Thursday, September 19, 2024
Homeರಾಷ್ಟ್ರೀಯ | Nationalಆಂಧ್ರ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಸಿಎಂ ನಾಯ್ಡು ಮನವಿ

ಆಂಧ್ರ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಸಿಎಂ ನಾಯ್ಡು ಮನವಿ

Naidu Urges Centre to Declare Floods in Andhra Pradesh National Calamity

ಅಮರಾವತಿ (ಆಂಧ್ರಪ್ರದೇಶ), ಸೆ 3 (ಪಿಟಿಐ) ಮುಖ್ಯಮಂತ್ರಿ ಎನ್‌ ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದಲ್ಲಿ, ಉಂಟಾಗಿರುವ ಜಲ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.ವಿಶೇಷವಾಗಿ ವಿಜಯವಾಡದಲ್ಲಿ ಇತ್ತೀಚಿನ ಧಾರಾಕಾರ ಮಳೆ ಮತ್ತು ನಂತರದ ಪ್ರವಾಹವು ತಮ ರಾಜಕೀಯ ಜೀವನದಲ್ಲಿ ಕಂಡ ದೊಡ್ಡ ದುರಂತ ಎಂದು ನಾಯ್ಡು ಹೇಳಿದರು.

ರಾಜ್ಯದಲ್ಲಿ ಉಂಟಾಗಿರುವ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ನಾಯ್ಡು ತಿಳಿಸಿದ್ದಾರೆ.ನನ್ನ ವತ್ತಿಜೀವನದಲ್ಲಿ, ಇದು ಅತಿದೊಡ್ಡ ವಿಪತ್ತು… ನಾವು ಹುದ್ಹುದ್‌ ಚಂಡಮಾರುತ ಮತ್ತು ತಿತ್ಲಿ ಚಂಡಮಾರುತದಂತಹ ಕೆಲವು ಘಟನೆಗಳನ್ನು ಹೊಂದಿದ್ದೇವೆ ಆದರೆ ಇವುಗಳಿಗೆ ಹೋಲಿಸಿದರೆ, ಇಲ್ಲಿ ಮಾನವನ ನೋವು ಮತ್ತು ಆಸ್ತಿ ನಷ್ಟವು ದೊಡ್ಡದಾಗಿದೆ ಎಂದು ಎನ್‌ಟಿಆರ್‌ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನಾಯ್ಡು ಹೇಳಿದರು.

ರಾಜ್ಯದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಮತ್ತು ಪ್ರವಾಹದಿಂದ ನಲುಗಿ ಹೋಗಿರುವ ಜಿಲ್ಲೆಯ ಕಲೆಕ್ಟರೇಟ್‌ ಅನ್ನು ಮುಖ್ಯಮಂತ್ರಿಗಳು ತಾತ್ಕಾಲಿಕ ಸೆಕ್ರೆಟರಿಯೇಟ್‌ ಆಗಿ ಪರಿವರ್ತಿಸಿದ್ದಾರೆ. ವಿಪತ್ತಿಗೆ ಸಂಬಂಧಿಸಿದ ಎಲ್ಲಾ ವರದಿಗಳನ್ನು ಕೇಂದ್ರಕ್ಕೆ ಕಳುಹಿಸಲಾಗುವುದು ಮತ್ತು ನಷ್ಟದಿಂದ ಚೇತರಿಸಿಕೊಳ್ಳಲು ರಾಜ್ಯಕ್ಕೆ ಉದಾರವಾಗಿ ಹಣ ನೀಡುವಂತೆ ಮನವಿ ಮಾಡುವುದಾಗಿ ನಾಯ್ಡು ಹೇಳಿದರು.

