*ಪೂರ್ವದಲ್ಲಿ ಅಹಿಂದಕ್ಕೆ ಭರಪೂರ ಕೊಡುಗೆ
*ಕೇಂದ್ರದಲ್ಲಿ ವಿಶೇಷ ಚೇತನರಿಗೆ ವಾತ್ಸಲ್ಯಮನೆ, ಹಿರಿಯರಿಗೆ ವಾಡಿಗಳು, ಒಂಟಿ ಮನೆ, ಫ್ಲಾಟ್ ಖರೀದಿಗೆ 5 ಲಕ್ಷ
*ಪೌರ ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್
*ಕಲ್ಯಾಣ ಯೋಜನೆಗಳಿಗೆ ಶೇ. 7ರಷ್ಟು ಹಣ
*ಟ್ರಾಫಿಕ್ ತಪ್ಪಿಸಲು ಬೈಕ್ ಆಂಬ್ಯುಲೆನ್ಸ್
*ಹೈಟೆಕ್ ಸಾರ್ಟ್ ವರ್ಚೂವಲ್ ಕ್ಲಿನಿಕ್
*ಪ್ರತಿ ವಾರ್ಡ್ಲ್ಲೂ ಗುಂಡಿ ಮುಕ್ತ ರಸ್ತೆ
ಕೇಂದ್ರ ಪಾಲಿಕೆಗೆ 3427 ಕೋಟಿ
ಬೆಂಗಳೂರು, ಮಾ.27- ಬೈಕ್ ಆ್ಯಂಬುಲೆನ್್ಸಗಳು, ಹೈಟೆಕ್ ಸಾರ್ಟ್ ವರ್ಚುವಲ್ ಕ್ಲಿನಿಕ್ಗಳು, ವಿಶೇಷಚೇತನರಿಗಾಗಿ ವಾತ್ಸಲ್ಯ ಮನೆ, ಆಸರೆಯಿಲ್ಲದಂತಹ ಹಿರಿಯ ಜೀವಗಳಿಗೆ ಹಿರಿಯರ ವಾಡಿಗಳನ್ನು ನಿರ್ಮಿಸುವ ಮಾನವೀಯ ಕಳಕಳಿಯ ಉದ್ದೇಶ ಹೊಂದಿರುವ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಬಜೆಟ್ ಮಂಡನೆ ಮಾಡಲಾಗಿದೆ.
ಪುರಭವನದಲ್ಲಿ ಚೊಚ್ಚಲ ಬಜೆಟ್ ಮಂಡಿಸಿದ ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು 3427 ಕೋಟಿ ರೂ. ಅಂದಾಜು ವೆಚ್ಚದ ಈ ಅಯವ್ಯಯ ನಗರದ ಹೃದಯಭಾಗದ ಚಿತ್ರಣವನ್ನೇ ಬದಲಿಸುವ ಹಾಗೂ ನಾಗರೀಕರ ದೈನಂದಿನ ಬದುಕಿನಲ್ಲಿ ಹೊಸ ಭರವಸೆ ಮೂಡಿಸುವ ಮಾದರಿ ಬಜೆಟ್ ಎಂದು ಬಣ್ಣಿಸಿದರು.
ಈ ಬಜೆಟ್ ಕೇವಲ ಅಂಕಿ-ಅಂಶಗಳ ಲೆಕ್ಕಾ ಚಾರಕ್ಕೆ ಸೀಮಿತವಾಗದೆ ನಾಡಪ್ರಭು ಕೆಂಪೇಗೌಡರ ಐತಿಹಾಸಿಕ ಪರಂಪರೆ ಹಾಗೂ ಎಐ ಆಧಾರಿತ ಆಧುನಿಕ ತಂತ್ರಜ್ಞಾ ನದ ನಡುವೆ ಅದ್ಭು ತ ಸೇತುವೆ ನಿರ್ಮಿಸಿದೆ ಎಂದು ಹೇಳಿದರು. 3,427 ಕೋಟಿ ಗಾತ್ರದ ಈ ಬಜೆಟ್ 78.65 ಲಕ್ಷ ಮಿಗತೆ ಉಳಿಸುವ ಮೂಲಕ ಅತ್ಯುತ್ತಮ ಆರ್ಥಿಕ ಶಿಸ್ತಿಗೆ ಕನ್ನಡಿ ಹಿಡಿದಿದೆ. ಕಚೇರಿ ಅಲೆದಾಟ ತಪ್ಪಿಸಿದ ಇ-ಖಾತಾ ಕ್ರಾಂತಿ, ಪ್ರತಿಯೊಂದು ವಾರ್ಡ್ಗಳಲ್ಲೂ ರಸ್ತೆಗುಂಡಿ ಮುಕ್ತ ಸಂಕಲ್ಪ ಹಾಗೂ ದೂರದೃಷ್ಟಿಯ ಕ್ರಮಗಳು ಜಾಗತಿಕ ಮಟ್ಟದ ಮಾದರಿ ಆಡಳಿತಕ್ಕೆ ಮುನ್ನುಡಿ ಬರೆಯಲಿದೆ ಎಂದರು.
