Friday, May 3, 2024
Homeರಾಜಕೀಯಬಿಎಸ್ವೈ ಹಾಗೂ ಪುತ್ರನನ್ನು ಚಿಂತೆಗೆ ದೂಡಿದ ಭಿನ್ನಮತ

ಬಿಎಸ್ವೈ ಹಾಗೂ ಪುತ್ರನನ್ನು ಚಿಂತೆಗೆ ದೂಡಿದ ಭಿನ್ನಮತ

ಬೆಂಗಳೂರು,ಮಾ.24- ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯ ಚುನಾವಣಾ ಕೇಂದ್ರೀಯ ಸಮಿತಿ ಇಪ್ಪತ್ತು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಅದರಲ್ಲಿ ಕೆಲವೊಂದು ಕ್ಷೇತ್ರಗಳಲ್ಲಿ ಭಿನ್ನಮತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಜೆಪಿ ನಾಯಕರ ಸಂಧಾನವೂ ಫಲಕೊಡುತ್ತಿಲ್ಲ, ಎಲ್ಲಿ ಇದು ವೋಟ್ ಬ್ಯಾಂಕಿಗೆ ಪೆಟ್ಟು ಬೀಳುತ್ತೋ ಎನ್ನುವ ಭೀತಿಯಲ್ಲಿದ್ದಾರೆ ಬಿಜೆಪಿ ವರಿಷ್ಠರು.

ಕೊಪ್ಪಳ, ಶಿವಮೊಗ್ಗ, ದಾವಣಗೆರೆ, ತುಮಕೂರು ಮುಂತಾದ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಆಂತರಿಕ ಭಿನ್ನಮತ ಹೆಚ್ಚಾಗುತ್ತಿದೆ. ಕೆಲವು ಅತೃಪ್ತ ನಾಯಕರು ಬಿಜೆಪಿಗೆ ವಿದಾಯ ಹೇಳಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಶಿವಮೊಗ್ಗದಲ್ಲಿ ಪ್ರಮುಖವಾಗಿ ಯಡಿಯೂರಪ್ಪನವರ ಪುತ್ರ ಬಿ.ವೈ.ರಾಘವೇಂದ್ರ ಇಬ್ಬರ ಭಿನ್ನಮತವನ್ನು ಹೇಗೆ ಎದುರಿಸುತ್ತಾರೆ ಎನ್ನುವುದು ಗಮನಿಸಬೇಕಾದ ವಿಚಾರವಾಗಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭೆ ಸ್ಥಾನಗಳ ಪೈಕಿ ಒಂದು ಕ್ಷೇತ್ರ ಉಡುಪಿ ಜಿಲ್ಲಾ ವ್ಯಾಪ್ತಿಗೆ ಬರುವಂತದ್ದು, ಅದು ಬೈಂದೂರು ವಿಧಾನಸಭಾ ಕ್ಷೇತ್ರ. ಅಲ್ಲಿ ಬಿಜೆಪಿಯ ಗುರುರಾಜ ಗಂಟಿಹೊಳಿ ಶಾಸಕರಾಗಿದ್ದರೂ ಕೂಡಾ ಇತ್ತೀಚಿನವರೆಗೆ ಬಿಜೆಪಿಯಲ್ಲಿದ್ದ ಸುಕುಮಾರ್ ಶೆಟ್ಟಿ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ರ್ಪಸಿ ಗೆದ್ದಿದ್ದ ಸುಕುಮಾರ್ ಶೆಟ್ಟಿಯವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಅಲ್ಲಿಂದ ಬಿಜೆಪಿ ನಾಯಕರ ವಿರುದ್ದ ಕಿಡಿಕಾರುತ್ತಿರುವ ಶೆಟ್ರು, ವಾರದ ಹಿಂದೆ ಜಯಪ್ರಕಾಶ್ ಹೆಗ್ಡೆಯವರ ಜೊತೆಗೆ ಕಾಂಗ್ರೆಸ್ ಸೇರಿದ್ದರು. ಇಲ್ಲಿ ಗಮನಿಸಬೇಕಾದ ವಿಚಾರ ಏನಂದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗೋಪಾಲ ಪೂಜಾರಿಗೆ 82,475 ಮತಗಳು ಬಂದಿದ್ದವು.

