Thursday, May 2, 2024
Homeಮನರಂಜನೆದರ್ಶನ್ ಮತ್ತು ನನ್ನ ನಡುವೆ ಸಮಸ್ಯೆ ಏನೆಂದು ಇಬ್ಬರೂ ಹುಡುಕುತ್ತಿದ್ದೇವೆ : ಸುದೀಪ್

ದರ್ಶನ್ ಮತ್ತು ನನ್ನ ನಡುವೆ ಸಮಸ್ಯೆ ಏನೆಂದು ಇಬ್ಬರೂ ಹುಡುಕುತ್ತಿದ್ದೇವೆ : ಸುದೀಪ್

ಬೆಂಗಳೂರು, ಜ. 29- ದಶಕಗಳ ಹಿಂದೆ ಉತ್ತಮ ಸ್ನೇಹಿತರಾಗಿದ್ದ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಟ್ಟಿಗೆ ಒಂದು ಸಿನಿಮಾ ಮಾಡಲಿ ಎಂದು ಅಭಿಮಾನಿಗಳು ಬಯಸಿದ್ದರು. ಆದರೆ ಆ ಸಮಯ ಇನ್ನೂ ಕೂಡಿ ಬಂದಿಲ್ಲ. ಅಲ್ಲದೆ ಕಿಚ್ಚ- ದಚ್ಚುವಿನ ನಡುವೆ ಭಾರೀ ಬಿರುಕು ಉಂಟಾಗಿತ್ತು. ಇದರ ಬಗ್ಗೆ ಕಿಚ್ಚ ಸುದೀಪ್ ಅವರು ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ.

ನಿನ್ನೆಯಷ್ಟೇ ಕನ್ನಡದ ಆವತರಣಿಕೆ ಬಿಗ್‍ಬಾಸ್ 10ರ ಗ್ರಾಂಡ್ ಫಿನಾಲೆ ನಡೆದಿದ್ದು , ಸುದೀಪ್ ಅವರು ಈಗ ಸಿನಿಮಾರಂಗದತ್ತ ಮುಖ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಬ್ಯುಸಿಯಾಗಿರುವ ಕಿಚ್ಚ , ಅಸ್ಕ್ ಕಿಚ್ಚ ಸೆಷನ್ ನಡೆಸುತ್ತಾರೆ. ಇದರಲ್ಲಿ ಅಭಿಮಾನಿಗಳು ಕೇಳುವ ಪ್ರಶ್ನೆಗೆ ಸುದೀಪ್ ಅವರು ತಮ್ಮದೇ ಧಾಟಿಯಲ್ಲಿ ಉತ್ತರ ನೀಡುವ ಮೂಲಕ ಅಭಿಮಾನಿಗಳ ಮನರಂಜಿಸುತ್ತಾರೆ.

ಬಿಗ್‍ಬಾಸ್ 10ರ ಗ್ರಾಂಡ್ ಫಿನಾಲೆ ಮುಗಿದ ನಂತರ ಸುದೀಪ್ ಅವರು ಅಸ್ಕ್ ಕಿಚ್ಚ ಸೆಷನ್'ನಲ್ಲಿ ನೀವು ಒಂದು ಸಣ್ಣ ಪ್ರಶ್ನೆ ಕೇಳಿ ಎಂದು ಹೇಳಿದ್ದಾರೆ. ಅದಕ್ಕೆ ಅಭಿಮಾನಿಯೊಬ್ಬರು ನಿಮ್ಮ ಹಾಗೂ ದರ್ಶನ್ ಅವರ ನಡುವಿನ ಮನಸ್ತಾಪ ಯಾವಾಗ ಸರಿ ಮಾಡಿಕೊಳ್ಳುತ್ತೀರಿ?' ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಕಿಚ್ಚ ಸುದೀಪ್ ಅವರು ಕೂಡ ತಮ್ಮದೇ ಧಾಟಿಯಲ್ಲಿ ಉತ್ತರಿಸಿದ್ದು,ಸಮಸ್ಯೆ ಏನು ಎಂದು ಇಬ್ಬರೂ ಹುಡುಕುತ್ತಿದ್ದೇವೆ?’ ಎಂದು ಹೇಳುವ ಮೂಲಕ ಇಬ್ಬರ ನಡುವಿನ ಮನಸ್ತಾಪವೂ ದೂರವಾಗಿದೆ ಎಂಬ ಸುಳಿವು ನೀಡಿದ್ದಾರೆ. ಸುದೀಪ್ ಅವರು ಮಾಡಿರುವ ಟ್ವಿಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಬಿಜೆಪಿ ಅಸ್ಥಿತ್ವ ಕಂಡುಕೊಳ್ಳಲು ಜನರನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಿದೆ : ಡಿಕೆಶಿ

ಕಿಚ್ಚ ಸುದೀಪ್ ಅವರು ಇತ್ತೀಚೆಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಕಾಟೇರ’ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆಯ ನುಡಿಗಳನ್ನಾಡಿದ್ದು, ಇಬ್ಬರು ಸ್ಟಾರ್ ನಟರು ಮತ್ತೆ ಕುಚುಕು ಗೆಳೆಯರಾಗಲಿ ಎಂದು ಹಾರೈಸಿದ್ದಾರೆ.

ಇಷ್ಟು ದಿವಸ ಬಿಗ್‍ಬಾಸ್‍ನಲ್ಲಿ ಕಾರ್ಯಮಗ್ನರಾಗಿದ್ದಾಗ ಸುದೀಪ್ ಅವರು ಈಗ ಮಾಕ್ಸ್ ಚಿತ್ರದ ಚಿತ್ರೀಕರಣಕ್ಕೆ ಮರಳಿದ್ದು ತಮಿಳುನಾಡಿನ ಮಹಾಬಲಿಪುರಂನಲ್ಲಿ ಶೂಟಿಂಗ್ ಭರದಿಂದ ಸಾಗಲಿದ್ದು, ನಂತರ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಗಿಸಿಕೊಂಡು ಪ್ರೇಕ್ಷಕರನ್ನು ರಂಜಿಸಲು ಬೆಳ್ಳಿಪರದೆಗೆ ಅಪ್ಪಳಿಸಲಿದೆ. ಜೊತೆಗೆ ಅನೂಪ್ ಭಂಡಾರಿ ನಿರ್ದೇಶನದ ಬಿಲ್ಲಾರಂಗಬಾಷಾ ಸಿನಿಮಾದ ಚಿತ್ರೀಕರಣವು ಬಹುತೇಕ ಮುಗಿಯುತ್ತ ಬಂದಿದ್ದು , ಕಿಚ್ಚಿನ ಅಭಿಮಾನಿಗಳಿಗೆ ಈ ವರ್ಷ ಹರ್ಷ ತರಲಿದೆ.

RELATED ARTICLES

Latest News