ಇದೊಂದು ಸಂಪೂರ್ಣ ನಾಗರಿಕ ಕೇಂದ್ರಿತ ಹಾಗೂ ಮಾನವೀಯ ಸ್ಪರ್ಶವಿರುವ ಜೀವಂತ ಅಯವ್ಯಯ ! ಟ್ರಾಫಿಕ್ ದಟ್ಟಣೆಯಲ್ಲೂ ತ್ವರಿತವಾಗಿ ಜೀವ ಉಳಿಸುವ ಬೈಕ್ ಅಂಬ್ಯುಲೆನ್ಸ್ , ಬಡವರ ಮನೆಬಾಗಿಲಿಗೆ ಕಾರ್ಪೊರೇಟ್ ಶೈಲಿಯ ವೈದ್ಯಕೀಯ ಸೇವೆ ನೀಡುವ 22 ಹೈಟೆಕ್ ಸ್ಮಾರ್ಟ್ ವರ್ಚುವಲ್ ಕ್ಲಿನಿಕ್ಗಳು, ವಿಶೇಷ ಚೇತನ ಮಕ್ಕಳಿಗಾಗಿ ವಾತ್ಸಲ್ಯ ಮನೆ ಹಾಗೂ ಆಸರೆಯಿಲ್ಲದ ಹಿರಿಯ ಜೀವಗಳಿಗೆ ಹಿರಿಯರ ವಾಡಿಯಂತಹ ಯೋಜನೆಗಳು ಕಾಂಕ್ರೀಟ್ ಸಿಟಿಗೆ ಹಚ್ಚಹಸಿರಿನ ಮಾನವೀಯತೆಯ ಸ್ಪರ್ಶ ನೀಡಲಿದೆ ಎಂದು ಹೇಳಿದರು.
ರಸೆಲ್ ಮಾರುಕಟ್ಟೆಯ ಪುನರುಜ್ಜೀವನ, ಎಲ್.ಇ.ಡಿ ದೀಪಗಳಿಂದ ಶೇ.60ರಷ್ಟು ವಿದ್ಯುತ್ ಉಳಿತಾಯ ಮತ್ತು ಬ್ಲೂ-ಗ್ರೀನ್ ಕಾರಿಡಾರ್ಗಳು ಬೆಂಗಳೂರು ಕೇಂದ್ರವನ್ನು ಅತ್ಯಂತ ಸುರಕ್ಷಿತ, ಸುಸ್ಥಿರ ಹಾಗೂ ವೈಬ್ರೆಂಟ್ ನಗರವನ್ನಾಗಿ ರೂಪಿಸುವ ಭರವಸೆಯ ಹೆಜ್ಜೆಗಳಾಗಿವೆ ಎಂದು ತಿಳಿಸಿದರು.
ಪೂರ್ವ ಪಾಲಿಕೆ 3889 ಕೋಟಿ ರೂ.
ಬೆಂಗಳೂರು, ಮಾ.27- ನಗರ ಮೂಲಸೌಕರ್ಯ ಬಲಪಡಿಸುವುದರ ಜೊತೆಗೆ ಕಲ್ಯಾಣ ಕಾರ್ಯಕ್ರಮಗಳಿಗೆ ಆಯವ್ಯಯದಲ್ಲಿ ಶೇ.7 ರಷ್ಟು ಹಣ ಮೀಸಲಿರಿಸುವ ಮೂಲಕ ಪರಿಶಿಷ್ಟಜಾತಿ, ಪಂಗಡ, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಮಹಿಳೆಯರು, ಪೌರ ಕಾರ್ಮಿಕರು ಹಾಗೂ ಹಿರಿಯ ನಾಗರಿಕರಿಗೆ ಭರಪೂರ ಯೋಜನೆಗಳನ್ನು ರೂಪಿಸಿರುವ 3889 ಕೋಟಿ ರೂ. ಅಂದಾಜು ವೆಚ್ಚದ ಬೆಂಗಳೂರು ಪೂರ್ವ ನಗರ ಪಾಲಿಕೆಯ ಬಜೆಟ್ ಇಂದು ಮಂಡನೆಯಾಗಿದೆ.
ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮತ್ತಿತರ ಅಧಿಕಾರಿಗಳ ಸಮುಖದಲ್ಲಿ ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್.ರಮೇಶ್ ಅವರು ಮಹದೇವಪುರದಲ್ಲಿರುವ ಖಾಸಗಿ ಸಭಾಂಗಣದಲ್ಲಿ ಇಂದು ಬಜೆಟ್ ಮಂಡನೆ ಮಾಡಿದರು.
ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಹಿಳೆಯರು, ಪೌರಕಾರ್ಮಿಕರು, ಹಿರಿಯ ನಾಗರಿಕರು ಸೇರಿದಂತೆ ವಿವಿಧ ವರ್ಗಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ರೂ.221 ಕೋಟಿ ಮೀಸಲು ಮಾಡಲಾಗಿದೆ.ಒಂಟಿ ಮನೆ ನಿರ್ಮಾಣ ಮತ್ತು ವಸತಿ ಯೋಜನೆ ಅಡಿ 1 ಬಿಹೆಚ್ಕೆ ಪ್ಲಾಟ್ ಖರೀದಿಸುವ ಅರ್ಹ ವರ್ಗಗಳಿಗೆ ರೂ.5 ಲಕ್ಷ ಸಹಾಯಧನ ನೀಡಲಾಗುತ್ತದೆ ಎಂದು ಅವರು ಘೋಷಿಸಿದರು.
ಕಲ್ಯಾಣ ಯೋಜನೆಗಳು:
1605 ಪೌರಕಾರ್ಮಿಕರ ಆರೋಗ್ಯ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಮುಂದುವರಿಸಲಾಗುತ್ತಿದ್ದು, ಇದುವರೆಗೆ 1330 ಪೌರಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ.ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜು ಶುಲ್ಕ ಮರು ಪಾವತಿ, ಉನ್ನತ ಹಾಗೂ ವಿದೇಶಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಧನ ನೀಡಲಾಗುತ್ತದೆ. ಎಸ್.ಸಿ/ಎಸ್.ಟಿ, ಹಿಂದುಳಿದ ವರ್ಗದವರಿಗೆ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯ ಒದಗಿಸಲಾಗುತ್ತದೆ.
