Homeರಾಜ್ಯಸಿಇಟಿ ಫಲಿತಾಂಶ ಪ್ರಕಟ : ಅರ್ಹತೆ ಪಡೆದ 2,92,782 ವಿದ್ಯಾರ್ಥಿಗಳು, ತನಿಷಾ ಕಾರ್ತಿಕ್‌ ಫಸ್ಟ್ ರ‍್ಯಾಂಕ್

ಸಿಇಟಿ ಫಲಿತಾಂಶ ಪ್ರಕಟ : ಅರ್ಹತೆ ಪಡೆದ 2,92,782 ವಿದ್ಯಾರ್ಥಿಗಳು, ತನಿಷಾ ಕಾರ್ತಿಕ್‌ ಫಸ್ಟ್ ರ‍್ಯಾಂಕ್

CET results declared: 2,92,782 students qualified, Tanisha Karthik ranks first

ಬೆಂಗಳೂರು, ಜೂ.6- ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶಾತಿ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ-2026)ರ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಅವರು ಸುದ್ದಿಗೋಷ್ಠಿಯಲ್ಲಿ ಸಿಇಟಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಟಿಸಿದರು. ಒಟ್ಟು 2,92,782 ವಿದ್ಯಾರ್ಥಿಗಳು ಸಿಇಟಿ ಅರ್ಹತೆ ಪಡೆದಿದ್ದಾರೆ.

ಎಂಜಿನಿಯರಿಂಗ್‌ ವಿಭಾಗದಲ್ಲಿ ಜಯನಗರ ಆರ್‌.ವಿ.ಪದವಿ ಪೂರ್ವ ಕಾಲೇಜಿನ ತನಿಷಾ ಕಾರ್ತಿಕ್‌ ಮೊದಲ ರ್ಯಾಂಕ್‌ ಗಳಿಸಿದರೆ, ಮಹಾಲಕ್ಷ್ಮಿಪುರದ ಕೆ.ಎಂ,ಡಬ್ಲ್ಯು.ಎ. ಪದವಿಪೂರ್ವ ಕಾಲೇಜಿನ ಸ್ರಜನ್‌ ಎರಡನೇ ರ್ಯಾಂಕ್‌ ಹಾಗೂ ಜಯನಗರದ ಆರ್‌.ವಿ.ಪಿಯು ಕಾಲೇಜಿನ ನೀನಾದ್‌ ವಶಿಷ್‌್ಠ ಮೂರನೇ ಸ್ಥಾನ ಗಳಿಸಿದ್ದಾರೆ.

ಮಧ್ಯಾಹ್ನ 2 ಗಂಟೆಯ ನಂತರ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಫಲಿತಾಂಶ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.ಈ ಬಾರಿ ರಾಜ್ಯಾದ್ಯಂತ ಏಪ್ರಿಲ್‌ 22ರಿಂದ ಮೂರು ದಿನಗಳ ಕಾಲ ನಡೆದ ಸಿಇಟಿ ಪರೀಕ್ಷೆಯಲ್ಲಿ ಒಟ್ಟು 3,09,014 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರೀಕ್ಷೆಯನ್ನು ರಾಜ್ಯದ 745 ಕೇಂದ್ರಗಳಲ್ಲಿ ನಡೆಸಲಾಗಿದ್ದು, ಪಾರದರ್ಶಕತೆಗಾಗಿ 15,265 ಸಿಸಿಟಿವಿ ಕ್ಯಾಮೆರಾಗಳು, ವೆಬ್‌ಕಾಸ್ಟಿಂಗ್‌ ಹಾಗೂ ಮುಖಚಹರೆ ಪತ್ತೆ ಹಚ್ಚುವ ವ್ಯವಸ್ಥೆ ಅಳವಡಿಸಲಾಗಿತ್ತು ಎಂದು ಅವರು ತಿಳಿಸಿದರು.

