Tuesday, September 17, 2024
Homeರಾಷ್ಟ್ರೀಯ | Nationalಬಿಲ್ಡರ್‌ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿ ಬಂಧನ

ಬಿಲ್ಡರ್‌ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿ ಬಂಧನ

ಬೆರ್ಹಾಂಪುರ, ಮೇ 17-ಒಡಿಶಾದ ಗಂಜಾಂ ಜಿಲ್ಲೆಯ ದಿಗಪಹಂಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌‍ ಅಭ್ಯರ್ಥಿ ಸಾಕಾ ಸುಜಿತ್‌ ಕುಮಾರ್‌ ಅವರನ್ನು ಬಿಲ್ಡರ್‌ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವ್ಯಾಪಾರ ವೈಷಮ್ಯದ ಪರಿಣಾಮವಾಗಿ ಬರ್ಹಾಂಪುರ ಪೊಲೀಸ್‌‍ ಠಾಣೆ ಬಳಿ ಬಿಲ್ಡರ್‌ ಮೇಲೆ ಹಲ್ಲೆ ನಡೆಸಿದ್ದರು.ಪ್ರಕರಣ ದಾಖಲಾಗುತ್ತಿದಂತೆ ಕಳೆದ ರಾತ್ರಿ ಕುಮಾರ್‌ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಹಲ್ಲೆಯಲ್ಲಿ ಸಿಹಾಳದ ಸುಧನ್ಸು ಸಂಗ್ರಾಮ್‌ ಪಾಧಿ ಎಂಬ ಬಿಲ್ಡರ್‌ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸ್‌‍ ವರಿಷ್ಠಾಧಿಕಾರಿ ಸಾರ್ಥಕ್‌ ಸಾರಂಗಿ ತಿಳಿಸಿದ್ದಾರೆ.

ಕುಕುಡಖಂಡಿಯ ಪ್ಲಾಟ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಬ್ಬಂದಿಗೆ ಥಳಿಸಲಾಗಿದೆ ಈ ಬಗ್ಗೆ ದೂರು ನೀಡಲು ಪೊಲೀಸ್‌‍ ಠಾಣೆಗೆ ಹೋಗುತ್ತಿದ್ದಾಗ ಕಾಂಗ್ರೆಸ್‌‍ ಅಭ್ಯರ್ಥಿ ಕುಮಾರ್‌ ಬಿಂಬಲಿಗರ ಜೊತೆ ಬಂದು ಪಾಧಿ ಮೇಲೆ ಹಲ್ಲೆ ನಡೆಸಿದ್ದಾರೆ.

ಅಭ್ಯರ್ಥಿ ಜತೆಗೆ ಆತನ ಸಹಾಯಕ ಕೆ.ಅಮಿತ್‌ಕುಮಾರ್‌ ಅವರನ್ನು ಬಂಧಿಸಲಾಗಿದೆ. ಕುಮಾರ್‌ ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ವತ್ತಿ ವೈಷಮ್ಯವೇ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

RELATED ARTICLES

Latest News