Friday, November 7, 2025
Home Blog Page 1890

ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ 235 ಭಾರತೀಯರು

ನವದೆಹಲಿ, ಅ.14- ಯುದ್ಧಪೀಡಿತ ಇಸ್ರೇಲ್‍ನಲ್ಲಿ ಸಿಲುಕಿಕೊಂಡಿದ್ದ 235 ಮಂದಿ ಭಾರತೀಯರು ಇಂದು ತಾಯ್ನಾಡಿಗೆ ಮರಳಿದ್ದಾರೆ. ಇಸ್ರೇಲ್ ಮತ್ತು ಪ್ಯಾಲೆಸ್ತೇನ್‍ನಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಆಪರೇಷನ್ ಅಜಯ್ ಕಾರ್ಯಾಚರಣೆಯನ್ನು ಆರಂಭಿಸಿದೆ.

ನಿನ್ನೆಯಷ್ಟೇ ಇಸ್ರೇಲ್‍ನಿಂದ 230 ಮಂದಿ ಭಾರತೀಯರು ಆಗಮಿಸಿದ್ದರು. ಇಂದು ಬೆಳಿಗ್ಗೆ ವಿಶೇಷ ವಿಮಾನದಲ್ಲಿ 235 ಮಂದಿ ಪ್ರಯಾಣಿಕರನ್ನು ಹೊತ್ತೊಯ್ದ ವಿಮಾನವು ಮುಂಜಾನೆ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಆಗಮಿಸಿತು.

ಭಾರತಕ್ಕೆ ಬಂದವರಲ್ಲಿ ಒಂಬತ್ತು ಮಂದಿ ಕನ್ನಡಿಗರು ಸೇರಿದ್ದಾರೆ. ಇದರಲ್ಲಿ ಮೈಸೂರಿನ ಐವರು ಹಾಗೂ ಬೆಂಗಳೂರಿನ ಬಸವನಗುಡಿಯ ನಾಲ್ಕು ಮಂದಿ ಸೇರಿದ್ದಾರೆ. ತಾಯ್ನಾಡಿಗೆ ಬಂದ ಭಾರತೀಯರನ್ನು ಕೇಂದ್ರ ಸಚಿವ ರಾಜಕುಮಾರ್ ರಾಜನ್‍ಸಿಂಗ್ ಅವರು ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.

ಸ್ವದೇಶಕ್ಕೆ ಬಂದ ಭಾರತೀಯರು ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ವೇಳೆ ಕೆಲವರು ಭಾವುಕರಾಗಿ ತಮ್ಮ ಪೋಷಕರು ಮತ್ತು ಸಂಬಂಕರನ್ನು ನೋಡುತ್ತಿದ್ದಂತೆ ಕಂಬನಿ ಮಿಡಿದರು. ನಾವು ಪುನಃ ನಮ್ಮ ದೇಶಕ್ಕೆ ಬರುತ್ತೇವೆಂಬ ನಂಬಿಕೆಯನ್ನೇ ಇಟ್ಟುಕೊಂಡಿರಲಿಲ್ಲ. ಅಲ್ಲಿನ ಪರಿಸ್ಥಿತಿ ನಿಜಕ್ಕೂ ಕ್ಷಣಕ್ಷಣಕ್ಕೂ ಭೀಕರವಾಗಿದೆ. ಬದುಕುತ್ತೇವೆ ಎಂಬ ಭರವಸೆಯನ್ನೇ ಕಳೆದುಕೊಂಡಿದ್ದೆವು. ಕೇಂದ್ರ ಸರ್ಕಾರ ಆಪರೇಷನ್ ಅಜಯ್ ದ ಮೂಲಕ ಭಾರತೀಯರನ್ನು ಸ್ವದೇಶಕ್ಕೆ ಕರೆಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಪ್ರಿಯಾಂಕಾ ವಾದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಕೇಂದ್ರ ಸರ್ಕಾರಕ್ಕೆ ನಾವು ಎಷ್ಟು ಅಭಿನಂದನೆ ಸಲ್ಲಿಸಿದರೂ ಸಾಲದು. ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ನಾವು ಸುರಕ್ಷಿತವಾಗಿ ಬಂದಿದ್ದೇವೆ ಎಂದರೆ ಅಚ್ಚರಿಯೇ ಸರಿ. ನಮಗೆ ಕುಡಿಯಲು ಒಂದಿಷ್ಟು ನೀರು, ಹಣ್ಣು ಬಿಟ್ಟರೆ ಏನೂ ಸಿಗುತ್ತಿರಲಿಲ್ಲ. ಸರಿಯಾದ ಸಮಯಕ್ಕೆ ಕೇಂದ್ರ ಸರ್ಕಾರ ನಮ್ಮನ್ನು ಕರೆಸಿಕೊಂಡಿದೆ. ಇದಕ್ಕಾಗಿ ನಾವು ಸದಾ ಕೃತಜ್ಞತರಾಗಿರುತ್ತೇವೆ ಎಂದು ಅನೇಕರು ಭಾವುಕರಾಗಿ ಹೇಳಿದರು.

