Friday, November 7, 2025
Home Blog Page 1863

“ಬಿಜೆಪಿ ನಾಯಕರಿಗೆ ಮಾಡೋಕೆ ಕೆಲಸ ಇಲ್ಲ, ಬಾಯಿ ಚಟಕ್ಕೆ ಮಾತಾಡ್ತಾರೆ”

ಬೆಂಗಳೂರು,ಅ.26- ಬಿಜೆಪಿ ನಾಯಕರಿಗೆ ಕೆಲಸವಿಲ್ಲ, ಬಾಯಿ ಚಟಕ್ಕೆ ಮಾತನಾಡುತ್ತಿದ್ದಾರೆ. ರಾಜ್ಯ ಸರ್ಕಾರ ಪತನವಾಗಲಿದೆ ಎಂಬುದು ಅವರ ಕನಸು ಎಂದು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು. ಹಿಂದೆ ಲಿಂಗಾಯಿತ-ವೀರಶೈವ ಸಮುದಾಯದ ಅಧಿಕಾರಿಗಳಿಗೆ ಅನ್ಯಾಯವಾಗಿದೆ ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದ ಶಾಮನೂರು ಶಿವಶಂಕರಪ್ಪ ರಾಜ್ಯ ಸರ್ಕಾರದ ಪರವಾಗಿ ಬ್ಯಾಟಿಂಗ್ ಮಾಡಿದರು. ಮುಖ್ಯಮಂತ್ರಿ ಜೊತೆ ಮಾತುಕತೆ ನಡೆದಿರುವ ಹಾಗೂ ತಮ್ಮ ಹೇಳಿಕೆಯಲ್ಲಿ ಮೃಧುತ್ವದ ಬಗ್ಗೆ ಸ್ಪಷ್ಟನೆ ನೀಡಲು ನಿರಾಕರಿಸಿದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಯಡಿ ಶೇ.99ರಷ್ಟು ಮಂದಿ ಫಲಾನುಭವಿಗಳಿಗೆ ಹಣ ಬಂದಿದೆ. ಶೇ.1ರಷ್ಟು ವ್ಯತ್ಯಾಸವಾಗಿದೆ. ಅದನ್ನು ಸರಿ ಪಡಿಸಲಾಗುವುದು, ಯಾರಿಗೆ ಬಂದಿಲ್ಲ ಅವರಿಗೆ ತಕ್ಷಣ ಹಣ ಕೊಡಿಸಲಾಗುತ್ತದೆ ಎಂದರು.

ಶ್ಯಾಮನೂರು ಶಿವಶಂಕರಪ್ಪ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ದಾವಣಗೆರೆಯ ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹೊಂದಾಣಿಕೆ ಮಾಡಿಕೊಳ್ಳಲಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅವರನ್ನು ಸೋಲಿಸಿ ಮನೆಗೆ ಕಳುಹಿಸುತ್ತೇನೆ ಎಂದರು.

ಚಿಕ್ಕಬಳ್ಳಾಪುರ : ಸಿಮೆಂಟ್ ಬಲ್ಕರ್ ಲಾರಿಗೆ ಟಾಟಾ ಸುಮೋ ಡಿಕ್ಕಿ , 13 ಮಂದಿ ದುರ್ಮರಣ

ಡಿಸೆಂಬರ್ 24ರಂದು ವೀರಶೈವ ಲಿಂಗಾಯಿತ ಮಹಾಸಮಾವೇಶ ನಡೆಯಲಿದೆ. ಬರ ಇರಲಿ, ಏನೇ ಇದ್ದರೂ ನಾವು ಸಮಾವೇಶ ಮಾಡೇ ಮಾಡೇ ಮಾಡುತ್ತೇವೆ. ಪ್ರಪಂಚವೇ ಕೆಳಗೆ ಬಿದ್ದರೂ ಪತ್ರಿಕೆಯವರು ಇರಲಿ, ಇಲ್ಲದೆ ಇರಲಿ ನಾವು ನಿಲ್ಲಿಸುವುದಿಲ್ಲ. ಏನು ತಿಳಿದುಕೊಂಡಿದ್ದಿಯಾ ಎಂದು ಮರು ಪ್ರಶ್ನಿಸಿದರು.

ಸಮಾವೇಶಕ್ಕೆ ಮುಖ್ಯಮಂತ್ರಿಯವರನ್ನು ಕರೆಯುವುದಿಲ್ಲ. ಲಿಂಗಾಯಿತ-ವೀರಶೈವ ಸಮಾವೇಶವದು ಸಮುದಾಯದವರನ್ನು ಕರೆಯುತ್ತೇವೆ. ಅದರಲ್ಲೂ ರಾಜಕೀಯ ಮಾಡಬೇಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಸಮುದಾಯದ 70 ಮಂದಿ ಯುವ ಶಾಸಕರೆಲ್ಲಾ ಒಂದು, ಹಿರಿಯರಲ್ಲಾ ಒಂದು ಎಂದು ಚೆನ್ನಗಿರಿ ಶಾಸಕರು ನೀಡಿರುವ ಹೇಳಿಕೆ ಕುರಿತು ಮಾತನಾಡಿದ ಶಾಮನೂರು ಶಿವಶಂಕರಪ್ಪ, ಈ ವಿಷಯದಲ್ಲಿ ಅವನನ್ನೇ ಕೇಳಿ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಸಮಯ ಬಂದಾಗ ನೋಡಿಕೊಳ್ಳೋಣ ಈಗ ಪ್ರತಿಕ್ರಿಯಿಸುವ ಅಗತ್ಯ ಇಲ್ಲ ಎಂದ ಅವರು, ರಾಮನಗರವನ್ನು ಬೆಂಗಳೂರಿಗೆ ಸೇರಿಸುವ ವಿಷಯ ತೆಗೆದುಕೊಂಡು ನಾವೇನು ಮಾಡೋಣ. ನಮಗೆ ದಾವಣಗೆರೆ ವಿಷಯಗಳಿದ್ದರೆ ಹೇಳಿ ಎಂದರು.

ಕಾವಲುಗಾರನ ಸಮಯಪ್ರಜ್ಞೆಯಿಂದ ತಪ್ಪಿದ ರೈಲು ದುರಂತ

ನವದೆಹಲಿ,ಅ.26- ಕಾವಲುಗಾರನ ಕಾರ್ಯಕ್ಷಮತೆಯಿಂದಾಗಿ ದೇಶದಲ್ಲಿ ಸಂಭವಿಸಬಹುದಾಗಿದ್ದ ಮತ್ತೊಂದು ರೈಲು ದುರಂತ ತಪ್ಪಿದೆ. ಭಂಡಾಯ್ ನಿಲ್ದಾಣದ ಬಳಿಯ ರೈಲ್ವೇ ಕ್ರಾಸಿಂಗ್ ಒಂದರಲ್ಲಿ ನಿಯೋಜನೆಗೊಂಡಿರುವ ನಿವೃತ್ತ ಸೇನಾ ಅಧಿಕಾರಿ ಗೇಟ್‍ಮ್ಯಾನ್ ಯಶಪಾಲ್ ಸಿಂಗ್ ನೂರಾರು ಜನರ ಪ್ರಾಣ ರಕ್ಷಿಸಿದ ವ್ಯಕ್ತಿಯಾಗಿದ್ದಾರೆ.

ಒಂದು ವೇಳೆ ಅವರು ಕರ್ತವ್ಯ ಲೋಪ ಮಾಡಿದ್ದರೆ ರೈಲಿಗೆ ಬಿದ್ದ ಬೆಂಕಿಯಿಂದ ನೂರಾರು ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇತ್ತು ಎನ್ನಲಾಗಿದೆ. ರೈಲು ಭಂಡಾಯ್ ನಿಲ್ದಾಣವನ್ನು ತಲುಪುವ ಮೊದಲು ನಿನ್ನೆ ಮಧ್ಯಾಹ್ನ 3.35 ಕ್ಕೆ ಗೇಟ್ ಮೂಲಕ ಹಾದುಹೋದಾಗ, ಸಿಂಗ್ ಇಂಜಿನ್‍ನಿಂದ 4 ನೇ ಕೋಚ್‍ನಿಂದ ಹೊಗೆ ಬರುತ್ತಿರುವುದನ್ನು ಪತ್ತೆ ಹಚ್ಚಿ ತಕ್ಷಣವೇ ನಿಲ್ದಾಣದ ಉಪ ಸ್ಟೇಷನ್ ಸೂಪರಿಂಟೆಂಡೆಂಟ್ ಹರಿದಾಸ್ ಅವರಿಗೆ ಮಾಹಿತಿ ನೀಡಿದರು.

