Monday, May 6, 2024
Homeರಾಷ್ಟ್ರೀಯಖಲಿಸ್ತಾನಿ ಪರ ಘೋಷಣೆ ಬರೆದಿದ್ದ ಹರಿಯಾಣ ಯುವಕ ಬಂಧನ

ಖಲಿಸ್ತಾನಿ ಪರ ಘೋಷಣೆ ಬರೆದಿದ್ದ ಹರಿಯಾಣ ಯುವಕ ಬಂಧನ

ನವದೆಹಲಿ,ನ.21- ಇಲ್ಲಿನ ದೆಹಲಿ ಮೇಲ್ಸೇತುವೆ ಮೇಲೆ ಖಲಿಸ್ತಾನ್ ಪರ ಗೀಚುಬರಹ ಬರೆಯುತ್ತಿದ್ದ ಹರಿಯಾಣ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಫ್ಲೈಓವರ್‍ನಲ್ಲಿ ಖಾಲಿಸ್ತಾನ ಪರ ಗೀಚುಬರಹ ಪತ್ತೆಯಾಗಿ ಸುಮಾರು ಎರಡು ತಿಂಗಳ ಬಳಿಕ ದೆಹಲಿ ಪೊಲೀಸರ ವಿಶೇಷ ದಳವು ಹರಿಯಾಣದ ಯುವಕನೊಬ್ಬನನ್ನು ವಶಕ್ಕೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ.

ಸುರಂಗದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರ ಪತ್ತೆ

ಬಂಧಿತ ಯುವಕ, ನಿಷೇತ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ಮುಖ್ಯಸ್ಥ ಗುರುಪತ್‍ವಂತ್ ಸಿಂಗ್ ಪನ್ನು ಅವರ ಆದೇಶದ ಮೇರೆಗೆ ದೆಹಲಿ ಮತ್ತು ಭಾರತದ ಇತರ ಭಾಗಗಳಲ್ಲಿ ಗೀಚುಬರಹವನ್ನು ಚಿತ್ರಿಸಿರುವ ಶಂಕೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಂಧಿತನ ಹೇಳಿಕೆ ಮೇರೆಗೆ ಪಂಜಾಬ್‍ನಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾಶ್ಮೀರ್ ಗೇಟ್ ಮೇಲ್ಸೇತುವೆಯಲ್ಲಿ ಖಲಿಸ್ತಾನ್ ಪರ ಮತ್ತು ಭಾರತ ವಿರೋಧಿ ಘೋಷಣೆಗಳು ಕಂಡುಬಂದ ನಂತರ ಪೊಲೀಸರು ಸೆಪ್ಟೆಂಬರ್ 27 ರಂದು ಎಫ್‍ಐಆರ್ ದಾಖಲಿಸಿದ್ದರು.

RELATED ARTICLES

Latest News