Saturday, July 27, 2024
Homeಜಿಲ್ಲಾ ಸುದ್ದಿಗಳುಶಾಸಕ ಶಿವರಾಜ್ ಪಾಟೀಲ್ ಮೇಲೆ ಕತ್ತಿಯಿಂದ ಹಲ್ಲೆಗೆ ಯತ್ನ

ಶಾಸಕ ಶಿವರಾಜ್ ಪಾಟೀಲ್ ಮೇಲೆ ಕತ್ತಿಯಿಂದ ಹಲ್ಲೆಗೆ ಯತ್ನ

ರಾಯಚೂರು, ಏ,1-ಮದ್ಯವ್ಯಸನಿಯೊಬ್ಬ ರಾಯಚೂರು ನಗರ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಮೇಲೆ ಕತ್ತಿಯಿಂದ ಹಲ್ಲೆ ಮಾಡಲು ಯತ್ನಿಸಿದ ಘಟನೆ ನಗರದ ಗದ್ವಾಲ್ ರಸ್ತೆಯಲ್ಲಿ ನಡೆದಿದೆ. ಚಾಂದಪಾಷಾ ಹಲ್ಲೆ ಮಾಡಲು ಯತ್ನಿಸಿದ ಆರೋಪಿಯಾಗಿದ್ದು ಆತನನ್ನು ಮಾರ್ಕೆಟ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.

ಗದ್ವಾಲ್ ರಸ್ತೆಯ ಆಂಜನೇಯ ದೇವಸ್ಥಾನಕ್ಕೆ ಶಾಸಕ ಶಿವರಾಜ್ ಪಾಟೀಲ್ ಬಂದಿದ್ದಾಗ ಈ ಘಟನೆ ನಡೆದಿದೆ.ದೇವರಿಗೆ ಫೋಜೆ ಸಲ್ಲಿಸಿ ಹೊರಬಂದ ಶಾಸಕರನ್ನು ನೋಡಿ ಅವರ ಬಳಿಗೆ ಓಡೋಡಿ ಬಂದ ಚಾಂದಪಾಷಾ ನಮ್ಮ ಮನೆಗೆ ನಲ್ಲಿ ಇಲ್ಲ ಕುಡಲೆ ಹಾಕಿಸಿ ಕೊಡಿ ಎಂದು ಹೇಳಿದ್ದಾನೆ.

ಆಯಿತು ನಿನ್ನ ಮನೆಹೋಗಿ ವಿಳಾಸದ ದಾಖಲೆ ತೆಗೆದುಕೊಂಡು ಬಾ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾ.ಕೈನಲ್ಲಿ ಕತ್ತಿಗಳನ್ನು ಹಿಡಿದಿದ್ದು ನೋಡಿ ಏನಿದು ಎಂದು ಪ್ರಶ್ನಿಸಿದ್ದಾರೆ ಈ ವೇಳೆ ಶಾಸಕರ ಮೇಲೆ ಆರೋಪಿ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಕೂಡಲೆ ಅಂಗರಕ್ಷಕರು ತಡೆದಿದ್ದಾರೆ.

ಬಳಿಕ ಚಾಂದ್‍ಪಾಷಾನನ್ನು ಮಾರ್ಕೆಟ್ ಯಾರ್ಡ್ ಠಾಣೆಗೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ, ಹಲ್ಲೆ ಮಾಡಲು ಹೋಗಿರಲಿಲ್ಲ, ಅವರೊಂದಿಗೆ ಮಾತನಾಡಲು ಹೋಗಿದ್ದೆ ಎಂದು ಚಾಂದ್‍ಪಾಷಾ ಹೇಳಿದ್ದಾನೆ.

ಆದರೂ ಮಾರಕಾಸ್ತ್ರ ಹಿಡಿದು ಒಡಾಡುತ್ತಿದ್ದ ಬಗ್ಗೆ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

RELATED ARTICLES

Latest News