ರೈಲು ನಿಯಂತ್ರಕರು ತಕ್ಷಣವೇ ಓಎಚ್‍ಇ (ಓವರ್ ಹೆಡ್ ಎಕ್ವಿಪ್‍ಮೆಂಟï) ಉಸ್ತುವಾರಿ ವಹಿಸಿರುವ ಎಲ್ಲಾ ರೈಲುಗಳ ವಿದ್ಯುತ್ ಸರಬರಾಜನ್ನು ಆಯಾ ಸ್ಥಳಗಳಲ್ಲಿ ಅಪ್ ಅಂಡ್ ಡೌನ್ ದಿಕ್ಕುಗಳಲ್ಲಿ ಅವುಗಳನ್ನು ನಿಲ್ಲಿಸುವಂತೆ ನಿರ್ದೇಶಿಸಿದ್ದರು.

ದುರ್ಗಾಪೂಜೆ ವೇಳೆ ಪಾಕ್ ಪರ ಘೋಷಣೆ : ಅಪ್ರಾಪ್ತ ಬಾಲಕಿ ಸೇರಿ 6 ಜನರ ಅರೆಸ್ಟ್

ಪಟಾಲ್‍ಕೋಟ್ ಎಕ್ಸ್‍ಪ್ರೆಸ್ ಮಧ್ಯಾಹ್ನ 3.37 ಕ್ಕೆ ನಿಂತಾಗ, ಅದು ಈಗಾಗಲೇ ಭಂಡಾಯ್ ನಿಲ್ದಾಣವನ್ನು ದಾಟಿತ್ತು. 10 ನಿಮಿಷಗಳಲ್ಲಿ, ಅಗ್ನಿಶಾಮಕ ದಳ, ಆಂಬ್ಯುಲೆನ್ಸ್ ಮತ್ತು ಸ್ಪಾರ್ಟ್ (ಸ್ವಯಂ ಚಾಲಿತ ಅಪಘಾತ ಪರಿಹಾರ ರೈಲು) ಸ್ಥಳಕ್ಕೆ ತಲುಪಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು.

ಅಷ್ಟೊತ್ತಿಗೆ ಬೆಂಕಿ ಎರಡು ಕೋಚ್‍ಗಳನ್ನು ಆವರಿಸಿತ್ತು. ಇಂಜಿನ್‍ನಿಂದ 3 ನೇ ಮತ್ತು 4 ನೇ ಬೋಗಿಯಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸೂಕ್ತ ಸಮಯಕ್ಕೆ ಸ್ಥಳಾಂತರಿಸಲಾಯಿತು. ಸಂಜೆ 5.10 ರ ಹೊತ್ತಿಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು ಮತ್ತು ಒಟ್ಟು 11 ಜನರಿಗೆ ಸಣ್ಣ ಸುಟ್ಟ ಗಾಯಗಳಾಗಿವೆ ಎಂದು ರೈಲ್ವೆ ರಕ್ಷಣಾ ಪಡೆ ತಿಳಿಸಿದೆ.

ಘಟನೆಯಲ್ಲಿ ರಾಹುಲ್ ಕುಮಾರ್ (18), ಮೋಹಿತ್ (25), ಶಿವಂ (18) ಮನೋಜ್ ಕುಮಾರ್ (34), ಹರದಯಾಳ್ (59), ಮಣಿರಾಮ್ (45), ರಾಮೇಶ್ವರ್ (29), ಗೌರವ್ (22), ಸಿದ್ಧಾರ್ಥ್ (18) ಹಿತೇಶ್ (17) ಮತ್ತು ರೈಲಿಗೆ ಬೆಂಕಿ ತಗುಲಿ ವಿಕಾಸ್ (17) ಗಾಯಗೊಂಡಿದ್ದಾರೆ.

BIG NEWS : ಮಾಜಿ ಸಿಎಂ ಯಡಿಯೂರಪ್ಪಗೆ Z ಕೆಟಗರಿ ಭದ್ರತೆ

ರೈಲು ಪಂಜಾಬ್‍ನ ಫಿರೋಜ್‍ಪುರ ಕಂಟೋನ್ಮೆಂಟ್‍ನಿಂದ ಮಧ್ಯಪ್ರದೇಶದ ಸಿಯೋನಿಗೆ ಹೋಗುತ್ತಿದ್ದಾಗ ಆಗ್ರಾದಿಂದ 10 ಕಿಮೀ ದೂರದಲ್ಲಿರುವ ಭಂಡಾಯ್ ನಿಲ್ದಾಣದ ಬಳಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಗೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಆಗ್ರಾ ರೈಲ್ವೆ ವಿಭಾಗದ ಪಿಆರ್‍ಒ ಶ್ರೀವಾಸ್ತವ ತಿಳಿಸಿದ್ದಾರೆ.

ಬೆಂಕಿ ಹಚ್ಚಿ ಹೆತ್ತ ತಾಯಿಯನ್ನೇ ಕೊಂದ ಮಗ

ಮುಂಬೈ,ಅ.26- ಊಟ ಬಡಿಸುವ ವಿಚಾರದಲ್ಲಿ ತನ್ನ ತಾಯಿಯೊಂದಿಗೆ ಜಗಳವಾಡಿದ ಮಗ ಕೋಪದ ಭರದಲ್ಲಿ ಆಕೆಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ನಡೆದಿದೆ. ರೇವದಂಡ ಬಳಿಯ ನವಖರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀರು ತಿಳಿಸಿದ್ದಾರೆ.

ದೇಹದಾದ್ಯಂತ ಗಂಭೀರವಾದ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮಹಿಳೆ ಇಂದು ಬೆಳಗ್ಗೆ ಅಲಿಬಾಗ್‍ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಮಗನಿಂದಲೆ ಸಾವನ್ನಪ್ಪಿದ ಹತಭಾಗ್ಯ ತಾಯಿಯನ್ನು ಚಂಗುನಾ ನಾಮದೇ ಖೋಟ್ ಎಂದು ಗುರುತಿಸಲಾಗಿದೆ.

ಚಿಕ್ಕಬಳ್ಳಾಪುರ : ಸಿಮೆಂಟ್ ಬಲ್ಕರ್ ಲಾರಿಗೆ ಟಾಟಾ ಸುಮೋ ಡಿಕ್ಕಿ , 13 ಮಂದಿ ದುರ್ಮರಣ

ಊಟ ತಯಾರಿಸಿ ಬಡಿಸುವ ವಿಚಾರದಲ್ಲಿ ಜಗಳವಾಡಿದ ಆಕೆಯ ಮಗ ಜಯೇಶ್ ಆಕೆಯನ್ನು ಥಳಿಸಿದ್ದಾನೆ. ಕೋಪದ ಭರದಲ್ಲಿ, ಅವನು ಅವಳನ್ನು ಮನೆಯ ಮುಂಭಾಗದ ತೆರೆದ ಜಾಗಕ್ಕೆ ಎಳೆದೊಯ್ದು, ಒಣಮರವನ್ನು ಸಂಗ್ರಹಿಸಿ ಬೆಂಕಿ ಹಚ್ಚಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ರಾವದಂಡ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫಲಕಾರಿಯಾಗಿಲ್ಲ ಎಂದು ತಿಳಿಸಿರುವ ಪೊಲೀಸರು ತಲೆಮರೆಸಿಕೊಂಡಿದ್ದ ಜಯೇಶ್‍ನನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

