ಗುರುಗ್ರಾಮ, ಮೇ 6 (ಪಿಟಿಐ) ಹರಿಯಾಣದ ನುಹ್ ಜಿಲ್ಲೆಯ ಕುಂಡ್ಲಿ-ಮನೇಸರ್- ಪಲ್ವಾಲ್ ಎಕ್್ಸಪ್ರೆಸ್ವೇಯಲ್ಲಿ ಪಂಜಾಬ್ನಲ್ಲಿ ತನಿಖೆಗೆ ತೆರಳುತ್ತಿದ್ದ ಎಸ್ಯುವಿ ನಿಯಂತ್ರಣ ತಪ್ಪಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಉತ್ತರ ಪ್ರದೇಶ ಪೊಲೀಸ್ ಸಿಬ್ಬಂದಿ ಮತ್ತು ಚಾಲಕ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧುಲಾವತ್ ಟೋಲ್ ಪ್ಲಾಜಾ ಬಳಿ ಈ ಅಪಘಾತ ಸಂಭವಿಸಿದೆ.ಅಧಿಕಾರಿಗಳ ಪ್ರಕಾರ, ಮೃತ ಪೊಲೀಸರನ್ನು ಕನ್ನೌಜ್ ಜಿಲ್ಲೆಯ ಆಡಂಪುರ ನಿವಾಸಿ ಸಬ್-ಇನ್್ಸಪೆಕ್ಟರ್ ಮೋಹಿತ್ ಕುಮಾರ್ ಯಾದವ್ (32), ಕಾಸ್ಗಂಜ್ ಜಿಲ್ಲೆಯ ಅಲಿಪುರ ನಿವಾಸಿ ಸಬ್-ಇನ್್ಸಪೆಕ್ಟರ್ ಸತ್ಯಭನ್ ಸಿಂಗ್ (59), ಬಂದಾ ಜಿಲ್ಲೆಯ ಬಯೋಜಾ ನಿವಾಸಿ ಕಾನ್ಸ್ಟೆಬಲ್ ಅಶೋಕ್ ಕುಮಾರ್ (28) ಮತ್ತು ರಾಯ್ಬರೇಲಿ ಜಿಲ್ಲೆಯ ಅಂಬೇಡ್ಕರ್ ನಗರದ ನಿವಾಸಿ ಕಾನ್ಸ್ಟೆಬಲ್ ಪ್ರವೀಣ್ ಕುಮಾರ್ (30) ಎಂದು ಗುರುತಿಸಲಾಗಿದೆ.
ಸಬ್ ಇನ್ಸ್ ಪೆಕ್ಟರ್ಗಳು ಮತ್ತು ಕಾನ್ಸ್ ಟೇಬಲ್ ಅಶೋಕ್ ಕುಮಾರ್ ಇಬ್ಬರೂ ಜಲೌನ್ ಜಿಲ್ಲೆಯ ಒರೈ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡಿದ್ದಾರೆ. ಕಾನ್ಸ್ ಟೇಬಲ್ ಪ್ರವೀಣ್ ಕುಮಾರ್ ಅವರನ್ನು ಜಿಲ್ಲಾ ಪೊಲೀಸ್ ಕಣ್ಗಾವಲು ಸಿಬ್ಬಂದಿ ಘಟಕದಲ್ಲಿ ನಿಯೋಜನೆ ಮಾಡಲಾಗಿತ್ತು.
ಮೃತರಾದ ಐದನೇ ವ್ಯಕ್ತಿಯನ್ನು ಕಪ್ಪು ಮಹೀಂದ್ರಾ ಸ್ಕಾರ್ಪಿಯೋ ಚಾಲಕ ಅಮ್ರಿಕ್ ಸಿಂಗ್ (45) ಎಂದು ಗುರುತಿಸಲಾಗಿದೆ. ಅವರು ಪಂಜಾಬ್ನ ಸಂಗ್ರೂರ್ ಜಿಲ್ಲೆಯ ಜೋಗಿಯಾ ಪಟ್ಟಿಗೆ ಸೇರಿದವರು.ಪೊಲೀಸರು ಪ್ರಕರಣದ ತನಿಖೆಗಾಗಿ ಪಂಜಾಬ್ನ ಪಲ್ವಾಲ್ಗೆ ಹೋಗುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಟೋಲ್ ಪ್ಲಾಜಾ ಬಳಿ, ಸ್ಕಾರ್ಪಿಯೋ ಚಾಲಕ ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದನು ಆದರೆ ವೇಗದ ಕಾರಣದಿಂದಾಗಿ ನಿಯಂತ್ರಣ ತಪ್ಪಿ, ಮುಂದೆ ಬಂದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದನು.ಡಿಕ್ಕಿಯ ಪರಿಣಾಮ ಎಸ್ಯುವಿ ತಕ್ಷಣವೇ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಎಲ್ಲಾ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಶವಗಳು ಅವಶೇಷಗಳೊಳಗೆ ಸಿಲುಕಿಕೊಂಡಿವೆ ಮತ್ತು ಸಾಕಷ್ಟು ಪ್ರಯತ್ನದಿಂದ ಹೊರತೆಗೆಯಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ಅಪಘಾತದಲ್ಲಿ ಉತ್ತರ ಪ್ರದೇಶ ಪೊಲೀಸರ ನಾಲ್ವರು ಪೊಲೀಸರು ಮತ್ತು ಒಬ್ಬ ಚಾಲಕ ಸಾವನ್ನಪ್ಪಿದ್ದಾರೆ.
ನಾವು ಎಲ್ಲಾ ಶವಗಳನ್ನು ಶವಾಗಾರದಲ್ಲಿ ಇರಿಸಿದ್ದೇವೆ. ಜಲೌನ್ ಜಿಲ್ಲೆಯ ಎಸ್ಪಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ರಕರಣ ದಾಖಲಿಸಲಾಗಿದೆ ಎಂದು ಅಪಘಾತ ಸಂಭವಿಸಿದ ಟೌರು ಸದರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಇನ್್ಸಪೆಕ್ಟರ್ ಶಿಶ್ ರಾಮ್ ಯಾದವ್ ಹೇಳಿದ್ದಾರೆ.
