Friday, October 25, 2024
Homeರಾಷ್ಟ್ರೀಯ | Nationalಹ್ಯಾಟ್ರಿಕ್ ಗೆಲುವಿನೊಂದಿಗೆ ಮತ್ತೆ ಕೆಸಿಆರ್ ಅಧಿಕಾರಕ್ಕೆ : ಕೆಟಿಆರ್ ವಿಶ್ವಾಸ

ಹ್ಯಾಟ್ರಿಕ್ ಗೆಲುವಿನೊಂದಿಗೆ ಮತ್ತೆ ಕೆಸಿಆರ್ ಅಧಿಕಾರಕ್ಕೆ : ಕೆಟಿಆರ್ ವಿಶ್ವಾಸ

ಹೈದರಾಬಾದ್,ಅ.10- ನವೆಂಬರ್ 30 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧಿಸಲಿದೆ ಎಂದು ಆಡಳಿತಾರೂಢ ಬಿಆರ್‍ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚುನಾವಣೆಗಳು ನಡೆಯಲಿವೆ. ನವೆಂಬರ್ 30 ರಂದು ಚುನಾವಣೆ ಇದೆ. ಡಿಸೆಂಬರ್ 03 ರಂದು ಮತ ಎಣಿಕೆ ಇದೆ. ಈ ಬಾರಿ ಅಂಕಿಅಂಶಗಳು ನಮ್ಮ ಪರವಾಗಿವೆ ಎಂದು ತೋರುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಹ್ಯಾಟ್ರಿಕ್ ಬಾರಿಸುವ ಮೂಲಕ ನಮ್ಮ ತಂದೆ ಕೆಸಿಆರ್ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ದೆಹಲಿಯಲ್ಲಿ ಗುಂಪು ಘರ್ಷಣೆಗೆ ಇಬ್ಬರು ಬಲಿ, ಮತ್ತೊಬ್ಬ ಗಂಭೀರ

3+3 ಆರು. ನಮ್ಮ ಅದೃಷ್ಟ ಸಂಖ್ಯೆ ಕೂಡ ಆರು. ಕೆಸಿಆರ್ ಸರ್ ಸಿಎಂ ಆಗುವುದು ಖಚಿತ ಮತ್ತು ದಿನಾಂಕಗಳು ಸಹ ಅನುಕೂಲಕರವಾಗಿವೆ ಎಂದು ಅವರು ಪರ್ಕಳದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಹೇಳಿದರು. ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ, ಕೆಟಿಆರ್ ಎಂದು ಕರೆಯಲ್ಪಡುವ ರಾಮರಾವ್ ಅವರು, ಜನರು ಎರಡು ಬಾರಿ ಆಶೀರ್ವಾದ ಮಾಡಿದ್ದಾರೆ ಮತ್ತು ಮೂರನೇ ಬಾರಿಗೆ ಗೆಲುವು ನೀಡಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.

ಯುದ್ಧವನ್ನು ನಾವು ಆರಂಭಿಸಿಲ್ಲ, ಆದರೆ ನಾವೇ ಕೊನೆಗೊಳಿಸುತ್ತೇವೆ ; ನೆತನ್ಯಾಹು ಘರ್ಜನೆ

ಡಿಸೆಂಬರ್ 3 ರಂದು ಪ್ರಕಟವಾಗಲಿರುವ ಫಲಿತಾಂಶದಲ್ಲಿ ಕೆಸಿಆರ್ ಅವರಿಗೆ ಇದು ಮೂರನೇ ಬಾರಿಯ ಗೆಲುವು. ಇದು ದಕ್ಷಿಣ ಭಾರತದಲ್ಲಿ ಹೊಸ ಅಧ್ಯಾಯವಾಗಿದ್ದು, ಒಬ್ಬ ಸಮರ್ಥ ನಾಯಕನಿಗೆ ಪಟ್ಟಾಭಿಷೇಕವಾಗಲಿದೆ ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರ ಕೆಟಿಆರ್ ಹೇಳಿದ್ದಾರೆ.

RELATED ARTICLES

Latest News