2025ರ ವೇಳೆಗೆ ಬತ್ತಿಹೋಗಲಿದೆಯಂತೆ ಇಂಡೋ-ಗಂಗಾ ಜಲಾನಯನ ಪ್ರದೇಶ

ನವದೆಹಲಿ,ಅ.26- ಮುಂಬರುವ 2025ರ ವೇಲೆ ಭಾರತದಲ್ಲಿನ ಇಂಡೋ-ಗಂಗಾ ಜಲಾನಯನ ಪ್ರದೇಶದಲ್ಲಿ ಅಂತರ್ಜಲ ಪ್ರಮಾಣ ತೀವ್ರವಾಗಿ ಕುಸಿಯಲಿದೆ ಎಂದು ವಿಶ್ವಸಂಸ್ಥೆಯ ಹೊಸ ವರದಿಯೊಂದು ತಿಳಿಸಿದೆ. ಇಂಟರ್‍ಕನೆಕ್ಟೆಡ್ ಡಿಸಾಸ್ಟರ್ ರಿಸ್ಕ್ ರಿಪೋರ್ಟ್ 2023 ಎಂಬ ಶೀರ್ಷಿಕೆಯಡಿ ಮತ್ತು ವಿಶ್ವಸಂಸ್ಥೆಯ ವಿಶ್ವವಿದ್ಯಾನಿಲಯದಿಂದ ಈ ವರದಿಯನ್ನು ಪ್ರಕಟಿಸಲ್ಪಟ್ಟಿದೆ.

ಇನ್‍ಸ್ಟಿಟ್ಯೂಟ್ ಫರ್ ಎನ್ವಿರಾನ್‍ಮೆಂಟ್ ಅಂಡ್ ಹ್ಯೂಮನ್ ಸೆಕ್ಯುರಿಟಿ ವರದಿಯು ಪ್ರಪಂಚವು ಆರು ಪರಿಸರದ ತುದಿಗಳನ್ನು ಸಮೀಪಿಸುತ್ತಿದೆ ಎಂದು ತೋರಿಸುತ್ತದೆ: ವೇಗವರ್ಧಿತ ಅಳಿವುಗಳು, ಅಂತರ್ಜಲ ಕುಸಿತ, ಪರ್ವತ ಹಿಮನದಿ ಕರಗುವಿಕೆ , ಬಾಹ್ಯಾಕಾಶ ಅವಶೇಷಗಳು, ಅಸಹನೀಯ ಶಾಖ ಮತ್ತು ವಿಮೆ ಮಾಡಲಾಗದ ಭವಿಷ್ಯ ಎಂದು ಪ್ರಕಟಿಸಿದೆ.

ಪರಿಸರದ ಟಿಪ್ಪಿಂಗ್ ಪಾಯಿಂಟ್‍ಗಳು ಭೂಮಿಯ ವ್ಯವಸ್ಥೆಗಳಲ್ಲಿ ನಿರ್ಣಾಯಕ ಮಿತಿಗಳಾಗಿವೆ, ಅದನ್ನು ಮೀರಿ ಹಠಾತ್ ಮತ್ತು ಆಗಾಗ್ಗೆ ಬದಲಾಯಿಸಲಾಗದ ಬದಲಾವಣೆಗಳು ಸಂಭವಿಸುತ್ತವೆ, ಇದು ಪರಿಸರ ವ್ಯವಸ್ಥೆಗಳು, ಹವಾಮಾನ ಮಾದರಿಗಳು ಮತ್ತು ಒಟ್ಟಾರೆ ಪರಿಸರದಲ್ಲಿ ಆಳವಾದ ಮತ್ತು ಕೆಲವೊಮ್ಮೆ ದುರಂತ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

BIG NEWS : ಮಾಜಿ ಸಿಎಂ ಯಡಿಯೂರಪ್ಪಗೆ Z ಕೆಟಗರಿ ಭದ್ರತೆ

ಅಂತರ್ಜಲ ಹಿಂತೆಗೆದುಕೊಳ್ಳುವಿಕೆಯ ಸುಮಾರು 70 ಪ್ರತಿಶತವನ್ನು ಕೃಷಿಗಾಗಿ ಬಳಸಲಾಗುತ್ತದೆ, ಆಗಾಗ್ಗೆ ನೆಲದ ಮೇಲಿನ ನೀರಿನ ಮೂಲಗಳು ಸಾಕಷ್ಟಿಲ್ಲದಿದ್ದಾಗ. ಜಲಕ್ಷಾಮದಿಂದ ಉಂಟಾಗುವ ಕೃಷಿ ನಷ್ಟವನ್ನು ತಗ್ಗಿಸುವಲ್ಲಿ ಜಲಚರಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ, ಹವಾಮಾನ ಬದಲಾವಣೆಯಿಂದಾಗಿ ಈ ಸವಾಲು ಉಲ್ಬಣಗೊಳ್ಳುವ ನಿರೀಕ್ಷೆಯಿದೆ ಎಂದು ಅಭಿಪ್ರಾಯಪಡಲಾಗಿದೆ.

ಪ್ರಪಂಚದ ಅರ್ಧಕ್ಕಿಂತ ಹೆಚ್ಚು ಪ್ರಮುಖ ಜಲಚರಗಳು ನೈಸರ್ಗಿಕವಾಗಿ ಮರುಪೂರಣಗೊಳ್ಳುವುದಕ್ಕಿಂತ ವೇಗವಾಗಿ ಕ್ಷೀಣಿಸುತ್ತಿವೆ. ಅಸ್ತಿತ್ವದಲ್ಲಿರುವ ಬಾವಿಗಳಿಂದ ಪ್ರವೇಶಿಸಬಹುದಾದ ಮಟ್ಟಕ್ಕಿಂತ ಕೆಳಗಿರುವ ನೀರಿನ ಮಟ್ಟವು ಕಡಿಮೆಯಾದಾಗ, ರೈತರು ನೀರಿನ ಪ್ರವೇಶವನ್ನು ಕಳೆದುಕೊಳ್ಳಬಹುದು, ಇದು ಸಂಪೂರ್ಣ ಆಹಾರ ಉತ್ಪಾದನಾ ವ್ಯವಸ್ಥೆಗಳಿಗೆ ಅಪಾಯವನ್ನುಂಟುಮಾಡುತ್ತದೆ ಎಂದು ಎಚ್ಚರಿಸಲಾಗಿದೆ.

ಸೌದಿ ಅರೇಬಿಯಾದಂತಹ ಕೆಲವು ದೇಶಗಳು ಈಗಾಗಲೇ ಅಂತರ್ಜಲ ಅಪಾಯದ ತುದಿಯನ್ನು ಮೀರಿದೆ, ಆದರೆ ಭಾರತ ಕೂಡ ಅಂತಹ ಪರಿಸ್ಥಿತಿಗೆ ಎದುರಾಗುವ ದಿನಗಳು ದೂರವಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ. ಭಾರತವು ಅಮೆರಿಕ ಮತ್ತು ಚೀನಾದ ಬಳಕೆಯನ್ನು ಮೀರಿದ ಅಂತರ್ಜಲ ಬಳಕೆಯ ವಿಶ್ವದ ಅತಿದೊಡ್ಡ ಬಳಕೆದಾರರಾಗಿದೆ. ಭಾರತದ ವಾಯುವ್ಯ ಪ್ರದೇಶವು ರಾಷ್ಟ್ರದ ಬೆಳೆಯುತ್ತಿರುವ 1.4 ಶತಕೋಟಿ ಜನರಿಗೆ ಬ್ರೆಡ್ ಬುಟ್ಟಿಯಾಗಿ ಕಾರ್ಯನಿರ್ವಹಿಸುತ್ತದೆ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು 50 ಪ್ರತಿಶತವನ್ನು ಉತ್ಪಾದಿಸುತ್ತವೆ. ದೇಶದ ಅಕ್ಕಿ ಪೂರೈಕೆ ಮತ್ತು ಅದರ ಶೇ.85 ಗೋಧಿ ದಾಸ್ತಾನು ಇರುವುದು ವಿಶೇಷ.

