Saturday, May 4, 2024
Homeರಾಜಕೀಯಮೋದಿ ದ್ವೇಷದ ಭಾಷಣ ಅಪಾಯದ ಮುನ್ಸೂಚನೆ : ಬಿ.ಕೆ.ಹರಿಪ್ರಸಾದ್

ಮೋದಿ ದ್ವೇಷದ ಭಾಷಣ ಅಪಾಯದ ಮುನ್ಸೂಚನೆ : ಬಿ.ಕೆ.ಹರಿಪ್ರಸಾದ್

ಬೆಂಗಳೂರು,ಏ.23- ರಾಗಾ, ದ್ವೇಷ, ಅಸೂಯೆ, ಇಲ್ಲದೆ ಅಧಿಕಾರ ನಡೆಸುತ್ತೇವೆ ಎಂದು ಸಂವಿಧಾನದ ಮೇಲೆ ಪ್ರಮಾಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು ದ್ವೇಷ, ಹಗೆತನದ ಭಾಷಣ ಮಾಡುತ್ತಿರುವುದು ಭಾರತಕ್ಕೆ ಅತ್ಯಂತ ಗಂಭೀರ ಹಾಗೂ ಅಪಾಯದ ಮುನ್ಸೂಚನೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ನರೇಂದ್ರ ಮೋದಿಯವರು ದ್ವೇಷ ಬಿತ್ತುತ್ತಿರುವುದು ಧರ್ಮ- ಧರ್ಮಗಳ ನಡುವೆಯಲ್ಲ, ಪರಸ್ಪರ ಪ್ರೀತಿ, ವಿಶ್ವಾಸ, ಸಹೋದರತೆಯಿಂದ ಬಾಳಿ-ಬದುಕುತ್ತಿರುವ ಭಾರತೀಯರ ನಡುವೆ. ಬಹಿರಂಗವಾಗಿ ಇಷ್ಟು ನಿರ್ಲಜ್ಜ, ದುಷ್ಟತನದಿಂದ ಒಬ್ಬ ಪ್ರಧಾನಿಯಾದವರು ಮಾತಾಡಿದ್ದು ಭಾರತದ ಇತಿಹಾಸದಲ್ಲೇ ಮೊದಲು ಎಂದು ಕಿಡಿಕಾರಿದ್ದಾರೆ.

ಚುನಾವಣೆಯ ಸೋಲಿನ ಮುನ್ಸೂಚನೆಯಿಂದ, ಅಧಿಕಾರದ ದಾಹಕ್ಕಾಗಿ ಭಾರತದ ಬಹುತ್ವಕ್ಕೆ ಕೊಳ್ಳಿ ಇಡುತ್ತಿದ್ದಾರೆ. ಇಂತಹ ಅಪಾಯವನ್ನು ಮತದಾರರು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಿಂದ ವಿಚಲಿತರಾಗಿರುವ ಪ್ರಧಾನಿಯ ಬಳಿ ಆರೋಪ ಮಾಡಲು ಯಾವ ಅಸ್ತ್ರವೂ ಉಳಿದಿಲ್ಲ ಎಂಬ ಕಾರಣಕ್ಕೆ ದ್ವೇಷ ಬಿತ್ತುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಸ್ವತಃ ಮಾಂಗಲ್ಯ ಕಟ್ಟಿದ ಪತ್ನಿಯನ್ನು ದೂರವಿಟ್ಟಿರುವ ನರೇಂದ್ರ ಮೋದಿ, ಬೇರೆ ಮಹಿಳೆಯರ ಮಾಂಗಲ್ಯದ ಹುಸಿ ಕಾಳಜಿ ವಹಿಸುತ್ತಿರುವುದು ಮೊಸಳೆ ಕಣ್ಣೀರು ಸುರಿಸುವಂತಿದೆ. ಇಡೀ ಮಹಿಳಾ ಸಮುದಾಯವನ್ನು ಅವಮಾನಿಸಿರುವ ಮೋದಿ, ಕೂಡಲೇ ದೇಶದ ಮಹಿಳೆಯರಿಗೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಚುನಾವಣಾ ಆಯೋಗಕ್ಕೆ ನಿಜವಾಗಿಯೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ಹೊಣೆಗಾರಿಕೆ ಇದ್ದರೆ ನರೇಂದ್ರ ಮೋದಿ ವಿರುದ್ದ ಕ್ರಮ ಜರುಗಿಸಬೇಕು. ಚುನಾವಣೆಗೆ ಸ್ರ್ಪಸದಂತೆ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

RELATED ARTICLES

Latest News