ಸೈನಿಕರ ಬಲಿದಾನಕ್ಕಿಂತ ಹೆಚ್ಚಾಯ್ತಾ ಕ್ರಿಕೆಟ್ : ಬಿಸಿಸಿಐ ವಿರುದ್ಧ ರೊಚ್ಚಿಗೆದ್ದ ದೇಶಪ್ರೇಮಿಗಳು

ಬೆಂಗಳೂರು,ಅ.14- ಗಡಿಯಲ್ಲಿ ಪಾಕ್ ಪ್ರೇರಿತ ಭಯೋತ್ಪಾದಕರು ಭಾರತೀಯ ಸೈನಿಕರನ್ನು ಕಗ್ಗೊಲೆ ಮಾಡುತ್ತಿದ್ದು, ದೇಶದ ಭದ್ರತೆಗೆ ಆತಂಕ ಸೃಷ್ಟಿಸುತ್ತಿರುವ ಇಂತಹ ಕ್ಲಿಷ್ಟ ಸಮಯದಲ್ಲಿ ವಿಶ್ವಕಪ್ ಪಂದ್ಯಾವಳಿಗಾಗಿ ಆಗಮಿಸಿರುವ ಪಾಕಿಸ್ತಾನದ ಕ್ರಿಕೆಟಿಗರಿಗೆ ಬಿಸಿಸಿಐ ಅದ್ಧೂರಿ ಸ್ವಾಗತ ನೀಡಿ, ಐಷಾರಾಮಿ ಆತಿಥ್ಯ ನೀಡಿರುವುದು ದೇಶಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಒಂದೆಡೆ ದೇಶಪ್ರೇಮ, ಭಾರತದ ಭದ್ರತೆ, ಭಯೋತ್ಪಾದನೆ ವಿರುದ್ಧ ಹೋರಾಟ ಎಂಬೆಲ್ಲಾ ಘೋಷಣೆಗಳ ಮೂಲಕ ಜನಸಾಮಾನ್ಯರ ಮನಸ್ಸನ್ನು ಉದ್ದಿಪ್ಪನಗೊಳಿಸುವುದು ಮತ್ತೊಂದೆಡೆ ಬಿಸಿಸಿಐ ನಂತಹ ಶ್ರೀಮಂತ ಕ್ರಿಕೆಟ್ ಸಂಸ್ಥೆ ಕ್ರೀಡೆಯಲ್ಲೂ ವ್ಯಾಪಾರ ದೃಷ್ಟಿಯನ್ನು ಅನುಸರಿಸಿ ಸಾಂಪ್ರದಾಯಿಕ ಎದುರಾಳಿಗಳನ್ನು ಗಣ್ಯ ಅತಿಥಿಗಳಂತೆ ಪರಿಗಣಿಸುವುದು ವಿಪರ್ಯಾಸಗಳಿಗೆ ಕಾರಣವಾಗಿದೆ.

ಇಂದು ಗುಜರಾತ್‍ನ ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ-ಪಾಕಿಸ್ತಾನದ ನಡುವೆ ಏಕದಿನ ವಿಶ್ವಕಪ್ ಸರಣಿ ಆಯೋಜನೆಗೊಂಡಿದೆ. ಅದಕ್ಕಾಗಿ ಭಾರತಕ್ಕೆ ಆಗಮಿಸಿದ ಭಾರತೀಯ ಕ್ರಿಕೆಟಿಗರನ್ನು ಬಿಸಿಸಿಐ ಅದ್ಧೂರಿ ಸ್ವಾಗತ ಕೋರಿದೆ.ಪ್ರತಿಯೊಬ್ಬ ಕ್ರಿಕೆಟ್ ಆಟಗಾರನಿಗೂ ದೇಶದ ವಿವಿಧೆಡೆಯ ಐಷಾರಾಮಿ ಹೋಟೆಲ್‍ಗಳಲ್ಲಿ ಗಣ್ಯ ಆತಿಥ್ಯ ಒದಗಿಸಲಾಗಿದೆ. ಪ್ರತಿಯೊಂದು ಕೊಠಡಿಗೂ 70 ಸಾವಿರದಿಂದ 4.50 ಲಕ್ಷದವರೆಗೂ ಬಾಡಿಗೆ ಪಾವತಿಸಿ ವಸತಿ ಕಲ್ಪಿಸಲಾಗಿದೆ.

ಇದಿಷ್ಟೇ ಅಲ್ಲದೆ, ಬೇರೆ ಯಾವ ದೇಶದ ತಂಡಕ್ಕೂ ಇಲ್ಲದಂತಹ ಗೌರವಾಧಾರಗಳನ್ನು ಪಾಕ್ ತಂಡಕ್ಕೆ ನೀಡಲಾಗಿದೆ ಎಂಬ ಆರೋಪಗಳಿವೆ. ಪಾಕ್ ಆಟಗಾರರಿಗೆ ಭಾರತೀಯ ಸಾಂಪ್ರದಾಯಿಕ ಶಾಲು ಹೊದಿಸಿ, ಹಾರ ತುರಾಯಿ ಹಾಕಿ, ನೃತ್ಯಗಾರರ ಮೂಲಕ ಅವರನ್ನು ಬರಮಾಡಿಕೊಳ್ಳಲಾಗಿದೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಕ್ರಿಸ್ಟಿಯಾನೊ ರೊನಾಲ್ಡೊಗೆ ಕಾದಿದೆ 99 ಛಡಿ ಏಟಿನ ಶಿಕ್ಷೆ..!

