Sunday, October 6, 2024
Homeರಾಷ್ಟ್ರೀಯ | Nationalಮೂರು ವರ್ಷದ ಮಗುವನ್ನು ಹೊತ್ತೊಯ್ದ ನರಭಕ್ಷಕ ಚಿರತೆ

ಮೂರು ವರ್ಷದ ಮಗುವನ್ನು ಹೊತ್ತೊಯ್ದ ನರಭಕ್ಷಕ ಚಿರತೆ

Leopard picks up child from outside house in New Tehri

ನ್ಯೂ ತೆಹ್ರಿ,ಸೆ.30- ಮೂರು ವರ್ಷದ ಮಗುವನ್ನು ನರಭಕ್ಷಕ ಚಿರತೆಯೊಂದು ಹೊತ್ತೊಯ್ದಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.ನರಭಕ್ಷಕ ಚಿರತೆಯೊಂದು ತನ್ನ ಸೋದರಸಂಬಂಧಿಗಳೊಂದಿಗೆ ಆಟವಾಡುತ್ತಿದ್ದ ಮೂರು ವರ್ಷದ ಮಗುವನ್ನು ತನ್ನ ಮನೆಯ ಹೊರಗಿನಿಂದ ಎತ್ತಿಕೊಂಡು ಬಂದು ಕೊಂದು ಹಾಕಿದ್ದು, ಸಮೀಪದ ಪೊದೆಗಳಲ್ಲಿ ಆತನ ಮತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪುರ್ವಾಲ್‌ ಗ್ರಾಮದಲ್ಲಿ ಅಂಕಿತ್‌ ಕುಮಾರ್‌ ಅವರ ಮಗ ರಾಜ್‌ ಕುಮಾರ್‌ ತನ್ನ ತಾಯಿಯ ಚಿಕ್ಕಪ್ಪನ ಮಕ್ಕಳೊಂದಿಗೆ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.

ತೆಹ್ರಿ ಅರಣ್ಯ ವಿಭಾಗದ ಭಿಲಾಂಗನಾ ರೇಂಜ್‌ ಆಫೀಸರ್‌ ಆಶಿಶ್‌ ನೌಟಿಯಾಲ್‌ ಮತ್ತು ಪುರ್ವಾಲ್‌ ಗ್ರಾಮದ ಮುಖ್ಯಸ್ಥ ಸಂಜಯ್‌ ತಿವಾರಿ ಮಾತನಾಡಿ, ಮಗು ಆಟವಾಡುತ್ತಿದ್ದಾಗ ಹೊರಬಂದು ಮನೆಯ ಹಿಂದೆ ಚಿರತೆ ಹೊಂಚುಹಾಕಿ ಕುಳಿತಿತ್ತು ಪ್ರಾಣಿಯು ಮಗುವನ್ನು ಎತ್ತಿಕೊಂಡು ಎಳೆದೊಯ್ದಿತು.

ಮನೆಯಲ್ಲಿ ಮಗನನ್ನು ಕಾಣದ ಮಂಜು ದೇವಿ ಹುಡುಕಾಟ ಆರಂಭಿಸಿದಳು. ಬಳಿಕ ಆಕೆಯ ನೆರೆಹೊರೆಯವರು ಕೂಡ ಅಲ್ಲಿ ಜಮಾಯಿಸಿದರೂ ಮಗು ಪತ್ತೆಯಾಗಿರಲಿಲ್ಲ. ಅಷ್ಟರಲ್ಲಿ ಯಾರೋ ಮನೆಯ ಹಿಂದಿನ ರಸ್ತೆಯಲ್ಲಿ ರಕ್ತದ ಕಲೆಗಳನ್ನು ಗಮನಿಸಿ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

RELATED ARTICLES

Latest News