Homeಅಂತಾರಾಷ್ಟ್ರೀಯನೇಪಾಳ ಪ್ರವಾಹ : 9 ದಿನದ ಬಳಿಕ ಜಲವಿದ್ಯುತ್‌ ಸುರಂಗದಿಂದ ಇಬ್ಬರು ಕಾರ್ಮಿಕರ ಜೀವಂತ ರಕ್ಷಣೆ

ನೇಪಾಳ ಪ್ರವಾಹ : 9 ದಿನದ ಬಳಿಕ ಜಲವಿದ್ಯುತ್‌ ಸುರಂಗದಿಂದ ಇಬ್ಬರು ಕಾರ್ಮಿಕರ ಜೀವಂತ ರಕ್ಷಣೆ

Nine days after devastating Nepal floods, two workers rescued alive from Trishuli-3A tunnel

ಕಠ್ಮಂಡು, ಸೆ.4- ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ಹಿಮನದಿ ಕುಸಿತದ ದುರಂತ ನಡೆದು ಒಂಬತ್ತು ದಿನಗಳ ಬಳಿಕ ತ್ರಿಶೂಲಿ ಜಲವಿದ್ಯುತ್‌ ಯೋಜನೆಯ ಸುರಂಗದ ಅವಶೇಷಗಳಡಿ ಸಿಲುಕಿದ್ದ ಇಬ್ಬರು ಕಾರ್ಮಿಕರನ್ನು ಜೀವಂತವಾಗಿ ರಕ್ಷಿಸಲಾಗಿದೆ.

ತ್ರಿಶೂಲಿ-3ಎ ಜಲವಿದ್ಯುತ್‌ ಯೋಜನೆಯ ಮೇಲ್ವಿಚಾರಕರಾಗಿರುವ 45 ವರ್ಷದ ಕಬೀರ್‌ ಮಹಾರ್ಜನ್‌ ಹಾಗೂ ನೇಪಾಳ ವಿದ್ಯುತ್‌ ಪ್ರಾಧಿಕಾರದ ಮೆಕ್ಯಾನಿಕಲ್‌ ಫೋರ್‌ಮನ್‌ 30 ವರ್ಷದ ಸಂಜಯ್‌ ಶಾ ಅವರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ.

ಆಗಸ್ಟ್‌ 26ರಂದು ಸಂಭವಿಸಿದ ಈ ಭೀಕರ ಪ್ರವಾಹದಿಂದ ನೇಪಾಳದ ಕನಿಷ್ಠ ಮೂರು ಜಿಲ್ಲೆಗಳಲ್ಲಿ ಅಪಾರ ಹಾನಿ ಸಂಭವಿಸಿದ್ದು, ದೇಶದ 12 ಜಲವಿದ್ಯುತ್‌ ಯೋಜನೆಗಳಿಂದ ಸುಮಾರು 900 ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಈ ಪೈಕಿ ಸುಮಾರು 500 ಮಂದಿ ಸುರಂಗಗಳಲ್ಲೇ ಸಿಲುಕಿಕೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಅಂದಾಜಿಸಿದ್ದಾರೆ.

ಸಂಜಯ್‌ ಶಾ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಅವರನ್ನು ಕೂಡಲೇ ರಾಜಧಾನಿ ಕಠ್ಮಂಡುವಿನ ವಾಯವ್ಯದಲ್ಲಿರುವ ಬತ್ತಾರ್‌ಗೆ ವಿಮಾನದ ಮೂಲಕ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಕಬೀರ್‌ ಮಹಾರ್ಜನ್‌ ಅವರು ಪ್ರಜ್ಞೆಯಲ್ಲಿದ್ದು, ಅವರನ್ನು ಕಠ್ಮಂಡುವಿನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನುಳಿದ ಅರ್ಧ ಡಜನ್‌ ಜಲವಿದ್ಯುತ್‌ ಸುರಂಗಗಳಲ್ಲಿ ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದ್ದು, 150ಕ್ಕೂ ಹೆಚ್ಚು ಮಂದಿ ಇನ್ನೂ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸುರಂಗಗಳೊಳಗೆ ಸಿಲುಕಿರುವವರಿಗೆ ಆಮ್ಲಜನಕ ಪೂರೈಸಲು ಎಂಜಿನಿಯರ್‌ಗಳು ಗಾಳಿಯನ್ನು ಪಂಪ್‌ ಮಾಡುತ್ತಿದ್ದಾರೆ.

ನೇಪಾಳದ ವಿಪತ್ತು ನಿರ್ವಹಣಾ ಸಂಸ್ಥೆಯ ವರದಿ ಪ್ರಕಾರ, ಭೀಕರ ಪ್ರವಾಹದಲ್ಲಿ ದೇಶಾದ್ಯಂತ ಕನಿಷ್ಠ 1,259 ಮಂದಿ ಸಾವನ್ನಪ್ಪಿದ್ದು, 5,000ಕ್ಕೂ ಹೆಚ್ಚು ಜನರು ಇನ್ನೂ ಪತ್ತೆಯಾಗಿಲ್ಲ. ಸುಮಾರು 2.56 ಬಿಲಿಯನ್‌ ಮೊತ್ತದಷ್ಟು ಆರ್ಥಿಕ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಸುರಂಗಗಳಲ್ಲಿ ಇನ್ನೂ ಜೀವಂತವಾಗಿರುವವರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಹಾಗೂ ಎಂಜಿನಿಯರ್‌ಗಳು ಹಗಲಿರುಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

RELATED ARTICLES
spot_img

Latest News