ಭಾರತದ ಖ್ಯಾತ ಗಾಯಕರಾದ ಹರಿಜಿತ್ ಸಿಂಗ್, ಸುಖುವಿಂದರ್ ಸಿಂಗ್, ಸುನಿದಿ ಚೌವ್ಹಾಣ್, ನೇಹಾ ಕಾಕ್ಕರ್, ಶಂಕರ್ ಮಹದೇವನ್ ಸೇರಿದಂತೆ ಹಲವರು ಪಾಕ್ ಕ್ರೀಡಾಳುಗಳ ಎದುರು ಸಂಗೀತ ರಸಸಂಜೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.ಪಾಕ್ ಕ್ರಿಕೆಟಿಗರಿಗೆ ವಿಶೇಷ ಆತಿಥ್ಯ ವ್ಯವಸ್ಥೆ ಮಾಡಿದ್ದಕ್ಕಾಗಿ ಬಿಸಿಸಿಐ ಜೊತೆಗೆ ಅದರ ಕಾರ್ಯದರ್ಶಿ ಜಯ್ ಶಾ ವಿರುದ್ಧವೂ ಆಕ್ರೋಶ ಭುಗಿಲೆದ್ದಿದೆ.

ಪಾಕ್ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಇಸ್ರೇಲ್ ಮೇಲೆ ದಾಳಿ ಮಾಡಿದ ಹಮಾಸ್ ಉಗ್ರರನ್ನು ಬೆಂಬಲಿಸಿದ್ದ. ಆತನ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಏಕೆ ಕ್ರಮ ಕೈಗೊಳ್ಳಲಿಲ್ಲ. ಆತನನ್ನು ಭಾರತಕ್ಕೆ ಬಂದು ಆಟವಾಡಲು ಏಕೆ ಅವಕಾಶ ನೀಡಲಾಗಿದೆ ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

ಈ ಹಿಂದೆ ಎಂ.ಎಸ್.ದೋನಿ ಅವರು ಭಾರತೀಯ ಸೇನೆಯ ಚಿನ್ಹೆಯನ್ನು ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್ ಮೇಲೆ ಹಾಕಿಕೊಂಡಿದ್ದರು ಅದನ್ನು ತೆರವುಗೊಳಿಸುವಂತೆ ಐಸಿಸಿ ಸೂಚನೆ ನೀಡಿತ್ತು. ಐಸಿಸಿ ಯ ಆದಾಯಕ್ಕೆ ಬಿಸಿಸಿಐ ಶೇ. 40 ರಷ್ಟು ಪಾಲು ನೀಡುತ್ತಿದೆ. ಇಂತಹ ಶ್ರೀಮಂತ ಸಂಸ್ಥೆ ಐಸಿಸಿ ನಿರ್ಣಯಗಳ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗಲಿಲ್ಲವೆ, ಪಾಕ್‍ನೊಂದಿಗಿನ ಭಾರತದ ಮನೋಧೋರಣೆಯನ್ನು ಅರ್ಥ ಮಾಡಿಸಲು ವೈಫಲ್ಯವಾಗಿದ್ದೇಕೆ ಎಂದು ಕಿಡಿ ಕಾರಲಾಗುತ್ತಿದೆ.

ಐಸಿಸಿ ಹೇಳಿದಾಕ್ಷಣ ಪಾಕ್ ಕ್ರಿಕೆಟಿಗರಿಗೆ ಪುಷ್ಪವೃಷ್ಟಿ ಮಾಡಿ ಸ್ವಾಗತಿಸುವ ಅಗತ್ಯವಿತ್ತೇ, ಗಡಿಯಲ್ಲಿ ಪದೇಪದೇ ಭಾರತೀಯ ಸೈನಿಕರ ಬಲಿದಾನವನ್ನು ಕ್ರಿಕೆಟ್ ಸಂಸ್ಥೆ ಮರೆತಿದ್ದೇಕೆ, ಅವರ ಕುಟುಂಬದ ಸದಸ್ಯರ ನೋವಿಗೆ ಸ್ಪಂದಿಸದೇ ಇರುವುದು ಯಾವ ದೇಶಪ್ರೇಮ ಎಂದು ಪ್ರಶ್ನಿಸಲಾಗಿದೆ.

ಪಾಕ್ ಕ್ರಿಕೆಟಿಗರಿಗೆ ರೊಟ್ಟಿ ತಿನ್ನಲು ಗತಿಯಿಲ್ಲ. ಅಂತವರನ್ನು ಭಾರತಕ್ಕೆ ಕರೆತಂದು ಲಕ್ಷಾಂತರ ರೂ.ಗಳ ಖರ್ಚು ಮಾಡಿ ಐಷಾರಾಮಿ ಹೋಟೆಲ್‍ನಲ್ಲಿರಿಸಿ ಬಿರಿಯಾನಿ ತಿನಿಸುವ ಅಗತ್ಯವೇನಿದೆ. ಭಾರತ ಕ್ರಿಕೆಟ್ ಪಂದ್ಯಾವಳಿಯನ್ನು ನಿಷೇಸಬೇಕು ಎಂಬ ಕೂಗುಗಳಿವೆ.ಒಂದೆಡೆ ಗಡಿಯಾಚೆಗಿನ ಭಯೋತ್ಪಾದನೆ ಕಾರಣಕ್ಕಾಗಿ ಪಾಕ್‍ನೊಂದಿಗಿನ ರಾಜತಾಂತ್ರಿಕ, ವಾಣಿಜ್ಯೋದ್ಯಮ ಸಂಬಂಧಗಳಿಗೆ ಭಾರತ ಕಡಿವಾಣ ಹಾಕಿದೆ.

