Home Blog Page 1868

ಮಣಿಪುರದಲ್ಲಿ ಸ್ಪೋಟಕಗಳೊಂದಿಗೆ ಉಗ್ರನ ಬಂಧನ

ಇಂಫಾಲ, ಅ.23 -ಕಾರಿನಲ್ಲಿ 1,200ಕ್ಕೂ ಹೆಚ್ಚು ಗುಂಡಿನ ಕಾಟ್ರಿಡ್ಜ್‍ಗಳು ಮತ್ತು 68 ಸ್ಪೋಟಕಗಳನ್ನು ಸಾಗಿಸುತ್ತಿದ್ದ ಉಗ್ರನೊಬ್ಬನನ್ನು ಬಂಧಿಸಿರುವ ಎಂದು ಪೊಲೀಸರು ಭಾರಿ ವಿದ್ವಂಸಕ ಕೃತ್ಯ ತಡೆದಿದ್ದಾರೆ.

ಇಂಫಾಲ್ ಪಶ್ಚಿಮ ಜಿಲ್ಲೆಯ ಮೊಯಿರಾಂಗ್‍ಖೋಮ್ ಕಳೆದ ರಾತ್ರಿ ಟ್ರಾಫಿಕ್ ಪೊಲೀಸರು ವೇಗವಾಗಿ ಬರುತ್ತಿದ್ದ ಕಾರನ್ನು ತಡೆದರು ಆದರೆ ಅದು ಪರಾರಿಯಾಗಲು ಯತ್ನಿಸಿದಾಗ ಎಚ್ಚೆತ್ತ ಸಿಬ್ಭಂದಿಗಳು ಬೆನ್ನಟ್ಟಿ ಹಿಡಿದಿದ್ದಾರೆ.

ಗೋವಾದ ವಿಮಾನ ನಿಲ್ದಾಣದಲ್ಲಿ 4 ಕೋಟಿ ಮೌಲ್ಯದ ಚಿನ್ನ, ಐಫೋನ್ ವಶ

ಕಾರಿನಲ್ಲಿ 7.62 ಎಂಎಂ ಕಾಟ್ರ್ರಿಡ್ಜ್‍ನ 573 ಸುತ್ತುಗಳು ಮತ್ತು 5.56 ಎಂಎಂ ಕ್ಯಾಲಿಬರ್‍ನ 294 ಸುತ್ತುಗುಂಡುಗಳು ಮತ್ತು 40 ಎಂಎಂ ಲ್ಯಾಥೋಡ್ ಸ್ಪೋಟಕಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಉಗ್ರಗಾಮಿ ಎಂದು ಗುರುತಿಸಲಾಗಿದೆ ಆದರೆ ಆತನ ವಿವವರವನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಇಂಫಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿಗೆ ನಟಿ ಗೌತಮಿ ತಡಿಮಲ್ಲ ಗುಡ್‍ಬೈ

ಚೆನ್ನೈ,ಅ.23- ತನ್ನ ಆಸ್ತಿಯನ್ನು ಕಬಳಿಸಿದ ವ್ಯಕ್ತಿಗೆ ಪಕ್ಷದವರೇ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ದಕ್ಷಿಣ ಭಾರತದ ಹೆಸರಾಂತ ಚಿತ್ರನಟಿ ಗೌತಮಿ ತಡಿಮಲ್ಲ ಬಿಜೆಪಿಯ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಗುಡ್‍ಬೈ ಹೇಳಿದ್ದಾರೆ. ಈ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಸುದೀರ್ಘ ಹಾಗೂ ಭಾವನಾತ್ಮಕವಾದ ಪತ್ರ ಬರೆದಿರುವ ಗೌತಮಿ ತಡಿಮಲ್ಲ, ಅತ್ಯಂತ ಭಾರವಾದ ಹೃದಯದಿಂದ ಪಕ್ಷ ಬಿಡುವ ತೀರ್ಮಾನಕ್ಕೆ ಬಂದಿದ್ದೇನೆ, ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.

ನನ್ನ ಆಸ್ತಿಯನ್ನೇ ಕಬಳಿಸಿದ ವ್ಯಕ್ತಿಗೆ ಪಕ್ಷದವರೇ ಬೆನ್ನೆಲುಬಾಗಿ ನಿಂತಿದ್ದಾರೆಂದರೆ ಯಾರನ್ನು ನಂಬಬೇಕು. ಯಾರನ್ನು ನಂಬಬಾರದು ಎಂಬುದೇ ತಿಳಿಯುತ್ತಿಲ್ಲ. ಪಕ್ಷವು ನೀಡಿದ ಜವಾಬ್ದಾರಿಯನ್ನು ತಕ್ಕಮಟ್ಟಿಗೆ ನಿಭಾಯಿಸಿದ್ದೇನೆ ಎಂಬ ತೃಪ್ತಿ ಎಂದು ಹೇಳಿದ್ದಾರೆ.

ಪ್ಯಾರಾ ಏಷ್ಯನ್ ಗೇಮ್ಸ್​​ನಲ್ಲಿ ಭಾರತೀಯರ ಪದಕ ಭೇಟೆ ಶುರು

ನಾನು 25 ವರ್ಷಗಳ ಹಿಂದೆ ರಾಷ್ಟ್ರ ನಿರ್ಮಾಣಕ್ಕೆ ತನ್ನ ಪ್ರಯತ್ನಗಳನ್ನು ಕೊಡುಗೆ ನೀಡಲು ಪಕ್ಷಕ್ಕೆ ಸೇರಿದ್ದೆ. ನನ್ನ ಜೀವನದಲ್ಲಿ ನಾನು ಎದುರಿಸಿದ ಎಲ್ಲಾ ಸವಾಲುಗಳ ಹೊರತಾಗಿಯೂ, ನಾನು ಆ ಬದ್ಧತೆಯನ್ನು ಗೌರವಿಸಿದ್ದೇನೆ. ಆದರೂ ಇಂದು ನಾನು ನನ್ನ ಜೀವನದಲ್ಲಿ ಊಹಿಸಲಾಗದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಿಂತಿದ್ದೇನೆ. ಪಕ್ಷ ಮತ್ತು ಮುಖಂಡರಿಂದ ಯಾವುದೇ ರೀತಿಯ ಬೆಂಬಲ ಪಡೆಯಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ನನ್ನ ನಂಬಿಕೆ ಮುರಿದು ದ್ರೋಹ ಬಗೆದಿರುವ ವ್ಯಕ್ತಿಗೆ ಕೆಲವರು ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ ಎಂದು ಗೌತಮಿ ತಡಿಮಲ್ಲ ಪತ್ರದಲ್ಲಿ ಆರೋಪಿಸಿದ್ದಾರೆ.

