Sunday, April 28, 2024
Homeರಾಜ್ಯ"ಕಾಂಗ್ರೆಸ್ ಬಂದಿದೆ, ಲೂಟಿ ಜೋರಾಗಿದೆ, ಹೈಕಮಾಂಡ್ ಜೇಬು ತುಂಬಿದೆ"

“ಕಾಂಗ್ರೆಸ್ ಬಂದಿದೆ, ಲೂಟಿ ಜೋರಾಗಿದೆ, ಹೈಕಮಾಂಡ್ ಜೇಬು ತುಂಬಿದೆ”

ಬೆಂಗಳೂರು,ಅ.18-ಕಾಂಗ್ರೆಸ್ ಬಂದಿದೆ ಕಲೆಕ್ಷನ್ ಮಾಡಿದೆ. ಕಾಂಗ್ರೆಸ್ ಬಂದಿದೆ ಕಮಿಷನ್ ತಿಂದಿದೆ. ಕಾಂಗ್ರೆಸ್ ಬಂದಿದೆ ಲೂಟಿ ಜೋರಾಗಿದೆ. ಕಾಂಗ್ರೆಸ್ ಬಂದಿದೆ ಹೈಕಮಾಂಡ್ ಜೇಬು ತುಂಬಿದೆ. ಕಾಂಗ್ರೆಸ್ ಬಂದಿದೆ ಕರ್ನಾಟಕ ದಿವಾಳಿ ಆಗಿದೆ ಎಂದು ಪ್ರತಿಪಕ್ಷ ಬಿಜೆಪಿ ಪೋಸ್ಟ್ ಮಾಡುವ ಮೂಲಕ ಕಾಂಗ್ರೆಸ್ ನಾಯಕರನ್ನು ಕೆಣಕಿದೆ.

ಈ ಕುರಿತು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಚುನಾವಣೆಗೂ ಮುನ್ನ ರಾಜ್ಯದ ಜನತೆಯ ಕಿವಿ ಮೇಲೆ ಕಲರ್ ಕಲರ್ ಹೂವಿಟ್ಟು, ನಂಗೂ ಫ್ರೀ, ನಿಂಗೂ ಫ್ರೀ ಎಂದು ಬೊಗಳೆ ಬಿಟ್ಟಿದ್ದ ಸಿದ್ದರಾಮಯ್ಯ ಅವರೇ ಇಲ್ಲಿ ನೋಡಿ, ನಿಮ್ಮ ಸರ್ಕಾರದ ಅಸಲಿ ತಾಕತ್ತು ಏನೆಂಬುದು ತಿಳಿಯುತ್ತದೆ.

ನೇಕಾರರ ಮಕ್ಕಳಿಗೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತ ವಿದ್ಯಾನಿಧಿ ಯೋಜನೆಯನ್ನು ವಾಪಸ್ ಪಡೆದಿದ್ದೀರಿ, ಈಗ ನೇಕಾರರಿಗೆ ಉಚಿತ ವಿದ್ಯುತ್ ಹಾಗಿರಲಿ, ಕನಿಷ್ಟ ಒಂದು ತಾಸು ವಿದ್ಯುತ್ ನೀಡಲು ನಿಮ್ಮ ಸರ್ಕಾರಕ್ಕೆ ಯೋಗ್ಯತೆಯೂ ಇಲ್ಲ, ಸಾಮಥ್ರ್ಯವೂ ಇಲ್ಲ. ಅಂತಹ ಅಸಮರ್ಥ ಸರ್ಕಾರ ನಿಮ್ಮದು ಎಂದು ಆರೋಪ ಮಾಡಿದೆ.

ಮಲಮಗನನ್ನು ಕೊಂದು ಶವವನ್ನು ತೊಟ್ಟಿಯಲ್ಲಿ ಬಚ್ಚಿಟ್ಟಿದ್ದ ಮಲತಾಯಿ

ಒಟ್ಟಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ಕಿರಿಕ್ ದೊಡ್ಡದಾಗುತ್ತಿದೆ. ಈ ನಡುವೆ ಲೋಕಸಭೆ ಚುನಾವಣೆಗೆ ಇದೇ ಅಸ್ತ್ರವನ್ನು ದೊಡ್ಡದಾಗಿ ಬಳಸಿಕೊಳ್ಳಲು ಬಿಜೆಪಿ ರಾಜ್ಯ ನಾಯಕರು ಪ್ಲ್ಯಾನ್ ಮಾಡಿದಂತೆ ತೋರುತ್ತಿದೆ. ಹೀಗೆ ಕಾಂಗ್ರೆಸ್ ಬಿಜೆಪಿ ನಡುವೆ ನಡೆಯುತ್ತಿರುವ ಐಟಿ ಜಟಾಪಟಿ ಸದ್ಯಕ್ಕೆ ಮುಗಿಯುವ ಯಾವುದೇ ಸಾಧ್ಯತೆ ಇಲ್ಲ. ಅಷ್ಟೇ ಅಲ್ಲ ಗ್ಯಾರಂಟಿ ವಾರ್ ಕೂಡ ಮುಂದುವರಿಯುವುದು ಗ್ಯಾರಂಟಿಯಾಗಿದೆ.

RELATED ARTICLES

Latest News