ಈಗ ಇಬ್ಬರು ಕ್ಷೇತ್ರದ ಪ್ರಭಾವಿ ನಾಯಕರು (ಸುಕುಮಾರ್‍ಶೆಟ್ಟಿ, ಗೋಪಾಲ ಪೂಜಾರಿ) ಕಾಂಗ್ರೆಸ್ ಗೆಲುವಿಗೆ ಠೊಂಕ ಕಟ್ಟಿ ನಿಂತಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೂ ಕೂಡಾ, ಕಾಂಗ್ರೆಸ್ಸಿಗೆ ಇಲ್ಲಿಂದ ಹೆಚ್ಚು ಮತ ಚಲಾವಣೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಶಾಸಕ ಗುರುರಾಜ್ ಗಂಟಿಹೊಳಿ ಮೇಲಿದೆ. ಇದಕ್ಕಿಂತಲೂ ಭಿನ್ನಮತ ಎದುರಿಸುತ್ತಿರುವ ಕ್ಷೇತ್ರವೆಂದರೆ ಶಿವಮೊಗ್ಗ ನಗರ ಮತ್ತು ಶಿವಮೊಗ್ಗ ಗ್ರಾಮೀಣ.

ಕ್ಷೇತ್ರದ ಒಟ್ಟು ಎಂಟು ವಿಧಾಣಸಭಾ ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಬಿಜೆಪಿ, ಮೂರರಲ್ಲಿ ಕಾಂಗ್ರೆಸ್ ಮತ್ತು ಒಂದರಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಆಖಾಡ ಬಹುತೇಕ ಸೆಟ್ ಆಗಿದೆ. ಈಗಿನ ನಿಲುವಿಗೆ ಈಶ್ವರಪ್ಪ ಅಂಟಿಕೊಂಡಿದ್ದೇ ಆದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಬಿಜೆಪಿಯಿಂದ ರಾಘವೇಂದ್ರ, ಕಾಂಗ್ರೆಸ್ಸಿನಿಂದ ಗೀತಾ ಶಿವರಾಜ್ ಕುಮಾರ್ ಮತ್ತು ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ಕಣದಲ್ಲಿ ಇರಲಿದ್ದಾರೆ.

ಕಳೆದ ನಾಲ್ಕು ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಯಡಿಯೂರಪ್ಪ ಕುಟುಂಬದವರದ್ದೇ ಕಾರುಬಾರು. ಒಮ್ಮೆ ಯಡಿಯೂರಪ್ಪ ಮತ್ತು ಮೂರು ಬಾರಿ ಅವರ ಪುತ್ರ ಇಲ್ಲಿಂದ ಆಯ್ಕೆಯಾಗಿದ್ದಾರೆ. ಕಳೆದ ನಾಲ್ಕೂ ಚುನಾವಣೆಯಲ್ಲಿ ಬಂಗಾರಪ್ಪನವರ ಕುಟುಂಬದವರೇ ಯಡಿಯೂರಪ್ಪನವರ ಕುಟುಂಬಕ್ಕೆ ಪ್ರತಿಸ್ರ್ಪಗಳು. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಕಾಂಗ್ರೆಸ್ ಜೊತೆ ಕೈಜೋಡಿಸಿತ್ತು, ಈ ಬಾರಿ ಬಿಜೆಪಿ ಜೊತೆ ಕೈ ಜೋಡಿಸಿದೆ.

ಕಳೆದ ಎರಡು ಚುನಾವಣೆಯಲ್ಲಿ ಬಂಗಾರಪ್ಪನವರ ಕುಟುಂಬ ತಮ್ಮ ವೋಟ್ ಪ್ರಮಾಣವನ್ನು ಹೆಚ್ಚಿಸಿಕೊಂಡಿದೆ. ಇಲ್ಲಿ, ಮೋದಿ ಮತ್ತು ಯಡಿಯೂರಪ್ಪನವರ ವರ್ಚಸ್ಸು ಕೆಲಸ ಮಾಡಿರುವುದಕ್ಕೆ ಕಳೆದ ಎರಡು ಚುನಾವಣೆಗಳು ಸಾಕ್ಷಿ. ಆದರೆ, ಎರಡೂ ಚುನಾವಣೆಯಲ್ಲಿ ಬಿಜೆಪಿಗೆ ಆಂತರಿಕ ಭಿನ್ನಮತ ಇರಲಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. ಹಾಗಾಗಿ, ಈಶ್ವರಪ್ಪನವರ ಮನವೊಲಿಸುವ ಕೆಲಸವನ್ನು ಬಿಜೆಪಿ ವರಿಷ್ಠರು ಮಾಡಿದರೆ, ಯಡಿಯೂರಪ್ಪನವರೂ ಸೇಫ್, ಬಿಜೆಪಿಯೂ ಸೇಫ್..

RELATED ARTICLES

Latest News