Thursday, May 2, 2024
Homeರಾಜ್ಯವ್ಯಾಪಾರಕ್ಕೆಂದು ಸೂಡಾನ್‍ಗೆ ತೆರಳಿದ್ದ ಮೈಸೂರಿನ ಮಹಿಳೆ ಅನುಮಾನಾಸ್ಪದ ಸಾವು

ವ್ಯಾಪಾರಕ್ಕೆಂದು ಸೂಡಾನ್‍ಗೆ ತೆರಳಿದ್ದ ಮೈಸೂರಿನ ಮಹಿಳೆ ಅನುಮಾನಾಸ್ಪದ ಸಾವು

ನವದೆಹಲಿ, ಏ.16- ವ್ಯಾಪಾರಕ್ಕೆಂದು ದೂರದ ಸೂಡಾನ್‍ಗೆ ತೆರಳಿದ್ದ ಮೈಸೂರಿನ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಪಕ್ಷಿರಾಜಪುರದ ನಿವಾಸಿ ನಂದಿನಿ ಸೂಡಾನ್‍ನಲ್ಲಿ ಮೃತಪಟ್ಟಿದ್ದಾರೆಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಖಚಿತಪಡಿಸಿದೆ.

ಇದೀಗ ಅವರ ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್, ಸೂಡಾನ್‍ನಲ್ಲಿರುವ ಭಾರತದ ರಾಯಭಾರಿಯನ್ನು ಸಂಪರ್ಕಿಸಿದ್ದಾರೆ. ಮೃತದೇಹವನ್ನು ಸೂಡಾನ್‍ನಿಂದ ನೈಜೀರಿಯಾ ಮೂಲಕ ನವದೆಹಲಿಗೆ ತಂದು ನಂತರ ಬೆಂಗಳೂರು ಮೂಲಕ ಮೈಸೂರಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗಿದೆ.

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಜೈಶಂಕರ್‍ಗೆ ಎಲ್ಲಾ ಮಾಹಿತಿಯನ್ನು ಒದಗಿಸಿದ್ದಾರೆ ಎಂದು ತಿಳಿದುಬಂದಿದೆ. ಕೆಲ ವರ್ಷಗಳ ಹಿಂದೆ ನಂದಿನಿ ವ್ಯಾಪಾರಕ್ಕಾಗಿ ಸೂಡಾನ್‍ಗೆ ತೆರಳಿದ್ದರು. ಅವರಿಗೆ ಪತಿ ಮತ್ತು ಮಕ್ಕಳಿದ್ದಾರೆ. ಶುಕ್ರವಾರ ಪಾರ್ಥೀ ಶರೀರ ತವರಿಗೆ ಬರುವ ಸಾಧ್ಯತೆ ಇದೆ ಎಂದು ರಾಯಭಾರಿ ಕಚೇರಿ ಮೂಲಗಳು ತಿಳಿಸಿವೆ.

RELATED ARTICLES

Latest News