Thursday, May 9, 2024
Homeರಾಷ್ಟ್ರೀಯಆಂಧ್ರ ಸಿಎಂ ಒಬ್ಬ ಹುಚ್ಚ, ಅವನಿಂದ ಯಾರಿಗೂ ಪ್ರಯೋಜವಿಲ್ಲ : ನಾರಾ ಲೋಕೇಶ್

ಆಂಧ್ರ ಸಿಎಂ ಒಬ್ಬ ಹುಚ್ಚ, ಅವನಿಂದ ಯಾರಿಗೂ ಪ್ರಯೋಜವಿಲ್ಲ : ನಾರಾ ಲೋಕೇಶ್

ನವದೆಹಲಿ,ಅ.3- ಒಬ್ಬ ಹುಚ್ಚ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದಾನೆ ಆತನಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಸಿಎಂ ಜಗನ್‍ಮೋಹನ್ ರೆಡ್ಡಿ ವಿರುದ್ಧ ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಹರಿಹಾಯ್ದಿದ್ದಾರೆ. ಟಿಡಿಪಿ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರ ಬಂಧನವನ್ನು ವಿರೋಧಿಸಿ ನಾರಾ ಲೋಕೇಶ್ ಮತ್ತು ಪಕ್ಷದ ಬೆಂಬಲಿಗರು ದೆಹಲಿಯ ಲೋಧಿ ಎಸ್ಟೇಟ್‍ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ನಾಯ್ಡು ಅವರು ದಕ್ಷತೆ, ಪಾರದರ್ಶಕತೆ ಮತ್ತು ಸಮಗ್ರತೆಗೆ ಹೆಸರುವಾಸಿಯಾಗಿದ್ದಾರೆ. ಇಂದು ನಾವು ಆಂಧ್ರಪ್ರದೇಶದ ಸಿಎಂ ಆಗಿರುವ ಹುಚ್ಚನನ್ನು ಹೊಂದಿದ್ದೇವೆ ಮತ್ತು ಅವರು ನಂಬಲರ್ಹ ರಾಜಕಾರಣಿಯ ವಿರುದ್ಧ ರಾಜಕೀಯ ದುರುದ್ದೇಶದಿಂದ ಸುಳ್ಳು ಪ್ರಕರಣಗಳನ್ನು ಹಾಕುತ್ತಿದ್ದಾರೆ ಎಂದು ಅವರು ದೂರಿದರು.

ಈ ಪ್ರಕರಣದಲ್ಲಿ ನಾಯ್ಡು ಅವರಿಗೆ ಜಾಮೀನು ಸಿಕ್ಕರೆ, ಇನ್ನೆರಡು ಪ್ರಕರಣಗಳಲ್ಲಿ ಅವರನ್ನು ಮತ್ತೆ ರಿಮಾಂಡ್‍ಗೆ ಒಳಪಡಿಸಬಹುದು ಎಂದು ನಾರಾ ಲೋಕೇಶ್ ಇದೇ ಸಂದರ್ಭದಲ್ಲಿ ಅನುಮಾನ ವ್ಯಕ್ತಪಡಿಸಿದರು. ಅವರೊಬ್ಬರೇ ಅಲ್ಲ, ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ಹಾಕಿದ್ದಾರೆ, ನಾನು ಸಚಿವನಾಗಿದ್ದಾಗ ನನ್ನ ಸಚಿವಾಲಯಕ್ಕೆ ಸಂಪೂರ್ಣವಾಗಿ ಸಂಬಂಧವಿಲ್ಲದ ವಿಷಯದಲ್ಲಿ ಹಾಜರಾಗುವಂತೆ ಅವರು ಈಗ ನೋಟಿಸ್ ನೀಡಿದ್ದಾರೆ, ಅವರು ಹಲವಾರು ಜನರಿಗೆ ನೋಟಿಸ್ ಕಳುಹಿಸುತ್ತಿದ್ದಾರೆ, ಅವರು ಬೆದರಿಕೆ ಹಾಕಿದ್ದಾರೆ.

2 ತಿಂಗಳಲ್ಲಿ 4 ಸಾವಿರ ಎಕರೆ ಅರಣ್ಯ ಹೆಚ್ಚಳ : ಸಚಿವ ಈಶ್ವರ್‌ ಖಂಡ್ರೆ

ನನ್ನ ಹೆಂಡತಿ ಮತ್ತು ನನ್ನ ತಾಯಿಯ ಮೇಲೆ ಕೇಸುಗಳನ್ನು ಹಾಕಿ ಜೈಲಿಗೆ ಕಳುಹಿಸಿ, ಆಂಧ್ರಪ್ರದೇಶದಲ್ಲಿ ನಾವು ನಡೆಸುತ್ತಿರುವ ಹುಚ್ಚುತನದ ಆಡಳಿತ ಇದಾಗಿದೆ ಎಂದು ನಾರಾ ಲೋಕೇಶ್ ಟೀಕಿಸಿದರು. ಹಾಗಾಗಿ ಪ್ರತಿಯೊಬ್ಬ ಭಾರತೀಯನೂ ನಾಯ್ಡು ಅವರನ್ನು ಬೆಂಬಲಿಸುವಂತೆ ನಾನು ಕೇಳಿಕೊಳ್ಳುತ್ತೇನೆ ಎಂದು ಅವರು ಹೇಳಿದರು. ಕ್ಯಾಂಡಲ್ ಮಾರ್ಚ್‍ನಿಂದ ಹಿಡಿದು ರ್ಯಾಲಿಗಳವರೆಗೆ, ಟಿಡಿಪಿ ಕಾರ್ಯಕರ್ತರು ದೇಶಾದ್ಯಂತ ತಮ್ಮ ಆಕ್ರೋಶವನ್ನು ಪ್ರದರ್ಶಿಸುವ ಮೂಲಕ ಚಂದ್ರಬಾಬು ನಾಯ್ಡು ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

ಬಹುಕೋಟಿ ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಸೆಪ್ಟೆಂಬರ್ 9 ರಂದು ಬಂಧಿಸಿತ್ತು.

RELATED ARTICLES

Latest News