ದೇಶದ ಜನರಲ್ಲಿ ಪಾಕ್ ವಿರುದ್ಧವಾಗಿರುವ ಅಸಹನೆಯನ್ನು ಗೌರವಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕ್ರೀಡೆಯ ನೆಪದಲ್ಲಿ ಸಾಂಪ್ರದಾಯಿಕ ಎದುರಾಳಿಗಳಿಗೆ ರಾಜಮರ್ಯಾದೆ ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆ ಕಾಡುತ್ತಿದೆ.

ಕ್ರಿಸ್ಟಿಯಾನೊ ರೊನಾಲ್ಡೊಗೆ ಕಾದಿದೆ 99 ಛಡಿ ಏಟಿನ ಶಿಕ್ಷೆ..!

ಟೆಹ್ರನ್,ಅ.14-ಬ್ರಿಜಿಲ್‍ನ ಖ್ಯಾತ ಪುಟ್‍ಬಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಇರಾನ್‍ಗೆ ಭೇಟಿ ನೀಡಿ ವೇಳೆ ವಿಕಲಚೇತನ ಅಭಿಮಾನಿಯೊಬ್ಬಳಿಗೆ ಸಹಿ ಮಾಡಿದ ಶರ್ಟ್ ನೀಡಿ ತಬ್ಬಿಕೊಂಡು ಕೆನ್ನೆಗೆ ಮುತ್ತು ನೀಡಿದ್ದಕ್ಕೆ ಇಲ್ಲಿನ ನ್ಯಾಯಾಲಯ 99 ಛಡಿ ಏಟಿನ ಶಿಕ್ಷೆ ವಿಸಿದೆ.
ಅಭಿಮಾನದ ಪ್ರೀತಿ ಮತ್ತು ಕೃತಜ್ಞತೆಯ ಅಭಿವ್ಯಕ್ತಿಯಾಗಿ ಮಹಿಳೆಯನ್ನು ತಬ್ಬಿಕೊಂಡಿದ್ದಕ್ಕಾಗಿ ಉದ್ಧಟತನ , ವ್ಯಭಿಚಾರದಂತೆ ವರ್ತಿಸಲಾಗಿದೆ ಎಂದು ದೂಷಿಸಿ ಇರಾನಿನ ನ್ಯಾಯಾಂಗ ವ್ಯವಸ್ಥೆಯು ಶಿಕ್ಷೆ ವಿಸುತ್ತದೆ.

ಇರಾನಿನ ಮಾಧ್ಯಮಗಗಳ ಪ್ರಕಾರ ಕಳೆದ ಸೆಪ್ಟೆಂಬರ್‍ನಲ್ಲಿ ಏಷ್ಯನ್ ಚಾಂಪಿಯನ್ಸ್ ಲೀಗ್‍ನಲ್ಲಿ ಆಡಲು ತನ್ನ ತಂಡದೊಂದಿಗೆ ಟೆಹ್ರಾನ್‍ಗೆ ಪ್ರಯಾಣಿಸಿದಾಗ ಈ ಘಟನೆ ನಡೆದಿದೆ ನಂತರ ಇದನ್ನು ಗಂಭೀರವಾಗಿ ಪರಿಗಣಿಸಿ ಇರಾನಿನ ನ್ಯಾಯಾಂಗ ವ್ಯವಸ್ಥೆಯು ಅವನಿಗೆ ಶಿಕ್ಷೆಯನ್ನು ವಿಸಿತು ಈಗ ಕ್ರಿಸ್ಟಿಯಾನೋ ರೊನಾಲ್ಡೊ ಇರಾನ್‍ನಲ್ಲಿ ವ್ಯಭಿಚಾರದ ಆರೋಪ ಹೇರಲಾಗಿದೆ.

ದಸರಾ ರಜೆಗಳ ಪ್ರಯುಕ್ತ ಕೆಎಸ್ಆರ್‌ಟಿಸಿಯಿಂದ 2000ಕ್ಕೂ ಹೆಚ್ಚು ವಿಶೇಷ ಬಸ್

ಹಲವಾರು ಮಂದಿ ಇರಾನಿನ ವಕೀಲರು ಕ್ರಿಸ್ಟಿಯಾನೋ ರೊನಾಲ್ಡೊ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಇರಾನಿನ ಮಾಧ್ಯಮ ಹೇಳಿಕೊಂಡಿದೆ ಈ ಕ್ರಮ ಇರಾನಿನ ಕಾನೂನಿಗೆ ಅನುಸಾರವಾಗಿದೆ. ಅವಿವಾಹಿತ ಮಹಿಳೆಯನ್ನು ಮುಟ್ಟುವುದು ವ್ಯಭಿಚಾರದಂತೆ ಎಂದು ಪ್ರಸಾರ ಮಾಡಿದೆ.

ಭೇಟಿಯ ಸಮಯದಲ್ಲಿ ಪಾಶ್ರ್ವವಾಯುವಿಗೆ ಒಳಗಾಗಿರುವ ಪುಟ್‍ಬಾಲ್ ಅಭಿಮಾನಿ ಫತೇಮೆ ಹಮಾಮಿಗೆ ಸಹಿ ಮಾಡಿದ ಶರ್ಟ್ ಮತ್ತು ಅಪ್ಪುಗೆ ಮತ್ತು ಕೆನ್ನೆಗೆ ಮುತ್ತು ನೀಡಿದ್ದರು. ಮಾನವೀಯತೆಗೆ ಬಲೆ ಇಲ್ಲದೆ ಈ ಶಿಕ್ಷೆ ವಿಸಿರುವುದು ದುರಾದೃಷ್ಠಕರ ಎಂದು ವಿಶ್ವಾದ್ಯಂತ ಅಭಿಮಾನಿಗಳು ಕಿಡಿಕಾರಿದ್ದಾರೆ.