ವಿಶ್ವಾಸ ದ್ರೋಹ:
ನಾನು 17 ನೇ ವಯಸ್ಸಿನಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ವೃತ್ತಿಜೀವನವು 37 ವರ್ಷಗಳ ಕಾಲ ಸಿನಿಮಾ, ದೂರದರ್ಶನ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ವ್ಯಾಪಿಸಿದೆ. ಈ ವಯಸ್ಸಿನಲ್ಲಿ ಆರ್ಥಿಕವಾಗಿ ಸುಭದ್ರವಾಗಿರಲು ಮತ್ತು ನನ್ನ ಮಗಳ ಭವಿಷ್ಯಕ್ಕಾಗಿ ನಾನು ನನ್ನ ಇಡೀ ಜೀವನ ಕೆಲಸ ಮಾಡಿದ್ದೇನೆ. ನಾನು ಮತ್ತು ನನ್ನ ಮಗಳು ಸ್ಥಿರವಾಗಿ ಮತ್ತು ಸುರಕ್ಷಿತವಾಗಿರಬೇಕಾದ ಸ್ಥಳದಲ್ಲಿ ನಾನು ಈಗ ನಿಂತಿದ್ದೇನೆ.

ಮಾನಸಿಕ ನೆಮ್ಮದಿ ಕಳೆದುಕೊಂಡ ಭಾರತದಲ್ಲಿರುವ ಪ್ಯಾಲೆಸ್ಟೀನಿಯಸ್ ವಿದ್ಯಾರ್ಥಿಗಳು

ಆದರೆ ಸಿ.ಅಳಗಪ್ಪನ್ ನನಗೆ ಮೋಸ ಮಾಡಿ ನನ್ನ ಹಣ, ಆಸ್ತಿ, ದಾಖಲೆಗಳನ್ನು ದೋಚಿದ್ದಾರೆ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ನ್ಯಾಯಕ್ಕಾಗಿ ಮುಖ್ಯಮಂತ್ರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಗೌತಮಿ ತಡಿಮಲ್ಲ ಮನವಿ ಮಾಡಿದ್ದಾರೆ. ಎಫ್‍ಐಆರ್ ದಾಖಲಾಗಿದೆ, ಮುಖ್ಯಮಂತ್ರಿ ಮತ್ತು ಪೊಲೀಸ್ ಅಧಿಕಾರಿಗಳು ನನಗೆ ನ್ಯಾಯ ಕೊಡಿಸುತ್ತಾರೆ ಎಂಬ ಭರವಸೆ ನನಗಿದೆ ಎಂದು ತಡಿಮಲ್ಲ ಹೇಳಿದ್ದಾರೆ.

ಇಸ್ರೇಲ್ ವೈಮಾನಿಕ ದಾಳಿಯಲ್ಲಿ 30 ಮಂದಿ ಪ್ಯಾಲೆಸ್ತೇನಿಯರ ಸಾವು

ಟೆಲ್ ಅವಿವ್,ಅ.23- ಗಾಜಾ ಪಟ್ಟಣದ ಮೇಲೆ ತನ್ನ ದಾಳಿಯನ್ನು ಮುಂದುವರೆಸಿರುವ ಇಸ್ರೇಲ್ ಇಂದು ಮುಂಜಾನೆ ಮತ್ತೆ ವೈಮಾನಿಕ ದಾಳಿ ನಡೆಸಿದ ಪರಿಣಾಮ 30 ಮಂದಿ ಘಟನೆಯಲ್ಲಿ ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿದ್ದಾರೆ.

ವಸತಿ ಪ್ರದೇಶ ಹಾಗೂ ನಾಗರಿಕರನ್ನು ಗುರಿಯಾಗಿಟ್ಟುಕೊಂಡು ಗಾಜಾ ಪಟ್ಟಣದ ಅಲ್‍ಸುಹಾದ ಪ್ರದೇಶ ಮತ್ತು ಜಬಾಲಿಯಾ ನಿರಾಶ್ರಿತರ ತಾಣದಲ್ಲಿ ನಡೆದ ದಾಳಿಯಲ್ಲಿ 30 ಮಂದಿ ಪ್ಯಾಲೆಸ್ತೇನಿಯರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಮುಂಜಾನೆ ಗಾಜಾ ಪಟ್ಟಿಯಲ್ಲಿರುವ ಮೂರು ಆಸ್ಪತ್ರೆಗಳ ಸಮೀಪದಲ್ಲಿ ಇಸ್ರೇಲ್ ಬಾಂಬ್ ದಾಳಿ ನಡೆಸಿದೆ ಎಂದು ಪ್ಯಾಲೇಸ್ತೀನಿಯನ್ ಮಾಧ್ಯಮ ವರದಿ ಮಾಡಿದೆ. ಆದರೆ ಬಾಂಬ್ ದಾಳಿಯಿಂದ ಆಸ್ಪತ್ರೆ ಹಾನಿಗೊಳಗಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಇಸ್ರೇಲ್ ಗಾಜಾ ನಗರದ ಶಿಫಾ ಮತ್ತು ಅಲ-ಕುದ್ಸ್ ಆಸ್ಪತ್ರೆಗಳ ಬಳಿ ಮತ್ತು ಉತ್ತರದಲ್ಲಿರುವ ಇಂಡೋನೇಷಿಯನ್ ಆಸ್ಪತ್ರೆಯ ಬಳಿ ದಾಳಿ ಮಾಡಿದೆ ಎಂದು ವರದಿ ಹೇಳಿದೆ.

ಪ್ಯಾರಾ ಏಷ್ಯನ್ ಗೇಮ್ಸ್​​ನಲ್ಲಿ ಭಾರತೀಯರ ಪದಕ ಭೇಟೆ ಶುರು

ಇದಕ್ಕೂ ಮೊದಲು, ಅಲ-ಕುಡ್ಸ್ ಆಸ್ಪತ್ರೆಯನ್ನು ಸ್ಥಳಾಂತರಿಸಲು ಇಸ್ರೇಲ್ ಆದೇಶಿಸಿದೆ ಎಂದು ಪ್ಯಾಲೆಸ್ತೀನಿಯನ್ ರೆಡ್ ಕ್ರೆಸೆಂಟ್ ಸೊಸೈಟಿ ಹೇಳಿದೆ. ಗಾಜಾದಲ್ಲಿನ ವಸತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ ನಡೆಸಿದ ಪರಿಣಾಮ ಕನಿಷ್ಠ 30 ಪ್ಯಾಲೆಸ್ತೀನಿಯಾದವರು ಸಾವನ್ನಪ್ಪಿದ್ದಾರೆ. ಜಬಾಲಿಯಾ ನಿರಾಶ್ರಿತರ ಶಿಬಿರದ ಅಲ-ಶುಹಾದಾ ಪ್ರದೇಶದಲ್ಲಿ ಈ ಕಟ್ಟಡವಿತ್ತು.

ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ವೈಮಾನಿಕ ದಾಳಿಯಿಂದ 117 ಮಕ್ಕಳು ಸೇರಿದಂತೆ 266 ಪ್ಯಾಲೆಸ್ತೀನಿಯಾದವರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಹಮಾಸ್‍ನ ರಾಜಕೀಯ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಮತ್ತು ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮೀರ್-ಅಬ್ದುಲ್ಲಾಹಿಯಾನ್ ಅವರು ಗಾಜಾದ ಮೇಲೆ ಇಸ್ರೇಲಿ ದಾಳಿಯನ್ನು ಹೇಗೆ ನಿಲ್ಲಿಸಬೇಕು ಎಂಬುದರ ಕುರಿತು ಚರ್ಚಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಅಕ್ಟೋಬರ್ 7 ರಂದು ಪ್ಯಾಲೇಸ್ತೀನಿಯನ್ ಗುಂಪು ಹಮಾಸ್ ಇಸ್ರೇಲ್ ಮೇಲೆ ಹಠಾತ್ ದಾಳಿಯನ್ನು ಪ್ರಾರಂಭಿಸಿ 1,400 ಜನರನ್ನು ಕೊಂದ ನಂತರ ಇಸ್ರೇಲ್ ತನ್ನ ದಾಳಿಯನ್ನು ಪ್ರಾರಂಭಿಸಿದೆ. ಎರಡು ವಾರಗಳ ಬಾಂಬ್ ದಾಳಿಯಲ್ಲಿ ಕನಿಷ್ಠ 4,600 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಗೋವಾದ ವಿಮಾನ ನಿಲ್ದಾಣದಲ್ಲಿ 4 ಕೋಟಿ ಮೌಲ್ಯದ ಚಿನ್ನ, ಐಫೋನ್ ವಶ

ಪಣಜಿ, ಅ. 23- ಅಬುಧಾಬಿಯಿಂದ ಗೋವಾದ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೂವರು ಪ್ರಯಾಣಿಕರಿಂದ ಸುಮಾರು 4 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ಐಫೋನ್‍ಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ವಶಪಡಿಸಿಕೊಂಡಿದೆ.

ಉತ್ತರ ಪ್ರದೇಶದ ಪ್ರಯಾಣಿಕರಾದ ಇರ್ಫಾನ್ (30), ಮುಂಬೈನ ಕಮ್ರಾನ್ ಅಹ್ಮದ್ (38) ಮತ್ತು ಗುಜರಾತ್‍ನ ಮೊಹಮ್ಮದ್ ಇರ್ಫಾನ್ ಗುಲಾಮ್ (37) ಅವರನ್ನು ಉತ್ತರ ಗೋವಾದ ವಿಮಾನ ನಿಲ್ದಾಣದಲ್ಲಿ ಕಳ್ಳಸಾಗಣೆ ತಡೆ ಸಂಸ್ಥೆ ಬಂಧಿಸಿದೆ ಎಂದು ಡಿಆರ್‍ಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೋಧದ ವೇಳೆ, ಮೂವರಿಂದ ಒಟ್ಟು 3.92 ಕೋಟಿ ರೂಪಾಯಿ ಮೌಲ್ಯದ ಪೇಸ್ಟ್ ರೂಪದಲ್ಲಿ 5.7 ಕೆಜಿ ಚಿನ್ನ ಮತ್ತು 28 ಅತ್ಯಾಧುನಿಕ ಐಫೋನ್ 15 ಪ್ರೊ ಮ್ಯಾಕ್ಸ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಆರೋಪಿಗಳು ಮುಂಬೈ ಮತ್ತು ದುಬೈ ನಡುವೆ ಕಾರ್ಯನಿರ್ವಹಿಸುತ್ತಿರುವ ಕಳ್ಳಸಾಗಾಣಿಕೆ ಜಾಲದ ಭಾಗವಾಗಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಮಾನಸಿಕ ನೆಮ್ಮದಿ ಕಳೆದುಕೊಂಡ ಭಾರತದಲ್ಲಿರುವ ಪ್ಯಾಲೆಸ್ಟೀನಿಯಸ್ ವಿದ್ಯಾರ್ಥಿಗಳು

ಬಂಧಿತ ಆರೋಪಿಗಲು ಕಳೆದ ಅ. 12 ರಂದು ಮುಂಬೈನಿಂದ ಅಬುಧಾಬಿಗೆ ಪ್ರಯಾಣಿಸಿದರು ಮತ್ತು ಕಳೆದ ಶನಿವಾರ ರಾತ್ರಿ ಭಾರತಕ್ಕೆ ಗೋವಾ ವಿಮಾನ ನಿಲ್ದಾಣದಲ್ಲಿ ಇಳಿದು ಕಳ್ಳಸಾಗಾಣಿಕೆ ಸರಕುಗಳೊಂದಿಗೆ ಪರಾರಿಯಾಗಲು ಪ್ರಯತ್ನಿಸಿದರು.

ಚೆಕ್-ಇನ್ ಬ್ಯಾಗೇಜ್‍ನಲ್ಲಿ ಇರಿಸಲಾದ ಪ್ಯಾಕೆಟ್‍ಗಳಲ್ಲಿ ಐಫೋನ್‍ಗಳನ್ನು ಸುತ್ತಿಡಲಾಗಿತ್ತು ಮತ್ತು ಇಬ್ಬರು ಪ್ರಯಾಣಿಕರ ಸೊಂಟದ ಪಟ್ಟಿಯಲ್ಲಿ ಚಿನ್ನದ ಪೇಸ್ಟ್ ಅನ್ನು ಮರೆಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ

ಇಬ್ಬರು ಉಗ್ರರನ್ನು ಹೊಸಕಿಹಾಕಿದ ಸೇನೆ

ಶ್ರೀನಗರ,ಅ.23- ಕಣಿವೆ ರಾಜ್ಯದ ಉರಿ ಸೆಕ್ಟರ್‍ನ ಗಡಿ ನಿಯಂತ್ರಣ ರೇಖೆ ಬಳಿ ಭಾರತದ ಭೂ ಪ್ರದೇಶ ಒಳಗೆ ನುಸುಳುತ್ತಿದ್ದ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದೆ. ಭಾರೀ ಶಸ್ತ್ರಾಸ್ತ್ರ ಸಜ್ಜಿತ ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸಬಹುದು ಎಂದು ಗುಪ್ತಚರ ಮಾಗಿತಿ ಹಿನ್ನಲೆಯಲ್ಲಿ ಸೇನೆ ಕಟ್ಟೆಚ್ಚರ ವಹಿಸಿದೆ.