ಉದ್ಯೋಗಸ್ಥ ಮಹಿಳೆಯರು ಮತ್ತು ಪೌರಕಾರ್ಮಿಕರಿಗೆ ಉಚಿತ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ನೀಡುವ ಯೋಜನೆ ರೂಪಿಸಲಾಗಿದೆ.ಮಹಿಳೆಯರಿಗೆ ಹೊಲಿಗೆ ತರಬೇತಿ ಹಾಗೂ ಉಚಿತ ಹೊಲಿಗೆ ಯಂತ್ರಗಳ ವಿತರಣೆಯಿಂದ ಸ್ವಾವಲಂಬನೆ ಉತ್ತೇಜಿಸಲಾಗುತ್ತದೆ.
ವಿಶೇಷ ಚೇತನರಿಗೆ ಹೆಚ್ಚುವರಿ ಚಕ್ರ ಅಳವಡಿಸಿರುವ ದ್ವಿಚಕ್ರ ವಾಹನಗಳು ಹಾಗೂ ಎಲೆಕ್ಟ್ರೀಕ್ ವೀಲ್ಚೇರ್ಗಳನ್ನು ವಿತರಿಸಲಾಗುವುದು.ಬೀದಿ ವ್ಯಾಪಾರಿಗಳಿಗೆ ಇ-ವೆಂಡಿಂಗ್ ವಾಹನಗಳ ವಿತರಣೆಯ ಮೂಲಕ ಜೀವನೋಪಾಯಕ್ಕೆ ಬೆಂಬಲ ನೀಡಲಾಗುತ್ತದೆ.
2026-27 ಸಾಲಿನ ಪದವಿ ವ್ಯಾಸಂಗ ಮಾಡುತ್ತಿರುವ ಎಸ್.ಸಿ ಮತ್ತು ಎಸ್.ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಪೌರಕಾರ್ಮಿಕರು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ಗಳನ್ನು ನೀಡುವ ಮೂಲಕ ಶೈಕ್ಷಣಿಕ ಪ್ರೋತ್ಸಾಹ ಒದಗಿಸಲಾಗುತ್ತದೆ.6 ನಿರಾಶ್ರಿತರ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಹಾಗೂ ಹೊಸದಾಗಿ 2 ಕೇಂದ್ರಗಳನ್ನು ಸ್ಥಾಪಿಸಲು ಗುರಿ ಹೊಂದ ಲಾಗಿದೆ ಎಂದು ರಮೇಶ್ ಹೇಳಿದರು.
ಕಂದಾಯ :
ಪ್ರಸಕ್ತ ಸಾಲಿನಲ್ಲಿ ಕಂದಾಯ ವಿಭಾಗದಲ್ಲಿ 150 ಕೋಟಿ ರೂ.ಗಳ ಆದಾಯ ಗುರಿ ಹೊಂದಲಾಗಿದ್ದು, ಹೆಚ್ಚುವರಿ ತೆರಿಗೆ ವಿಧಿಸದೆ ಎಸ್ಓಪಿ ಜಾರಿ ಮಾಡಲಾಗುತ್ತಿದೆ. ಆಸ್ತಿ ತೆರಿಗೆ ಮೌಲ್ಯಮಾಪನ-ವಸೂಲಾತಿ ಬಲಪಡಿಸುವುದು ಹಾಗೂ ತೆರಿಗೆ ಜಾಲದಿಂದ ಹೊರಗಿನ ಆಸ್ತಿಗಳನ್ನು ಗುರುತಿ ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಮೂಲಕ ಈ ಗುರಿಯನ್ನು ಸಾಧಿಸಲಾಗುವುದು ಎಂದು ಅವರು ವಿವರಣೆ ನೀಡಿದ್ದಾರೆ.
ಸುಮಾರು 4.50 ಲಕ್ಷ ಕಾಗದ ಖಾತೆಗಳ ಡಿಜಿಟಲೀಕರಣದಿಂದ ಸಂಪರ್ಕರಹಿತ ಇ-ಖಾತಾ ವ್ಯವಸ್ಥೆ ಜಾರಿ ಮಾಡಲಾಗಿದೆ. ಇದುವರೆಗೆ 1.30 ಲಕ್ಷ ಇ-ಖಾತೆಗಳು ವಿತರಣೆಗೊಂಡಿದ್ದು, ಬಾಕಿ 3.20 ಲಕ್ಷ ಇ-ಖಾತೆಗಳನ್ನು ವಿತರಿಸುವ ಗುರಿ ಹೊಂದಲಾಗಿದೆ.ಎಲ್ಲಾ ಆಸ್ತಿಗಳ ಜಿಯೋಟ್ಯಾಗ್ ಮ್ಯಾಪಿಂಗ್ ಮೂಲಕ ಇ-ಆಸ್ತಿ ಜಾರಿ ಮಾಡಿ. ನಾಗರಿಕರಿಗೆ ಆನ್ಲೈನ್ನಲ್ಲಿ ಸ್ಮತ್ತಿನ ಮಾಹಿತಿಯನ್ನು ಸುಲಭವಾಗಿ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ.ಇ-ಖಾತೆಗೆ ಆಧಾರ್ ಜೋಡಣೆ ಹಾಗೂ ಬ್ಲಾಕ್ಚೈನ್ ಬಳಕೆಯಿಂದ ಸುರಕ್ಷಿತ ಸ್ವಯಂಚಾಲಿತ ಖಾತಾ ವರ್ಗಾವಣೆ (ಮುಟೇಷನ್) ಸಾಧ್ಯವಾಗಿದ್ದು, ನಾಗರಿಕರಿಗೆ ಕಚೇರಿ ಸುತ್ತಾಟ ತಪ್ಪಲಿದೆ ಎಂದಿದ್ದಾರೆ.