ಪಂಚರಾಜ್ಯಗಳ ಚುನಾವಣೆಯಲ್ಲಿ 42 ಕೋಟಿ ರೂ. ಪ್ರತಿಧ್ವನಿ

ಬೆಂಗಳೂರು,ಅ.14- ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ನಿವಾಸದಲ್ಲಿ ಐಟಿ ಅಧಿಕಾರಿಗಳು ಜಪ್ತಿ ಮಾಡಿರುವ 42 ಕೋಟಿ ನಗದು ಪ್ರಕರಣ ಪಂಚರಾಜ್ಯಗಳ ವಿಧಾನಸಭೆ ಚುನಾವಣಾ ಪ್ರಚಾರದಲ್ಲೂ ಪ್ರತಿಧ್ವನಿಸಲಿದೆ. ಈ ಹಿಂದೆ ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ 40% ಕಮೀಷನ್ ಆರೋಪ ಭಾರೀ ಸದ್ದು ಮಾಡಿತ್ತು. ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕ ವಾದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕರು ಇದನ್ನೇ ಪ್ರಸ್ತಾಪಿಸಿ ಬಿಜೆಪಿಗೆ ಮುಜುಗರ ಸೃಷ್ಟಿಸಿದ್ದರು.

ಕರ್ನಾಟಕ ಮಾತ್ರವಲ್ಲದೆ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ವಿರುದ್ದವೂ ಪೇ ಕಮಿಷನ್ ಆರೋಪ ಮಾಡಲು ಸಜ್ಜಾಗಿತ್ತು. ಇದು ಒಂದು ರೀತಿ ಬಿಜೆಪಿಗೆ ಉಗಳಲು ಆಗದ, ನುಂಗಲೂ ಆಗದ ಬಿಸಿತುಪ್ಪವಾಗಿ ಪರಿಣಮಿಸಿತ್ತು.

ಇದೀಗ ಕಾಂಗ್ರೆಸ್ ಮಾಡಿದ ಆರೋಪವೇ ತಿರುಗು ಬಾಣವಾಗುವ ಸಾಧ್ಯತೆ ನಿಚ್ಚಳವಾಗಿದೆ. ಪಂಚರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಘಡ, ತೆಲಂಗಾಣ ಮತ್ತು ಮಿಜೋರಾಂಗಳಲ್ಲಿ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಐಟಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುವ 42 ಕೋಟಿ ಬೃಹತ್ ಹಗರಣ ಬಿಜೆಪಿಯ ಪ್ರಮುಖ ಪ್ರಚಾರದ ಅಸ್ತ್ರವಾಗಲಿದೆ.

ಮೊಬೈಲ್ ಚಟ ಪ್ರಶ್ನಿಸಿದ ತಾಯಿಯನ್ನೇ ಕೊಂದ ಮಗ

ಐದೂ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ , ಕೇಂದ್ರ ಗೃಹ ಸಚಿವ ಅಮಿತ್ ಷಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಮತ್ತಿತರ ತಾರಾ ಪ್ರಚಾರಕರು 42 ಕೋಟಿ ವಿಷಯವನ್ನೇ ಕಾಂಗ್ರೆಸ್‍ಗೆ ತಿರುಗಿಸಲು ಮುಂದಾಗಿದೆ.

ಅಧಿಕಾರಕ್ಕೆ ಬಂದು ಕೇವಲ 4 ತಿಂಗಳ ಅವಧಿಯಲ್ಲಿ ಗುತ್ತಿಗೆದಾರನ ಬಳಿ ಇಷ್ಟು ದೊಡ್ಡ ಮೊತ್ತದ ಹಣ ಸಿಕ್ಕಿರುವುದರಿಂದ ಹಿಂದೆ ಕೆಲವು ಪ್ರಭಾವಿ ನಾಯಕರ ಕೃಪಾಕಟಾಕ್ಷವಿದೆ. ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಕೂಡ ಹೊರತಾಗಿಲ್ಲ ಎಂಬುದನ್ನು ಬಿಂಬಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಸಣ್ಣದೊಂದು ವಿಷಯವನ್ನು ಸಹ ಬಿಡದೆ ಕಾಂಗ್ರೆಸ್ ಜನ್ಮ ಜಾಲಾಡುವ ಮೋದಿ ಅವರು ಇದೀಗ ಅಂಬಿಕಾಪತಿ ಪ್ರಕರಣವನ್ನು ಪದೇ ಪದೇ ಪ್ರಸ್ತಾಪಿಸಿ ಕಾಂಗ್ರೆಸ್‍ಗೆ ಮುಜುಗರ ತರಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.

40% ಪ್ರಕರಣಕ್ಕೆ ತಿರುವು ಸಾಧ್ಯತೆ:
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಹೊರಿಸಿದ್ದರು. ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬೇಕಿದ್ದರೆ 40% ಕಮಿಷನ್ ಕೊಡಬೇಕಾದ ಪರಿಸ್ಥಿತಿ ಇದೆ ಎಂಬ ಆರೋಪ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಆಗಿನ ವಿರೋಧ ಪಕ್ಷ ಕಾಂಗ್ರೆಸ್ ಈ ಪ್ರಕರಣವನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿತ್ತು.