ಗಾಜಾ ಮೇಲೆ ಗ್ರೌಂಡ್ ಆಪರೇಷನ್‌ಗೆ ಇಸ್ರೇಲ್ ಸಿದ್ಧತೆ : ನೆತನ್ಯಾಹು ಘೋಷಣೆ

ಆದಾಗ್ಯೂ, ಪಂಜಾಬ್‍ನ ಶೇಕಡಾ 78 ರಷ್ಟು ಬಾವಿಗಳನ್ನು ಅತಿಯಾಗಿ ಬಳಸಿಕೊಳ್ಳಲಾಗಿದೆ ಎಂದು ಪರಿಗಣಿಸಲಾಗಿದೆ ಮತ್ತು ಒಟ್ಟಾರೆಯಾಗಿ ವಾಯುವ್ಯ ಪ್ರದೇಶವು 2025 ರ ವೇಳೆಗೆ ವಿಮರ್ಶಾತ್ಮಕವಾಗಿ ಕಡಿಮೆ ಅಂತರ್ಜಲ ಲಭ್ಯತೆಯನ್ನು ಅನುಭವಿಸುವ ನಿರೀಕ್ಷೆಯಿದೆ ಎಂದು ವರದಿ ಹೇಳುತ್ತದೆ.

ದೇವಾಲಯಗಳ ಆವರಣದಲ್ಲಿ RSS ಚಟುವಟಿಕೆ ನಿಷೇಧ ಸಮರ್ಥಿಸಿಕೊಂಡ ಕೇರಳ

ತಿರುವನಂತಪುರಂ, ಅ 26 (ಪಿಟಿಐ) ತನ್ನ ನಿಯಂತ್ರಣದಲ್ಲಿರುವ ದೇವಾಲಯಗಳ ಆವರಣದಲ್ಲಿ ಆರ್‍ಎಸ್‍ಎಸ್ ಚಟುವಟಿಕೆಗಳನ್ನು ನಿಷೇಧಿಸಿ ತಿರುವಾಂಕೂರು ದೇವಸ್ವಂ ಮಂಡಳಿ ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆಯನ್ನು ಕೇರಳ ದೇವಸ್ವಂ ಸಚಿವ ಕೆ ರಾಧಾಕೃಷ್ಣನ್ ಸಮರ್ಥಿಸಿಕೊಂಡಿದ್ದಾರೆ.

ನಮ್ಮ ಈ ನಿರ್ಧಾರ ಯಾರನ್ನೂ ದೂರವಿಡುವ ಉದ್ದೇಶ ಹೊಂದಿಲ್ಲ ಆದರೆ ದೇವಾಲಯಗಳಲ್ಲಿ ಶಾಂತಿಯುತ ವಾತಾವರಣವನ್ನು ಕಾಪಾಡಿಕೊಳ್ಳಲು ಇಂತಹ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ವಾರ ದೇವಸ್ವಂ ಆಯುಕ್ತರು ಹೊರಡಿಸಿದ ಸುತ್ತೋಲೆಯು ದೇವಸ್ಥಾನಗಳಿಗೆ ಯಾರನ್ನೂ ಪ್ರವೇಶಿಸದಂತೆ ತಡೆಯುವ ಉದ್ದೇಶವನ್ನು ಹೊಂದಿರಲಿಲ್ಲ ಮತ್ತು ಈ ವಿವಾದವು ಸಂಪೂರ್ಣವಾಗಿ ಅನಗತ್ಯವಾಗಿದೆ ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

BIG NEWS : ಮಾಜಿ ಸಿಎಂ ಯಡಿಯೂರಪ್ಪಗೆ Z ಕೆಟಗರಿ ಭದ್ರತೆ

ಟಿಡಿಬಿಯ ಸುತ್ತೋಲೆಯ ವಿರುದ್ಧ ಬಲಪಂಥೀಯ ಸಾಮಾಜಿಕ ಮಾಧ್ಯಮ ಗುಂಪುಗಳಲ್ಲಿ ವ್ಯಾಪಕ ಟೀಕೆಗಳು ಮತ್ತು ತೀವ್ರ ಚರ್ಚೆಯ ಹಿನ್ನೆಲೆಯಲ್ಲಿ ಸಚಿವರ ಪ್ರತಿಕ್ರಿಯೆ ಬಂದಿದೆ, ಇದು ಸಂಘ ಪರಿವಾರವನ್ನು ರಾಜ್ಯದಲ್ಲಿ ದೇಗುಲಗಳಿಂದ ದೂರವಿಡಲು ಎಡ ಸರ್ಕಾರದ ಕ್ರಮವಾಗಿದೆ ಎಂದು ಆರೋಪಿಸಲಾಗುತ್ತಿದೆ. ಕೇರಳದ ತಿರುವಾಂಕೂರು ಪ್ರದೇಶದಲ್ಲಿನ ಪ್ರಮುಖ ದೇವಾಲಯಗಳನ್ನು ನಿರ್ವಹಿಸುವ ಉನ್ನತ ದೇವಾಲಯದ ಸಂಸ್ಥೆಯಾಗಿದೆ.

ಪೂಜಾ ಸ್ಥಳಗಳು ಸದಾ ಶಾಂತಿಯ ಕೇಂದ್ರಗಳಾಗಬೇಕು. ಎಲ್ಲ ಭಕ್ತರು ಶಾಂತಿಯುತವಾಗಿ ಬಂದು ಪ್ರಾರ್ಥನೆ ಸಲ್ಲಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ರಾಧಾಕೃಷ್ಣನ್ ಹೇಳಿದರು. ದೇವಸ್ವಂ ಕಮಿಷನರ್ ಹೊರಡಿಸಿರುವ ಸುತ್ತೋಲೆ ಪ್ರಕಾರ, ದೇವಸ್ಥಾನದ ಆಡಳಿತ ಮಂಡಳಿಯಿಂದ ನಿರ್ವಹಿಸಲ್ಪಡುವ ದೇಗುಲಗಳ ಆವರಣದಲ್ಲಿ ನಾಮಜಪ ಪ್ರತಿಭಟನೆ (ಮಂತ್ರಗಳನ್ನು ಪಠಿಸುವ ಮೂಲಕ ಪ್ರತಿಭಟನೆಗಳು) ಸಹ ನಿಷೇಧಿಸಲಾಗಿದೆ.

ಗಾಜಾ ಮೇಲೆ ಗ್ರೌಂಡ್ ಆಪರೇಷನ್‌ಗೆ ಇಸ್ರೇಲ್ ಸಿದ್ಧತೆ : ನೆತನ್ಯಾಹು ಘೋಷಣೆ

ಟಿಡಿಬಿಯ ಅನುಮತಿಯಿಲ್ಲದೆ ಆರ್‍ಎಸ್‍ಎಸ್ ಮತ್ತು ತೀವ್ರ ಸಿದ್ಧಾಂತಗಳನ್ನು ಹೊಂದಿರುವ ಸಂಘಟನೆಗಳ ಎಲ್ಲಾ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದು ಅದು ಹೇಳಿದೆ.

ಚಿಕ್ಕಬಳ್ಳಾಪುರ : ಸಿಮೆಂಟ್ ಬಲ್ಕರ್ ಲಾರಿಗೆ ಟಾಟಾ ಸುಮೋ ಡಿಕ್ಕಿ , 13 ಮಂದಿ ದುರ್ಮರಣ

ಚಿಕ್ಕಬಳ್ಳಾಪುರ, ಅ.26- ಕುಟುಂಬದವರೊಂದಿಗೆ ಖುಷಿ ಖುಷಿಯಿಂದ ಹಬ್ಬ ಮುಗಿಸಿಕೊಂಡು ಕಾಯಕಕ್ಕೆ ಮರಳುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಜವರಾಯ ಅಟ್ಟಹಾಸ ಮೆರೆದಿದ್ದು ರಸ್ತೆ ಬದಿ ನಿಂತಿದ್ದ ಸಿಮೆಂಟ್ ಬಲ್ಕರ್ ಲಾರಿಗೆ ಹಿಂದಿನಿಂದ ಟಾಟಾ ಸುಮೋ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿದಂತೆ 13 ಮಂದಿಯನ್ನು ಬಲಿತೆಗೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರ ಚಿತ್ರಾವತಿ ಸಮೀಪ ಇಂದು ಬೆಳಗ್ಗೆ ಸಂಭವಿಸಿದೆ.