ಜಿಐಎಸ್ ಆಧಾರಿತ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಬೆಸ್ಕಾಂ, ಜಲಮಂಡಳಿಯಂತಹ ಸಂಸ್ಥೆಗಳೊಂದಿಗೆ ಏಕೀಕರಿಸಿ. ಆಸ್ತಿ ತೆರಿಗೆ ಪರಿಷ್ಕರಣೆ ಮೂಲಕ ವರ್ಷಕ್ಕೆ ರೂ.150 ಕೋಟಿ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ.
ಮಾಡಲಿಂಗ್ ಮತ್ತು ಆಧಾರಿತ ವ್ಯವಸ್ಥೆಯಿಂದ ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸುವುದು ಹಾಗೂ ನಾಗರಿಕರಿಗಾಗಿ ಆಸ್ತಿ ಮಾಹಿತಿ ವ್ಯವಸ್ಥೆ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಇದೆ. ಈ ಮೂಲಕ ತೆರಿಗೆ ಬಾಕಿದಾರರನ್ನು ಗುರುತಿಸಿ, ವಿವಿಧ ದತ್ತಾಂಶ ಏಕೀಕರಣದ ಮೂಲಕ ತೆರಿಗೆ ಜಾಲ ವಿಸ್ತರಣೆ ಮಾಡಿ ವರ್ಷಕ್ಕೆ ರೂ.100 ಕೋಟಿ ಹೆಚ್ಚುವರಿ ಆದಾಯ ಹೊಂದುವ ಗುರಿಯಿದೆ.ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ಅಭಿಯಾನ ಜಾರಿಯಲ್ಲಿದ್ದು, ಇದರಿಂದ ವರ್ಷಕ್ಕೆ ರೂ.225 ಕೋಟಿ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.
ಜಾಹೀರಾತು:
ಜಿಬಿಎ ಹೊಸ ನಿಯಮದಡಿ ಲೆಗಸಿ ಜಾಹೀರಾತುಗಳಿಗೆ ಅನುಮತಿ ಹಾಗೂ ಸ್ವಯಂ ಜಾಹೀರಾತುಗಳನ್ನು ವಾಣಿಜ್ಯ ಫಲಕಗಳಾಗಿ ಪರಿವರ್ತಿಸಲು ಒನ್ಟೈಮ್ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆಯಲ್ಲಿ ರಸ್ತೆವಾರು ಜಾಹೀರಾತು ವಲಯಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ.ಸ್ವಯಂ ಜಾಹೀರಾತು ಪರಿವರ್ತನೆಗೆ 3 ತಿಂಗಳ ಅವಕಾಶ ನೀಡಿದ್ದು ಇದರಿಂದ ರೂ.20 ಕೋಟಿ ಆದಾಯ ನಿರೀಕ್ಷಿಸಲಾಗಿದೆ.
ಜಾಹೀರಾತು ಏಜೆನ್ಸಿ ಪರವಾನಗಿಗಳ ಮೂಲಕ ರೂ.2.75 ಕೋಟಿ ಸಂಗ್ರಹ ಅಂದಾಜಿಸಲಾಗಿದೆ.ಸೈವಾಕ್ ಜಾಹೀರಾತು ಸಂಸ್ಥೆಗಳಿಂದ ನೆಲ ಬಾಡಿಗೆ ರೂ.10 ಕೋಟಿ ನಿರೀಕ್ಷಿಸಲಾಗಿದೆ.ಹೊಸ ಸೈವಾಕ್ ಅಭಿವೃದ್ಧಿಯಿಂದ ನೆಲ ಬಾಡಿಗೆ ಹಾಗೂ ಜಾಹೀರಾತು ಶುಲ್ಕವಾಗಿ ರೂ.15 ಕೋಟಿ ಆದಾಯ ನಿರೀಕ್ಷಿಸಲಾಗಿದೆ.ಪಿಪಿಪಿ ಮಾದರಿಯ ಬಸ್ ಶೆಲ್ಟರ್ ಜಾಹೀರಾತುಗಳಿಂದ ರೂ.5 ಕೋಟಿ ಸಂಗ್ರಹಿಸುವ ನಿರೀಕ್ಷೆಯಿದೆ.
ಲೆಗಸಿ ಜಾಹೀರಾತು, ಎಲ್ಇಡಿ ಸೈವಾಕ್, ಬಸ್ ಶೆಲ್ಟರ್ ಮತ್ತು ಅಂಡರ್ಪಾಸ್ಗಳ ಮೂಲಕ ಒಟ್ಟು ಸುಮಾರು ರೂ.68 ಕೋಟಿ ಆದಾಯ ಗುರಿ ಹೊಂದಲಾಗಿದೆ.ಭೂಸ್ವಾಧೀನದ ಮೂಲಕ ಜಮೀನು ಸ್ವಾಧೀನಪಡಿಸಿಕೊಂಡು ಆರ್ಟಿರಿಯಲ್ ಮತ್ತು ಸಬ್-ಆರ್ಟಿರಿಯಲ್ ರಸ್ತೆ ವಿಸ್ತರಣೆಗೆ ಪರಿತ್ಯಜಿಸಲಾದ 56,722.6 ಚ.ಮೀ (14 ಎಕರೆ) ಭೂಮಿಯನ್ನು ಪಾಲಿಕೆ ವಶಕ್ಕೆ ಪಡೆದು, ಸುಮಾರು ರೂ.510 ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ರಸ್ತೆ ವಿಸ್ತರಣೆಗಾಗಿ ಕಾಯ್ದಿರಿಸಲಾಗಿದೆ.