ಪಶುಸಂಗೋಪನೆ, ನರ್ಸಿಂಗ್‌, ಬಿ.ಫಾರ್ಮದಲ್ಲಿ ಶಿವನಗರದ ಬೇಸ್‌‍ ಪಿಯು ಕಾಲೇಜಿನ ನಯನ ಗೋಪಿ ಪ್ರಥಮ ಸ್ಥಾನ ಪಡೆದಿದ್ದಾರೆ. ದಾವಣಗೆರೆಯ ಸರ್‌ ಎಂ ವಿ ಪಿಯು ಕಾಲೇಜಿನ ಅಮೂಲ್ಯ ಎಸ್‌‍. ದ್ವಿತೀಯ ಸ್ಥಾನ ಪಡೆದರೆ, ಜಯನಗರದ ಆರ್‌.ವಿ.ಪಿಯು ಕಾಲೇಜಿನ ಋತ್ವಿಕ್‌ ಕುಮಾರ್‌(ನರ್ಸಿಂಗ್‌, ಪಶುಸಂಗೋಪನೆ) ಮೂರನೇ ಸ್ಥಾನ ಗಳಿಸಿದ್ದಾರೆ.ಬಿ ಫಾರ್ಮಾ ಹಾಗೂ ಡಿ ಫಾರ್ಮಾ, ಯೋಗ ಮತ್ತು ನ್ಯಾಚರೋಪತಿಯಲ್ಲಿ ದಾವಣಗೆರೆಯ ಚೈತನ್ಯ ಪಿಯು ಕಾಲೇಜಿನ ಸುಚಿತ ಎಂ. ತೃತೀಯ ಸ್ಥಾನ ಗಳಿಸಿದ್ದಾರೆ.

ಬಿಎಸ್ಸಿಅಗ್ರಿಕಲ್ಚರ್‌ (ಫಾರ್ಮಾ) ವಿಭಾಗದಲ್ಲಿ ಆರ್‌.ವಿ.ಪಿಯು ಕಾಲೇಜಿನ ನಿನಾದ್‌ ವಸಿಷ್‌್ಟ ಮೊದಲ ರ್ಯಾಂಕ್‌, ಧಾರವಾಡದ ಅರ್ಜುನ ವಿಜ್ಞಾನ ಪಿಯು ಕಾಲೇಜಿನ ಅನೋಲ್‌ ಪ್ರಭು ದ್ವಿತೀಯ, ಹಾಗೂ ಮಂಗಳೂರಿನ ಎಕ್ಸ್ ಪರ್ಟ್‌ ಪಿಯು ಕಾಲೇಜಿನ ಸಮಯ್‌ ಎ.ಎಸ್‌‍. ಅವರು ತೃತೀಯ ಸ್ಥಾನ ಪಡೆದಿದ್ದಾರೆ.

ವಿವಾದಗಳ ನಡುವೆಯೂ ಫಲಿತಾಂಶ :
ಈ ಬಾರಿಯ ಸಿಇಟಿ ಪರೀಕ್ಷೆ ವೇಳೆ ಕೆಲವು ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿದ್ದು, ನಿರ್ದೇಶನದ ಮೇರೆಗೆ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಕೆಲ ವಿದ್ಯಾರ್ಥಿಗಳಿಗೆ ಮರುಪರೀಕ್ಷೆಯನ್ನೂ ನಡೆಸಲಾಗಿತ್ತು.

ಮೇ ತಿಂಗಳ ಕೊನೆಯ ವಾರದಲ್ಲೇ ಫಲಿತಾಂಶ ಪ್ರಕಟವಾಗಬೇಕಿದ್ದರೂ, ಆಡಳಿತಾತಕ ಬೆಳವಣಿಗೆಗಳು ಹಾಗೂ ಸರ್ಕಾರದ ಮಟ್ಟದ ಬದಲಾವಣೆಗಳ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಣೆ ವಿಳಂಬವಾಗಿತ್ತು. ಪಾರದರ್ಶಕ ಪರೀಕ್ಷಾ ವ್ಯವಸ್ಥೆ, ತಂತ್ರಜ್ಞಾನ ಬಳಕೆ ಹಾಗೂ ವಿವಾದಗಳ ನಡುವೆಯೂ ಸಿಇಟಿ-2026 ಫಲಿತಾಂಶ ಪ್ರಕಟವಾಗಿದ್ದು, ಈಗ ವಿದ್ಯಾರ್ಥಿಗಳ ಗಮನ ಕೌನ್ಸೆಲಿಂಗ್‌ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆಯತ್ತ ನೆಟ್ಟಿದೆ.

RELATED ARTICLES

Latest News