ಪೇಟಿಎಂ ಮಾದರಿಯಲ್ಲಿ ಪೇಸಿಎಂ ಎಂಬ ಪೋಸ್ಟರ್ ತಯಾರಿಸಿ ರಾಜಧಾನಿಯ ಗೋಡೆಗಳ ಮೇಲೆ ರಾತ್ರೋರಾತ್ರಿ ಅಂಟಿಸುವ ಮೂಲಕ ಈ ಆರೋಪ ಇನ್ನಷ್ಟು ಜೀವ ಪಡೆಯುವಂತೆ ಮಾಡಲಾಗಿತ್ತು. ಆದರೆ ಇದೀಗ ಆ 40% ಕಮಿಷನ್ ಆರೋಪ ಪ್ರಕರಣ ತಿರುವು ಪಡೆದರೂ ಅಚ್ಚರಿ ಏನಲ್ಲ.

40 ವರ್ಷಗಳ ನಂತರ ಮತದಾನದ ಭಾಗ್ಯ ಪಡೆದ ನಿವಾಸಿಗಳು

ಅಂದಿನ 40% ಕಮಿಷನ್ ಆರೋಪ ಪ್ರಕರಣ ತಿರುವು ಪಡೆಯುವ ಸಾಧ್ಯತೆ ಒಂದೆಡೆಯಾದರೆ, ಇನ್ನೊಂದೆಡೆ ಈ ಪ್ರಕರಣ ತಿರುಗುಬಾಣ ಆಗುವ ಲಕ್ಷಣಗಳೂ ಕಾಣಿಸುತ್ತಿವೆ. ಏಕೆಂದರೆ ಅಂದು ಈ ಪ್ರಕರಣ ಅಸ್ತ್ರವಾಗಿ ಬಳಸಿಕೊಂಡು ಬಿಜೆಪಿ ಮೇಲೆ ಮುಗಿಬಿದ್ದ ಕಾಂಗ್ರೆಸ್ ಇಂದು ಅಧಿಕಾರದಲ್ಲಿದೆ. ಅಲ್ಲದೆ ಅಂದು ಈ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮನೆಯಲ್ಲೇ ಈ ಕಂತೆಗಟ್ಟಲೆ ಹಣ ಸಿಕ್ಕಿದೆ. ಹೀಗಾಗಿ ಅಂಬಿಕಾಪತಿಗೆ ಆ ಕಮಿಷನ್ ಪ್ರಕರಣವೇ ತಿರುಗುಬಾಣವಾಗಬಹುದು.

ಅಲ್ಲದೆ ಮಂಚದಡಿ ಕಂತೆಗಟ್ಟಲೆ ಹಣ ಸಿಕ್ಕ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಈಗಾಗಲೇ ಕಾಂಗ್ರೆಸ್ ಮೇಲೆ ಮುಗಿಬಿದ್ದಿದೆ. ಒಟ್ಟಿನಲ್ಲಿ ಇದೊಂದೇ ದಾಳಿಯಿಂದ ದೊಡ್ಡದೊಂದು ಭ್ರಷ್ಟಾಚಾರ ಆರೋಪ ಪ್ರಕರಣವೂ ಮುನ್ನೆಲೆಗೆ ಬಂದಿದ್ದಲ್ಲದೆ, ಆ ಕುರಿತು ಕುತೂಹಲವೂ ಕೆರಳುವಂತೆ ಮಾಡಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರಿನಲ್ಲಿ ನಡೆಸಿದ ದಾಳಿಯಲ್ಲಿ ಕೋಟಿಗಟ್ಟಲೆ ಮೊತ್ತದ ನೋಟುಗಳ ಕಂತೆಗಳು ಸಿಕ್ಕಿವೆ. ನಗರದ ಐದು ಕಡೆ ದಾಳಿ ಮಾಡಿದ್ದು, ಆ ಪೈಕಿ ಆರ್.ಟಿ.ನಗರದ ಆತ್ಮಾನಂದ ಕಾಲನಿಧಿಯಲ್ಲಿ 42 ಕೋಟಿ ಹಣ ಪತ್ತೆಯಾಗಿದೆ. ಅಶ್ವತ್ಥಮ್ಮ ಹಾಗೂ ಅಂಬಿಕಾಪತಿ ದಂಪತಿಯ ಮನೆಯಲ್ಲಿ ಈ ಹಣ ಪತ್ತೆಯಾಗಿದೆ. ಅಂಬಿಕಾಪತಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನಾಗಿದ್ದು, ಪತ್ನಿ ಅಶ್ವತ್ಥಮ್ಮ ಬಿಬಿಎಂಪಿಯ ಮಾಜಿ ಕಾಪೆರ್ಪೋರೇಟರ್ ಆಗಿದ್ದಾರೆ.

ಅನಧಿಕೃತ ಜಾಹೀರಾತಿಗೆ ಬ್ರೆಕ್ ಹಾಕಲು ಬರುತ್ತಿದೆ ಹೊಸ ರೂಲ್ಸ್

ಬೆಂಗಳೂರು,ಅ.14-ಅನಧಿಕೃತ ಜಾಹೀರಾತುಗಳಿಗೆ ಬ್ರೇಕ್ ಹಾಕಲು ನಗರದಲ್ಲಿ ಹೊಸ ನಿಯಮ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ಬೇರು ಬಿಟ್ಟಿರುವ ಜಾಹೀರಾತು ಮಾಫಿಯಾಗೆ ಈಗಾಗಲೇ ಕಡಿವಾಣ ಹಾಕಲಾಗಿದ್ದು, ನಗರ ವ್ಯಾಪ್ತಿಗೆ ಸಂಬಂಧಿಸಿದಂತೆ ಜಾಹೀರಾತು ಕಾಯ್ದೆಗೆ ಕೆಲ ಮಾರ್ಪಾಡು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಬಿಬಿಎಂಪಿ ಜಾಹೀರಾತು ವಿಭಾಗದ ಉಪ ಆಯುಕ್ತ ಲೋಕನಾಥ್ ಮಾಹಿತಿ ನೀಡಿದ್ದಾರೆ.

