ಬೆಂಗಳೂರು,ಜು.11-ಹೆತ್ತ ತಾಯಿ ಹಾಗೂ ಅಜ್ಜಿ ಮತ್ತು ಸೋದರ ಮಾವನನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ ಚಾಲಕನೊಬ್ಬ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಗರದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ಟಿಗೆ ಪಾಳ್ಯದ ಐಯ್ಯಪ್ಪಸ್ವಾಮಿ ದೇವಸ್ಥಾನ ಸಮೀಪದ ನಿವಾಸಿಗಳಾದ ಮಂಗಳಮ (55), ಮಂಜಮ (65), ಸೋದರಮಾವ ಸತೀಶ್ (50) ಕೊಲೆಯಾದ ದುರ್ದೈವಿಗಳು.ಈ ಮೂವರನ್ನು ಕೊಂದು ಚಾಲಕ ಪ್ರಶಾಂತ್ (34) ಮನೆಯಲ್ಲಿ ಆತಹತ್ಯೆಗೆ ಶರಣಾಗಿದ್ದಾನೆ. ಹಾಗಾಗಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.
ಆರೋಪಿ ಪ್ರಶಾಂತ್ ಚಾಲಕ ವೃತ್ತಿ ಮಾಡುತ್ತಿದ್ದನು. ಈತನ ತಾಯಿ ಮಂಗಳಮ ಗಾರ್ಮೆಂಟ್್ಸಗೆ ಹೋಗುತ್ತಿದ್ದರು. ಅಜ್ಜಿ ನಂಜಮ ಸ್ವೀಪರ್ ಕೆಲಸ ಹಾಗೂ ಸೋದರ ಮಾವ ಪ್ಲಂಬರ್ ಕೆಲಸ ಮಾಡಿಕೊಂಡಿದ್ದರು.ಇಂದು ಬೆಳಗ್ಗೆ 7.30 ರ ಸುಮಾರಿನಲ್ಲಿ ಪ್ರಶಾಂತ್ ಮನೆಯಲ್ಲಿ ಯಾವುದೋ ವಿಚಾರಕ್ಕೆ ಜಗಳವಾಗಿದೆ.
ಜಗಳ ವಿಕೋಪಕ್ಕೆ ತಿರುಗಿದಾಗ ಪ್ರಶಾಂತ್ ಮಚ್ಚಿನಿಂದ ಒಬ್ಬೊಬ್ಬರಂತೆ ಮೂವರ ಮೇಲೆ ಮನಬಂದಂತೆ ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ನಂತರ ಮನೆಯಿಂದ ಹೊರಗೆ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಇವರ ಮನೆಯಲ್ಲಿ ಜೋರು ಗಲಾಟೆಯಾಗುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಇವರ ಮನೆ ಬಳಿ ಬರುತ್ತಿರುವುದನ್ನು ನೋಡಿದ ಪ್ರಶಾಂತ್ ತಾನು ಸಿಕ್ಕಿಹಾಕಿಕೊಳ್ಳುವ ಭಯದಲ್ಲಿ ರೂಮ್ಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ.ನೆರೆಹೊರೆಯವರು ಮನೆ ಒಳಗೆ ಹೋಗಿ ನೋಡಿದಾಗ ಮೂವರು ರಕ್ತದ ಮಡುವಿನಲ್ಲಿ ಕೊಲೆಯಾಗಿ ಬಿದ್ದಿರುವುದು ಕಂಡು ಒಂದು ಕ್ಷಣ ಗಾಬರಿಯಾಗಿ ಹೊರಗೆ ಬಂದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸುದ್ದಿ ತಿಳಿದು ಪೊಲೀಸರು ದಾವಿಸಿ ಮನೆ ಬಂದು ನೋಡಿದಾಗ ಆರೋಪಿ ಪ್ರಶಾಂತ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.ಈ ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.ರಾತ್ರಿ ಮಾತನಾಡಿದವರು ಬೆಳಗಾಗುವಷ್ಟರಲ್ಲಿ ಮನೆ ಮಗನಿಂದಲೇ ಕೊಲೆಯಾದರಲ್ಲಾ ಎಂದು ಸ್ಥಳೀಯರು ಮಮಲ ಮರುಗಿದ್ದಾರೆ.
ಯಾವ ಕಾರಣಕ್ಕಾಗಿ ಪ್ರಶಾಂತ್ ಈ ಮೂವರನ್ನು ಕೊಲೆ ಮಾಡಿ ಆತಹತ್ಯೆ ಮಾಡಿಕೊಂಡ ಎಂಬುವುದು ನಿಗೂಢವಾಗಿದೆ.ಕೌಟುಂಬಿಕ ಕಲಹದಲ್ಲಿ ಈ ಭೀಕರ ಘಟನೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.ಪೊಲೀಸರು ಮನೆಯನ್ನೆಲ್ಲಾ ಪರಿಶೀಲನೆ ನಡೆಸಿದ್ದು, ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಬಗ್ಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.ಸ್ಥಳಕ್ಕೆ ಎಫ್ಎಸ್ಎಲ್ ತಂಡ ಹಾಗೂ ಬೆರಳಚ್ಚರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.ಕೆ.ಆರ್ ಪುರದಲ್ಲಿ ಮನೆ ಮಗಳಿಂದಲೇ ಅಪ್ಪ,ಅಮ ಹಾಗೂ ಒಡಹುಟ್ಟಿದ ಸಹೋದರಿಯ ಕೊಲೆ ಮಾಸುವ ಮುನ್ನವೇ ನಗರದಲ್ಲಿ ಅಂತಹದೇ ರೀತಿಯ ತ್ರಿವಳಿ ಕೊಲೆ ನಡೆದಿರುವುದು ನಗರವನ್ನು ಬೆಚ್ಚಿ ಬೀಳಿಸಿದೆ.
