Saturday, May 4, 2024
Homeಬೆಂಗಳೂರುಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಿರಿಕ್, ಕೊರಿಯರ್ ಬಾಯ್ ಕೊಲೆ

ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಿರಿಕ್, ಕೊರಿಯರ್ ಬಾಯ್ ಕೊಲೆ

ಬೆಂಗಳೂರು,ಅ.9- ಗಣೇಶ ಮೂರ್ತಿ ವಿಸರ್ಜನೆ ಗಾಗಿ ಮೆರವಣಿಗೆ ಹೋಗುತ್ತಿದ್ದಾಗ, ಡ್ಯಾನ್ಸ್ ಮಾಡುವ ವಿಚಾರಕ್ಕೆ ಗಲಾಟೆ ನಡೆದು, ಗಣೇಶ ಬಲಿ ಕೇಳುತ್ತಿದೆ ಎಂದು ಕೊರಿಯರ್ ಬಾಯ್‍ಗೆ ಡ್ರ್ಯಾಗರ್‌ನಿಂದ ಹೊಟ್ಟೆಗೆ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಆಡುಗೋಡಿಯ ಎಕೆ ಕಾಲೋನಿ ನಿವಾಸಿ ಶ್ರೀನಿವಾಸ (24) ಕೊಲೆಯಾದ ಯುವಕ. ಈತ ಕೊರಿಯರ್ ಬಾಯ್ ವೃತ್ತಿ ಮಾಡುತ್ತಿದ್ದನು.

ಶ್ರೀನಿವಾಸ ಹಾಗೂ ಸ್ನೇಹಿತರೆಲ್ಲ ಸೇರಿ ಗಣೇಶ ಹಬ್ಬದಂದು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದು ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ಹೋಗುವಾಗ ಡ್ಯಾನ್ಸ್ ಮಾಡುವ ವಿಚಾರಕ್ಕೆ ವಿನಯ್ ಹಾಗೂ ಶ್ರೀನಿವಾಸ ನಡುವೆ ಜಗಳ ನಡೆದಿತ್ತು. ವಿನಯ್ ಹಾಗೂ ಆತನ ಗುಂಪು ತಮ್ಮ ಏರಿಯಾದಲ್ಲಿ ಗಣೇಶ ಪ್ರತಿಷ್ಠಾಪಿಸಿದ್ದು, ರಾತ್ರಿ ಮೂರ್ತಿ ವಿಸರ್ಜನೆಗಾಗಿ ಶ್ರೀನಿವಾಸ ಮನೆಯ ಮುಂದೆ ಮೆರವಣಿಗೆ ಹೋಗುತ್ತಿದ್ದಾಗ ಶ್ರೀನಿವಾಸ ನಮ್ಮ ಮನೆ ಮುಂದೆ ಡ್ಯಾನ್ಸ್ ಮಾಡಬೇಡಿ ಎಂದು ಹೇಳಿದಾಗ ಇಬ್ಬರ ನಡುವೆ ಜಗಳವಾಗಿದೆ.

BIG NEWS : ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆ

ಗಲಾಟೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದರು. ಕೆಲ ಸಮಯದ ನಂತರ ವಿನಯ್, ರಂಜಿತ್ ಇನ್ನಿತರರು ಶ್ರೀನಿವಾಸ ಮನೆ ಬಳಿ ಹೋಗಿ ಮತ್ತೆ ಗಲಾಟೆ ಮಾಡಿ ನಮಗೇ ಡ್ಯಾನ್ಸ್ ಮಾಡಬೇಡ ಎನ್ನುತ್ತೀಯಾ, ಗಣೇಶ ಬಲಿ ಕೇಳುತ್ತಿದೆ ಎಂದು ಕೂಗಾಡುತ್ತಾ, ಮನೆಯಿಂದ ಹೊರಗೆ ಬಂದ ಶ್ರೀನಿವಾಸ ಜೊತೆಗೆ ಜಗಳವಾಡಿ ಡ್ರ್ಯಾಗರ್‌ನಿಂದ ಕರುಳು ಹೊರಬರುವಂತೆ ಹೊಟ್ಟೆಗೆ ಇರಿದಿದ್ದಾರೆ.

ಆ ವೇಳೆ ಶ್ರೀನಿವಾಸ ತಾಯಿ ಇಂದ್ರಮ್ಮ ಜಗಳ ಬಿಡಿಸಲು ಮಧ್ಯ ಬಂದಾಗ ಅವರಿಗೂ ಇರಿತದಿಂದ ಗಾಯವಾಗಿದೆ. ತಕ್ಷಣ ಶ್ರೀನಿವಾಸನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ, ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಗಲಾಟೆಯಿಂದಾಗಿ ಶ್ರೀನಿವಾಸ ತಾಯಿ ಇಂದ್ರಮ್ಮ ಹಾಗೂ ರಂಜಿತ್‍ಗೂ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಸುದ್ದಿ ತಿಳಿದು ಆಡುಗೋಡಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ. ಶ್ರೀನಿವಾಸ ಮೃತದೇಹವನ್ನು ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

RELATED ARTICLES

Latest News