Sunday, April 28, 2024
Homeಅಂತಾರಾಷ್ಟ್ರೀಯಭಾರತದಲ್ಲಿರುವ ಇಸ್ರೇಲಿಗರು ಎಚ್ಚರಿಕೆ ವಹಿಸುವಂತೆ ಸೂಚನೆ

ಭಾರತದಲ್ಲಿರುವ ಇಸ್ರೇಲಿಗರು ಎಚ್ಚರಿಕೆ ವಹಿಸುವಂತೆ ಸೂಚನೆ

ಜೆರುಸಲೇಂ, ಡಿ 26 (ಪಿಟಿಐ)ನವದೆಹಲಿಯಲ್ಲಿರುವ ಇಸ್ರೇಲಿ ರಾಯಭಾರ ಕಚೇರಿ ಬಳಿ ಸಂಭವಿಸಿದ ಸ್ಪೋಟವು ಸಂಭವನೀಯ ಭಯೋತ್ಪಾದನಾ ದಾಳಿ ಎಂದು ಶಂಕಿಸಿರುವ ಇಸ್ರೇಲಿ ರಾಷ್ಟ್ರೀಯ ಭದ್ರತಾ ಮಂಡಳಿಯು ಭಾರತದಲ್ಲಿನ ತನ್ನ ನಾಗರಿಕರಿಗೆ ಪ್ರಯಾಣ ಸಲಹೆಯನ್ನು ನೀಡಿದೆ.

ನವದೆಹಲಿಯ ಚಾಣಕ್ಯಪುರಿ ರಾಜತಾಂತ್ರಿಕ ಎನ್‍ಕ್ಲೇವ್‍ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಬಳಿ ನಿನ್ನೆ ಸಂಜೆ ಸಂಭವಿಸಿದ ಸ್ಪೋಟದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೂ ಇಸ್ರೇಲಿ ರಾಯಭಾರ ಕಚೇರಿಯ ವಕ್ತಾರ ಗೈ ರ್ನಿ ಅವರು ಸಂಜೆ 5.48 ರ ಸುಮಾರಿಗೆ ರಾಯಭಾರ ಕಚೇರಿಯ ಸಮೀಪದಲ್ಲಿ ಸೋಟ ಸಂಭವಿಸಿದೆ ಎಂದು ನಾವು ಖಚಿತಪಡಿಸಬಹುದು. ದೆಹಲಿ ಪೊಲೀಸರು ಮತ್ತು ಭದ್ರತಾ ತಂಡವು ಇನ್ನೂ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ ಎಂದು ತಿಳಿಸಿದ್ದರು.ಹೀಗಾಗಿ ಇಸ್ರೇಲಿ ರಾಷ್ಟ್ರೀಯ ಭದ್ರತಾ ಮಂಡಳಿಯ (ಎನ್‍ಎಸ್‍ಸಿ) ಈ ಎಚ್ಚರಿಕೆ ನೀಡಿದ್ದಾರೆ.

ಜನಸಂದಣಿ ಇರುವ ಸ್ಥಳಗಳಿಗೆ (ಮಾಲ್‍ಗಳು ಮತ್ತು ಮಾರುಕಟ್ಟೆಗಳು) ಮತ್ತು ಪಾಶ್ಚಿಮಾತ್ಯರು.ಯಹೂದಿಗಳು ಮತ್ತು ಇಸ್ರೇಲಿಗಳಿಗೆ ಸೇವೆ ಸಲ್ಲಿಸುತ್ತಿರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಲು ಪ್ರಯತ್ನಿಸುವಂತೆ ಇಸ್ರೇಲಿ ಪ್ರಜೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ (ರೆಸ್ಟೋರೆಂಟ್‍ಗಳು, ಹೋಟೆಲ್‍ಗಳು, ಪಬ್‍ಗಳು, ಇತ್ಯಾದಿ ಸೇರಿದಂತೆ) ಹೆಚ್ಚಿನ ಜಾಗರೂಕರಾಗಿರಲು ಅವರನ್ನು ಒತ್ತಾಯಿಸಲಾಗಿದೆ.

ಶಿಫಾರಸುಗಳು ಇಸ್ರೇಲಿ ಚಿಹ್ನೆಗಳನ್ನು ಬಹಿರಂಗವಾಗಿ ಪ್ರದರ್ಶಿಸುವುದನ್ನು ತಪ್ಪಿಸುವುದು, ಅಸುರಕ್ಷಿತ ದೊಡ್ಡ-ಪ್ರಮಾಣದ ಈವೆಂಟ್‍ಗಳಿಗೆ ಹಾಜರಾಗುವುದನ್ನು ತಡೆಯುವುದು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಯಾಣದ ವಿವರಗಳನ್ನು ಮತ್ತು ನೈಜ ಸಮಯದಲ್ಲಿ ಭೇಟಿಗಳ ಛಾಯಾಚಿತ್ರಗಳು ಮತ್ತು ವಿವರಗಳನ್ನು ಪ್ರಚಾರ ಮಾಡುವುದನ್ನು ತಪ್ಪಿಸುವುದನ್ನು ಸೂಚಿಸುತ್ತವೆ.