ಮಳೆ ಹಾಗು ಹಿಮಪಾತದ ಲಾಭ ಪಡೆದು ಇಬ್ಬರು ಶಸ್ತ್ರಸಜ್ಜಿತ ಭಯೋತ್ಪಾದಕರು ಮಧ್ಯರಾತ್ರಿ ಗಡಿ ನಿಯಂತ್ರಣ ರೇಖೆಯನ್ನು ದಾಟಲು ಪ್ರಯತ್ನಪಟ್ಟರು ಈ ವೇಳೆ ನಮ್ಮ ಯೋಧರು ಗುಂಡು ಹಾರಿಸಿ ಹಿಮ್ಮೆಟ್ಟಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗಿನ ಜಾವದವರೆಗೂ ದುಂಡಿನ ಚಕಮಕಿ ನಡುವೆ ಇಬ್ಬರು ಉಗ್ರರನ್ನು ಹತರಾಗಿದ್ದಾರೆ.

ಜೆಡಿಎಸ್‌ನಿಂದ ಅಂತರ ಕಾಯ್ದುಕೊಳ್ಳಲು ಕೇರಳ ಘಟಕ ತೀರ್ಮಾನ

ನಿಯಂತ್ರಣ ರೇಖೆಯ ಬಳಿಯೇ ಮತ್ತೊಂದು ಪ್ರಕರಣದಲ್ಲಿ ಭಯೋತ್ಪಾದಕನೊಬ್ಬ ಹತನಾಗಿದ್ದು ಈ ವೇಳೆ ಜೊತೆಗಿದ್ದವರು ಆತನ ದೇಹವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಶೋಧ ಕಾರ್ಯದ ವೇಳೆ 2 ಎಕೆ 47 ರೈಫಲ್‍ಗಳು, 6 ಪಿಸ್ತೂಲ್‍ಗಳು, 4 ಚೈನ ನಿರ್ಮಿತ ಹ್ಯಾಂಡ್ ಗ್ರೆನೇಡ್‍ಗಳು, ಬ್ಯಾಗಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ಯಾರಾ ಏಷ್ಯನ್ ಗೇಮ್ಸ್​​ನಲ್ಲಿ ಭಾರತೀಯರ ಪದಕ ಭೇಟೆ ಶುರು

ಹ್ಯಾಂಗ್‍ಝೌ, ಅ.23 -ಪುರುಷರ ಹೈಜಂಪ್ ಟಿ 63 ಮತ್ತು ಪುರುಷರ ಕ್ಲಬ್ ಥ್ರೋ ಎಫ್51 ಸ್ಪರ್ಥೆಗಳಲ್ಲಿ ಭಾರತ ಎಲ್ಲಾ ಮೂರು ಪದಕಗಳನ್ನು ಗೆದ್ದು ಬೀಗಿದೆ.ಶೈಲೇಶ್ ಕುಮಾರ್ ಮತ್ತು ಪ್ರಣವ್ ಸೂರ್ಮಾ ಆಯಾ ವಿಭಾಗಗಳಲ್ಲಿ ಚಿನ್ನವನ್ನು ಗೆದ್ದು ಹ್ಯಾಂಗ್‍ಝೌ ಏಷ್ಯನ್ ಪ್ಯಾರಾ ಗೇಮ್ಸ್‍ನಲ್ಲಿ ಅಬ್ಬರ ಆರಂಭಿಸಿದ್ದಾರೆ.

ಮೊದಲಿಗೆ ಶೈಲೇಶ್‍ಕುಮಾರ್ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಹೊಸ ದಾಖಲೆ ಮಾಡಿದ್ದು 1.82 ಮೀ ಎತ್ತರ ಜಿಗಿದು ಚಿನ್ನ ಗೆದ್ದರೆ, ಮರಿಯಪ್ಪನ್ ತಂಗವೇಲು (1.80 ಮೀ) ಮತ್ತು ಗೋವಿಂದಭಾಯ್ ರಾಮಸಿಂಗ್ ಭಾಯಿ ಪಾಯಾರ್ (1.78 ಮೀ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು.ವಿಶೇಷವೆಂದೆ ಈ ವಿಭಾದ ಸ್ಪರ್ಧೆಯಲ್ಲಿ ಮೂವರು ಭಾರತೀಯರು ಮಾತ್ರ ಸ್ರ್ಪಧಿಗಳಾಗಿದ್ದರು.

ಪುರುಷರ ಕ್ಲಬ್ ಥ್ರೋ ಎಫ್ 51 ಸ್ಪರ್ಧೆಯಲ್ಲಿ, ಸೂರ್ಮಾ ಏಷ್ಯನ್ ಪ್ಯಾರಾ ಗೇಮ್ಸ್ ದಾಖಲೆ ನಿರ್ಮಿಸಿ 30.01 ಮೀಟರ್ ದೂರ ಡಿಸ್ಕ್ ಎಸೆದು ಚಿನ್ನ ಗೆದ್ದರೆ, ಧರಂಬೀರ್ (28.76 ಮೀ) ಮತ್ತು ಅಮಿತ್ ಕುಮಾರ್ (26.93 ಮೀ) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಜೆಡಿಎಸ್‌ನಿಂದ ಅಂತರ ಕಾಯ್ದುಕೊಳ್ಳಲು ಕೇರಳ ಘಟಕ ತೀರ್ಮಾನ

ಈವೆಂಟ್‍ನಲ್ಲಿ ಕೇವಲ ನಾಲ್ವರು ಸ್ರ್ಪಧಿಗಳು ಇದ್ದರು, ಸೌದಿ ಅರೇಬಿಯಾದ ರಾ ಅಲಿ ಅಲ್ಹರ್ತಿ 23.77 ಮೀಟರ್ ಎಸೆದು ಕೊನೆಯ ಸ್ಥಾನ ಪಡೆದರು. ಪುರುಷರ ಶಾಟ್‍ಪುಟ್ ಎಫ್11 ಸ್ಪರ್ಧೆಯಲ್ಲಿ ಮೋನು ಘಂಗಾಸ್ 12.33 ಮೀಟರ್ ದೂರ ಕ್ರಮಿಸಿ ಕಂಚಿನ ಪದಕ ಗೆದ್ದರು.ಮಹಿಳೆಯರ ಕ್ಯಾನೋ ಸ್ಪರ್ಧೆಯಲ್ಲಿ, ಪ್ರಾಚಿ ಯಾದವ್ 1:03.147 ಸಮಯದೊಂದಿಗೆ ಬೆಳ್ಳಿ ಗೆದ್ದರು

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-10-2023)

ನಿತ್ಯ ನೀತಿ :
ಶಕ್ತಿಯೆಲ್ಲಾ ನಿಮ್ಮೊಳಗೇ ಇದೆ; ನೀವು ಏನು ಬೇಕಾದರೂ ಮಾಡಬಲ್ಲಿರಿ, ಎಲ್ಲವನ್ನೂ ಮಾಡಬಲ್ಲಿರಿ.

