Saturday, April 27, 2024
Homeರಾಷ್ಟ್ರೀಯಕೆಲವರ ದುರಹಂಕಾರದಿಂದ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ : ಅಜಾದ್

ಕೆಲವರ ದುರಹಂಕಾರದಿಂದ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ : ಅಜಾದ್

ಪೂಂಚ್,ಫೆ.15- ದೌರ್ಬಲ್ಯ ಹಾಗೂ ದುರಹಂಕಾರದಿಂದಾಗಿ ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗುತ್ತಿದೆ ಎಂದು ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ ಅಧ್ಯಕ್ಷ ಗುಲಾಂ ನಬಿ ಅಜಾದ್ ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್‍ನೊಳಗಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನಡುವೆ, ಕಾಂಗ್ರೆಸ್ ಪಕ್ಷದ ಮಾಜಿ ನಾಯಕರಾಗಿದ್ದ ಅಜಾದ್ ಅವರು, ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್ ಚವಾಣ್ ಅವರು ಪಕ್ಷದಿಂದ ನಿರ್ಗಮಿಸಿರುವುದು ಕಾಂಗ್ರೆಸ್‍ಗೆ ದೊಡ್ಡ ಹೊಡೆತವಾಗಿದೆ ಎಂದು ತಿಳಿಸಿದ್ದಾರೆ.

ಈಗ ನಾನು ಈ ಬಗ್ಗೆ ಹೆಚ್ಚು ಹೇಳಲು ಬಯಸುವುದಿಲ್ಲ ಏಕೆಂದರೆ ನಾನು ಪಕ್ಷವನ್ನು ತೊರೆದಿದ್ದೇನೆ. ಅಬ್ ವೋ ಜಾನೇ ಉಂಕ ಕಾಮ್ ಜಾನೆ. ಅಶೋಕ್ ಚವ್ಹಾಣ್ ಕಾಂಗ್ರೆಸ್ ಗೆ ಮಹತ್ವದ ಕೊಡುಗೆ ನೀಡಿದ್ದಾರೆ.ಅವರ ತಂದೆ ಕೂಡ ಕಾಂಗ್ರೆಸ್ ನ ದೊಡ್ಡ ನಾಯಕರಾಗಿದ್ದು, ಕೇಂದ್ರ ಸಚಿವರೂ ಆಗಿದ್ದರು. ಮುಂಬರುವ ದಿನಗಳಲ್ಲಿ ಇನ್ನಷ್ಟು ಮಂದಿ ಪಕ್ಷ ತೊರೆಯಲಿದ್ದಾರೆ ಎಂಬುದು ನನ್ನ ಬಳಿ ಇರುವ ಮಾಹಿತಿ ಇದು ಅವರಿಗೆ ದೊಡ್ಡ ಹೊಡೆತ ಎಂದು ಅವರು ಹೇಳಿದರು.

ರೈತ ಮುಖಂಡರೊಂದಿಗೆ ಮತ್ತೊಂದು ಮಾತುಕತೆಗೆ ಮುಂದಾದ ಕೇಂದ್ರ

ನನ್ನ ಶಾಸಕಾಂಗ ವೃತ್ತಿಯು ಮಹಾರಾಷ್ಟ್ರದಲ್ಲಿ ಪ್ರಾರಂಭವಾಯಿತು. ನಾನು ಅಲ್ಲಿಂದಲೇ ಲೋಕಸಭಾ ಸದಸ್ಯನಾಗಿದ್ದೆ. ನಾನು ಸಹ ಮೊದಲ ಬಾರಿಗೆ ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಹೋಗಿದ್ದೆ. ಭಾರತದಲ್ಲಿ ಕಾಂಗ್ರೆಸ್ ಪುನಶ್ಚೇತನಗೊಳ್ಳಲು ಒಂದೇ ಒಂದು ರಾಜ್ಯ ಅಂದರೆ ಮಹಾರಾಷ್ಟ್ರವಿದೆ. ಇನ್ನೊಂದರಲ್ಲಿ ಯುಪಿ ಮತ್ತು ಬಂಗಾಳದಂತಹ ದೊಡ್ಡ ರಾಜ್ಯಗಳು ಕೊನೆಗೊಂಡಿವೆ, ಕೆಲವೇ ಜನರ ದೌರ್ಬಲ್ಯ ಮತ್ತು ದುರಹಂಕಾರದಿಂದ ಈ ಪಕ್ಷವು ಅಂತ್ಯಗೊಳ್ಳುತ್ತಿರುವುದು ದುರದೃಷ್ಟಕರವಾಗಿದೆ ಎಂದು ಅವರು ಹೇಳಿದರು.

ಅಶೋಕ್ ಚವಾಣ್ ಮಂಗಳವಾರ ಕಾಂಗ್ರೆಸ್ ತೊರೆದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ರಾಷ್ಟ್ರದ ಮನಸ್ಥಿತಿಯನ್ನು ಗಮನಿಸಿ ಕಾಂಗ್ರೆಸ್ ತೊರೆದಿದ್ದೇನೆ ಎಂದು ಚವಾಣ್ ಹೇಳಿದ್ದರು.

ರಾಜಕೀಯದಲ್ಲಿ, ನೀವು ರಾಷ್ಟ್ರದ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು, ಜನರ ಮನಸ್ಥಿತಿಯನ್ನು ಪರಿಗಣಿಸಿ ನಾನು ಬಿಜೆಪಿಗೆ ಸೇರಲು ನಿರ್ಧರಿಸಿದ್ದೇನೆ, ನಾನು ಕಾಂಗ್ರೆಸ್ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ, ಕಾಂಗ್ರೆಸ್‍ನಲ್ಲಿ ಏನು ನಡೆದರೂ ಅದು ಅವರ ಕರ್ಮ, ನಾನು ಸೋನಿಯಾ ಗಾಂಯನ್ನು ಗೌರವಿಸುತ್ತೇನೆ. . ನಾನು ಈಗಷ್ಟೇ ಪಕ್ಷವನ್ನು ತೊರೆದಿದ್ದೇನೆ ಮತ್ತು ಆಕೆಯ ಬಗ್ಗೆ ಪ್ರತಿಕ್ರಿಯಿಸಲು ನಾನು ಅಷ್ಟು ದೊಡ್ಡವನಲ್ಲ ಎಂದು ಚವಾಣ್ ಹೇಳಿದ್ದರು.

RELATED ARTICLES

Latest News