Sunday, May 5, 2024
Homeಬೆಂಗಳೂರುಪಾಳುಕೊಂಪೆಯಾದ ಬಿಎಸ್‍ಎನ್‍ಎಲ್‍ ಶಾಖಾ ಕಚೇರಿ

ಪಾಳುಕೊಂಪೆಯಾದ ಬಿಎಸ್‍ಎನ್‍ಎಲ್‍ ಶಾಖಾ ಕಚೇರಿ

ಬೆಂಗಳೂರು,ಜ.3- ಒಂದು ಕಾಲದಲ್ಲಿ ಗತವೈಭವ ಮೆರೆದಿದ್ದ ಬಿಎಸ್‍ಎನ್‍ಎಲ್‍ನ ನಗರ ಕೇಂದ್ರ ಭಾಗದಲ್ಲಿರುವ ಶಾಖಾ ಕಚೇರಿಯು ಈಗ ಪಾಳುಕೊಂಪೆಯಾಗಿದೆ. ಮೊಬೈಲ್ ಸೇವೆಯ ಆರಂಭದ ದಿನಗಳಲ್ಲಿ ಬಿಎಸ್‍ಎನ್‍ಎಲ್ ಸಿಮ್ ಪಡೆದುಕೊಳ್ಳಲು ಮುಂಜಾನೆ 4 ಗಂಟೆಗೆ ಎದ್ದು ಸರತಿಸಾಲಿನಲ್ಲಿ ನಿಲ್ಲಬೇಕಾಗಿತ್ತು. ಕೆಲವು ಕಡೆ ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದ ಉದಹಾರಣೆಗಳೂ ಇವೆ.

ಅಂಥ ಗತವೈಭವ ಮರೆಯಾಗಿ ಇಂದು ಬಿಎಸ್‍ಎನ್‍ಎಲ್ ಸೊರಗಿ ಹೋಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಬೆಂಗಳೂರಿನ ಹೃದಯ ಭಾಗದಲ್ಲಿರುವ ಬಿಎಸ್‍ಎನ್‍ಎಲ್‍ನ ಪ್ರಾದೇಶಿಕ ಪ್ರಧಾನ ವ್ಯವಸ್ಥಾಪಕರ ಪ್ರಧಾನ ಕಚೇರಿ ಸಾಕ್ಷಿಯಾಗಿದೆ. ಬಿಎಸ್‍ಎನ್‍ಎಲ್‍ನ ಕಚೇರಿಗೆ ಭೇಟಿ ನೀಡುವುದಾದರೆ ಮೂಗು ಮುಚ್ಚಿಕೊಂಡೇ ಒಳಹೋಗಬೇಕು. ಎಲ್ಲೆಂದರಲ್ಲಿ ಕಸದ ರಾಶಿ, ತಿಪ್ಪೆಗುಂಡಿ, ಅಡ್ಡಾದಿಡ್ಡಿಯಾಗಿ ಬಿದ್ದಿರುವ ತ್ಯಾಜ್ಯ ವಸ್ತುಗಳು ಅಸಹನೀಯ ವಾತಾವರಣ ಸೃಷ್ಟಿಸಿವೆ.

ಎಲ್ಲೆಂದರಲ್ಲಿ ಅಗೆದು ಗುಂಡಿಗಳನ್ನು ನಿರ್ಮಿಸಲಾಗಿದೆ. ಪಾರ್ಕಿಂಗ್ ಸ್ಥಳವಂತೂ ಹಾಳು ಕೊಂಪೆಯಾಗಿದೆ. ಬಿಎಸ್‍ಎನ್‍ಎಲ್‍ನ ಕ್ಯಾಂಟೀನ್‍ನಲ್ಲಿ ತಿಂಡಿ, ಊಟಕ್ಕಾಗಿ ಜನ ಕಿಕ್ಕಿರಿದು ತುಂಬಿರುತ್ತಿದ್ದರು. ಈಗ ಇಡೀ ಕ್ಯಾಂಟೀನ್ ಬಣಗುಡುತ್ತಿದೆ. ವಾಣಿಜ್ಯ ನ್ಯಾಯಾಲಯಗಳ ಸಂಕೀರ್ಣ, ಟೆಲಿಕಾಂ ರೆಗ್ಯುಲಾರಿಟಿ ಅಥಾರಿಟಿ ಆಫ್ ಇಂಡಿಯಾ(ಟ್ರಾಯ್) ಪ್ರಾದೇಶಿಕ ಕಚೇರಿಗಳು ಬಿಎಸ್‍ಎನ್‍ಎಲ್‍ನ ಕೇಂದ್ರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿವೆ. ವಾಣಿಜ್ಯ ನ್ಯಾಯಾಲಯಗಳ ಪ್ರಕರಣಗಳಿಗಾಗಿ ಆಗಮಿಸುವವರು ಬಿಎಸ್‍ಎನ್‍ಎಲ್‍ನ ದುಸ್ಥಿತಿ ಕಂಡು ಮರುಗುವಂತಾಗಿದೆ.