ಪಂಚಾಂಗ : ಸೋಮವಾರ, 23-10-2023
ಶೋಭಕೃತ್ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ
ತಿಥಿ: ನವಮಿ / ನಕ್ಷತ್ರ: ಶ್ರವಣ / ಯೋಗ: ಶೂಲ / ಕರಣ: ಬಾಲವ-ತೈತಿಲ

ಸೂರ್ಯೋದಯ : ಬೆ.06.11
ಸೂರ್ಯಾಸ್ತ : 05.57
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ಇಂದಿನ ರಾಶಿಭವಿಷ್ಯ :
ಮೇಷ
: ಹಿರಿಯರು ಮತ್ತು ಸಜ್ಜನರನ್ನು ಗೌರವಿಸುವುವಿಸುವುದರಿಂದ ಕೆಲಸದಲ್ಲಿ ಉತ್ತಮ ಯಶಸ್ಸು ಸಿಗಲಿದೆ.
ವೃಷಭ: ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ.
ಮಿಥುನ: ಧಾರ್ಮಿಕ ಕೆಲಸ-ಕಾರ್ಯಗಳಲ್ಲಿ ಭಾಗವಹಿ ಸುವಿರಿ. ದೂರ ಪ್ರಯಾಣ ಮಾಡಬೇಕಾಗಬಹುದು.

ಕಟಕ:ನಿಮ್ಮ ಕೆಲಸಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಇಂದು ಸಾಧ್ಯವಾಗುತ್ತದೆ.
ಸಿಂಹ: ಒಡಹುಟ್ಟಿದವ ರೊಂದಿಗಿನ ಸಂಬಂಧ ಸುಧಾ ರಿಸುತ್ತದೆ. ವೃತ್ತಿ ಕ್ಷೇತ್ರದಲ್ಲಿ ಬಯಸಿದ ಯಶಸ್ಸು ಸಿಗಲಿದೆ.
ಕನ್ಯಾ: ಸುಲಭವಾಗಿ ಜೀರ್ಣ ವಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸಿ.

ತುಲಾ: ಸಹೋದ್ಯೋಗಿಗೆ ಸಹಾಯ ಮಾಡುವುದ ರಿಂದ ನಿಮ್ಮ ಒಳ್ಳೆಯ ತನ ಎಲ್ಲರಿಗೂ ತಿಳಿಯಲಿದೆ.
ವೃಶ್ಚಿಕ: ಹಿತವಾದ ಮಾತುಗಳಿಂದ ಸಂಗಾತಿ ಅಥವಾ ಪ್ರೀತಿಪಾತ್ರರನ್ನು ಮೆಚ್ಚಿಸಲು ಪ್ರಯತ್ನಿಸುವಿರಿ.
ಧನುಸ್ಸು: ಉದ್ಯಮಿಗಳು ತಮ್ಮ ಸಹೋದ್ಯೋಗಿ ಗಳೊಂದಿಗೆ ಭವಿಷ್ಯದ ಯೋಜನೆಗಳ ಬಗ್ಗೆ ಚಿಂತಿಸಿ.

ಮಕರ: ಅವಸರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ.
ಕುಂಭ: ಸ್ಥಗಿತಗೊಂಡ ಕೆಲಸವನ್ನು ಸ್ವಲ್ಪ ಹಣ ಖರ್ಚು ಮಾಡುವ ಮೂಲಕ ಪೂರ್ಣಗೊಳಿಸಬಹುದು.
ಮೀನ: ವಾಹನ ಖರೀದಿಸುವ ಯೋಚನೆಯನ್ನು ಮುಂದಕ್ಕೆ ಹಾಕುವುದು ಒಳ್ಳೆಯದು.

ಮಾನಸಿಕ ನೆಮ್ಮದಿ ಕಳೆದುಕೊಂಡ ಭಾರತದಲ್ಲಿರುವ ಪ್ಯಾಲೆಸ್ಟೀನಿಯಸ್ ವಿದ್ಯಾರ್ಥಿಗಳು

ನವದೆಹಲಿ,ಅ.22- ಗಾಜಾದಲ್ಲಿ ಚಪ್ಪಟೆಯಾದ ಕಟ್ಟಡಗಳು, ಅವಶೇಷಗಳು ಮತ್ತು ಸುಟ್ಟ ನೆಲದ ದೃಶ್ಯಗಳು ಭಾರತದಲ್ಲಿನ ಪ್ಯಾಲೆಸ್ತೀನ್ ವಿದ್ಯಾರ್ಥಿ ತಾಲಿಬ್ಗೆ ಅಪಾರ ಮಾನಸಿಕ ಆಘಾತವನ್ನು ಉಂಟುಮಾಡಿದೆಯಂತೆ. ಅವರು ತಮ್ಮ ಕುಟುಂಬ ಸದಸ್ಯರ ಯೋಗಕ್ಷೇಮದ ಬಗ್ಗೆ ನಿರಂತರವಾಗಿ ಚಿಂತಿತರಾಗಿದ್ದಾರೆ ಮತ್ತು ಅವರ ಗಮನವನ್ನು ಅಧ್ಯಯನದತ್ತ ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ.