ಅಪಘಾತದಲ್ಲಿ 8 ಮಂದಿ ಪುರುಷರು, ನಾಲ್ವರು ಮಹಿಳೆಯರು ಹಾಗೂ ಒಂದು ಗಂಡು ಮಗು ಮೃತಪಟ್ಟಿದ್ದು,
ಕೆಲವರ ಹೆಸರು, ವಿಳಾಸ ಸದ್ಯಕ್ಕೆ ತಿಳಿದು ಬಂದಿಲ್ಲ. ಮೃತರ ಪೈಕಿ ದೊಡ್ಡಬಳ್ಳಾಪುರದ ಅರುಣಾ (40) ಇವರ ಮಗ ಹೃತ್ವಿಕ್ ಯತಿನ್ (6), ಬೆಂಗಳೂರಿನ ಬಸವೇಶ್ವರ ನಗರದ ಸುಬ್ಬಮ್ಮ, ಆಂಧ್ರದ ಕೊತ್ತಚೆರಮ ನಿವಾಸಿ ಪೆರುಮಾಳ್, ಕಾವಲ್ ಬೈರಸಂದ್ರದ ನರಸಿಂಹಮೂರ್ತಿ, ಚಾಲಕ ನರಸಿಂಹಪ್ಪ ಎಂದು ಗುರುತಿಸಲಾಗಿದ್ದು, ಉಳಿದವರ ಹೆಸರು, ವಿಳಾಸಕ್ಕಾಗಿ ಪೊಲೀಸರು ಮಾಹತಿ ಕಲೆ ಹಾಕುತ್ತಿದ್ದಾರೆ.

ಆಯುಧ ಪೂಜೆ ಹಿನ್ನಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಿದ್ದ ಕಾರ್ಮಿಕರು ಸಂಭ್ರಮದಿಂದ ಕುಟುಂಬದವರೊಂದಿಗೆ ಹಬ್ಬ ಮಾಡಿಕೊಂಡು ರಾತ್ರಿ ಬೆಂಗಳೂರಿಗೆ ಮರಳಲು ಆಂಧ್ರದ ಕಡೆಯಿಂದ ಬರುತಿದ್ದ ಟಾಟಾಸುಮೋ ಹತ್ತಿದ್ದಾರೆ. ಆಂಧ್ರ ನೊಂದಣಿಯ ಟಾಟಾ ಸುಮೋ ಚಾಲಕ ಮಾರ್ಗಮಧ್ಯೆ ಬೇರೆ ಬೇರೆ ಊರಿನಲ್ಲಿ ಬೆಂಗಳೂರಿಗೆ ತೆರಳಲು ವಾಹನಕ್ಕಾಗಿ ರಸ್ತೆ ಬದಿ ಕಾಯುತ್ತಿದ್ದ ಜನರನ್ನು ಹತ್ತಿಸಿಕೊಂಡು ಒಟ್ಟು 13 ಮಂದಿಯನ್ನು ಕರೆದುಕೊಂಡು ಬಾಗೇಪಲ್ಲಿ -ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ಅತೀ ವೇಗವಾಗಿ ಬರುತ್ತಿದ್ದನು.


ಇಂದು ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಚಿತ್ರಾವತಿಯ ಬಳಿ ಬರುತ್ತಿದ್ದಂತೆ ರಸ್ತೆ ಬದಿ ಯಾವುದೇ ಸೂಚನಾ ದೀಪ (ಬ್ಲಿಕಿಂಗ್ ಲೈಟ್) ಹಾಕದೆ ಸಿಮೆಂಟ್ ಬಲ್ಕರ್ ಲಾರಿ ನಿಲ್ಲಿಸಿರುವುದು ಚಾಲಕನ ಗಮನಕ್ಕೆ ಬಾರದೆ ವೇಗವಾಗಿ ಟಾಟಾ ಸುಮೋ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತ ಸಂಭವಿಸುತ್ತದ್ದಂತೆ ಸುತ್ತಮುತ್ತಲಿನ ಸ್ಥಳೀಯರು ತಕ್ಷಣ ಸ್ಥಳಕ್ಕೆ ಆಗಮಿಸಿ ಟಾಟಾ ಸುಮೋ ವಾಹನದ ಬಾಗಿಲುಗಳನ್ನು ತೆಗೆದು ಸಂತ್ರಸ್ಥರನ್ನು ರಕ್ಷಿಸಲು ಮುಂದಾದರು. ಪೊಲೀಸರಿಗೂ ವಿಷಯ ತಿಳಿಸಿದ್ದಾರೆ.
ಟಾಟಾ ಸುಮೋ ವಾಹನದೊಳಗೆ ಗಂಭೀರ ಗಾಯಗೊಂಡು ನರಳಾಡುತ್ತಿದ್ದವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ 7 ಮಂದಿ ಮೃತಪಟ್ಟಿದ್ದಾರೆ.ಆಸ್ಪತ್ರೆಗೆ ದಾಖಲಿಸಿದ್ದ ಉಳಿದಿದ್ದ ಒಬ್ಬ ಮಹಿಳೆಯೂ ಚಿಕಿತ್ಸೆ ಫಲಿಸದೆ 10 ಗಂಟೆ ಸುಮಾರಿನಲ್ಲಿ ಮೃತಪಟ್ಟಿದ್ದಾರೆ.

ಮಂಜು ಕವಿದ ವಾತಾವರಣ
ಬೆಳ್ಳಂಬೆಳಗ್ಗೆ ವಿಪರಿತ ಮಂಜು ಕವಿದಿದ್ದು ಟಾಟಾಸುಮೋ ಚಾಲಕನಿಗೆ ರಸ್ತೆ ಕಾಣದೆ ಲಾರಿಗೆ ಡಿಕ್ಕಿಹೊಡೆದಿದ್ದಾನೆ. ಡಿಕ್ಕಿಹೊಡೆದ ರಭಸಕ್ಕೆ ಟಾಟಾ ಸುಮೋ ಸಂಪೂರ್ಣ ನಜ್ಜುಗುಜ್ಜಾಗಿದ್ದು ವಾಹನದೊಳಗೆಸಿಕ್ಕಿಕೊಂಡು ಮೃತಪಟ್ಟವರ ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.

BIG NEWS : ಮಾಜಿ ಸಿಎಂ ಯಡಿಯೂರಪ್ಪಗೆ Z ಕೆಟಗರಿ ಭದ್ರತೆ

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸುದ್ದಿತಿಳಿದ ಕೂಡಲೆ ಜಿಲ್ಲಾಪೊಲೀಸ್ ವರಿಷ್ಟಾಕಾರಿ ನಾಗೇಶ್ ಹಾಗೂ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈ ಗೊಂಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‍ಪಿ ನಾಗೇಶ್, ದಟ್ಟ ಮಂಜಿನಿಂದಾಗಿ ರಸ್ತೆ ಕಾಣದೆ ಈ ಅಪಘಾತ ಸಂಭವಿಸಿರುವುದು ಮೋಲ್ನೋಟಕ್ಕೆ ಕಂಡು ಬಂದಿದೆ. ರಸ್ತೆ ಬದಿ ವಾಹನಗಳನ್ನು ನಿಲ್ಲಿಸದಂತೆ ಸೂಚಿಸಿದ್ದರೂ ರಾತ್ರಿ ವೇಳೆ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ಚಾಲಕರು ನಿದ್ರೆ ಮಾಡುತ್ತಾರೆ. ಹಾಗಾಗಿ ಇಂತಹ ಅಚಾತುರ್ಯಗಳು ನಡೆಯುತ್ತಿವೆ. ಈ ಬಗ್ಗೆ ಲಾರಿ ಚಾಲಕರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿ ರವೀಂದ್ರ ಅವರು ಸ್ಥಳಕ್ಕೆ ಆಗಮಿಸಿ ಅಪಘಾತದ ಬಗ್ಗೆ ಮಾಹಿತಿ ಪಡೆದುಕೊಂಡರು.

