Wednesday, May 1, 2024
Homeರಾಜ್ಯಮಧು ಮತ್ತು ಕುಮಾರ್ ಬಂಗಾರಪ್ಪ ಒಂದಾಗ್ತಾರಾ..? : ಶಿವಣ್ಣ ಹೇಳೋದೇನು..?

ಮಧು ಮತ್ತು ಕುಮಾರ್ ಬಂಗಾರಪ್ಪ ಒಂದಾಗ್ತಾರಾ..? : ಶಿವಣ್ಣ ಹೇಳೋದೇನು..?

ಬೆಳಗಾವಿ,ಮಾ.12- ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರರಾದ ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪ ಅವರು ಅವರಾಗಿಯೇ ಒಂದಾಗಬೇಕೆ ಹೊರತು ನಾನು ಒಂದು ಮಾಡಲು ಆಗುವುದಿಲ್ಲ ಎಂದು ನಟ ಶಿವರಾಜ್‍ಕುಮಾರ್ ಹೇಳಿದ್ದಾರೆ. ನಾನು ಬಂಗಾರಪ್ಪ ಅವರ ಅಳಿಯ, ಮಗನಲ್ಲ. ಅವರ ನಡುವಿನ ಹೊಂದಾಣಿಕೆ ಮಾಡಲು ನಾನ್ಯಾರು ಎಂದು ಪ್ರಶ್ನಿಸಿದರು.

ಈ ಬಾರಿ ತಮ್ಮ ಪತ್ನಿ ಗೀತಾ ಶಿವರಾಜ್‍ಕುಮಾರ್‍ರವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ರ್ಪಧಿಸುತ್ತಿದ್ದಾರೆ. ನಾನು ಅವರಿಗೆ ಹೆಚ್ಚು ಬೆಂಬಲ ನೀಡಬೇಕಿದೆ. ಹೀಗಾಗಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೆ. ಈ ಬಾರಿ ಗೀತಾ ಶಿವರಾಜ್‍ಕುಮಾರ್‍ರ ಪರವಾಗಿ ಹೆಚ್ಚು ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತೇನೆ. ಇದರ ನಡುವೆ ಚಿತ್ರೀಕರಣದ ಸಮಯ ನೋಡಿಕೊಂಡು ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.

ಗೀತಾ ಅವರ ಚುನಾವಣಾ ಪ್ರಚಾರಕ್ಕೆ ಬೇರೆ ಚಿತ್ರನಟರನ್ನು ಕರೆತರುವುದರ ಬಗ್ಗೆ ನಾವು ಯಾರನ್ನೂ ಬಲವಂತ ಮಾಡುವುದಿಲ್ಲ. ಈ ಬಾರಿ ಬಿಸಿಲು ಹೆಚ್ಚಿದೆ. ಹೀಗಾಗಿ ಎಲ್ಲರಿಗೂ ಅವರದೇ ಆದ ಕೆಲಸ ಕಾರ್ಯದೊತ್ತಡಗಳಿರುತ್ತವೆ. ನಮ್ಮ ಸ್ನೇಹ ಸಂಬಂಧವನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದರು.

ಗೀತಾ ಅವರು ಈ ಬಾರಿ ಗೆಲುವು ಕಾಣುವ ವಿಶ್ವಾಸವಿದೆ. ಇದನ್ನು ಹೊರತುಪಡಿಸಿದಂತೆ ತಾವು ರಾಜಕೀಯವಾಗಿ ಬೇರೆ ವಿಚಾರಗಳನ್ನು ಚರ್ಚೆ ಮಾಡುವುದಿಲ್ಲ ಎಂದು ಹೇಳಿದರು.

RELATED ARTICLES

Latest News