Sunday, September 8, 2024
Homeಬೆಂಗಳೂರುಪಲ್ಲಕ್ಕಿ ಉತ್ಸವದ ಟ್ರ್ಯಾಕ್ಟರ್​ಗೆ ವಿದ್ಯುತ್‌ ಸ್ಪರ್ಶಿಸಿ ಇಬ್ಬರ ಸಾವು

ಪಲ್ಲಕ್ಕಿ ಉತ್ಸವದ ಟ್ರ್ಯಾಕ್ಟರ್​ಗೆ ವಿದ್ಯುತ್‌ ಸ್ಪರ್ಶಿಸಿ ಇಬ್ಬರ ಸಾವು

ಬೆಂಗಳೂರು, ಜೂ.2- ದೇವರ ಪಲ್ಲಕ್ಕಿ ಉತ್ಸವ ಮುಗಿಸಿಕೊಂಡು ವಾಪಸ್‌‍ ಬರುತ್ತಿದ್ದಾಗ ಪಲ್ಲಕ್ಕಿಗೆ ವಿದ್ಯುತ್‌ ಸ್ಪರ್ಶಗೊಂಡು ಇಬ್ಬರು ಸಾವನ್ನಪ್ಪಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಠಾಣಾ ವ್ಯಾಪ್ತಿಯ ಗೊಲ್ಲಹಳ್ಳಿ ಬಳಿ ಇಂದು ಬೆಳಿಗನ ಜಾವ ನಡೆದಿದೆ. ಬೀರಸಂದ್ರದ ವಾಸಿ ರಂಗನಾಥ್‌ (33), ಯಾರಂಡಹಳ್ಳಿಯ ಹರಿಬಾಬು (25) ಮೃತಪಟ್ಟ ದುರ್ದೈವಿಗಳು.

ಹೆಬ್ಬಗೋಡಿ ವ್ಯಾಪ್ತಿಯಿಂದ ಟ್ರ್ಯಾಕ್ಟರ್‌ನಲ್ಲಿ ಹೊರಟ ದೇವರ ಪಲ್ಲಕ್ಕಿ ವಿವಿಧ ಬಡಾವಣೆ ಹಾಗೂ ರಸ್ತೆಗಳ ಮುಖಾಂತರ ಸಂಚರಿಸಿ ವಾಪಸ್‌‍ ಹೋಗುವಾಗ ಮುಂಜಾನೆ 5.30ರ ಸಮಯದಲ್ಲಿ ಟ್ರ್ಯಾಕ್ಟರ್‌ ಚಲಿಸಿದ ಮಾರ್ಗದಲ್ಲಿ ವಿದ್ಯುತ್‌ ತಂತಿ ಪಲ್ಲಕ್ಕಿಗೆ ಸ್ಪರ್ಶಿಸಿದ್ದು, ಈ ವೇಳೆ ಟ್ರ್ಯಾಲಿಯಲ್ಲಿ ಕುಳಿತಿದ್ದ ಇಬ್ಬರಿಗೆ ವಿದ್ಯುತ್‌ ಸ್ಪರ್ಶಿಸಿ ಅಸ್ವಸ್ಥಗೊಂಡರು. ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ಸೆಂಟ್‌ಜಾನ್‌ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿದ್ದಾರೆ.

RELATED ARTICLES

Latest News