ಈ ಹೊಸ ಜಾಹೀರಾತು ನೀತಿಯಿಂದ ಸರ್ಕಾರಕ್ಕೆ ಹೆಚ್ಚು ಆದಾಯ ಬರುವ ಸಾಧ್ಯತೆಗಳಿವೆ ಎಂದು ಅವರು ವಿವರಣೆ ನೀಡಿದ್ದಾರೆ. ನಗರದಲ್ಲಿ ಅಕ್ರಮ ಜಾಹೀರಾತುಗಳಿಗೆ ಕಡಿವಾಣ ಹಾಕಿದ್ದರೂ ಕೂಡ ಅನಧಿಕೃತ ಜಾಹೀರಾತುಗಳ ಹಾವಳಿ ಹೆಚ್ಚಗಿರುವುದನ್ನು ಮನಗಂಡು ಸರ್ಕಾರ ಇಂತಹ ತೀರ್ಮಾನ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಿಯಾಂಕಾ ವಾದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಸಾರ್ವಜನಿಕರಿಂದ ಹಾಗೂ ರಾಜಕೀಯ ಪಕ್ಷಗಳಿಂದ ಅನಧಿಕೃತ ಪ್ಲೆಕ್ಸ್, ಬ್ಯಾನರ್ ಗಳ ಪ್ರದರ್ಶನ ಹೆಚ್ಚಾಗಿದೆ. ಇದರಿಂದ ಸರ್ಕಾರದ ಖಜಾನೆಗೆ ಕೋಟ್ಯಾಂತರ ಹಣ ಲಾಸ್ ಆಗುತಿತ್ತು. ಈ ರೀತಿ ಅಳವಡಿಸುವ ಅನಧಿಕೃತ ಪ್ಲೆಕ್ಸ್ , ಬ್ಯಾನರ್ ಕಡಿವಾಣಕ್ಕೆ ರಾಜ್ಯ ಸರ್ಕಾರ ಹೊಸ ಪ್ಲಾನ್ ಕಂಡುಕೊಂಡು ನಗರಕ್ಕೆ ಸೀಮಿತವಾಗಿ ಹೊಸ ಜಾಹೀರಾತು ನಿಯಮ ಅಳವಡಿಸಿಕೊಂಡಿದೆ.

ಹಾಗಾದ್ರೆ, ಸಿಲಿಕಾನ್ ಸಿಟಿಗೆ ಸೀಮಿತವಾದ ಹೊಸ ಜಾಹೀರಾತು ನಿಯಮದಲ್ಲಿ ಎನ್ನಿದೆ ಅಂತ ನೋಡೋದಾದೆ ಇನ್ನು ಮುಂದೆ – ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಿ ಬೇಕದ್ರು ಪ್ಲೆಕ್ಸ್ ಬ್ಯಾನರ್ ಹಾಕಬಹುದು ಆದರೆ ಅದಕ್ಕೆ ಬಿಬಿಎಂಪಿ ಅನುಮತಿ ಕಡ್ಡಾಯವಾಗಿರಲಿದೆ. ಯಾರಾದ್ರೂ ಪ್ಲೆಕ್ಸ್, ಬ್ಯಾನರ್ ಹಾಕಬೇಕು ಅಂದ್ರೆ ಅವರಿಗೆ ಮೂರು ದಿನ ಅನುಮತಿ ನೀಡಲಾಗುವುದು ಒಂದು ಬ್ಯಾನರ್ ಅಥವಾ ಪ್ಲೆಕ್ಸ್‍ಗೆ ಇಂತ್ತಿಷ್ಟು ಹಣ ನಿಗದಿ ಮಾಡಲಾಗಿದೆ.

ಮೂರು ದಿನಕ್ಕೆ ನೀವು ಹಾಕೋ ಪ್ಲೆಕ್ಸ್ , ಬ್ಯಾನರ್ ಮೇಲೆ ಹಣ ನಿಗದಿ ಮಾಡಲಾಗುವುದು. ಹಣ ಪಾವತಿ ಮಾಡಿದ್ರೆ ಮೂರು ದಿನ ಬ್ಯಾನರ್ ಹಾಕಲು ಅನುಮತಿ ನೀಡಲಾಗುವುದು. ಮೂರು ದಿನ ನಂತರ ಬಿಬಿಎಂಪಿ ಸಿಬ್ಬಂದಿಗಳೆ ನೀವು ಅಳವಡಿಸುವ ಬ್ಯಾನರ್ ತೆರವು ಮಾಡ್ತಾರೆ, ಹೀಗೆ ಅನಧಿಕೃತ ಪ್ಲೆಕ್ಸ್ , ಬ್ಯಾನರ್ ಕಡಿವಾಣಕ್ಕೆ ರಾಜ್ಯ ಸರ್ಕಾರ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ.

