ಬಾಗ್ಪತ್, ಫೆ.21- ದೆಹಲಿ ಪೊಲೀಸ್ ಪಡೆಯ ಕಾನ್ಸ್ಟೆಬಲ್ಉತ್ತರ ಪ್ರದೇಶದ ದೋಘಾಟ್ ಪ್ರದೇಶದಲ್ಲಿನ ತಮ ಊರಿನಲ್ಲಿ ತಮ ಸೇವಾ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ.
ಅಜಂಪುರ್ ಮುಲ್ಸಾಮ್ ನಿವಾಸಿ ಪಿಯೂಷ್(30)ಮೃತ ಪೊಲೀಸ್ಕಾನ್ಸ್ಟೆಬಲ್. ತಮತಂದೆಯ ಮರಣದ ನಂತರ 2018-19ರಲ್ಲಿ ಅನುಕಂಪದ ಆಧಾರದ ನೇಮಕಾತಿ
ಕೋಟಾದಡಿಯಲ್ಲಿ ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದರು. ಅವರ ಹಿರಿಯ ಹಿರಿಯ ಸಹೋದರ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು,ಇವರು ಅವಿವಾಹಿತರಾಗಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಿಯೂಷ್ ನಿನ್ನೆಯಷ್ಠೆ ತಮ ಗ್ರಾಮಕ್ಕೆ ಬಂದಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಅವರು ತಮ ಸೇವಾ ಪಿಸ್ತೂಲ್ನಿಂದ ಮನೆಗೆ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಗಂಭೀರ ಸ್ಥಿತಿಯಲ್ಲಿದ್ದ ಪಿಯೂಷ್ ಅವರನ್ನು ಅವರ ಕುಟುಂಬವು ಬರೌತ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು ರಾತ್ರಿಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ದೋಘಾಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಸ್ಎಚ್ಒ ಸೂರ್ಯದೀಪ್ ಸಿಂಗ್ ಅವರು ಸ್ಥಳಕ್ಕೆ ಭೇಟಿ ನೀಡಿ ಪಿಸ್ತೂಲ್ಅನ್ನು ವಶಪಡಿಸಿಕೊಂಡಿದ್ದಾರೆ.
