Wednesday, May 8, 2024
Homeರಾಜ್ಯಪ್ರಧಾನಿ ಮೋದಿಗೆ ಪತ್ರ ಬರೆದ ದೇವೇಗೌಡರು, ವಿಷಯ ಏನು ಗೊತ್ತೇ..?

ಪ್ರಧಾನಿ ಮೋದಿಗೆ ಪತ್ರ ಬರೆದ ದೇವೇಗೌಡರು, ವಿಷಯ ಏನು ಗೊತ್ತೇ..?

ಬೆಂಗಳೂರು, ಅ.27- ಪಿಎಚ್‍ಡಿ ಪದವಿ ಪಡೆಯದ ಎಲ್ಲಾ ಅರ್ಹ ಸಹಾಯಕ ಪ್ರಾಧ್ಯಾಪಕರು ಅಸೋಸಿಯೇಟ್ ಪ್ರಾಧ್ಯಾಪಕರ ಹುದ್ದೆಗೆ ಪದೋನ್ನತಿ ಪಡೆಯಲು ಅನುಕೂಲವಾಗುವಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನಿಯಮಗಳಿಗೆ ಅಗತ್ಯ ತಿದ್ದುಪಡಿ ತರುವಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದೆರೆ.

ಈ ಸಂಬಂಧ ಪ್ರಧಾನಿ ಅವರಿಗೆ ಪತ್ರ ಬರೆದಿರುವ ಗೌಡರು, ಡಿಸೆಂಬರ್ 31ರ ವರೆಗೆ ಪಿಎಚ್‍ಡಿ ಪದವಿ ಪಡೆಯದ ಅರ್ಹರಾಗಿರುವ ಎಲ್ಲಾ ಸಹಾಯಕ ಪ್ರಾಧ್ಯಾಪಕರಿಗೂ ಅಸೋಸಿಯೇಟ್ ಪ್ರಾಧ್ಯಾಪಕರ ಹುದ್ದೆಗೆ ಪದೋನ್ನತಿ ಪಡೆಯಲು ಪರಿಗಣಿಸಬೇಕು ಎಂದು ಕೋರಿದ್ದಾರೆ.

ಇದಕ್ಕಾಗಿ ಭಾರತ ಸರ್ಕಾರ ಜುಲೈ 31ರಂದು ಹೊರಡಿಸಿರುವ ಗೆಜೆಟ್‍ನಲ್ಲಿನ ಪಾಯಿಂಟ್ ಸಂಖ್ಯೆ 6.3ರಲ್ಲಿ ಮುಂಬಡ್ತಿ ಪಡೆಯಲು ವಿನಾಯಿತಿ ನೀಡಲಾಗಿದೆ. ಆದರೆ, 2019ರ ಜುಲೈ 17ರಂದು ಹೊರಡಿಸಿರುವ ಷರತ್ತುಗಳು ಅನ್ವಯಿಸಿರುವುದು ಪದೋನ್ನತಿ ಪಡೆಯಲು ಅಡ್ಡಿಯಾಗುತ್ತಿದೆ. ಅಲ್ಲದೆ, ಅಸ್ಪಷ್ಟತೆಯಿಂದ ಕೂಡಿದೆ. ಆರು ತಿಂಗಳ ಅವಗೆ ಮಾತ್ರ ಎಂಬ ಷರತ್ತು ಅನ್ವಯವಾಗುವುದರಿಂದ ಬಹಳಷ್ಟು ಅರ್ಹ ಬೋಧಕ ವರ್ಗಕ್ಕೆ ಪದೋನ್ನತಿ ಪಡೆಯುವ ಅವಕಾಶ ತಪ್ಪುತ್ತದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿಲ್ಲಾರೆ.

ಚೀನಾ 2ನೇ ಮಹಾನಾಯಕನ ಸಾವಿಗೆ ದಿಗ್ಬ್ರಮೆ

ಪದೋನ್ನತಿ ಪಡೆಯುವ ಅವಯನ್ನು ಡಿ.31ರವರೆಗೆ ಈಗಾಗಲೇ ವಿಸ್ತರಿಸಿರುವುದರಿಂದ ಅಧಿಸೂಚನೆಯಲ್ಲಿ ವಿಧಿಸಿರುವ ಷರತ್ತುಗಳನ್ನು ಸಡಿಲಿಕೆ ಮಾಡಿ ಯುಜಿಸಿ ನಿಯಮಗಳಿಗೆ ಸೂಕ್ತ ಮಾರ್ಪಾಡು ಮಾಡಬೇಕು. ಈ ರೀತಿ ಮಾಡುವುದರಿಂದ ಶೈಕ್ಷಣಿಕವಾಗಿ ಎಲ್ಲಾ ಅರ್ಹ ಬೋಧಕವರ್ಗದವರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News