬಾಕಿ ಉಳಿದಿಲ್ಲ.

RELATED ARTICLES

Latest News