Friday, September 20, 2024
Homeಜಿಲ್ಲಾ ಸುದ್ದಿಗಳು | District Newsಸಾಲಬಾಧೆಯಿಂದ ನೊಂದು ಟ್ಯಾಂಕ್‌ ಏರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಸಾಲಬಾಧೆಯಿಂದ ನೊಂದು ಟ್ಯಾಂಕ್‌ ಏರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಚಿಕ್ಕಬಳ್ಳಾಪುರ,ಆ.7– ಸಾಲಗಾರರ ಕಿರುಕುಳದಿಂದ ಮನನೊಂದ ವ್ಯಕ್ತಿಯೊಬ್ಬ ಓವರ್‌ಹೆಡ್‌ ಟ್ಯಾಂಕ್‌ ಏರಿ ಆತಹತ್ಯೆಗೆ ಯತ್ನಿಸಿರುವ ಘಟನೆ ಶಿಡ್ಲಘಟ್ಟ ತಾಲ್ಲೂಕಿನ ಮೊಳಮಾಜನಹಳ್ಳಿಯಲ್ಲಿ ನಡೆದಿದೆ. ನಾಗೇಶ್‌ ಆತಹತ್ಯೆಗೆ ಯತ್ನಿಸಿರುವ ವ್ಯಕ್ತಿ.

ಈತ ಗ್ರಾಮದ ಕೆಲವರ ಬಳಿ ಸಾಲ ಮಾಡಿದ್ದು, ಕೆಲ ದಿನ ಕಾಲಾವಕಾಶ ಕೊಡಿ, ಹಣ ತೀರಿಸುತ್ತೇನೆ ಎಂದು ಪರಿಪರಿಯಾಗಿ ಮನವಿ ಮಾಡಿಕೊಂಡಿದ್ದರೂ ಸಹ ಸಾಲಗಾರರು ನಿರಂತರವಾಗಿ ಹಣ ವಾಪಸ್‌‍ ಕೊಡುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.

ಇದರಿಂದ ಮನನೊಂದು ಗ್ರಾಮಕ್ಕೆ ನೀರು ಸರಬರಾಜು ಮಾಡುವ ಓವರ್‌ಹೆಡ್‌ ಟ್ಯಾಂಕ್‌ ಮೇಲೇರಿ ಆತಹತ್ಯೆಗೆ ಯತ್ನಿಸಿದ್ದಾಣೆ.
ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ತುರ್ತು ದೂರವಾಣಿ ಸಂಖ್ಯೆ 112 ಕರೆ ಮಾಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ನಾಗೇಶನ ಮನವೊಲಿಸಲು ಹರಸಾಹಸ ಪಟ್ಟಿದ್ದಾರೆ.

ಕೊನೆಗೂ ಅಂತಿಮವಾಗಿ ಚಂದ್ರಶೇಖರ್‌ ಯುವಕನಿಗೆ ಬುದ್ದಿ ಹೇಳಿ ಓವರ್‌ಹೆಡ್‌ ಟ್ಯಾಂಕ್‌ನಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES

Latest News