Saturday, May 4, 2024
Homeಬೆಂಗಳೂರುಈ ಬಾರಿ ಪರಿಸರ ಸ್ನೇಹಿ ಕಡಲೆಕಾಯಿ ಪರಿಷೆ

ಈ ಬಾರಿ ಪರಿಸರ ಸ್ನೇಹಿ ಕಡಲೆಕಾಯಿ ಪರಿಷೆ

ಬೆಂಗಳೂರು, ಡಿ.11- ಕಡೆ ಕಾರ್ತಿಕ ಸೋಮವಾರ ನಡೆಯಲಿರುವ ರಾಜ್ಯದ ಐತಿಹಾಸಿಕ ಬಸವಗುಡಿ ಕಡಲೆಕಾಯಿ ಪರಿಷೆಗೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಐತಿಹಾಸಿಕ ಪರಿಷೆಗೆ ಇಂದು ಚಾಲನೆ ನೀಡಿದರು.

ಪರಿಷೆ ಇಂದಿನಿಂದ ಅಕೃತವಾಗಿ ಚಾಲನೆಗೊಂಡಿದ್ದರೂ ಕಳೆದ ಮೂರು ದಿನಗಳಿಂದ ಬಸವನಗುಡಿಯಲ್ಲಿ ಅದ್ದೂರಿ ಕಡಲೆಕಾಯಿ ವ್ಯಾಪಾರ ನಡೆಯುತ್ತಿರುವುದು ಕಂಡು ಬಂತು.ರಾಮಕೃಷ್ಣಮಠದಿಂದ ಹಿಡಿದು ಎನ್ಆರ್ ಕಾಲೋನಿ, ಬುಲ್ ಟೆಂಪಲ್ ರಸ್ತೆಯ ತುಂಬೆಲ್ಲಾ ಕಡಲೆಕಾಯಿ ಮಾರಾಟ ಮಾಡುತ್ತಿರುವುದು ಕಂಡುಬಂತು. 200ಕ್ಕೂ ಹೆಚ್ಚು ಕಡಲೆಕಾಯಿ ವ್ಯಾಪಾರಿಗಳು ಈ ಒಂದು ರಸ್ತೆಯಲ್ಲಿಯೇ ಮಾರಾಟ ಮಾಡುತ್ತಿರುವುದು ವಿಶೇಷವಾಗಿದೆ.

ಈ ಬಾರಿ ಪರಿಷೆಗೆ ಲಕ್ಷಗಟ್ಟಲೆ ಜನ ಸೇರಿರುವುದರಿಂದ ಹಾಗೂ ಸೇರುತ್ತಿರುವುದರಿಂದ ಮುಂಜಾಗೃತಾ ಕ್ರಮವಾಗಿ ಸುಮಾರು 200 ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.ಪರಿಷೆಗೆ ಬನ್ನಿ-ಕೈಚೀಲ ತನ್ನಿ ಎಂಬ ಆಹ್ವಾನದೊಂದಿಗೆ ಈ ಬಾರಿ ಪರಿಸರ ಸ್ನೇಹಿ ಪರಿಷೆ ಆಚರಿಸಲಾಗುತ್ತಿದೆ. ಪ್ಲಾಸ್ಟಿಕ್ಮುಕ್ತ ಪರಿಷೆ ಮಾಡುವ ಉದ್ದೈಶದಿಂದ ಹಸಿರು ದಳ, ಅದಮ್ಯ ಚೇತನ ಸೇರಿದಂತೆ 10 ಎನ್ಜಿಒಗಳು ಸಹಯೋಗ ಪಡೆದುಕೊಳ್ಳಲಾಗಿದೆ.

BIG NEWS : 370ನೇ ವಿಧಿ ರದ್ದುಗೊಳಿಸಿದ ಆದೇಶ ಎತ್ತಿ ಹಿಡಿದ ಸುಪ್ರೀಂ

ಇಂದು ಸಂಜೆ 6ಕ್ಕೆ ಕೆಂಪಾಬು ಕೆರೆಯಲ್ಲಿ ತೆಪೊ್ರೀತ್ಸವ ಕಾರ್ಯಕ್ರಮ ಹಾಗೂ ಸಾಟಸ್ಕøತಿಕ ಕಾರ್ಯಕ್ರಮ ಇರಲಿದೆ.ಈಗಾಗಲೇ ಕನಕಪುರ, ದೊಡ್ಡಬಳ್ಳಾಪುರ, ರಾಮನಗರ, ಮಾಗಡಿ. ಚಿಕ್ಕಬಳ್ಳಾಪುರ, ಕೋಲಾರ ಮೈಸೂರು ಸೇರಿದಂತೆ ತಮಿಳುನಾಡಿನಿಂದ ವ್ಯಾಪಾರಸ್ಥರು ಬಂದಿದ್ದಾರೆ.

ಪರಿಷೆ ಹಿನ್ನೆಲೆ ಡಿಸೆಂಬರ್ 13ರವರೆಗೂ ಸಂಚಾರ ಬದಲಾವಣೆ..
ಲಾಲ್ಭಾಗ್ ಪೂರ್ವ ದ್ವಾರದ ಕಡೆಯಿಂದ ವಾಣಿವಿಲಾಸ್ ರಸ್ತೆಯ ಮುಖಾಂತರ ಮತ್ತು 5ನೇ ಮುಖ್ಯರಸ್ತೆ ಚಾಮರಾಜ ಪೇಟೆ ಹಾಗೂ ಗಾಂಬಜಾರ್ ಮುಖ್ಯರಸ್ತೆ ಕಡೆಯಿಂದ ಬುಲ್ ಟೆಂಪಲ್ ಮುಖಾಂತರ ಹನುಮಂತ ನಗರದ ಕಡೆಗೆ ವಾಹನಗಳು ಸಂಚರಿಸಬೇಕಾಗಿದೆ.ಬುಲ್ ಟೆಂಪಲ್ ರಸ್ತೆಯ ರಾಮಕೃಷ್ಣ ಆಶ್ರಮ ವೃತ್ತದಲ್ಲಿ ಬಲತಿರುವು ಪಡೆದು ಹಯವಧನರಾವ್ ರಸ್ತೆಯಲ್ಲಿ ಸಾಗಿ ಗವಿಪುರಂ 3ನೇ ಅಡ್ಡರಸ್ತೆಯ ಮೂಲಕ ಮುಂದೆ ಸಾಗಿ ಮೌಂಟ್ ಜಾಯ್ ರಸ್ತೆಯ ಮೂಲಕ ಹನುಮಂತನಗರಕ್ಕೆ ಹೋಗಬೇಕು..

ಪಾರ್ಕಿಂಗ್ ವ್ಯವಸ್ಥೆ: ಎಪಿಎಸ್ ಕಾಲೇಜು ಆಟದ ಮೈದಾನ, ಎನ್ಆರ್ ಕಾಲೋನಿ, ಹಯವಧನರಾವ್ ರಸ್ತೆಯಲ್ಲಿರುವ ಕೊಹಿನೂರು ಆಟದ ಮೈದಾನ.. ರಾಮಕೃಷ್ಣ ಆಶ್ರಮ ಜಂಕ್ಷನ್, ಉದಯಭಾನು ಆಟದ ಮೈದಾನದಲ್ಲಿ ಪಾರ್ಕಿಂಗ್ಗೆ ಅವಕಾಶ ನೀಡಲಾಗಿದೆ..

RELATED ARTICLES

Latest News