ಯುದ್ಧ ಪ್ರಾರಂಭವಾದಾಗಿನಿಂದ ನನಗೆ ಒಂದೇ ಒಂದು ವಾಕ್ಯವನ್ನು ಓದಲು ಅಥವಾ ಬರೆಯಲು ಸಾಧ್ಯವಾಗಲಿಲ್ಲ. ನಾನು ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದೇನೆ ಮತ್ತು ಸ್ವಲ್ಪ ಸಮಯದಿಂದ ಸರಿಯಾಗಿ ನಿz್ದÉ ಮಾಡಿಲ್ಲ ಎಂದು ತಾಲಿಬ್ ಪಿಟಿಐಗೆ ತಿಳಿಸಿದರು.
ಮನೆಗೆ ಮರಳಿದ ಯಾರೊಂದಿಗೂ ಸಂಪರ್ಕದಲ್ಲಿರಲು ಸಾಧ್ಯವಾಗದ ತಾಲಿಬ್ ಅವರ ಕುಟುಂಬ ಸದಸ್ಯರು ಜೀವಂತವಾಗಿದ್ದಾರೆಯೇ ಎಂದು ತಿಳಿದಿಲ್ಲ ಎಂದು ಹೇಳಿದರು. ಇದು ಅಸಹಾಯಕ ಭಾವನೆ ಮತ್ತು ಕಷ್ಟದ ಪರಿಸ್ಥಿತಿ ಎಂದು ಅವರು ಹೇಳಿದರು.

ನಾನು ಆಹಾರಕ್ಕಾಗಿಯೂ ಹಣವನ್ನು ಖರ್ಚು ಮಾಡುವ ಬಗ್ಗೆ ಜಾಗೃತನಾಗಿದ್ದೇನೆ. ನಾನು ಈಗ ಮೂರು ಊಟದ ಬದಲಿಗೆ ಎರಡು ಊಟಗಳನ್ನು ತಿನ್ನುತ್ತೇನೆ ಮತ್ತು ಅವುಗಳ ಗುಣಮಟ್ಟ ಮತ್ತು ಪ್ರಮಾಣದಲ್ಲಿ ರಾಜಿ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.ಮನೆಗೆ ಮರಳಲು ಉತ್ಸುಕನಾಗಿದ್ದ ತಾಲಿಬ್ ಯುದ್ಧವು ಶೀಘ್ರದಲ್ಲೇ ಕೊನೆಗೊಳ್ಳಲಿ ಎಂದು ಪ್ರಾರ್ಥಿಸುತ್ತಿರುವುದಾಗಿ ಹೇಳಿದರು.

ಇತ್ತೀಚಿನ ಇಸ್ರೇಲï-ಪ್ಯಾಲೆಸ್ತೀನ್ ಸಂಘರ್ಷವು ಅಕ್ಟೋಬರ್ 7 ರಂದು ಹಮಾಸ್ ಉಗ್ರಗಾಮಿಗಳು ಇಸ್ರೇಲ್ ವಿರುದ್ಧ ಅಭೂತಪೂರ್ವ ಮತ್ತು ಬಹು-ಹಂತದ ದಾಳಿಯಿಂದ ಪ್ರಚೋದಿಸಲ್ಪಟ್ಟಿದೆ. ದಾಳಿಗೆ ಸೇಡು ತೀರಿಸಿಕೊಳ್ಳಲು ಇಸ್ರೇಲ್ ಗಾಜಾದಲ್ಲಿ ಭಾರಿ ಪ್ರತಿದಾಳಿಯನ್ನು ಪ್ರಾರಂಭಿಸಿದೆ.

ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ, ಸಂಘರ್ಷ ಪ್ರಾರಂಭವಾದಾಗಿನಿಂದ ಗಾಜಾದಲ್ಲಿ 3,300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 12,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಇನ್ನೋರ್ವ ಪ್ಯಾಲೆಸ್ಟೀನಿಯನ್ ವಿದ್ಯಾರ್ಥಿನಿ ಅಲಿಯಾ ತನ್ನ ಪದವಿ ಕೋರ್ಸ್ ಮುಗಿಸಿ, ಯುದ್ಧ ಭುಗಿಲೆದ್ದಾಗ ಮನೆಗೆ ಮರಳಲು ಯೋಜಿಸುತ್ತಿದ್ದಳು. ತನ್ನ ಕುಟುಂಬದೊಂದಿಗೆ ಸಂಪರ್ಕವನ್ನು ಕಳೆದುಕೊಂಡಾಗಿನಿಂದ, ಅವಳು ನಿರಂತರವಾಗಿ ಪ್ಯಾನಿಕ್ ಅಟ್ಯಾಕ್ ಅನ್ನು ಅನುಭವಿಸುತ್ತಿದ್ದಾರೆ.

ನ.1ರಿಂದ ದೆಹಲಿಯಲ್ಲಿ ಡೀಸೆಲ್ ಬಸ್‌ಗಳ ಸಂಚಾರ ನಿಷೇಧ

ಪ್ಯಾಲೆಸ್ತೀನ್ ರಾಯಭಾರ ಕಚೇರಿಯು ಭಾರತದಲ್ಲಿನ ವಿದ್ಯಾರ್ಥಿಗಳಿಗೆ ಯಾವುದೇ ಸಹಾಯವನ್ನು ನೀಡಿಲ್ಲ ಮತ್ತು ಅವರಲ್ಲಿ ಹಲವರು ಸ್ವಂತವಾಗಿ ಬದುಕಲು ಹೆಣಗಾಡುತ್ತಿದ್ದಾರೆ ಎಂದು ಅಲಿಯಾ ಹೇಳಿದರು. ಭಾರತದಲ್ಲಿರುವ ಪ್ಯಾಲೆಸ್ತೀನ್ ರಾಯಭಾರ ಕಚೇರಿ ನಮಗೆ ಯಾವುದೇ ರೀತಿಯ ಬೆಂಬಲವನ್ನು ನೀಡಿಲ್ಲ ಅಥವಾ ನಮ್ಮ ಯೋಗಕ್ಷೇಮದ ಬಗ್ಗೆ ವಿಚಾರಿಸಿಲ್ಲ ಎಂದು ತನ್ನ ಸ್ನೇಹಿತರೊಂದಿಗೆ ವಾಸಿಸುತ್ತಿರುವ ಅಲಿಯಾ ಆರೋಪಿಸಿದ್ದಾರೆ.

ಇದೇ ರೀತಿಯ ಅನುಭವವನ್ನು -ಫಾರೂಕ್ ಹಂಚಿಕೊಂಡಿದ್ದಾರೆ, ಅವರು ಇನ್ನೂ ಒಂದು ವಾರ ಬದುಕಲು ಸಾಕಷ್ಟು ಹಣ ಉಳಿದಿದೆ ಎಂದು ಹೇಳಿದರು. ಆದಾಗ್ಯೂ, ಅವರ ಕೆಲವು ಗೆಳೆಯರು ಮತ್ತು ಶಿಕ್ಷಕರು ಅವರನ್ನು ಬೆಂಬಲಿಸಿದ್ದಾರೆ ಎಂದು ಅವರು ಹೇಳಿದರು.ಪ್ಯಾಲೇಸ್ಟಿನಿಯನ್ ವಿದ್ಯಾರ್ಥಿಗಳು ನಡೆಯುತ್ತಿರುವ ಸಂಘರ್ಷವು ಇಸ್ರೇಲ್ ಪರ ಇರುವ ಕೆಲವು ವಿದ್ಯಾರ್ಥಿಗಳೊಂದಿಗೆ ತಮ್ಮ ಸಂಬಂಧವನ್ನು ಅಡ್ಡಿಪಡಿಸಿದೆ ಎಂದು ಹೇಳಿದರು.

