Sunday, April 28, 2024
Homeರಾಜ್ಯಅಸ್ತಿಪಂಜರ ಪತ್ತೆ ಪ್ರಕರಣ ದಿನಕ್ಕೊಂದು ತಿರುವು: ಗೋಡೆಯ ಮೇಲೆ ಹಸ್ತ ಗುರುತು

ಅಸ್ತಿಪಂಜರ ಪತ್ತೆ ಪ್ರಕರಣ ದಿನಕ್ಕೊಂದು ತಿರುವು: ಗೋಡೆಯ ಮೇಲೆ ಹಸ್ತ ಗುರುತು

ಚಿತ್ರದುರ್ಗ,ಜ.3- ನಿವೃತ್ತ ಎಂಜಿನಿಯರ್ ಜಗನ್ನಾಥ್ ರೆಡ್ಡಿ ಅವರ ಮನೆಯಲ್ಲಿ ಪತ್ತೆಯಾದ ಐದು ಅಸ್ತಿಪಂಜರಗಳ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಮನೆಯ ಗೋಡೆಯ ಮೇಲೆ ರಕ್ತದ ಕಲೆ ಮಾದರಿಯ ಐದು ಹಸ್ತದ ಗುರುತುಗಳು ಕುತೂಹಲ ಕೆರಳಿಸಿವೆ.

ಚಿತ್ರದುರ್ಗದ ಕಾರಾಗೃಹ ರಸ್ತೆಯ ಜಗನ್ನಾಥ್ ರೆಡ್ಡಿ ಅವರ ಮನೆಯಲ್ಲಿ 5 ಅಸ್ತಿಪಂಜರಗಳು ಡಿ.29ರಂದು ಪತ್ತೆಯಾಗಿದ್ದವು. ಅವುಗಳನ್ನು ಜಗನ್ನಾಥ್ ರೆಡ್ಡಿ ಮತ್ತು ಅವರ ಕುಟುಂಬದ ಐದು ಸದಸ್ಯರಿಗೆ ಸೇರಿದವು ಎಂದು ಹೇಳಲಾಗಿದೆ.

ಮನೆಯಲ್ಲಿ 2019ರ ಜುಲೈನಲ್ಲಿ ಕ್ಯಾಲೆಂಡರ್ ಬದಲಾವಣೆ ಯಾಗಿರುವುದು ಕಂಡುಬಂದಿತ್ತು. ಆ ವೇಳೆಯಲ್ಲೇ ಸಾವುಗಳು ಆಗಿರಬಹುದೆಂದು ಶಂಕಿಸಲಾಗಿದೆ. ಆರಂಭದಲ್ಲಿ ಇದನ್ನು ಆತ್ಮಹತ್ಯೆ ಎಂದು ಹೇಳಲಾಗಿತ್ತು. ಆದರೆ 5 ಅಸ್ತಿಪಂಜರಗಳ ಪೈಕಿ ಎರಡಕ್ಕೆ ಕೈಕಾಲು ಕಟ್ಟಿ ಹಾಕಿರುವ ಕುರುಹುಗಳು ಮತ್ತು ಹಗ್ಗ ಕಂಡುಬಂದಿದೆ.

ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಬಿಜೆಪಿ ಪ್ರತಿಭಟನೆ: ಡಿಕೆಶಿ

ಹೀಗಾಗಿ ಆತ್ಮಹತ್ಯೆಯೋ, ಕೊಲೆಯೋ ಎಂಬ ಶಂಕೆಗಳು ಹರಿದಾಡುತ್ತಿವೆ. ಸೂಕ್ಷ್ಮವಾಗಿ ತನಿಖೆ ಮುಂದುವರೆಸಿರುವ ಪೆÇಲೀಸರಿಗೆ ಮನೆಯ ಗೋಡೆಯ ಮೇಲೆ ಐದು ಹಸ್ತದ ಗುರುತುಗಳು ಪತ್ತೆಯಾಗಿವೆ. ಅವನ್ನು ರಕ್ತಸಿಕ್ತ ಹಸ್ತದ ಗುರುತುಗಳೆಂದು ಪರಿಭಾವಿಸ ಲಾಗಿದೆ. ತನಿಖಾಕಾರಿಗಳು ಪ್ರತಿಯೊಂದು ವಿಚಾರವನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತಿದ್ದಾರೆ. ಹಸ್ತದ ಗುರುತುಗಳು ಪತ್ತೆಯಾದ ಬಳಿಕ ಪ್ರಕರಣಕ್ಕೆ ಮತ್ತೊಂದು ರೀತಿಯ ತಿರುವು ಸಿಕ್ಕಂತಾಗಿದೆ.

RELATED ARTICLES

Latest News