Friday, September 20, 2024
Homeಬೆಂಗಳೂರುಬೆಂಗಳೂರು : ಕತ್ತು ಕೊಯ್ದು ಹೆಂಡತಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಗಂಡ

ಬೆಂಗಳೂರು : ಕತ್ತು ಕೊಯ್ದು ಹೆಂಡತಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಗಂಡ

Bangalore: Husband killed his wife and tried to commit suicide

ಬೆಂಗಳೂರು,ಆ.28– ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ನಡತೆ ಶಂಕಿಸಿ ಕತ್ತು ಕೊಯ್ದು ಕೊಲೆ ಮಾಡಿ ಪತಿಯೂ ಆತಹತ್ಯೆಗೆ ಯತ್ನಿಸಿರುವ ಘಟನೆ ಕೆಂಗೇರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೋದಿ ಗ್ರೌಂಡ್‌ ಸಮೀಪದ ಅರುಣಾಚಲಂ ಲೇಔಟ್‌ ನಿವಾಸಿ ನವ್ಯಾಶ್ರೀ(26) ಕೊಲೆಯಾದ ಮಹಿಳೆ. ಆತಹತ್ಯೆಗೆ ಯತ್ನಿಸಿದ ಪತಿ ಕಿರಣ್‌ಕುಮಾರ್‌(30) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮೂರು ವರ್ಷದ ಹಿಂದೆ ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಕಿರಣ್‌ಕುಮಾರ್‌ ಟ್ಯಾಕ್ಸಿ ಚಾಲಕ ವೃತ್ತಿ ಮಾಡುತ್ತಿದ್ದನು.
ಈ ನಡುವೆ ಪತ್ನಿ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪತಿ ಜಗಳವಾಡುತ್ತಿದ್ದನು. ಕೆಲವು ದಿನಗಳಿಂದ ಕಿರಣ್‌ಕುಮಾರ್‌ ಮನೆಗೆ ಬಂದಿರಲಿಲ್ಲ. ನಿನ್ನೆ ಬಂದು ಮತ್ತೊಂದು ಕೀ ಸಹಾಯದಿಂದ ಬೀಗ ತೆಗೆದು ಮನೆ ಒಳಗೆ ಹೋಗಿ ಬಚ್ಚಿಟ್ಟುಕೊಂಡಿದ್ದಾನೆ.

ಸ್ನೇಹಿತೆ ಜೊತೆ ಹೊರಗೆ ಹೋಗಿದ್ದ ನವ್ಯಶ್ರೀ ಆಕೆಯನ್ನು ಕರೆದುಕೊಂಡು ಮನೆಗೆ ಬಂದು ಕೀ ತೆಗೆದಿದ್ದಾಳೆ. ನಂತರ ಆಕೆಯ ಸ್ನೇಹಿತೆ ರೂಮ್‌ನಲ್ಲಿ ಮಲಗಿದ್ದಾರೆ. ನವ್ಯಶ್ರೀ ಮನೆಯ ಹಾಲ್‌ನಲ್ಲಿ ಬಂದು ಪ್ರಿಯಕರನ ಜೊತೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಬಚ್ಚಿಟ್ಟುಕೊಂಡಿದ್ದ ಪತಿ ಕಿರಣ್‌ಕುಮಾರ್‌ ಎದ್ದುಬಂದು ಜಗಳವಾಡಿದ್ದಾನೆ.

ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದಾಗ ಕೈಗೆ ಸಿಕ್ಕಿದ ಹಾರೆಯಿಂದ ತಲೆಗೆ ಹೊಡೆದು ಚಾಕುವಿನಿಂದ ಕುತ್ತಿಗೆ ಇರಿದು ಕೊಲೆ ಮಾಡಿ ನಂತರ ತಾನೂ ವಿಷ ಸೇವಿಸಿ ಆತಹತ್ಯೆಗೆ ಯತ್ನಿಸಿ ಸೀದಾ ಪೊಲೀಸ್‌‍ ಠಾಣೆಗೆ ಹೋಗಿ ನಡೆದ ವಿಷಯವನ್ನು ತಿಳಿಸಿದ್ದಾನೆ.

ಪೊಲೀಸರು ತಕ್ಷಣ ಕಿರಣ್‌ಕುಮಾರ್‌ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗೆಳತಿಯ ಮನೆಯಲ್ಲಿ ಇಷ್ಟೆಲ್ಲಾ ಘಟನೆ ನಡೆದರೂ ರೂಮ್‌ನಲ್ಲಿ ಮಲಗಿದ್ದ ಸ್ನೇಹಿತೆಗೆ ಇದ್ಯಾವುದೂ ಸಹ ಅರಿವಿಗೆ ಬಂದಿಲ್ಲ. ಕೆಂಗೇರಿ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News