Wednesday, May 1, 2024
Homeಬೆಂಗಳೂರುಮಗು ಮಾಡಿಕೊಳ್ಳುವ ವಿಚಾರಕ್ಕೆ ನವದಂಪತಿಗಳ ಜಗಳ, ಪತ್ನಿಯನ್ನು ಕೊಂದ ಪತಿ

ಮಗು ಮಾಡಿಕೊಳ್ಳುವ ವಿಚಾರಕ್ಕೆ ನವದಂಪತಿಗಳ ಜಗಳ, ಪತ್ನಿಯನ್ನು ಕೊಂದ ಪತಿ

ಬೆಂಗಳೂರು, ಏ.13-ಮಗು ಮಾಡಿಕೊಳ್ಳುವ ವಿಚಾರಕ್ಕೆ ನವದಂಪತಿ ನಡುವೆ ಜಗಳವಾಗಿ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಎಚ್ಎಎಲ್ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.ಮೂಲತಃ ಭಟ್ಕಳ ನಿವಾಸಿ ಗಿರಿಜಾ (30) ಕೊಲೆಯಾದ ನತದೃಷ್ಟೆ. ಆರೋಪಿ ಪತಿ ನವೀನ್ಕುಮಾರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಮನಗರ ತಾಲ್ಲೂಕಿನ ಮಾಯಗಾನಹಳ್ಳಿಯವರಾದ ನವೀನ್ಕುಮಾರ್ ಮಾಡ್ರನ್ ಬ್ರೆಡ್ ಡಿಸ್ಟಿಬ್ಯೂಟರ್. ಇವರು ಅಂಗಡಿ ಹಾಗೂ ಬೇಕರಿಗಳಿಗೆ ಬ್ರೆಡ್ ಸರಬರಾಜು ವೃತ್ತಿ ಮಾಡುತ್ತಿದ್ದಾರೆ. ಯಶವಂತಪುರದಲ್ಲಿ ಈ ಹಿಂದೆ ಗಿರಿಜಾ ಪೊಷಕರು ನೆಲೆಸಿದ್ದ ಸಂದರ್ಭದಲ್ಲಿ ನವೀನ್ ಅವರಿಗೆ ಪರಿಚಯವಾಗಿದೆ. ಎರಡೂ ಕುಟುಂಬದವರೂ ಸೇರಿ ಎಂಟು ತಿಂಗಳಯಿಂದೆಯಷ್ಟೇ ಗಿರಿಜಾ-ನವೀನ್ಕುಮಾರ್ ವಿವಾಹ ಮಾಡಿಸಿದ್ದಾರೆ.

ದಂಪತಿ ಅನ್ನಸಂದ್ರ ಪಾಳ್ಯದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಗೃಹಿಣಿ ಗಿರಿಜಾ ಮನೆಯಲ್ಲೇ ಇರುತ್ತಿದ್ದರು. ಗಿರಿಜಾ ಅವರಿಗೆ ಇತ್ತೀಚೆಗೆ ಅಬಾಶನ್ ಆಗಿತ್ತು. ನಂತರ ಮಗು ಮಾಡಿಕೊಳ್ಳುವ ವಿಚಾರವಾಗಿ ದಂಪತಿ ನಡುವೆ ಮನಸ್ತಾಪವಾಗಿದೆ. ಪತಿ ಮಗು ಬೇಕೆಂದರೆ, ಪತ್ನಿ ತಕ್ಷಣಕ್ಕೆ ಬೇಡವೆಂದು ವಾದಿಸುತ್ತಿದ್ದರು.

ಇದೇ ವಿಚಾರವಾಗಿ ರಾತ್ರಿ 10.30ರ ಸುಮಾರಿನಲ್ಲಿ ದಂಪತಿ ನಡುವೆ ಜಗಳವಾಗಿದೆ. ಕೋಪಗೊಂಡ ನವೀನ್ ಕುಮಾರ್ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದನು. ಗೃಹಿಣಿಯ ಕೊಲೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಚ್ಎಎಲ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕೆಲವೇ ಗಂಟೆಗಳಲ್ಲಿ ಆರೋಪಿ ನವೀನ್ ಕುಮಾರ್ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News