Sunday, May 19, 2024
Homeರಾಷ್ಟ್ರೀಯರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಕರ್ನಾಟಕದ ವೀಣಾವಾದನ

ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಕರ್ನಾಟಕದ ವೀಣಾವಾದನ

ಅಯೋಧ್ಯೆ, ಜ. 16 (ಪಿಟಿಐ) ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನೆ ಸಮಾರಂಭವನ್ನು ಆಚರಿಸಲು ಉತ್ತರ ಪ್ರದೇಶದ ಪಖಾವಾಜ್‍ನಿಂದ ತಮಿಳುನಾಡಿನ ಮೃದಂಗ ಹಾಗೂ ಕರ್ನಾಟಕದ ವೀಣೆ ಸೇರಿಂತೆ ದೇಶಾದ್ಯಂತ ಇರುವ ವಿವಿಧ ಶಾಸ್ತ್ರೀಯ ವಾದ್ಯಗಳನ್ನು ನುಡಿಸಲಾಗುವುದು ಎಂದು ದೇವಾಲಯದ ಟ್ರಸ್ಟ್ ತಿಳಿಸಿದೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾತನಾಡಿ, ಜನವರಿ 22 ರಂದು ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಸಂಗೀತ ನೀಡಲು ಭಾರತದ ವಿವಿಧ ಭಾಗಗಳಿಂದ ಸಂಗೀತಗಾರರನ್ನು ಆಯ್ಕೆ ಮಾಡಲಾಗಿದೆ. ಅಪೂರ್ಣ ದೇವಸ್ಥಾನದಲ್ಲಿ ನಡೆಯುತ್ತಿರುವ ಸಮಾರಂಭದ ಕುರಿತು ಹಲವರು ಎತ್ತಿರುವ ಪ್ರಶ್ನೆಗಳಿಗೆ ರೈ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ, ಯಾವುದೇ ಟೀಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.

ದೇವಾಲಯದಲ್ಲಿ ಪ್ರಾಣ ಪ್ರತಿಷ್ಠಾ ಮಧ್ಯಾಹ್ನ 12:20 ಕ್ಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ದೇವಾಲಯದ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಲಿದೆ ಎಂದು ರೈ ಹೇಳಿದರು.ಸುಮಾರು 8,000 ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಆಯ್ಕೆಯಾದ ಸಂಗೀತಗಾರರು ತಮ್ಮ ಪ್ರದೇಶಗಳಿಂದ ಭಾರತೀಯ ಸಂಪ್ರದಾಯದ ವಿವಿಧ ರೀತಿಯ ವಾದ್ಯ ಯಂತ್ರ (ಸಂಗೀತ ವಾದ್ಯಗಳು) ನುಡಿಸುತ್ತಾರೆ ಎಂದು ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಬಾನ್ಸುರಿ ಮತ್ತು ಢೋಲಕ್ ಕಲಾವಿದರು ಇರುತ್ತಾರ, ಕರ್ನಾಟಕದ ವೀಣೆ, ಮಹಾರಾಷ್ಟ್ರದಿಂದ ಸುಂದರಿ, ಪಂಜಾಬ್‍ನಿಂದ ಅಲ್ಗೋಜಾ, ಒಡಿಶಾದಿಂದ ಮರ್ದಲ, ಮಧ್ಯಪ್ರದೇಶದಿಂದ ಸಂತೂರ್, ಮಣಿಪುರದಿಂದ ಪುಂಗ್, ಅಸ್ಸಾಂನಿಂದ ನಾಗದಾ ಮತ್ತು ಕಾಳಿ, ಛತ್ತೀಸ್‍ಗಢದಿಂದ ತಂಬೂರಾ, ಬಿಹಾರದಿಂದ ಪಖಾವಾಜ್, ದೆಹಲಿಯಿಂದ ಶೆಹಾನಿ ಮತ್ತು ರಾಜಸ್ಥಾನದಿಂದ ರಾವನ್ಹತ ಇರುತ್ತದೆ ಎಂದು ಅವರು ಮಾಹಿತಿ ನೀಡಿದರು.

ಪಶ್ಚಿಮ ಬಂಗಾಳದ ಖೋಲ್ ಮತ್ತು ಸರೋದ್ ಕಲಾವಿದರು, ಆಂಧ್ರಪ್ರದೇಶದಿಂದ ಘಟಂ, ಜಾರ್ಖಂಡ್‍ನಿಂದ ಸಿತಾರ್, ತಮಿಳುನಾಡಿನಿಂದ ನಾದಸ್ವರಮ್ ಮತ್ತು ಮೃದಂಗ ಹಾಗೂ ಉತ್ತರಾಖಂಡದ ಹುಡ್ಕಾ ಕೂಡ ಈ ಕಾರ್ಯಕ್ರಮದಲ್ಲಿ ಇರಲಿದೆ.