ರಸ್ತೆ ಹಾಗೂ ಮೂಲಸೌಕರ್ಯ ಯೋಜನೆಗಳಿಗೆ ವೇಗ ನೀಡಲು ಭೂಸ್ವಾಧೀನ ಪ್ರಮುಖ ಸವಾಲಾಗಿರುವುದರಿಂದ, ಪರಿಹಾರಕ್ಕಾಗಿ ಆಯವ್ಯಯದಲ್ಲಿ ರೂ.70 ಕೋಟಿ ಮೀಸಲಿರಿಸಲಾಗಿದೆ ಎಂದಿದ್ದಾರೆ. ನಗರ ಯೋಜನೆ; ಪ್ರಸಕ್ತ ಸಾಲಿನಲ್ಲಿ ಕಟ್ಟಡ ನಕ್ಷೆ ಮಂಜೂರಾತಿ, ಪ್ರಿಂತ್ ಸ್ವಾಧೀನಾನುಭವ ಪ್ರಮಾಣಪತ್ರ, ವಿವಿಧ ಶುಲ್ಕಗಳು ಹಾಗೂ ಇತರ ಮೂಲಗಳಿಂದ ಸುಮಾರು ರೂ.982 ಕೋಟಿ ಆದಾಯ ನಿರೀಕ್ಷಿಸಲಾಗಿದೆ.
ಇಒಡಿಬಿ, ಒಬಿಪಿಎಸ್ ಹಾಗೂ ಆಟೋ ಡಿಸಿಆರ್ ಸಾಫ್್ಟವೇರ್ ಮೂಲಕ ಕಳೆದ 2020 ರಿಂದ ಕಟ್ಟಡ ನಕ್ಷೆ ಮಂಜೂರಾತಿ ಸರಳೀಕರಿಸಲಾಗಿದೆ. ಪ್ರಕ್ರಿಯೆಯನ್ನು ಸಂಪೂರ್ಣ ಆನ್ಲೈನ್ನಲ್ಲಿ ನಂಬಿಕೆ ನಕ್ಷೆ ಯೋಜನೆಯಡಿ 375 ಚ.ಮೀ.ವರೆಗಿನ ವಸತಿ ಕಟ್ಟಡಗಳಿಗೆ 15 ದಿನಗಳಲ್ಲಿ ಸ್ವಯಂಚಾಲಿತ ಮಂಜೂರಾತಿ ನೀಡಲಾಗುತ್ತಿದೆ. ಖಾಲಿ ನಿವೇಶನಗಳಿಗೂ ಆನ್ಲೈನ್ ಸಿಂಗಲ್ ಪ್ಲಾಟ್ ಅನುಮತಿ ವ್ಯವಸ್ಥೆ ಜಾರಿಯಲ್ಲಿದ್ದು, ಇದರಿಂದ ರೂ.139 ಕೋಟಿ ಹೆಚ್ಚುವರಿ ಆದಾಯ ಗುರಿಯಿದೆ.
ನಗರ ವಿನ್ಯಾಸ ಕೋಶ ಸ್ಥಾಪನೆಗಾಗಿ ರೂ.50 ಲಕ್ಷ ಮೀಸಲಿರಿಸಲಾಗಿದೆ.ಆಡಳಿತಪಾರದರ್ಶಕ ಆಡಳಿತಕ್ಕಾಗಿ ಸಾರ್ವಜನಿಕ ಡ್ಯಾಶ್ಬೋರ್ಡ್ ಮೂಲಕ ವಾರ್ಡ್ ಹಾಗೂ ವಿಭಾಗ ಮಟ್ಟದ ಯೋಜನೆ ಹಾಗೂ ವೆಚ್ಚ ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯ ಮಾಡಲಾಗುತ್ತದೆ.ಪಾಲಿಕೆಯ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಪ್ರಥಮ ಹಂತದಲ್ಲಿ ರೂ.25 ಕೋಟಿ ಮೀಸಲು ಮಾಡಲಾಗಿದೆ.ಅಗತ್ಯ ಸಿಬ್ಬಂದಿ ನೇಮಕಾತಿ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಅನುಮೋದನೆ ನಂತರ ಕಾರ್ಯಕ್ಷಮತೆ ಹೆಚ್ಚಿಸಲಾಗುತ್ತದೆ.
ಅಧಿಕಾರಿ, ಸಿಬ್ಬಂದಿಗೆ ತರಬೇತಿ ಹಾಗೂ ಕಾರ್ಯಾಗಾರಗಳ ಮೂಲಕ ಕಾರ್ಯಕ್ಷಮತೆ ವೃದ್ಧಿಗೆ ಯೋಜನೆ ರೂಪಿಸಲಾಗಿದೆ.ಸಿಬ್ಬಂದಿ ಹಾಜರಾತಿ ಮೇಲ್ವಿಚಾರಣೆಗಾಗಿ ಕೃತಕ ಬುದ್ಧಿಮತ್ತೆ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ.ಆಡಳಿತವನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸಲು ಅಗತ್ಯ ತಂತ್ರಾಂಶಗಳಿಗೆ ರೂ.6 ಕೋಟಿ ಮೀಸಲಿರಿಸಲಾಗಿದೆ.ಪ್ರಮುಖ ದಾಖಲೆಗಳನ್ನು ಡಿಜಿಟಲ್ ಸ್ಕ್ಯಾನಿಂಗ್ ಮೂಲಕ ಶಾಶ್ವತ ಸಂರಕ್ಷಣೆ ಮಾಡಲಾಗುತ್ತದೆ.ಕಾನೂನು ವ್ಯವಹಾರ ನಿರ್ವಹಣೆಗೆ ಲೀಗಲ್ ಸೆಲ್ ರಚಿಸಲು ಬಜೆಟ್ನಲ್ಲಿ ರೂ.4.50 ಕೋಟಿ ಮೀಸಲಿರಿಸಲಾಗಿದೆ. ಎಲ್ಲಾ ವಿಭಾಗಗಳಲ್ಲಿ ಇ-ಆಫೀಸ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.
