ಬೆಂಗಳೂರು,ಏ.20- ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತಮ್ಮ ತವರು ಜಿಲ್ಲೆಯಲ್ಲೇ ನವಜಾತ ಶಿಶುಗಳ ಮಾರಣಹೋಮ ನಡೆಯುತ್ತಿದೆ. ನಿಮಗೆ ಕಾಣುತ್ತಿಲ್ಲವೇ? ಮೈಸೂರಿನ ಐತಿಹಾಸಿಕ ಚೆಲುವಾಂಬ ಆಸ್ಪತ್ರೆಯಲ್ಲಿ 15 ತಿಂಗಳಲ್ಲಿ 421 ಶಿಶುಗಳು, 12 ತಾಯಂದಿರು ಸಾವನ್ನಪ್ಪಿದ್ದಾರೆ. ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದಕ್ಕೆ ಕನ್ನಡಿ ಹಿಡಿದಂತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ಎಕ್್ಸನಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಮೈಸೂರು ಮಹಾರಾಜರು ಕಟ್ಟಿಸಿದ ಪವಿತ್ರ ಆಸ್ಪತ್ರೆ ಇಂದು ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಬಡ ಕುಟುಂಬಗಳ ಗರ್ಭಿಣಿ ಮಹಿಳೆಯರಿಗೆ, ನವಜಾತ ಶಿಶುಗಳಿಗೆ ಸಶಾನವಾಗಿ ಮಾರ್ಪಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮ ಸ್ವಂತ ಜಿಲ್ಲೆಯಲ್ಲೇ ನವಜಾತ ಶಿಶುಗಳು ಹೀಗೆ ಸರಣಿಯಾಗಿ ಪ್ರಾಣ ಬಿಡುತ್ತಿದ್ದರೆ ನಿಮ ಅಂತಃಕರಣ ಎಲ್ಲಿ ಸತ್ತು ಹೋಗಿದೆ? ಈ ಸಾವಿನ ಸರಣಿಗೆ ಸರ್ಕಾರದ ದಿವ್ಯ ನಿರ್ಲಕ್ಷ್ಯವೇ ನೇರ ಕಾರಣ ಎಂದರು.
ಆಸ್ಪತ್ರೆಯಲ್ಲಿ 6 ಜನ ತಜ್ಞ ವೈದ್ಯರಿರಬೇಕಾದ ಜಾಗದಲ್ಲಿ ಕೇವಲ ಒಬ್ಬರೇ ವೈದ್ಯರಿದ್ದಾರೆ. ಹೀಗಾಗಿ ರಾಜ್ಯದ ಜನರ ಆರೋಗ್ಯ ವ್ಯವಸ್ಥೆ ಎಂತಹ ದುಸ್ಥಿತಿಯಲ್ಲಿದೆ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. 96 ನರ್ಸ್ಗಳಿರಬೇಕಾದ ಕಡೆ ಕೇವಲ 59 ಮಂದಿ ಇದ್ದಾರೆ.
ಬೆಡ್ಗಳ ಕೊರತೆ ಮತ್ತು ಎಸ್ಎನ್ಸಿಯು ಘಟಕಗಳ ಕೊರತೆಯ ಬಗ್ಗೆ ವೈದ್ಯಾಧಿಕಾರಿಗಳು ಪತ್ರ ಬರೆದರೂ ಸರ್ಕಾರ ಸ್ಪಂದಿಸಿಲ್ಲ. ಬಜೆಟ್ನಲ್ಲಿ ಆರೋಗ್ಯಕ್ಕಿಂತ ಭ್ರಷ್ಟಾಚಾರ ಮತ್ತು ಸುಳ್ಳು ಪ್ರಚಾರವೇ ಮುಖ್ಯವಾಗಿದೆಯೇ? ನಿಮ ತವರು ಜಿಲ್ಲೆಯಲ್ಲೇ ಸರ್ಕಾರಿ ಆಸ್ಪತ್ರೆಗಳ ಗತಿ ಹೀಗಾದರೆ, ಇನ್ನು ರಾಜ್ಯದ ಉಳಿದ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳ ಗತಿ ಏನಾಗಿದೆ ಎನ್ನುವುದನ್ನು ಊಹಿಸಿಕೊಳ್ಳಲೂ ಭಯವಾಗುತ್ತದೆ, ಮೈಸೂರಿನಲ್ಲಿ ತಮ ಪ್ರತಿಮೆ ತಾವೇ ಉದ್ಘಾಟನೆ ಮಾಡುವುದಕ್ಕೆ, ರಸ್ತೆಗಳಿಗೆ ತಮ ಹೆಸರು ಇಟ್ಟುಕೊಳ್ಳುವುದಕ್ಕೆ ಇರುವ ಉತ್ಸಾಹ, ಆಸಕ್ತಿ, ಬಡ ಕುಟುಂಬಗಳ ಮಹಿಳೆಯರು, ಶಿಶುಗಳ ಪ್ರಾಣ ಉಳಿಸುವ ಮೂಲಸೌಕರ್ಯ ಒದಗಿಸುವಲ್ಲಿ ಏಕಿಲ್ಲ? ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಜಾಹೀರಾತುಗಳಲ್ಲಿ ಗ್ಯಾರಂಟಿ ಸರ್ಕಾರ, ನುಡಿದಂತೆ ನಡೆದ ಸರ್ಕಾರ, ಬಡವರ ಪರವಾದ ಸರ್ಕಾರ ಎಂದು ಬಿಂಬಿಸಿಕೊಳ್ಳುವ ನೀವು, ವಾಸ್ತವದಲ್ಲಿ ಸಾವಿನ ಸರಣಿಯಲ್ಲಿ ಕರ್ನಾಟಕವನ್ನು ನಂಬರ್ 1 ಮಾಡುತ್ತಿದ್ದೀರಿ. ಇನ್ನಾದರೂ ಆಡಳಿತ ಯಂತ್ರವನ್ನು ಎಚ್ಚರಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಿ. ಇಲ್ಲದಿದ್ದರೆ ಮಕ್ಕಳನ್ನು ಕಳೆದುಕೊಂಡ ತಾಯಂದಿರ ಶಾಪ ನಿಮ ಸರ್ಕಾರವನ್ನು ಸುಟ್ಟು ಭಸ ಮಾಡುವುದು ನಿಶ್ಚಿತ ಎಂದು ಅವರು ಎಚ್ಚರಿಸಿದ್ದಾರೆ.
