Homeಜಿಲ್ಲಾ ಸುದ್ದಿಗಳುಜಮೀರ್‌ಗೆ ತಪ್ಪಿದ ಸಚಿವ ಸ್ಥಾನ : ಪಂಜಿನ ಮೆರವಣಿಗೆ ಮೂಲಕ ಮುಸ್ಲಿಮರ ಪ್ರತಿಭಟನೆ

ಜಮೀರ್‌ಗೆ ತಪ್ಪಿದ ಸಚಿವ ಸ್ಥಾನ : ಪಂಜಿನ ಮೆರವಣಿಗೆ ಮೂಲಕ ಮುಸ್ಲಿಮರ ಪ್ರತಿಭಟನೆ

Zamir's ministerial berth missed: Muslims protest

ಮಂಡ್ಯ.ಜೂ.5- ಜಮೀರ್‌ ಅಹಮದ್‌ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಮಂಡ್ಯದಲ್ಲಿ ಮುಸ್ಲಿಂ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಬೃಹತ್‌ ಪಂಜಿನ ಮೆರವಣಿಗೆ ಮೂಲಕ ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಿತು.

ಮಾಜಿ ಮುಡಾ ಅಧ್ಯಕ್ಷ ನಹೀಮ್‌ ನೇತೃತ್ವದಲ್ಲಿ ನೂರಾರು ಮಂದಿ ಪಂಜು ಹಿಡಿದು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟಿಸಿದರು. ಱಱಬೇಕು ಬೇಕು ಜಮೀರ್ಗೆ ಡಿಸಿಎಂ ಸ್ಥಾನ ಬೇಕುೞೞ ಎಂದು ಘೋಷಣೆ ಕೂಗಿ, ಮಾನವ ಸರಪಳಿ ನಿರ್ಮಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಮೊದಲ ಪಟ್ಟಿಯಲ್ಲೇ ಜಮೀರ್‌ ಅಹಮದ್‌ ಅವರಿಗೆ ಸಚಿವ ಸ್ಥಾನ ಸಿಗಬೇಕಿತ್ತು. ಕಾಂಗ್ರೆಸ್‌‍ ಪಕ್ಷ ಅಧಿಕಾರಕ್ಕೆ ಬರಲು ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ. 136 ಸೀಟು ಗೆಲ್ಲುವುದರಲ್ಲಿ ಜಮೀರ್‌ ಅವರ ಪಾತ್ರ ಇದೆ. ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಅವರ ಮೇಲೆ ತುಂಬಾ ವಿಶ್ವಾಸ ಇದೆ.

ಅದನ್ನು ಪರಿಗಣಿಸಿ ಜಮೀರ್‌ ಅವರಿಗೆ ಉನ್ನತ ಸ್ಥಾನ ಕೊಟ್ಟು ಗೌರವಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಇದ್ರೀಸ್‌‍, ಮುಜಾಹಿದ್‌, ಪ್ರಸನ್ನ, ಅಂಜರ್‌ ಪಾಷಾ, ಹೆಕ್ಬಾಲ್‌, ನೂರ್‌ ಅಹಮದ್‌ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿದ್ದರು.

RELATED ARTICLES

Latest News