Sunday, May 5, 2024
Homeರಾಷ್ಟ್ರೀಯಧಾರಾವಿ ಸ್ಲಂ ಅಭಿವೃದ್ಧಿ ಯೋಜನೆಗೆ ಮಹಾರಾಷ್ಟ್ರ ಸಚಿವ ಸಂಪುಟ ಒಪ್ಪಿಗೆ

ಧಾರಾವಿ ಸ್ಲಂ ಅಭಿವೃದ್ಧಿ ಯೋಜನೆಗೆ ಮಹಾರಾಷ್ಟ್ರ ಸಚಿವ ಸಂಪುಟ ಒಪ್ಪಿಗೆ

ಮುಂಬೈ, ಫೆ 5 (ಪಿಟಿಐ) ಏಷ್ಯಾ ಖಂಡದ ಅತಿ ದೊಡ್ಡ ಸ್ಲಂ ಎಂದು ಗುರುತಿಸಲಾಗಿರುವ ಮಹಾರಾಷ್ಟ್ರದ ಧಾರಾವಿ ಕೊಳೆಗೇರಿ ಪುನರಾಭಿವೃದ್ಧಿ ಯೋಜನೆಗೆ ಮಹಾರಾಷ್ಟ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಯೋಜನೆ ಅಡಿಯಲ್ಲಿ ಮುಂಬೈನಲ್ಲಿರುವ 283.40 ಎಕರೆ ಉಪ್ಪಿನಂಗಡಿ ಭೂಮಿಯನ್ನು ಪುನರ್ವಸತಿ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರದಿಂದ 99 ವರ್ಷಗಳ ಗುತ್ತಿಗೆಗೆ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ.

ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ವಸತಿ ಇಲಾಖೆ ಮಂಡಿಸಿದ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಉಪ್ಪಿನಂಗಡಿ ಜಮೀನು ಹಸ್ತಾಂತರಕ್ಕೆ ಪ್ರತ್ಯೇಕ ಪ್ರಸ್ತಾವನೆ, ಕೆಲವರ ಪುನರ್ವಸತಿಗೆ ಬಳಸಿಕೊಳ್ಳಬೇಕು ಧಾರಾವಿ ನಿವಾಸಿಗಳಿಗೆ ಸ್ಲಂ ಪುನರಾಭಿವೃದ್ಧಿ ಯೋಜನೆಯಡಿ ಶೀಘ್ರದಲ್ಲಿಯೇ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತಿದೆ.

ರಸ್ತೆ ಹಂಪ್ ಬಳಿ ಉರುಳಿದ ಸ್ಕೂಟರ್ : ಸವಾರ ದುರ್ಮರಣ

ಧಾರಾವಿ ಸ್ಲಂ ಕಾಲೋನಿಯ ಪುನರಾಭಿವೃದ್ಧಿಗಾಗಿ ರಚಿಸಲಾದ ವಿಶೇಷ ಉದ್ದೇಶದಡಿ ಒಟ್ಟು 283.40 ಎಕರೆ ಜಮೀನುಗಳ ಮಾರುಕಟ್ಟೆ ಮೌಲ್ಯವನ್ನು ವಸೂಲಿ ಮಾಡಿ ನಂತರ ಕೇಂದ್ರಕ್ಕೆ ಹಸ್ತಾಂತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಕಳೆದ ವರ್ಷ ಜುಲೈನಲ್ಲಿ ಮಹಾರಾಷ್ಟ್ರ ಸರ್ಕಾರವು 259 ಹೆಕ್ಟೇರ್ ಧಾರಾವಿ ಪುನರಾಭಿವೃದ್ಧಿ ಯೋಜನೆಯನ್ನು ಅದಾನಿ ಸಮೂಹ ಸಂಸ್ಥೆಗೆ ಔಪಚಾರಿಕವಾಗಿ ನೀಡಿತು.

ಎಸ್‍ಪಿವಿ ಮೂಲಕ ಕಾರ್ಯಗತಗೊಳ್ಳಲಿರುವ ಬಹುಕೋಟಿ ಯೋಜನೆ ಇದಾಗಿದೆ. ಮಧ್ಯ ಮುಂಬೈನಲ್ಲಿ ಏಷ್ಯಾದ ಅತಿ ದೊಡ್ಡದಾದ ಧಾರಾವಿ ಕೊಳೆಗೇರಿಯನ್ನು ಮರುನಿರ್ಮಾಣ ಮಾಡುವುದನ್ನು ಒಳಗೊಂಡಿರುತ್ತದೆ.

RELATED ARTICLES

Latest News