ಬಜೆಟ್ ವೆಚ್ಚ :
ಪೂರ್ವ ನಗರ ಪಾಲಿಕೆಯಿಂದ 3889 ಕೋಟಿ ಗಾತ್ರ ಬಜೆಟ್ ಮಂಡನೆ ಮಾಡಲಾಗಿದೆ. ಸಿಬ್ಬಂದಿ ವೆಚ್ಚ – 302 ಕೋಟಿ, ಆಡಳಿತ ವೆಚ್ಚ – 82 ಕೋಟಿ, ಕಸ ತ್ಯಾಜ್ಯ ವಿಲೇವಾರಿ 300 ಕೋಟಿ, ಕಾರ್ಯಾಚರಣೆ, ನಿರ್ವಹಣೆ ವೆಚ್ಚ – 342 ಕೋಟಿ, ಆರೋಗ್ಯ, ಶಿಕ್ಷಣ ಕಲ್ಯಾಣ – 267 ಕೋಟಿ, ಸಾರ್ವಜನಿಕ ಅಭಿವೃದ್ಧಿ ಕಾಮಗಾರಿ – 2400 ಕೋಟಿ, ಸಾಲ ಮರುಪಾವತಿ – 193 ಕೋಟಿ ಸೇರಿ ಒಟ್ಟು – 3889 ಕೋಟಿ ರೂ.ಗಳ ಬಜೆಟ್ ಮಂಡನೆಯಾಗಿದೆ.
ಆದಾಯ ತೆರಿಗೆ ವ್ಯವಸ್ಥೆ:
ಕಳೆದ ಬಾರಿ 900 ಕೋಟಿ ರೂ. ತೆರಿಗೆ ಸಂಗ್ರಹ ಮಾಡಲಾಗಿದ್ದು, ಈ ಬಾರಿ ನಾವು 1150 ಕೋಟಿ ರೂ.ಗಳ ತೆರಿಗೆ ಸಂಗ್ರಹದ ಗುರಿ ಹೊಂದಿದ್ದೇವೆ. ಈವರೆಗೆ 84,629 ಅರ್ಜಿಗಳ ಪೈಕಿ 84,173 ಅಂತಿಮ ಇ- ಖಾತಾಗಳನ್ನು ಪಾರದರ್ಶಕವಾಗಿ ವಿತರಿಸಲಾಗಿದೆ. ವ್ಯವಸ್ಥಿತ ಡಿಜಿಟಲೀಕರಣದ ಮೂಲಕ ಅರ್ಹ ಆಸ್ತಿಗಳ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಮಾಡಲಾಗಿದೆ. ಆದಾಯ ಹೆಚ್ಚಿಸಲು ಮಾರ್ಗದರ್ಶಕ ಮೌಲ್ಯದ ಮೇಲೆ ಶೇ.5 ಹಾಗೂ ಹೊಸ ಖಾತೆಗಳನ್ನು ನೀಡಲು ಮುದ್ರಾಂಕ ಶುಲ್ಕದ ಮೇಲೆ ಶೇ.2 ರಷ್ಟು ಕರ ವಸೂಲಿ ಮಾಡಲಾಗುವುದು. ಅಸ್ತಿ ನಿರ್ವಹಣೆ ಮತ್ತು ಐತಿಹಾಸಿಕ ಮಾರುಕಟ್ಟೆಗಳ ಅಭಿವೃದ್ಧಿ ಪಡಿಸಲಾಗುವುದು.
ಪಾಲಿಕೆಯ 438 ಆಸ್ತಿಗಳಿಂದ ಬಾಡಿಗೆ ರೂಪದಲ್ಲಿ 58 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದ್ದು ಖಾಲಿಯಿರುವ ಮಳಿಗೆಗಳನ್ನು ಖಾಸಗಿಯವರಿಗೆ ಲೀಸ್ ನೀಡುವ ಮೂಲಕ ಸಂಪನೂಲ ಹೆಚ್ಚಳದ ಗುರಿ ಹೊಂದಲಾಗಿದೆ. 112 ಮಾರುಕಟ್ಟೆಗಳ 4,772 ಮಳಿಗೆಗಳಿಂದ 25 ಕೋಟಿ ಬಾಡಿಗೆ ನಿರೀಕ್ಷೆ ಮಾಡಲಾಗಿದೆ.
ಐತಿಹಾಸಿಕ ರಸೆಲ್ ಮಾರುಕಟ್ಟೆಯ ಸಮಗ್ರ ಪುನರ್ ಅಭಿವೃದ್ಧಿಗೆ ಬರೋಬ್ಬರಿ 70 ಕೋಟಿ ಮೀಸಲು. ಇತರೆ ಮಾರುಕಟ್ಟೆಗಳ ಅಭಿವೃದ್ಧಿಗೆ 20 ಕೋಟಿ ಮೀಸಲಿರಿಸಲಾಗಿದೆ ಎಂದು ಅವರು ವಿವರಣೆ ನೀಡಿದರು.
ನಗರ ಯೋಜನೆ:
ಈ ವಿಭಾಗದಿಂದ ಒಟ್ಟಾರೆ 209.75 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ. ಏಕ ನಿವೇಶನ ವಿನ್ಯಾಸ ನಕ್ಷೆ. ಅನುಮೋದನೆ ಹಾಗೂ ಪ್ರೀಮಿಯಂ ಎಫ್ಎಆರ್ ನೀತಿಯಿಂದ 358 ಕೋಟಿ ಹೆಚ್ಚುವರಿ ಆದಾಯ ಗುರಿ. ಆಯ್ದ ರಸ್ತೆಗಳನ್ನು ಜಾಗತಿಕ ಮಟ್ಟದ ಬಿಸಿನೆಸ್ ಕಾರಿಡಾರ್ಗಳಾಗಿ ಅಭಿವೃದ್ಧಿಪಡಿಸಲಾಗು ವುದು.