ವಿಜಯವಾಡದ ಪ್ರಕಾಶಂ ಬ್ಯಾರೇಜ್‌ ತನ್ನ ಅತಿ ಹೆಚ್ಚು ಪ್ರವಾಹದ ನೀರಿನ ಮಟ್ಟವನ್ನು ಕಂಡಿದೆ ಮತ್ತು 11.43 ಲಕ್ಷ ಕ್ಯೂಸೆಕ್‌ನ ಬಿಡುಗಡೆಯನ್ನು ದಾಖಲಿಸಿದೆ ಎಂದು ಅವರು ಹೇಳಿದರು. ಗರಿಷ್ಠ 11.9 ಲಕ್ಷ ಕ್ಯೂಸೆಕ್‌ಗಳಷ್ಟು ಪ್ರವಾಹವನ್ನು ತಡೆದುಕೊಳ್ಳುವಂತೆ ಬ್ಯಾರೇಜ್‌ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ನಾಯ್ಡು ಹೇಳಿದರು.

11.43 ಲಕ್ಷ ಕ್ಯೂಸೆಕ್‌ ಪ್ರವಾಹದ ನೀರು ಭವಾನಿಪುರಂ ರಸ್ತೆ ದಾಟಿ ಸ್ವಾತಿ ಥಿಯೇಟರ್‌ ಪ್ರದೇಶವನ್ನು (ವಿಜಯವಾಡದಲ್ಲಿ) ಮುಳುಗಿಸಿ ನಂತರ ವಾಂಬೆ ಕಾಲೋನಿಗೆ ಹರಿಯಿತು ಎಂದು ಅವರು ಹೇಳಿದರು. ಅಜಿತ್‌ ಸಿಂಗ್‌ ನಗರದಂತಹ ಕೆಲವು ಸ್ಥಳಗಳು ಇನ್ನೂ ಮುಳುಗಡೆಯಾಗಿದ್ದರೂ ನೀರು ನಿಧಾನವಾಗಿ ಇಳಿಯುತ್ತಿದೆ ಎಂದು ಅವರು ಹೇಳಿದರು.

ನಾಯ್ಡು ಪ್ರಕಾರ, ಅಜಿತ್‌ ಸಿಂಗ್‌ ನಗರದಲ್ಲಿ 1.5 ಅಡಿಗಳಷ್ಟು ಪ್ರವಾಹದ ನೀರು ಕಡಿಮೆಯಾಗಿದೆ ಮತ್ತು ಭವಾನಿಪುರಂನಲ್ಲಿಯೂ ಇಳಿಮುಖವಾಗಿದೆ. ಕಷ್ಣಾ ನದಿ ಮತ್ತು ಬುಡಮೇರ್‌ನಲ್ಲಿ ನಿಧಾನವಾಗಿ ನೀರು ಕಡಿಮೆಯಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಇದೆ ಎಂದು ಹೇಳಿದರು. ರಾಜ್ಯದ ಉತ್ತರ ಭಾಗದ ಕಳಿಂಗಪಟ್ಟಣಂ ಬಳಿ ಆಂಧ್ರಪ್ರದೇಶದ ಕರಾವಳಿ ತೀರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದರೂ, ಎನ್‌ಟಿಆರ್‌ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ಅವರು ಹೇಳಿದರು.

ತೆಲಂಗಾಣದ ನಲ್ಗೊಂಡ ಮತ್ತು ಖಮಂ ಜಿಲ್ಲೆಗಳಲ್ಲಿ ಮಳೆಯ ಪರಿಣಾಮವಾಗಿ ಬುಡಮೇರು ಮತ್ತು ಇತರ ನದಿಗಳ ಮೂಲಕ ವಿಜಯವಾಡದ ಕೆಳಭಾಗದಲ್ಲಿ ಪ್ರವಾಹ ಉಂಟಾಗಿದೆ ಎಂದು ನಾಯ್ಡು ಹೇಳಿದರು. ಸರ್ಕಾರ ಎಷ್ಟೇ ಪ್ರಯತ್ನ ಪಟ್ಟರೂ ಕೊನೆಯ ಮೈಲಿ ಪ್ರದೇಶಗಳಲ್ಲಿರುವ ಕೆಲವು ಪ್ರವಾಹ ಸಂತ್ರಸ್ತರಿಗೆ ಆಹಾರ ಪೂರೈಸಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

RELATED ARTICLES

Latest News