Tuesday, October 22, 2024
Homeಜಿಲ್ಲಾ ಸುದ್ದಿಗಳು | District Newsಮೂರು ವರ್ಷದ ಮಗುವಿನ ಕತ್ತು ಸೀಳಿ ಕೊಂದ ಚಿಕ್ಕಪ್ಪ

ಮೂರು ವರ್ಷದ ಮಗುವಿನ ಕತ್ತು ಸೀಳಿ ಕೊಂದ ಚಿಕ್ಕಪ್ಪ

ಚಿಕ್ಕಬಳ್ಳಾಪುರು, ಜೂ.20- ಮೂರು ವರ್ಷದ ತನ್ನ ಅಣ್ಣನ ಮಗನನ್ನೇ ಕತ್ತು ಸೀಳಿ ಚಿಕ್ಕಪ್ಪನೇ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಭಟ್ಲಹಳ್ಳಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ನಿಮಕಾಯಲಹಳ್ಳಿ ಗ್ರಾಮದ ಶಿರಿಷ ಮತ್ತು ಮಂಜುನಾಥ್‌ ದಂಪತಿ ಪುತ್ರ ಗೌತಮ್‌ ತನ್ನ ಚಿಕ್ಕಪ್ಪನಿಂದಲೇ ಕೊಲೆಯಾದ ಬಾಲಕ.

ತನ್ನ ಅಣ್ಣ ಮಂಜುನಾಥ್‌ ಅವರ ಮನೆಯಲ್ಲೇ ಚಿಕ್ಕಪ್ಪ ರಂಜಿತ್‌(30) ವಾಸವಿದ್ದು, ಅದೇ ಗ್ರಾಮದಲ್ಲಿ ಮನೆ ನಿರ್ಮಿಸುತ್ತಿದ್ದಾನೆ. ರಂಜಿತ್‌ ಎಂಜಿನಿಯರಿಂಗ್‌ ಪದವೀಧರನಾಗಿದ್ದು, ಉದ್ಯೋಗ ಸಿಗದೇ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದನು.

ನಿನ್ನೆ ಸಂಜೆ ಅಣ್ಣನ ಮನೆಗೆ ಬಂದ ರಂಜಿತ್‌ ಊಟ ಮಾಡಿ ಅಣ್ಣನ ಮಗ ಗೌತಮ್‌ನನ್ನು ಹೊರಗೆ ಕರೆದೊಯ್ದು ಸಮೀಪದ ಪಾಳು ಬಿದ್ದ ಮನೆಗೆ ಹೋಗಿ ಮಗು ಎನ್ನುವುದನ್ನು ನೋಡದೇ ಮಗುವಿನ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಮನೆಯಲ್ಲಿ ಮಗು ಗೌತಮ್‌ ಕಾಣದಿದ್ದಾಗ ಪೋಷಕರು ನೆರೆಹೊರೆಯವರನ್ನು ವಿಚಾರಿಸಿದಾಗ ಮಗುವನ್ನು ನಿಮ ಮೈದುನ ಕರೆದುಕೊಂಡು ಹೋಗುತ್ತಿದ್ದುದ್ದು ನೋಡಿದ್ದಾಗಿ ತಿಳಿಸಿದ್ದಾರೆ.ನೆರೆಹೊರೆಯವರೊಂದಿಗೆ ಸೇರಿ ಎಲ್ಲಾ ಕಡೆ ಹುಡುಕಾಡುತ್ತಿದ್ದಾಗ ಪಾಳು ಬಿದ್ದ ಮನೆ ಬಳಿ ಹೋಗಿ ನೋಡಿದಾಗ ಗೌತಮ್‌ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಏತಕ್ಕಾಗಿ ಮಗುವನ್ನು ಕರೆದೊಯ್ದು ಕೊಲೆ ಮಾಡಿದ್ದಾನೆಂಬುವುದು ನಿಗೂಢವಾಗಿದೆ. ವಿಷಯ ತಿಳಿದು ಭಟ್ಲಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ರಂಜಿತ್‌ಗಾಗಿ ಶೋಧ ನಡೆಸುತ್ತಿದ್ದಾರೆ.ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ನಾಗೇಶ್‌, ಅಡಿಷನಲ್‌ ಎಸ್ಪಿ ಖಾಸಿನ್‌ ಖಾನ್‌, ಡಿವೈಎಸ್ಪಿ ಮುರುಳೀಧರ ಅವರು ಆಗಮಿಸಿದ್ದರು.

RELATED ARTICLES

Latest News