ನ.1ರಿಂದ ದೆಹಲಿಯಲ್ಲಿ ಡೀಸೆಲ್ ಬಸ್‌ಗಳ ಸಂಚಾರ ನಿಷೇಧ

ನವದೆಹಲಿ,ಅ.22- ವಾಯುಮಾಲಿನ್ಯ ನಿಯಂತ್ರಣಕ್ಕೆ ಬಾರದ ಕಾರಣ ನವೆಂಬರ್ 1ರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೀಸೆಲ್ ಬಸ್ಸುಗಳ ಸಂಚಾರವನ್ನು ನಿಷೇಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅಕ್ಟೋಬರ್ನಿಂದ ಫೆಬ್ರವರಿವರೆಗೆ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಮಾಲಿನ್ಯವು ಅತಿ ಹೆಚ್ಚಿರುತ್ತದೆ.

ಇದನ್ನು ತಡೆಯಲು ಕಾರ್ಖಾನೆಗಳನ್ನು ಮುಚ್ಚುವುದು, ಸಮ-ಬೆಸ ರೀತಿಯಲ್ಲಿ ವಾಹನಗಳನ್ನು ರಸ್ತೆಗಿಳಿಸುವುದು, ಹೆಚ್ಚು ಮಾಲಿನ್ಯವನ್ನು ಹೊರಸೂಸುವ ವಾಹನಗಳನ್ನು ನಿಷೇಸುವುದು, ಪಟಾಕಿ ಸಿಡಿಸದಂತೆ ಹಲವು ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ.ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಷ್ಟೇ ಕ್ರಮಗಳನ್ನು ಕೈಗೊಂಡರೂ ಅವು ತಾತ್ಕಾಲಿಕ ಕ್ರಮಗಳಾಗುತ್ತಿವೆ. ಇತ್ತೀಚೆಗೆ ಈ ವರ್ಷವೂ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದರೂ ವಾಯುಮಾಲಿನ್ಯ ತಗ್ಗದೆ ಮಿತಿಮೀರುತ್ತಲೇ ಇದೆ.

ಅಪಾಯಕಾರಿ ಆಟವಾಡುತ್ತಿದೆ ಹಿಜ್ಬುಲ್ಲಾ ಸಂಘಟನೆ : ಇಸ್ರೇಲ್

ಹೀಗಾಗಿ ನವೆಂಬರ್ 1ರಿಂದ ದೆಹಲಿ ಮತ್ತು ಎನ್ಸಿಆರ್ ಪ್ರದೇಶದಲ್ಲಿ ಡೀಸೆಲ್ ಚಾಲಿತ ಬಸ್ಗಳನ್ನು ಓಡಿಸಲು ಅನುಮತಿಸುವುದಿಲ್ಲ ಎಂದು ವಾಯು ಗುಣಮಟ್ಟ ನಿರ್ವಹಣಾ ಆಯೋಗ ಘೋಷಿಸಿದೆ.ಡೀಸೆಲ್ ಬಸ್ಗಳನ್ನು ಸ್ಥಗಿತಗೊಳಿಸಿ ಎಲೆಕ್ಟ್ರಿಕ್, ಸಿಎನ್ಜಿ ಮತ್ತು ಬಿಎಸ್ 6 ಡೀಸೆಲ್ ಬಸ್ಗಳಿಗೆ ಮಾತ್ರ ಅನುಮತಿಸಲಾಗುವುದು. ಜೊತೆಗೆ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಸುವಂತೆ ದೆಹಲಿ ಸರ್ಕಾರ ಕೇಂದ್ರವನ್ನು ಕೋರಿದೆ.

ಕೇಂದ್ರ ಸಚಿವ ಭೂಪೇಂದರ್ ಯಾದವ್ ಅವರು ನಿನ್ನೆ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಪರಿಸರ ಸಚಿವರೊಂದಿಗೆ ದೀಪಾವಳಿ ಸಮಯದಲ್ಲಿ ವಾಯುಮಾಲಿನ್ಯವನ್ನು ತಡೆಯುವ ಉದ್ದೇಶದಿಂದ ಸಭೆ ನಡೆಸಿದ್ದರು. ಚಳಿಗಾಲದಲ್ಲಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿರುತ್ತದೆ. ಎನ್ಸಿಆರ್ ವ್ಯಾಪ್ತಿಯ ಪ್ರದೇಶಗಳಲ್ಲಿ ವಾಯು ಮಾಲಿನ್ಯ ತಡೆಗಟ್ಟಲು ಆಯಾ ರಾಜ್ಯಗಳು ಜಂಟಿ ಕ್ರಮವನ್ನು ಸಿದ್ಧಪಡಿಸಬೇಕು ಸೂಚಿಸಲಾಗಿದೆ.

ಪಟಾಕಿ ಸಿಡಿಸುವುದನ್ನು, ತ್ಯಾಜ್ಯ ಸುಡುವುದನ್ನು ಸಂಪೂರ್ಣವಾಗಿ ನಿಷೇಸಬೇಕು. ಸಿಎನ್ಜಿ ಹಾಗೂ ಎಲೆಕ್ಟ್ರಿಕ್ ವಾಹನಗಳನ್ನೇ ಬಳಸಬೇಕು. ಕಾರ್ಖಾನೆಗಳಲ್ಲಿ ಮಾಲಿನ್ಯಕಾರಕ ಇಂಧನಗಳನ್ನು ಸಂಸ್ಕರಿಸಿದ ನೈಸರ್ಗಿಕ ಅನಿಲವನ್ನಾಗಿ ಪರಿವರ್ತಿಸಲು, ಇಟ್ಟಿಗೆ ಗೂಡುಗಳ ಮಾಲಿನ್ಯವನ್ನು ನಿಯಂತ್ರಿಸಲು ಜಿಗ್ಜಾಗ್ ತಂತ್ರಜ್ಞಾನವನ್ನು ಬಳಸಲು, ಎನ್ಸಿಆರ್ನ ಎಲ್ಲಾ ಪ್ರದೇಶಗಳಲ್ಲಿ ಡೀಸೆಲ್ ಜನರೇಟರ್ಗಳನ್ನು ಅವಲಂಬಿಸದೆ ವಿದ್ಯುತ್ ಲಭ್ಯವಾಗುವಂತೆ ಮಾಡಲು ದೆಹಲಿ ಸಚಿವ ಗೋಪಾಲ್ ರಾಯ್ ಕೇಳಿಕೊಂಡಿದ್ದಾರೆ.

