Friday, May 3, 2024
Homeರಾಷ್ಟ್ರೀಯಬಹಿರಂಗವಾಯ್ತು ಸಂಸತ್ ಮೇಲೆ ಹೊಗೆ ದಾಳಿ ಹಿಂದಿನ ಉದ್ದೇಶ

ಬಹಿರಂಗವಾಯ್ತು ಸಂಸತ್ ಮೇಲೆ ಹೊಗೆ ದಾಳಿ ಹಿಂದಿನ ಉದ್ದೇಶ

ನವದೆಹಲಿ,ಡಿ.16- ಸಂಸತ್ತಿನ ಭದ್ರತಾ ಉಲ್ಲಂಘನೆಯ ಹಿಂದಿನ ಸೂತ್ರಧಾರ ಲಲಿತ್ ಝಾ ಮತ್ತು ಆತನ ಸಹ ಆರೋಪಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಲು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಬಯಸಿದ್ದರು ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಮೂಲಗಳ ಪ್ರಕಾರ, 2001 ರ ದಾಳಿಯ ವಾರ್ಷಿಕೋತ್ಸವದಂದು ನಡೆದ ಘಟನೆಯನ್ನು ಮರುಸೃಷ್ಟಿಸಲು ಪೊಲೀಸರು ಸಂಸತ್ತಿನ ಅನುಮೋದನೆಯನ್ನು ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಸಂಸತ್ತಿನಲ್ಲಿ ಹೊಗೆ ಬಾಂಬ್ ಮತ್ತು ಪ್ರತಿಭಟನೆಗಳನ್ನು ಒಳಗೊಂಡ ಪ್ರಮುಖ ಭದ್ರತಾ ಉಲ್ಲಂಘನೆಗಾಗಿ ಐವರು ವ್ಯಕ್ತಿಗಳನ್ನು ಇದುವರೆಗೆ ಬಂಧಿಸಲಾಗಿದೆ. ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಅವರನ್ನು ಲೋಕಸಭೆಯ ಚೇಂಬರ್ ಒಳಗೆ ಬಂಧಿಸಿದರೆ, ನೀಲಂ ದೇವಿ ಮತ್ತು ಅಮೋಲ್ ಶಿಂಧೆ ಅವರನ್ನು ಸಂಸತ್ ಭವನದ ಹೊರಗೆ ಬಂಧಿಸಲಾಯಿತು.

“ನನ್ನನ್ನೂ ಮಂತ್ರಿ ಮಾಡಿ” ಎಂದು ಬೇಡಿಕೆಯಿಟ್ಟ ಆಡಳಿತ ಪಕ್ಷದ ಶಾಸಕರು

ಸಂಸತ್ತಿನ ಭದ್ರತಾ ಉಲ್ಲಂಘನೆಯ ಯೋಜನೆಗಾಗಿ ಪ್ರಕರಣದ ಇತರ ಆರೋಪಿಗಳನ್ನು ಹಲವು ಬಾರಿ ಭೇಟಿಯಾಗಿದ್ದಾಗಿ ಝಾ ಒಪ್ಪಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸರು ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ತಿಳಿಸಿಪೊರೆ. ಬಿಹಾರ ಮೂಲದ ಝಾ ಕೋಲ್ಕತ್ತಾದಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದು, ಶುಕ್ರವಾರ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ಆರಂಭದಲ್ಲಿ ಹೊರಾಂಗಣ ಪ್ರತಿಭಟನೆ ಮಾಡಲು ಅಲೋಚಿಸುತ್ತಿದ್ದವರು ಏಕಾಏಕಿ ಸಂಸತ್ ಒಳನುಸುಳುವಿಕೆಯಂತಹ ದಿಟ್ಟ ಕ್ರಮಕೈಗೊಂಡರು ಎಂದು ಪೊಲೀಸರು ವಿವರಣೆ ನೀಡಿದ್ದಾರೆ. ಆರೋಪಿಗಳು ಮಾಹಿತಿ ಪಡೆಯಲು ಗೂಗಲ್ ಬಳಸಿದ್ದಾರೆ. ಹುಡುಕಾಟಗಳು ಸಂಸತ್ತಿನ ಭದ್ರತಾ ಕ್ರಮಗಳ ಹಳೆಯ ವೀಡಿಯೊಗಳನ್ನು ಅಧ್ಯಯನ ಮಾಡುವುದು ಮತ್ತು ಸುರಕ್ಷಿತ ಸಂವಹನ ವಿಧಾನಗಳ ಬಗ್ಗೆ ಕಲಿಯುವುದನ್ನು ಒಳಗೊಂಡಿವೆ. ಪತ್ತೆಹಚ್ಚುವಿಕೆಯನ್ನು ತಪ್ಪಿಸುವ ಪ್ರಯತ್ನದಲ್ಲಿ ಗುಂಪು ಪ್ರತ್ಯೇಕವಾಗಿ ಸಿಗ್ನಲ್ ಅಪ್ಲಿಕೇಶನ್ ಬಳಸಿ ಸಂವಹನ ನಡೆಸಿತು ಎನ್ನಲಾಗಿದೆ.

ನ್ಯಾಯವಾದಿಗಳ ರಕ್ಷಣಾ ಕಾಯ್ದೆ ಮೇಲ್ಮನೆಯಲ್ಲಿ ಅಂಗೀಕಾರ

ಆರೋಪಿಗಳು ಶತ್ರು ದೇಶ ಅಥವಾ ಭಯೋತ್ಪಾದಕ ಸಂಘಟನೆಯೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿದ್ದಾರೆಯೇ ಎಂದು ನಿರ್ಧರಿಸಲು ಝಾ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ.

RELATED ARTICLES

Latest News