ಜಾಹೀರಾತು:
ಜಾಹೀರಾತು ಏಜೆನ್ಸಿಗಳ ನವೀಕರಣ ಶುಲ್ಕದಿಂದ 50 ಕೋಟಿ ಹಾಗೂ ಜಿಬಿಎ ಜಾಹೀರಾತು ನಿಯಮದನ್ವಯ ಟೆಂಡರ್ ಮೂಲಕ 142 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ. ಕೇಂದ್ರ ಸರ್ಕಾರದ 16ನೇ ಹಣಕಾಸು ಆಯೋಗದ 112.25 ಕೋಟಿ ರೂ. ರಾಜ್ಯ ಎಸ್.ಎಫ್.ಸಿ ಅನುದಾನ 90.97 ಕೋಟಿ, ಸಿಎಂ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ 200.00 ಕೋಟಿ ಹಾಗೂ ಎನ್ಎಫ್ಸಿ ವಿಶೇಷ ಅನುದಾನ 75 ಕೋಟಿ ರೂ. 375 ಕೋಟಿ ರೂ.ಗಳ ಮೂಲಭೂತ ಸೌಕರ್ಯ ಬಂಡವಾಳ ಯೋಜನೆ ರೂಪಿಸಲಾಗುತ್ತಿದೆ.
ಕಲ್ಯಾಣ ಕಾರ್ಯಕ್ರಮಗಳನ್ನು ಪ್ರತ್ಯೇಕ ಅನುದಾನದಡಿ ನೇರ ನಗದು ವರ್ಗಾವಣೆ ಮೂಲಕ ವಿತರಣೆ ಮಾಡಲಾಗುವುದು. ಬಜೆಟ್ನ ಅತಿ ದೊಡ್ಡ ಮೊತ್ತವಾದ 1760 ಕೋಟಿ ರೂ. ವೆಚ್ಚದಲ್ಲಿ ಸಾರ್ವಜನಿಕ ಕಾಮಗಾರಿಗಳನ್ನು ನಡೆಸಲಾಗುವುದು.
ರಸ್ತೆಗಳ ಅಭಿವೃದ್ಧಿ:
217.50 ಕೋಟಿ ವೆಚ್ಚದಲ್ಲಿ 145 ಕಿ.ಮೀ ಆರ್ಟೀರಿಯಲ್ ಮತ್ತು ಸಬ್-ಆರ್ಟೀರಿಯಲ್ ರಸ್ತೆಗಳ ಡಾಂಬರೀಕರಣ. 200 ಕೋಟಿ ವೆಚ್ಚದಲ್ಲಿ 115 ಕಿ.ಮೀ ವಾರ್ಡ್ ರಸ್ತೆಗಳ ಅಭಿವೃದ್ಧಿ (ರಸ್ತೆಗುಂಡಿ ಮುಕ್ತ ಗುರಿ).
ವಾರ್ಡ್ ಅನುದಾನ:
ಪ್ರತಿ ವಾರ್ಡ್ನ ಸರ್ವತೋಮುಖ ಅಭಿವೃದ್ಧಿಗೆ ತಲಾ 2.25 ಕೋಟಿಯಂತೆ ಒಟ್ಟು 141.75 ಕೋಟಿ ನಿಗದಿ. 10 ಹೊಸ ಸಮುದಾಯ ಕಟ್ಟಡ ನಿರ್ಮಾಣ, ವಿಶ್ವಬ್ಯಾಂಕ್ ನೆರವಿನಡಿ ರಾಜಕಾಲುವೆ ಮೇಲ್ದರ್ಜೇಗೇರಿಸುವುದು. ಪ್ರಮುಖ ರಸ್ತೆಗಳ ಅಲಂಕಾರಿಕ ವಿದ್ಯುದೀಕರಣಕ್ಕೆ 15 ಕೋಟಿ. ಮೇಲೇತುವೆ ಕೆಳಗೆ ಮೈಕ್ರೋ ಪಾರ್ಕ್ ಮತ್ತು ಕಲಾತಕ ತಾಣಗಳ ನಿರ್ಮಾಣ ಮಾಡಲಾಗುವುದು.
ಸಂಚಾರ ಮತ್ತು ಹೆಜ್ಜೆ ಹೆಜ್ಜೆಗೆ ಸುರಕ್ಷೆ ಯೋಜನೆಯಡಿ 12 ಪ್ರಮುಖ ಟ್ರಾಫಿಕ್ ಜಂಕ್ಷನ್ಗಳ ವೈಜ್ಞಾನಿಕ ಸುಧಾರಣೆ, 50 ಕಿ.ಮೀ ಪಾದಚಾರಿ ಮಾರ್ಗ ಸುಧಾರಣೆ, 15 ಕಿ.ಮೀ ಹೊಸ ಮಾರ್ಗ ಹಾಗೂ 9 ಹೊಸ ಪಾದಚಾರಿ ಮೇಲೇತುವೆ ನಿರ್ಮಾಣ ಮಾಡಲಾಗುವುದು. ಪರಿಸರ ಸಮತೋಲನಕ್ಕಾಗಿ ಬ್ಲೂ-ಗ್ರೀನ್ ಕಾರಿಡಾರ್ ಹಾಗೂ 50,000 ಸಸಿ ನೆಡುವ ಯೋಜನೆ.