ಧಾರ್ಮಿಕ ಪಠಣಗಳು ನಡೆಯದಿದ್ದಾಗ ಅಥವಾ ಯಾರಾದರೂ ಮಾತನಾಡದಿದ್ದಾಗ ಅವರು ವಾದ್ಯಗಳನ್ನು ನುಡಿಸುತ್ತಾರೆ ಎಂದು ರೈ ಹೇಳಿದರು.ರಾಮಮಂದಿರದ ಯೋಜನಾ ನಿರ್ವಹಣಾ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಎರಡು ಕಂಪನಿಗಳಾದ ಎಲ್ ಅಂಡ್ ಟಿ ಮತ್ತು ಟಾಟಾ ಕನ್ಸಲ್ಟಿಂಗ್ ಇಂಜಿನಿಯರ್ ಪ್ರತಿನಿಧಿಗಳು ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಅತಿಥಿಗಳಿಗೆ ಉಪಾಹಾರ ಮತ್ತು ಊಟದ ವ್ಯವಸ್ಥೆ ಇರುತ್ತದೆ ಮತ್ತು ಕುಡಿಯುವ ನೀರು, ಶೌಚಾಲಯ ಬ್ಲಾಕ್‍ಗಳು ಮತ್ತು ಶೂ ರ್ಯಾಕ್‍ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ರೈ ಹೇಳಿದರು.

ಸಚಿವಾಲಯಕ್ಕೆ ಬಂದು ಹೇಳಿಕೆ ದಾಖಲಿಸಿಕೊಳ್ಳಿ : ಇಡಿಗೆ ಜಾರ್ಖಾಂಡ್ ಸಿಎಂ ಮನವಿ

ದೇವಾಲಯದ ಟ್ರಸ್ಟ್‍ನಿಂದ 7,000 ಕ್ಕೂ ಹೆಚ್ಚು ಜನರನ್ನು ಪ್ರಾಣ ಪ್ರತಿಷ್ಠಾಕ್ಕೆ ಆಹ್ವಾನಿಸಲಾಗಿದೆ. ಆಹ್ವಾನಿತರಲ್ಲಿ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ, ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಬಿಲಿಯನೇರ್ ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಸೇರಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜನವರಿ 26 ರಿಂದ, ಆರ್‍ಎಸ್‍ಎಸ್ ಮತ್ತು ವಿಎಚ್‍ಪಿ ಕಾರ್ಯಕರ್ತರು ಬ್ಯಾಚ್‍ಗಳಲ್ಲಿ ದೇವಾಲಯಕ್ಕೆ ಭೇಟಿ ನೀಡಲು ಪ್ರಾರಂಭಿಸುತ್ತಾರೆ, ಇದು ಫೆಬ್ರವರಿ ಅಂತ್ಯದವರೆಗೆ ಮುಂದುವರಿಯುತ್ತದೆ ಎಂದು ರೈ ಹೇಳಿದರು.
ಕಳೆದ ಹಲವಾರು ದಿನಗಳಲ್ಲಿ ನೇಪಾಳದ ಜಂಕಕಪುರ ಮತ್ತು ಬಿಹಾರದ ಸಿತ್‍ಮರ್ಹಿ ಸೇರಿದಂತೆ ಭಾರತದ ವಿವಿಧ ಭಾಗಗಳಿಂದ ಈ ಸಂದರ್ಭಕ್ಕಾಗಿ ಉಡುಗೊರೆಗಳು ಬಂದಿವೆ ಎಂದು ಅವರು ಹೇಳಿದರು.

ಕರಸೇವಕಪುರಂ, ತೀರ್ಥ ಕ್ಷೇತ್ರ ಪುರಂನಲ್ಲಿ ಆಹ್ವಾನಿತರಿಗೆ ತಂಗಲು ವ್ಯವಸ್ಥೆ ಮಾಡಲಾಗುತ್ತಿದ್ದು, ಹಲವಾರು ಹೋಟೆಲ್‍ಗಳು ಮತ್ತು ಧರ್ಮಶಾಲೆಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ರೈ ಹೇಳಿದರು. ದೇವಾಲಯದ ಕಾರ್ಯಕ್ರಮಕ್ಕೆ ಯುಎಸ್ ಮತ್ತು ಆಫ್ರಿಕಾ ಮತ್ತು ಗಲï ಪ್ರದೇಶ ಮತ್ತು ಹಾಂಗ್ ಕಾಂಗ್ ಸೇರಿದಂತೆ 50 ದೇಶಗಳಿಂದ ಒಟ್ಟು 53 ಅತಿಥಿಗಳು ಬರಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.

RELATED ARTICLES

Latest News