Thursday, May 2, 2024
Homeಬೆಂಗಳೂರುಬೆಂಗಳೂರು : ಸ್ನೇಹಿತನಿಂದಲೇ ಗೆಳೆಯನ ಕೊಲೆ

ಬೆಂಗಳೂರು : ಸ್ನೇಹಿತನಿಂದಲೇ ಗೆಳೆಯನ ಕೊಲೆ

ಬೆಂಗಳೂರು, ಏ.19- ಜೈಲಿನಿಂದ ಇತ್ತೀಚೆಗಷ್ಟೇ ಹೊರಬಂದಿದ್ದ ಯುವಕನನ್ನು ಸ್ನೇಹಿತನೇ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.ಬಾಣಸವಾಡಿ ನಿವಾಸಿ ಕೀರ್ತಿ(24) ಕೊಲೆಯಾದ ಯುವಕ. ಈತ ಈ ಹಿಂದೆ ಕ್ಯಾಬ್ ಚಾಲಕ ವೃತ್ತಿ ಮಾಡುತ್ತಿದ್ದನು.

ಕೌಟುಂಬಿಕ ವಿಚಾರವಾಗಿ ಸಂಬಂಕರ ನಡುವೆ ಈ ಹಿಂದೆ ನಡೆದಿದ್ದ ಗಲಾಟೆ ವೇಳೆ ಸಂಬ„ಕರ ಮೇಲೆ ಕೀರ್ತಿ ಹಲ್ಲೆ ನಡೆಸಿದ್ದ ಈ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದನು. ಎರಡು ತಿಂಗಳ ಹಿಂದೆಯಷ್ಟೆ ಕೀರ್ತಿ ಜೈಲಿನಿಂದ ಹೊರ ಬಂದಿದ್ದನು. ಜೈಲಿನಲ್ಲಿದ್ದಾಗ ನನ್ನನ್ನು ನೋಡಲು ಬಂದಿಲ್ಲ. ಹಣಕಾಸಿನ ನೆರವು ಮಾಡಲಿಲ್ಲಾ ಎಂದು ಸ್ನೇಹಿತ ಕಿಶೋರ್ ಜೊತೆ ಕೀರ್ತಿ ಜಗಳವಾಡಿದ್ದಾನೆ.

ಇದೇ ವಿಚಾರವಾಗಿ ಕೀರ್ತಿ ಮತ್ತು ಕಿಶೋರ್ ನಡುವೆ ಮನಸ್ತಾಪವಾಗಿದೆ. ರಾತ್ರಿ ಹೆಣ್ಣೂರಿನ ಬೃಂದಾವನ ಲೇಔಟ್ನ ಖಾಲಿ ನಿವೇಶನದಲ್ಲಿ ಕೀರ್ತಿ ಮದ್ಯ ಸೇವಿಸಲು ಸ್ನೇಹಿತರೊಂದಿಗೆ ಹೋಗಿದ್ದನು.

ಈ ವಿಷಯ ತಿಳಿದು ಕಿಶೋರ್ ತನ್ನ ಇಬ್ಬರು ಸಹಚರರೊಂದಿಗೆ ಆ ಸ್ಥಳಕ್ಕೆ ಹೋಗಿ ಕೀರ್ತಿಯೊಂದಿಗೆ ಜಗಳವಾಡಿ ಮಾರಾಕಾಸಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸುದ್ದಿ ತಿಳಿದು ಹೆಣ್ಣೂರು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಆಸ್ಪತ್ರೆಗ ರವಾನಿಸಿ ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.

RELATED ARTICLES

Latest News