82 ಕೋಟಿ ವೆಚ್ಚದಲ್ಲಿ ಹಲಸೂರು ಕೆರೆ ಸಮಗ್ರ ಅಭಿವೃದ್ಧಿ. ಕೆರೆಗಳನ್ನು ಆಮ್ಲಜನಕ ಕೇಂದ್ರಗಳು ಮತ್ತು ಮನರಂಜನಾ ತಾಣಗಳಾಗಿ ಪರಿವರ್ತನೆ ಮಾಡುವುದರ ಜೊತೆಗೆ 215ಕ್ಕೂ ಹೆಚ್ಚು ಉದ್ಯಾನವನಗಳ ಸಮಗ್ರ ಅಭಿವೃದ್ಧಿಗೆ 15 ಕೋಟಿ. ಮಕ್ಕಳಿಗಾಗಿ ಪುಟಾಣಿ ಪಾರ್ಕ್. ಮರಗಳ ಆರೈಕೆ, ಟ್ರೇ ಕೆನೊಪಿ ನಿರ್ವಹಣೆಗೆ 19.38 ಕೋಟಿ ಮೀಸಲು ಮಾಡಲಾಗುವುದು.
ಘನತ್ಯಾಜ್ಯ ನಿರ್ವಹಣೆಗೆ 215 ಕೋಟಿ ಮೀಸಲು. ಯಾಂತ್ರಿಕ ಸ್ವಚ್ಛತಾ ಯಂತ್ರಗಳ ಬಳಕೆ. 60 ಹೊಸ ಸಾರ್ವಜನಿಕ ಶೌಚಾಲಯಗಳು ಮತ್ತು 20 ಶೀ ಟಾಯ್ಲೆಟ್ ನಿರ್ಮಾಣ, ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಪ್ರತಿ ವಾರ್ಡ್ನಲ್ಲಿ ಮಸ್ಟರಿಂಗ್ ಸೆಂಟರ್ ಹಾಗೂ ವಿಶ್ರಾಂತಿಗಾಗಿ ಸುವಿದಾ ಕೇಂದ್ರ ಸ್ಥಾಪನೆ.
28 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು 49 ನಮ್ಮ ಕ್ಲಿನಿಕ್ಗಳ ನಿರ್ವಹಣೆ. ಹೆಲ್ತಿ ಬೆಂಗಳೂರು ಯೋಜನೆಯಡಿ ಆಸ್ಪತ್ರೆಗಳ ಮೇಲ್ದರ್ಜೆಗೇರಿಕೆಗೆ 40 ಕೋಟಿ, 22 ಸ್ಥಳಗಳಲ್ಲಿ ಸ್ಮಾರ್ಟ್ ವರ್ಚುವಲ್ ಕ್ಲಿನಿಕ್ಗಳು (19.55 ಕೋಟಿ). ತುರ್ತು ಸೇವೆಗೆ ಬೈಕ್ ಅಂಬ್ಯುಲೆನ್್ಸ ಸೇವೆ. ಬಡಜನರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಪೌಷ್ಟಿಕ ಆಹಾರ, ಬೀದಿ ನಾಯಿಗಳ ನಿಯಂತ್ರಣ, ಲಸಿಕೆ ಹಾಗೂ 2.00 ಕೋಟಿ ವೆಚ್ಚದಲ್ಲಿ ವೈಜ್ಞಾನಿಕ ವಿಶೇಷ ಸಂರಕ್ಷಣಾ ಕೇಂದ್ರಗಳ ಸ್ಥಾಪನೆ, ಸಾಕುಪ್ರಾಣಿಗಳಿಗೆ ಉಚಿತ ಚಿಕಿತ್ಸೆನೀಡಲಾಗುವುದು.
ಸಮಾಜ ಕಲ್ಯಾಣ:
500 ಒಂಟಿ ಮನೆಗಳ ನಿರ್ಮಾಣಕ್ಕೆ 35.70 ಕೋಟಿ. ನಿರುದ್ಯೋಗಿಗಳಿಗೆ ವಾಹನ ಖರೀದಿ ಸಹಾಯಧನ, ಬೀದಿಬದಿ ವ್ಯಾಪಾರಿಗಳಿಗೆ ಇ-ವೆಂಡಿಂಗ್ ವಾಹನ, ಆಸರೆಯಿಲ್ಲದ ಹಿರಿಯರಿಗೆ ಹಿರಿಯರ ವಾಡಿ ವಸತಿ ಯೋಜನೆ. 92 ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಯೂನಿಫಾರ್ಮ್ ವಿತರಣೆ. ಡಿಜಿಟಲ್ ಬೋರ್ಡ್, ಸ್ಪರ್ಧಾತಕ ಪರೀಕ್ಷೆ ತರಬೇತಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ಟ್ಯಾಪ್ ವಿತರಣೆ.
ಹೊರ ಸಂಪನೂಲ ನೌಕರರ ನಿಯೋಜನೆ:
ಆಡಳಿತವನ್ನು ಮತ್ತಷ್ಟು ಚುರುಕುಗೊಳಿಸಲು ಅಗತ್ಯಾನುಸಾರ ಹೊರ ಸಂಪನ್ಮೂಲ ನೌಕರರ ನಿಯೋಜನೆ ಮಾಡಿಕೊಳ್ಳಲಾಗುವುದು . ಅಧಿಕಾರಿಗಳ ಕಾರ್ಯದಕ್ಷತೆ ಹೆಚ್ಚಿಸಲು ಜಿಬಿಜಿ ಕಾಯ್ದೆ 2024, ಕೆಎಂಸಿ ಕಾಯ್ದೆ 1976 ಮತ್ತು ಆರ್ಟಿಐ ಕುರಿತು ಹೈಬ್ರಿಡ್ ಮಾದರಿ ತರಬೇತಿ. ತಾಂತ್ರಿಕ ಅಧಿಕಾರಿಗಳಿಗೆ ನೂತನ ತಂತ್ರಜ್ಞಾನಗಳ ವಿಶೇಷ ಕಾರ್ಯಾಗಾರ ಹಮಿಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.