ಈ ಘಟನೆಯನ್ನು ಸ್ಥಳೀಯ ಅಕಾರಿಗಳು ಇಸ್ರೇಲಿ ಭದ್ರತಾ ಪಡೆಗಳ ಸಂಪೂರ್ಣ ಸಹಕಾರದೊಂದಿಗೆ ತನಿಖೆ ನಡೆಸುತ್ತಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ರಾಯಭಾರ ಕಚೇರಿಯ ಸಮೀಪದಲ್ಲಿರುವ ಕೇಂದ್ರೀಯ ಹಿಂದಿ ತರಬೇತಿ ಸಂಸ್ಥೆಯ ಹೊರಗಿನ ಹಸಿರು ಬೆಲ್ಟ ಪ್ರದೇಶದಲ್ಲಿ ಸ್ಪೋಟ ಸಂಭವಿಸಿದ ಕೂಡಲೇ ದೆಹಲಿ ಪೊಲೀಸ್ ವಿಶೇಷ ದಳ, ಬಾಂಬ್ ನಿಷ್ಕ್ರಿಯ ದಳ ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಧಾವಿಸಿವೆ. ಈ ಪ್ರದೇಶದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಲಾಯಿತು.

ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಪೋಟದ ಶಂಕಿತರ ಮೂಲ ಪತ್ತೆ..!

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ತಂಡವೂ ಸ್ಥಳವನ್ನು ಪರಿಶೀಲಿಸಿದೆ ಎಂದು ನವದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯ ನಂತರ, ರಾಯಭಾರ ಕಚೇರಿ ಮತ್ತು ಇತರ ಇಸ್ರೇಲಿ ಸಂಸ್ಥೆಗಳ ಸುತ್ತಲೂ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಎನ್‍ಎಸ್‍ಸಿ ಇಸ್ರೇಲಿಗಳಿಗೆ ಅವರ ಎಲ್ಲಾ ವಿದೇಶ ಪ್ರವಾಸವನ್ನು ಮರುಪರಿಶೀಲಿಸುವಂತೆ ಎಚ್ಚರಿಕೆ ನೀಡಿತು ಮತ್ತು ಇಸ್ರೇಲ್ ಮತ್ತು ಹಮಾಸ್ ಉಗ್ರಗಾಮಿ ಗುಂಪಿನ ನಡುವೆ ನಡೆಯುತ್ತಿರುವ ಯುದ್ಧದ ನಡುವೆ ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಯೆಹೂದ್ಯ ವಿರೋಧಿಗಳ ಮಧ್ಯೆ ತಮ್ಮ ಯಹೂದಿ ಮತ್ತು ಇಸ್ರೇಲಿ ಗುರುತುಗಳ ಬಾಹ್ಯ ಪ್ರದರ್ಶನಗಳನ್ನು ತಪ್ಪಿಸಲು ವಿದೇಶಕ್ಕೆ ಪ್ರಯಾಣಿಸಬೇಕಾದವರಿಗೆ ಕರೆ ನೀಡಿತು.

ಸಿಎಎ ಜಾರಿಯಾಗುವುದು ಶತಸಿದ್ಧ : ಅಮಿತ್ ಶಾ

ಈ ಹಿಂದೆಯೂ ಇಸ್ರೇಲಿ ರಾಯಭಾರ ಕಚೇರಿ ಮತ್ತು ಅದರ ಸಿಬ್ಬಂದಿ ಮೇಲೆ ನವದೆಹಲಿಯಲ್ಲಿ ದಾಳಿ ನಡೆದಿತ್ತು. 2021 ರಲ್ಲಿ ಇಸ್ರೇಲಿ ರಾಯಭಾರ ಕಚೇರಿಯ ಹೊರಗೆ ಸೋಟ ಸಂಭವಿಸಿತು, ಇದರಲ್ಲಿ ಕಾರುಗಳು ಹಾನಿಗೊಳಗಾದವು, ಆದರೆ ಯಾವುದೇ ಸಾವುನೋವುಗಳು ವರದಿಯಾಗಿರಲಿಲ್ಲ.

RELATED ARTICLES

Latest News