ಕುಟುಂಬಸ್ಥರ ಆಕ್ರಂದನ :ಹಬ್ಬ ಮುಗಿಸಿಕೊಂಡು ವಾಪಸ್ಸು ತಮ್ಮ ಮನೆಗಳಿಗೆ ತೆರಳಲು ಹೋಗುವುದಾಗಿ ಕುಟುಂಬಸ್ಥರಿಗೆ ಹೇಳಿ ಹೋಗಿದ್ದವರು ಮಾರ್ಗಮಧ್ಯೆಯೇ ಅಪಘಾತದಲ್ಲಿ ಮೃತಪಟ್ಟಿದ್ದಾರೆಂಬ ಸುದ್ದಿ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತರ ಜೇಬು, ಬ್ಯಾಗ್‍ಗಳಲ್ಲಿದ್ದ ಐಡಿ ಕಾರ್ಡ್, ಮೊಬೈಲ್‍ಗಳಿಂದ ಅವರ ವಾರಸುದಾರರಿಗೆ ಪೊಲೀಸರು ವಿಷಯ ತಿಳಿಸಿದ್ದಾರೆ.

ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರು ಊರುಗಳಿಂದ ಬಂದು ಚಿಕ್ಕಬಳ್ಳಾಪುರದ ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ದುರ್ಗಾಪೂಜೆ ವೇಳೆ ಪಾಕ್ ಪರ ಘೋಷಣೆ : ಅಪ್ರಾಪ್ತ ಬಾಲಕಿ ಸೇರಿ 6 ಜನರ ಅರೆಸ್ಟ್

ಬಸ್ತಿ,ಆ.26- ಉತ್ತರಪ್ರದೇಶದ ಬಸ್ತಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆಸಲಾಗುತ್ತಿದ್ದ ದುರ್ಗಾ ಪೂಜೆ ಸಮಾರಂಭದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.ಪರಶುರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚೌರಿ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ 15 ವರ್ಷದ ಬಾಲಕಿಯನ್ನು ಸಹ ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಗ್ರಾಮದ ಮುಖಂಡ ಆಶಿಶ್ ನೀಡಿದ ದೂರಿನ ಪ್ರಕಾರ, ಜಾಗ್ರಣ ನಡೆಯುತ್ತಿದ್ದಾಗ ಬಾಲಕಿ ದೇವಾನುದೇವತೆಗಳ ವಿಗ್ರಹಗಳನ್ನು ಇರಿಸುವ ವೇದಿಕೆಯ ಮೇಲೆ ಬಂದು ಭಾರತ ವಿರೋಧಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದಳು ಎಂದು ಆರೋಪಿಸಿದ್ದಾರೆ.

ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಮನೆ ಸೇರಿದಂತೆ ಹಲವೆಡೆ ಇಡಿ ದಾಳಿ

ರಾತ್ರಿ 11 ಗಂಟೆ ಸುಮಾರಿಗೆ, ಯೋಜಿತ ರೀತಿಯಲ್ಲಿ, ಹುಡುಗಿ ವೇದಿಕೆಯನ್ನು ಹತ್ತಿ, ವಿಗ್ರಹಗಳ ಕಡೆಗೆ ಕಪ್ಪು ಬಟ್ಟೆಯನ್ನು ಎಸೆದು, ಇಸ್ಲಾಂ ಜಿಂದಾಬಾದ್, ಪಾಕಿಸ್ತಾನ್ ಜಿಂದಾಬಾದ್ ಮತ್ತು ಹಿಂದೂಸ್ತಾನ್ ಮುರ್ದಾಬಾದ್ ಎಂಬ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಆಕೆಯ ಸಹೋದರಿ ಸಾಹಿಬಾ ಮತ್ತು ಮೂವರು ಸಹೋದರರು ಆಕೆಯನ್ನು ಬೆಂಬಲಿಸಿದರು, ಆಕೆಯ ತಂದೆ ಸುಗ್ಗನ್ ಅಲಿ, ತಾಯಿ ಸಹಾಬುದ್ದೀನ್ ನಿಶಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಜಾಕಿರ್ ಅಲಿ ಸಹ ಆಕೆಗೆ ಬೆಂಬಲ ನೀಡಿದ್ದಾರೆ ಎಂದು ಆಶಿಶ್ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಕೃತ್ಯವು ಜಾಗ್ರಣ ಕಾರ್ಯಕ್ರಮಕ್ಕೆ ನೆರೆದಿದ್ದ ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅವರು ಹೇಳಿದರು. ಇಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಅವರನ್ನು ಕೇಳಿದಾಗ, ಅವರು ಹಿಂದೂ ಸಮುದಾಯಕ್ಕೆ ಭೀಕರ ಪರಿಣಾಮಗಳನ್ನು ಮತ್ತು ಗಲಭೆಯ ಬೆದರಿಕೆ ಹಾಕಿದರು ಎಂದು ಗ್ರಾಮದ ಮುಖ್ಯಸ್ಥರು ಹೇಳಿದರು.

ದೂರಿನ ಆಧಾರದ ಮೇಲೆ ಪೊಲೀಸರು ಬಾಲಕಿ, ಆಕೆಯ ಸಹೋದರಿ ಸಾಹಿಬಾ (18), ಅರ್ಮಾನ್ (19), ಪೋಷಕರಾದ ಸುಗ್ಗನ್ ಅಲಿ (48) ಮತ್ತು ಸಹಬುದ್ದೀನ್ ನಿಶಾ (42) ಮತ್ತು ಮೊಹಮ್ಮದ್ ಶಮಿ (55) ಸೇರಿದಂತೆ ಮೂವರು ಸಹೋದರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೊಹಮ್ಮದ್ ಝಾಕಿರ್ ಅಲಿ (50) ಅವರು ಐಪಿಸಿಯ ಸೆಕ್ಷನ್ 153 ಬಿ (ಆಪಾದನೆ, ರಾಷ್ಟ್ರೀಯ ಏಕೀಕರಣಕ್ಕೆ ಪೂರ್ವಾಗ್ರಹ ಪಡಿಸುವಿಕೆ) ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಬಸ್ತಿ ಹೆಚ್ಚುವರಿ ಪೊಲೀಸ್ ಅಧಿಕ್ಷಕ ದೀಪೇಂದ್ರ ನಾಥ್ ಚೌಧರಿ ಹೇಳಿದ್ದಾರೆ.

ಬಿಹಾರಕ್ಕೆ ಬಂತು ಅಮೆರಿಕದ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಸಂಸ್ಥೆ

ಪೊಲೀಸರು ಬಾಲಕಿಯನ್ನು ವಶಕ್ಕೆ ಪಡೆದಿದ್ದು, ಆಕೆಯ 10 ಮತ್ತು 8 ವರ್ಷ ವಯಸ್ಸಿನ ಇಬ್ಬರು ಅಪ್ರಾಪ್ತ ಸಹೋದರರನ್ನು ಬಿಡಲಾಗಿದೆ ಎಂದು ಅವರು ಹೇಳಿದರು, ಆಕೆಯ ಪೋಷಕರು, ಒಬ್ಬ ಸಹೋದರಿ, ಒಬ್ಬ ಸಹೋದರ ಮತ್ತು ಇತರ ಇಬ್ಬರನ್ನು ಬಂಧಿಸಲಾಗಿದೆ. ಕಾರ್ಯಕ್ರಮದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಘಟನೆಯ ತನಿಖೆಗಾಗಿ ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ಚೌಧರಿ ಹೇಳಿದರು.

BIG NEWS : ಮಾಜಿ ಸಿಎಂ ಯಡಿಯೂರಪ್ಪಗೆ Z ಕೆಟಗರಿ ಭದ್ರತೆ

ನವದೆಹಲಿ,ಅ.27- ಕೆಲವು ಸಮಾಜಘಾತುಕ ಶಕ್ತಿಗಳಿಂದ ಜೀವಬೆದರಿಕೆ ಇರುವ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪನವರಿಗೆ ಕೇಂದ್ರ ಗೃಹ ಇಲಾಖೆ ಝಡ್ ಕೆಟಗರಿ ಭದ್ರತೆ ಒದಗಿಸಿದೆ. ಕೇಂದ್ರ ಗುಪ್ತಚರ ವಿಭಾಗವು ಕರ್ನಾಟಕದ ಬಿಜೆಪಿ ಹಿರಿಯ ನಾಯಕರಾಗಿರುವ ಯಡಿಯೂರಪ್ಪನವರಿಗೆ ಕೆಲವು ದುಷ್ಕರ್ಮಿಗಳಿಂದ ಪ್ರಾಣ ಬೆದರಿಕೆ ಇದೆ ಎಂದು ವರದಿ ನೀಡಿದ್ದರ ಹಿನ್ನಲೆಯಲ್ಲಿ ಝೆಡ್ ಕೆಟಗರಿ ಭದ್ರತೆಯನ್ನು ಒದಗಿಸಲಾಗಿದೆ.