ಆದರೆ ಸಿಎನ್ಜಿ, ಎಲೆಕ್ಟ್ರಿಕ್ ಮತ್ತು ಬಿಎಸ್ 6 ಬಸ್ಗಳು ಮಾತ್ರ ಓಡಬೇಕಾದರೆ, ಅವರ ಬಳಿ ಕೇವಲ 150 ವಾಹನಗಳಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ನ.1ರಿಂದ ಡೀಸೆಲ್ ಬಸ್ಗಳನ್ನು ಬಂದ್ ಮಾಡಿದರೆ ಸಮಸ್ಯೆಯಾಗಲಿದೆ ಎಂಬ ವಾದಗಳು ಕೇಳಿಬಂದಿವೆ. ಅದರಲ್ಲೂ ಹಬ್ಬ ಹರಿದಿನಗಳಲ್ಲಿ 400 ಬಸ್ಗಳು ಸಂಚರಿಸುವ ಮಾರ್ಗಗಳಲ್ಲಿ ಕೇವಲ 150 ಬಸ್ಗಳು ಓಡಾಡಿದರೆ ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್‌ನಿಂದ ಅಂತರ ಕಾಯ್ದುಕೊಳ್ಳಲು ಕೇರಳ ಘಟಕ ತೀರ್ಮಾನ

ತಿರುವನಂತಪುರಂ, ಅ 22 (ಪಿಟಿಐ) – ಬಿಜೆಪಿ ಜೊತೆಗಿನ ತಮ್ಮ ಪಕ್ಷದ ಮೈತ್ರಿ ಕುರಿತು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರ ಹೇಳಿಕೆ ವಿವಾದದ ತೀವ್ರತೆಯ ನಡುವೆಯೇ, ಕೇರಳ ಜೆಡಿಎಸ್ ರಾಜ್ಯ ಘಟಕವು ಸ್ವತಂತ್ರವಾಗಿ ನಿಲ್ಲಲು ನಿರ್ಧರಿಸಿದೆ ಎಂದು ಕೇರಳ ವಿದ್ಯುತ್ ಸಚಿವ ಕೆ.ಕೃಷ್ಣನ್ಕುಟ್ಟಿ ಹೇಳಿದ್ದಾರೆ.

ನಾನು ಮತ್ತು ರಾಜ್ಯ ಜೆಡಿಎಸ್ ಅಧ್ಯಕ್ಷ ಮ್ಯಾಥ್ಯೂ ಟಿ ಥಾಮಸ್ ಕರ್ನಾಟಕದಲ್ಲಿ ಪಕ್ಷದ ನಾಯಕತ್ವವನ್ನು ಭೇಟಿಯಾಗಿ ಬಿಜೆಪಿಯೊಂದಿಗೆ ಮೈತ್ರಿ ಸ್ವೀಕಾರಾರ್ಹವಲ್ಲ ಎಂದು ತಿಳಿಸಿರುವುದಾಗಿ ಕೃಷ್ಣನ್ಕುಟ್ಟಿ ಹೇಳಿದರು. ಅವರು ಮಾಡಿದ್ದು ಸರಿಯಲ್ಲ ಎಂದು ನಾವು ಹೇಳಿದ್ದೇವೆ ಎಂದು ಟಿವಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಅಪಾಯಕಾರಿ ಆಟವಾಡುತ್ತಿದೆ ಹಿಜ್ಬುಲ್ಲಾ ಸಂಘಟನೆ : ಇಸ್ರೇಲ್

ನಾವು ಸಂಬಂಧವನ್ನು ಕೊನೆಗೊಳಿಸುತ್ತಿದ್ದೇವೆ ಮತ್ತು ನಾವು ಸ್ವತಂತ್ರವಾಗಿ ಉಳಿಯುತ್ತೇವೆ ಎಂದು ನಾವು ಅವರಿಗೆ ತಿಳಿಸಿದ್ದೇವೆ ಮತ್ತು ನಂತರ ನಾವು ಹಿಂತಿರುಗಿದ್ದೇವೆ. ನಾವು ಇಲ್ಲಿ ಸಮಿತಿ ಸಭೆ ನಡೆಸಿದ್ದೇವೆ ಮತ್ತು ಸ್ವತಂತ್ರವಾಗಿ ನಿಲ್ಲಲು ನಿರ್ಧರಿಸಿದ್ದೇವೆ. ಎಲ್ಲರೂ ಅದನ್ನು ಒಪ್ಪಿದ್ದಾರೆ ಮತ್ತು ಅದು ವಾಸ್ತವಿಕ ನಿಲುವು ಎಂದು ಅವರು ಹೇಳಿದರು.

ಕಾಂಗ್ರೆಸ್ ನೇತೃತ್ವದ ಯುಡಿಎಫ್ಮೈತ್ರಿಯು ರಾಜ್ಯದಲ್ಲಿ ಆಡಳಿತಾರೂಢ ಸಿಪಿಐ(ಎಂ) ರಾಷ್ಟ್ರಮಟ್ಟದಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿರುವ ಜೆಡಿ(ಎಸ್) ಜೊತೆಗಿನ ಸಂಬಂಧವನ್ನು ಕಡಿದುಕೊಂಡಿಲ್ಲ ಎಂದು ಆರೋಪಿಸುತ್ತಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕರ್ನಾಟಕದಲ್ಲಿ ಬಿಜೆಪಿಯೊಂದಿಗೆ ಎಲ್ಡಿಎ-ïನ ಪಾಲುದಾರ ಜೆಡಿಎಸ್ ಮೈತ್ರಿಯನ್ನು ಅನುಮೋದಿಸಿದ್ದಾರೆ ಎಂಬ ಹೇಳಿಕೆಯನ್ನು ತಳ್ಳಿಹಾಕಿದರು ಮತ್ತು ಇದು ಆಧಾರರಹಿತ ಮತ್ತು ಸತ್ಯದಿಂದ ದೂರವಿದೆ ಎಂದು ಹೇಳಿದ್ದಾರೆ.