ಕ್ರಿಮಿನಲ್‍ಗಳಿಗೆ ಜಾತಿ, ಧರ್ಮದ ಬಣ್ಣಕಟ್ಟಿ ಪ್ರತಿಭಟಿಸುವ ದುಸ್ಥಿತಿಯಲ್ಲಿ ಬಿಜೆಪಿ : ಸಿಎಂ ಸಿದ್ದರಾಮಯ್ಯ

ಖಾಸಗಿ ದೂರ ಸಂಪರ್ಕ ಸೇವೆಗಳು ಹವಾನಿಯಂತ್ರಿತ ಐಷಾರಾಮಿ ಕಚೇರಿಗಳನ್ನು ನಿರ್ವಹಣೆ ಮಾಡುತ್ತಿವೆ. ಖಾಸಗಿ ಸಂಸ್ಥೆಗಳ ದೂರ ಸಂಪರ್ಕ ಸೇವೆಯೂ ಕೂಡ ಜನಸ್ನೇಹಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಬಿಎಸ್‍ಎನ್‍ಎಲ್ ಇನ್ನೂ 3ಜಿ ಬಿಟ್ಟು ಮೇಲೆ ಬಂದಿಲ್ಲ. ಮೊಬೈಲ್ ಸಿಮ್ ಪಡೆದುಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದಾರೆ. ಖಾಸಗಿ ಸೇವೆಯಿಂದ ಬಿಎಸ್‍ಎನ್‍ಎಲ್‍ಗೆ ಪೋರ್ಟ್ ಆಗಲು ಬಯಸುವವರು ಸರ್ಕಾರಿ ವ್ಯವಸ್ಥೆಯ ಕಿರಿಕಿರಿಯನ್ನು ಅನುಭವಿಸಲಾಗದೆ ಇರುವ ಸಂಪರ್ಕದಲ್ಲೇ ಮುಂದುವರೆಯುತ್ತಿರುವುದು ಕಂಡುಬಂದಿದೆ.

ಅದೇ ಬೇರೆ ಯಾವುದೇ ಸೇವೆಯಿಂದ ಖಾಸಗಿಗೆ ಪೋರ್ಟ್ ಆಗಲು ಎಸ್‍ಎಂಎಸ್ ಆಧಾರಿತ ಸೂಚನೆ ಕಳುಹಿಸಿದ ತಕ್ಷಣವೇ ನಿಮಗೆ ಕರೆ ಬರುತ್ತದೆ. ನೀವು ಪೋರ್ಟ್ ಆಗಲು ಬಯಸುವ ಸಂಸ್ಥೆಯ ಪ್ರತಿನಿಧಿ ನಿಮ್ಮ ಅನುಕೂಲಕರ ಸಮಯಕ್ಕೆ ಅನುಗುಣವಾಗಿ ಮನೆ ಅಥವಾ ಕಚೇರಿ ಬಾಗಿಲಿಗೆ ಬರಲು ಸಿದ್ದರಿರುತ್ತಾರೆ. ಬಿಎಸ್‍ಎನ್‍ಎಲ್‍ಗೆ ಪರಿವರ್ತನೆಯಾಗಬೇಕಾದರೆ ಕೇಂದ್ರ ಕಚೇರಿಗೆ ಭೇಟಿ ನೀಡಬೇಕು. ಅಲ್ಲಿನ ಸಿಬ್ಬಂದಿಗಳ ಸಮಯಕ್ಕೆ ಅನುಗುಣವಾಗಿ ಕಾದುಕುಳಿತುಕೊಳ್ಳಬೇಕು. ಅವರು ಕೇಳಿದ ಅಷ್ಟು ದಾಖಲಾತಿಗಳನ್ನು ಒದಗಿಸಿ ಸೇವೆ ಪಡೆದುಕೊಳ್ಳುವಷ್ಟರಲ್ಲಿ ಹೈರಾಣಾಗುವ ಸ್ಥಿತಿ ಇದೆ.

ಮತ್ತೊಂದು ಗೋದ್ರಾ ಹತ್ಯಾಕಾಂಡಕ್ಕೆ ಸಂಚು- ಬಿ.ಕೆ.ಹರಿಪ್ರಸಾದ್

ದೂರ ಸಂಪರ್ಕ ಸೇವೆಯಷ್ಟೇ ಅಧ್ವಾನವಾಗಿಲ್ಲ. ಕಚೇರಿಯ ನೈರ್ಮಲೀಕರಣವೂ ಕೂಡ ಗಬ್ಬೆದ್ದು ಹೋಗಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.

RELATED ARTICLES

Latest News