ಅತಿ ಗಣ್ಯ ವ್ಯಕ್ತಿಗಳಿಗೆ ಮಾತ್ರ ಗರಿಷ್ಠ ಭದ್ರತೆ ಇರುವ ಝೆಡ್ ಕೆಟಗರಿ ಭದ್ರತೆಯನ್ನು ಪಡೆದ ರಾಜ್ಯದ ಏಕಮಾತ್ರ ರಾಜಕಾರಣಿ ಎಂಬ ಹೆಗ್ಗಳಿಕೆಯು ಬಿಎಸ್‍ವೈ ಅವರಿಗೆ ಸಲ್ಲುತ್ತದೆ. ಯಡಿಯೂರಪ್ಪ ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೇಂದ್ರ ಗೃಹ ಸಚಿವಾಲಯ ಕೈಗೊಂಡಿದೆ.

ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಮನೆ ಸೇರಿದಂತೆ ಹಲವೆಡೆ ಇಡಿ ದಾಳಿ

ಕೆಲವು ಮೂಲಭೂತವಾದಿ ಸಂಘಟನೆಗಳಿಂದ ಯಡಿಯೂರಪ್ಪನವರಿಗೆ ಸಂಭಾವ್ಯ ದಾಳಿ ನಡೆಯಬಹುದು ಎಂಬ ಹಿನ್ನಲೆಯಲ್ಲಿ ಗುಪ್ತಚರ ವಿಭಾಗದ ಶಿಫಾರಸ್ಸಿನಂತೆ ಗೃಹ ಝೆಡ್ ಕೆಟಗರಿ ಭದ್ರತೆಯನ್ನು ಒದಗಿಸಿದೆ. ಗೃಹ ಇಲಾಖೆ ನಿರ್ದೇಶನದಂತೆ ಯಡಿಯೂರಪ್ಪ ಅವರಿಗೆ ಭದ್ರತೆ ಹೆಚ್ಚಿಸಲಾಗಿದ್ದು, ಕೇಂದ್ರ ಮೀಸಲು ಪೊಲೀಸ್ ಪಡೆ ಕಮಾಂಡೋಗಳು ಭದ್ರತೆ ಒದಗಿಸುತ್ತಾರೆ.

ಯಡಿಯೂರಪ್ಪ ಅವರ ಭದ್ರತೆಗೆ ಒಟ್ಟು 33 ಝಡ್ ಕೆಟಗರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ 10 ಶಸ್ತ್ರಸಜ್ಜಿತ ಸ್ಟ್ಯಾಟಿಕ್ ಗಾರ್ಡ್‍ಗಳನ್ನು ಅವರ ನಿವಾಸದಲ್ಲಿ ಇರಿಸಲಾಗುವುದು, ಅವರಿಗೆ ಪೂರಕವಾಗಿ ಆರು ವೈಯಕ್ತಿಕ ಭದ್ರತಾ ಅಧಿಕಾರಿಗಳು ದಿನದ 24 ಗಂಟೆ ಕಾಯುತ್ತಿರುತ್ತಾರೆ.

ಸಂಭಾವ್ಯ ಬೆದರಿಕೆಗಳ ವಿರುದ್ಧ ನಿರಂತರ ಜಾಗ್ರತೆ ವಹಿಸಲು 12 ಸಶಸ್ತ್ರ ಬೆಂಗಾವಲು ಕಮಾಂಡೋಗಳನ್ನು ಮೂರು ಪಾಳಿಗಳಲ್ಲಿ ನಿಯೋಜಿಸಲಾಗುತ್ತಿದೆ. ನಿರಂತರ ಕಣ್ಗಾವಲು ಕಾಯ್ದುಕೊಳ್ಳಲು, ಇಬ್ಬರು ವೀಕ್ಷಕರನ್ನು ಶಿಫ್ಟ್‍ಗಳಲ್ಲಿ ನಿಯೋಜಿಸಲಾಗುವುದು, ಒಟ್ಟಾರೆ ಭದ್ರತಾ ಚೌಕಟ್ಟನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ. ಈ ಕ್ರಮಗಳ ಜೊತೆಗೆ, ಯಡಿಯೂರಪ್ಪನವರು ಮೂರು ತರಬೇತಿ ಪಡೆದ ಚಾಲಕರನ್ನು ಹೊಂದಿರುತ್ತಾರೆ.

ಚೆಕ್‍ಗಣರಾಜ್ಯದಲ್ಲಿ ಹಣದ ಮಳೆ..!

ಜೆಕ್‍ಗಣರಾಜ್ಯ, ಅ.26- ಇಲ್ಲಿನ ಲೈಸಾ ನಾಡ್ ಲಾಬೆಮ್ ಪಟ್ಟಣದ ಬಳಿ ಹೆಲಿಕಾಪ್ಟರ್ ಮೂಲಕ ಒಂದು ಮಿಲಿಯನ್ ಡಾಲರ್ ಹಣವನ್ನು ಹಾರಿ ಬಿಡುವ ಮೂಲಕ ಚೆಕ್‍ಗಣರಾಜ್ಯದ ಪ್ರಭಾವಿ ಟಿವಿ ನಿರೂಪಕ ಕಮಿಲ್ ಬಾರ್ತೊಶೆಕ್ ಗಮನ ಸೆಳೆದಿದ್ದಾರೆ.ಕಜ್ಮಾ ಎಂಬ ಕಾವ್ಯನಾಮದಿಂದ ಹೆಚ್ಚು ಪರಿಚಿತರಾಗಿರುವ ಅವರು ಆರಂಭದಲ್ಲಿ ಸ್ಪರ್ಧೆಯ ಅಡಿಯಲ್ಲಿ ಕೇವಲ ಒಬ್ಬ ವಿಜೇತರಿಗೆ ದೊಡ್ಡ ಮೊತ್ತದ ಹಣವನ್ನು ಉಡುಗೊರೆಯಾಗಿ ನೀಡಲು ತೀರ್ಮಾನಿಸಿದ್ದರು.

ಸ್ಪರ್ಧೆಯಲ್ಲಿ ಭಾಗವಹಿಸುವವರು ಹಣವನ್ನು ಪತ್ತೆಹಚ್ಚಲು ಕಜ್ಮಾ ಅವರ ಚಲನಚಿತ್ರ ಒನ್‍ಮ್ಯಾನ್‍ಶೋ ಮೂವಿಯ ಎಂಬೆಡೆಡ್ ಕೋಡ್ ಅನ್ನು ಭೇದಿಸಬೇಕಾಗಿತ್ತು ಆದರೆ, ಯಾರಿಗೂ ಒಗಟನ್ನು ಬಿಡಿಸಲು ಸಾಧ್ಯವಾಗಲಿಲ್ಲ.

ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಮನೆ ಸೇರಿದಂತೆ ಹಲವೆಡೆ ಇಡಿ ದಾಳಿ

ಪ್ರಭಾವಿಗಳು ನಂತರ ಪರ್ಯಾಯ ಯೋಜನೆಯೊಂದಿಗೆ ಬಂದರು ಮತ್ತು ಸೈನ್ ಅಪ್ ಮಾಡಿದ ಎಲ್ಲಾ ಸ್ಪರ್ಧಿಗಳಿಗೆ ಹಣವನ್ನು ಹಂಚಲು ನಿರ್ಧರಿಸಿದರು. ಅವರು ಹಣವನ್ನು ಎಲ್ಲಿ ಡ್ರಾಪ್ ಮಾಡುತ್ತಾರೆ ಎಂಬ ಎನ್‍ಕ್ರಿಪ್ಟ್ ಮಾಡಿದ ಮಾಹಿತಿಯೊಂದಿಗೆ ಇಮೇಲ್ ಕಳುಹಿಸಿ ನಂತರ ಹೆಲಿಕಾಪ್ಟರ್‍ನೊಂದಿಗೆ ನಿಗದಿತ ಸ್ಥಳಕ್ಕೆ ಆಗಮಿಸಿ ಒಂದು ಮಿಲಿಯನ್ ಡಾಲರ್ ಹಣವನ್ನು ಜನರತ್ತ ತೂರಿದ್ದಾರೆ.

