Sunday, May 5, 2024
Homeರಾಷ್ಟ್ರೀಯರಷ್ಯಾ-ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ಯುವಕನ ಮೃತದೇಹ ಹೈದರಾಬಾದ್‍ ಆಗಮನ

ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ಯುವಕನ ಮೃತದೇಹ ಹೈದರಾಬಾದ್‍ ಆಗಮನ

ಹೈದರಾಬಾದ್, ಮಾ 16 – ರಷ್ಯಾ ಸೇನೆಗೆ ಸಹಾಯಕ ಎಂದು ಅಲ್ಲಿಗೆ ತೆರಳಿ ಸಂಘರ್ಷದಲ್ಲಿ ಮೃತಪಟ್ಟ ಹೈದರಾಬಾದ್ ನಿವಾಸಿಯ ಮೃತದೇಹ ಕಳೆದ ರಾತ್ರಿ ಹೈದರಾಬಾದ್‍ಗೆ ಆಗಮಿಸಿದೆ.ಮೊಹಮ್ಮದ್ ಅಸಾನ್ ಅವರ ಪಾರ್ಥಿವ ಶರೀರ ಹೈದರಾಬಾದ್‍ನ ಬಜಾರ್‍ಘಾಟ್‍ನಲ್ಲಿರುವ ಅವರ ನಿವಾಸಕ್ಕೆ ಶನಿವಾರ ತಡರಾತ್ರಿ ತಲುಪಿದೆ ಎಂದು ಎಐಎಂಐಎಂ ಮೂಲಗಳು ತಿಳಿಸಿವೆ.

ಮಾರ್ಚ್ 6 ರಂದು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಸಾನ್ ಅವರ ಸಾವನ್ನು ದೃಢಪಡಿಸಿತು ಮತ್ತು ಹೈದರಾಬಾದ್‍ನಲ್ಲಿರುವ ಅವರ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದರು.

ಉದ್ಯೋಗ ನೀಡುವ ಭರವಸೆಯ ಮೇರೆಗೆ ಏಜೆಂಟರಿಂದ ವಂಚನೆಗೊಳಗಾದ ಭಾರತೀಯರಲ್ಲಿ ಅಸಾನ್ (30) ಅವರನ್ನು ರಷ್ಯಾಕ್ಕೆ ಕರೆದೊಯ್ಯಲಾಯಿತು ಮತ್ತು ರಷ್ಯಾದ ಸೈನ್ಯದ ಸಹಾಯಕ ನಾಗಿ ಕೆಲಸ ಮಾಡಲು ಒತ್ತಾಯಿಸಲಾಯಿತು ಎಂದು ಅವರ ಸಹೋದರ ಇಮ್ರಾನ್ ಈ ಹಿಂದೆ ಹೇಳಿದ್ದರು.

ಫೆಬ್ರವರಿ 21 ರಂದು, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತೆಲಂಗಾಣದ ಇಬ್ಬರು ಸೇರಿದಂತೆ ಕೆಲವು ಭಾರತೀಯ ಯುವಕರ ಕುಟುಂಬ ಸದಸ್ಯರು ತಮ್ಮ ಸಂಬಂಧಿಕರನ್ನು ಉದ್ಯೋಗ ಭರವಸೆಯ ಮೇಲೆ ಏಜೆಂಟರು ವಂಚಿಸಿ ರಷ್ಯಾಕ್ಕೆ ಕರೆದೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.

ಆದಾಗ್ಯೂ, ಅವರನ್ನು ರಷ್ಯಾ-ಉಕ್ರೇನ್ ಗಡಿಯಲ್ಲಿ ಯುದ್ಧದ ಮುಂಭಾಗಕ್ಕೆ ಕಳುಹಿಸಲಾಗಿದೆ ಎಂದು ಆರೋಪಿಸಲಾಗಿತ್ತು. ರಷ್ಯಾ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಕೇಂದ್ರ ಸರ್ಕಾರ ಸುಮಾರು 50ಕ್ಕೂ ಹೆಚ್ಚು ಯುವಕರನ್ನು ಭಾರತಕ್ಕೆ ವಾಪಸ್ ಕರೆತರಲಾಗಿತ್ತು.

RELATED ARTICLES

Latest News