ಕಜ್ಮಾ ಅವರು ತಮ್ಮ ಅ„ಕೃತ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಅದಕ್ಕೆ ಶೀರ್ಷಿಕೆ ನೀಡಿದ್ದಾರೆ, ವಿಶ್ವದ ಮೊದಲ ನಿಜವಾದ ಹಣದ ಮಳೆ! ಜೆಕ್ ರಿಪಬ್ಲಿಕ್‍ನಲ್ಲಿ ಹೆಲಿಕಾಪ್ಟರ್‌ನಿಂದ 1.000.000 ಕೈಬಿಡಲಾಯಿತು ಮತ್ತು ಯಾರೂ ಸಾವನ್ನಪ್ಪಿಲ್ಲ ಅಥವಾ ಗಾಯಗೊಂಡಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.

ಆಗಸದಿಂದ ಹಣದ ಸುರಿಮಳೆಯಾಗುತ್ತಿದ್ದಂತೆ ಗದ್ದೆಯಲ್ಲಿ ನೆರೆದಿದ್ದ ಸಾವಿರಾರು ಜನರು ಪ್ಲಾಸ್ಟಿಕ್ ಚೀಲಗಳಲ್ಲಿ ಒಂದು ಗಂಟೆಯೊಳಗೆ ನೋಟುಗಳನ್ನೆಲ್ಲ ಸಂಗ್ರಹಿಸಿದರು. ಆನ್‍ಲೈನ್‍ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಜನರು ಬ್ಯಾಗ್‍ಗಳೊಂದಿಗೆ ಮೈದಾನದ ಮೂಲಕ ಓಡುತ್ತಿರುವುದನ್ನು ಕಾಣಬಹುದು, ಸಾಧ್ಯವಾದಷ್ಟು ಒಂದು ಡಾಲರ್ ಬಿಲ್‍ಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ಕೆಲವರು ಸುಲಭವಾದ ರೀತಿಯಲ್ಲಿ ಸಾಧ್ಯವಾದಷ್ಟು ಹಣವನ್ನು ದೋಚಲು ಛತ್ರಿಗಳನ್ನು ತಂದಿದ್ದರು.

ಗಾಜಾ ಮೇಲೆ ಗ್ರೌಂಡ್ ಆಪರೇಷನ್‌ಗೆ ಇಸ್ರೇಲ್ ಸಿದ್ಧತೆ : ನೆತನ್ಯಾಹು ಘೋಷಣೆ

ಜೆರುಸಲೇಂ,ಅ.26- ಹಮಾಸ್ ಉಗ್ರರನ್ನು ನಡೆದಾಡುತ್ತಿರುವ ಸತ್ತ ಜನ ಎಂದು ಬಣ್ಣಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ನಮ್ಮ ಅಸ್ತಿತ್ವಕ್ಕಾಗಿ ನಾವು ಹೋರಾಟ ನಡೆಸುತ್ತಿದ್ದು, ಗಾಜಾದ ಮೇಲೆ ನೆಲದ ಆಕ್ರಮಣಕ್ಕೆ ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಯುದ್ಧದ ಎರಡು ಪ್ರಮುಖ ಗುರಿಗಳು ಹಮಾಸ್‍ನ ಮಿಲಿಟರಿ ಮತ್ತು ಆಡಳಿತ ಸಾಮಥ್ರ್ಯಗಳನ್ನು ನಾಶಪಡಿಸುವ ಮೂಲಕ ಹಮಾಸ್ ಅನ್ನು ತೊಡೆದುಹಾಕಲು ಮತ್ತು ನಮ್ಮ ಬಂಧಿತರನ್ನು ಮನೆಗೆ ತಲುಪಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.

ರಾಷ್ಟ್ರೀಯ ಏಕತೆಯನ್ನು ಬಯಸುತ್ತಿರುವ ಪ್ರಧಾನಿ, ಇಸ್ರೇಲ್ ನಮ್ಮ ಅಸ್ತಿತ್ವಕ್ಕಾಗಿ ಹೋರಾಟದ ಮಧ್ಯದಲ್ಲಿದೆ ಎಂದು ಹೇಳಿದರು. ಎಲ್ಲಾ ಹಮಾಸ್ ಸದಸ್ಯರು ಸತ್ತ ಮನುಷ್ಯರು – ನೆಲದ ಮೇಲೆ ಮತ್ತು ಕೆಳಗೆ, ಗಾಜಾದ ಒಳಗೆ ಮತ್ತು ಹೊರಗೆ ನಡೆಯುತ್ತಿದ್ದಾರೆ ಎಂದು ನೆತನ್ಯಾಹು ಹೇಳಿದರು.

ಹುಲಿ ಉಗುರಿನ ವಿಚಾರದಲ್ಲಿ ಎಲ್ಲರ ವಿರುದ್ಧವೂ ಕ್ರಮ ಜರುಗಿಸುತ್ತೇವೆ : ಖಂಡ್ರೆ

ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ಸಚಿವ ಬೆನ್ನಿ ಗ್ಯಾಂಟ್ಜ್, ಭದ್ರತಾ ಕ್ಯಾಬಿನೆಟ್ ಮುಖ್ಯಸ್ಥರು ಮತ್ತು ಭದ್ರತಾ ಸಂಸ್ಥೆಗಳ ಮುಖ್ಯಸ್ಥರು, ನಾವು ವಿಜಯದವರೆಗೆ ಯುದ್ಧದ ಗುರಿಗಳನ್ನು ಸಾಧಿಸಲು ಗಡಿಯಾರದ ಸುತ್ತ ಕೆಲಸ ಮಾಡುತ್ತಿದ್ದೇವೆ ಮತ್ತು ಹಾಗೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಗುರಿಗಳು ರಾಷ್ಟ್ರವನ್ನು ಉಳಿಸುವುದು, ವಿಜಯವನ್ನು ಸಾಧಿಸುವುದು ಎಂದು ನೆತನ್ಯಾಹು ಹೇಳಿದರು ಮತ್ತು ನಾವು ಹಮಾಸ್ ಮೇಲೆ ನರಕದ ಮಳೆಯನ್ನು ಸುರಿಸುತ್ತಿದ್ದೇವೆ ಮತ್ತು ನಾವು ಈಗಾಗಲೇ ಸಾವಿರಾರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದ್ದೇವೆ – ಮತ್ತು ಇದು ಕೇವಲ ಪ್ರಾರಂಭವಾಗಿದೆ ಎಂದು ಹೇಳಿದರು.

ನಾವು ನೆಲದ ಆಕ್ರಮಣಕ್ಕೆ ತಯಾರಿ ನಡೆಸುತ್ತಿದ್ದೇವೆ. ಯಾವಾಗ, ಹೇಗೆ, ಎಷ್ಟು ಎಂದು ನಾನು ನಿರ್ದಿಷ್ಟಪಡಿಸುವುದಿಲ್ಲ. ನಾನು ಪರಿಗಣನೆಗಳ ವ್ಯಾಪ್ತಿಯನ್ನು ಸಹ ವಿವರಿಸುವುದಿಲ್ಲ, ಅದರಲ್ಲಿ ಹೆಚ್ಚಿನವು ಸಾರ್ವಜನಿಕರಿಗೆ ತಿಳಿದಿಲ್ಲ. ಮತ್ತು ಅದು ಮಾಡಬೇಕಾದ ಮಾರ್ಗವಾಗಿದೆ ನಾವು ನಮ್ಮ ಸೈನಿಕರ ಜೀವಗಳನ್ನು ರಕ್ಷಿಸಲು ಇದು ಮಾರ್ಗವಾಗಿದೆ ಎಂದು ನೆತನ್ಯಾಹು ಹೇಳಿದರು.