ಲಾಹೋಸ್ ಕಾರ್ಖಾನೆಯಲ್ಲಿ ಬಂಧಿಯಾಗಿದ್ದಾರೆ ಒಡಿಶಾದ 35 ಕಾರ್ಮಿಕರು

ಭುವನೇಶ್ವರ,ಅ.14- ಒಡಿಶಾದ 35 ಕಾರ್ಮಿಕರ ಗುಂಪು ಅವರು ಕೆಲಸ ಮಾಡುತ್ತಿದ್ದ ಲಾವೋಸ್‍ನ ಕಂಪನಿಯೊಂದರಲ್ಲಿ ಬಂಲಾಹೋಸ್ ಕಾರ್ಖಾನೆಯಲ್ಲಿ ಬಂಧಿಯಾಗಿದ್ದಾರೆ ಒಡಿಶಾದ 35 ಕಾರ್ಮಿಕರುತರಾಗಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಇಲ್ಲಿನ ಪ್ಲೈವುಡ್ ಕಂಪನಿಯು ಸುಮಾರು ಒಂದೂವರೆ ತಿಂಗಳ ಹಿಂದೆ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದೆ, ಆದರೆ ಅವರಿಗೆ ತಾಯ್ನಾಡಿಗೆ ಮರಳಲು ಅಥವಾ ವೇತನವನ್ನು ಪಾವತಿಸಲು ಅವಕಾಶ ನೀಡುತ್ತಿಲ್ಲ ಹೀಗಾಗಿ ನಮ್ಮನ್ನು ಕರೆಸಿಕೊಳ್ಳುವಂತೆ ನೌಕರರು ಒಡಿಶಾ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಿಯಾಂಕಾ ವಾದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ತಮ್ಮ ಪಾಸ್‍ಪೋರ್ಟ್‍ಗಳನ್ನು ಕಂಪನಿಯು ಬಲವಂತವಾಗಿ ಕಿತ್ತುಕೊಂಡಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಇದನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದ ನಂತರ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಕಾರ್ಮಿಕರನ್ನು ಮನೆಗೆ ಕರೆತರಲು ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಇದರ ನಂತರ, ರಾಜ್ಯ ಕಾರ್ಮಿಕ ಆಯುಕ್ತರು ಲಾವೋಸ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಮಸ್ಯೆನಿವಾರಣೆ ಕುರಿತಂತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಮಿಕರು ಸುರಕ್ಷಿತವಾಗಿ ಭಾರತಕ್ಕೆ ಮರಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ರಾಯಭಾರ ಕಚೇರಿ ಒಡಿಶಾ ಸರ್ಕಾರಕ್ಕೆ ತಿಳಿಸಿದೆ.

40 ವರ್ಷಗಳ ನಂತರ ಮತದಾನದ ಭಾಗ್ಯ ಪಡೆದ ನಿವಾಸಿಗಳು

ನಮ್ಮಲ್ಲಿ ತಿನ್ನಲು ಹಣ ಅಥವಾ ಆಹಾರವಿಲ್ಲ. ನಮಗೆ ಹಿಂತಿರುಗಲು ಸಹ ಅನುಮತಿಸಲಾಗುವುದಿಲ್ಲ ಎಂದು ಆಗ್ನೇಯ ಏಷ್ಯಾದ ದೇಶದಲ್ಲಿ ಬಂ„ತರಾಗಿರುವ ಕಾರ್ಮಿಕರಲ್ಲಿ ಒಬ್ಬರಾದ ಸರೋಜ್ ಪಲೈ ಅಲವತ್ತುಕೊಂಡಿದ್ದಾರೆ.

ದಸರಾ ರಜೆಗಳ ಪ್ರಯುಕ್ತ ಕೆಎಸ್ಆರ್‌ಟಿಸಿಯಿಂದ 2000ಕ್ಕೂ ಹೆಚ್ಚು ವಿಶೇಷ ಬಸ್

ಬೆಂಗಳೂರು, ಅ.14- ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ರಾಜ್ಯದ ಹಾಗೂ ದೇಶದ ವಿವಿಧ ಕಡೆಗಳಿಂದ ದಸರಾ ವೀಕ್ಷಣೆಗೆ ಮೈಸೂರು ನಗರಕ್ಕೆ ಆಗಮಿಸುವ ಪ್ರವಾಸಿಗರ ಹಾಗೂ ರಜೆಗಳ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಹೆಚ್ಚುವರಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಿದೆ.

ಪ್ರಸ್ತುತ ಕಾರ್ಯಾಚರಣೆ ಮಾಡಲಾಗುತ್ತಿರುವ ಕರ್ನಾಟಕ ಸಾರಿಗೆ(ವೇಗದೂತ), ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್‍ಕ್ಲಾಸ್(ಮಲ್ಟಿ ಆಕ್ಸಲ್), ಇ. ಪವರ್ ಪ್ಲಸ್, ಅಂಬಾರಿ ಕ್ಲಬ್‍ಕ್ಲಾಸ್, ಅಂಬಾರಿ ಉತ್ಸವ್ ಹಾಗೂ ಪಲ್ಲಕ್ಕಿ ಸಾರಿಗೆ ಸೇವೆಗಳ ಜೊತೆಗೆ ಹೆಚ್ಚುವರಿ ಬಸ್‍ಗಳ ವಿಶೇಷ ಸಾರಿಗೆ ಸೇವೆಗಳ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.

ದಸರಾ ರಜೆಗಳ ಪ್ರಯುಕ್ತ ಕೆಎಸ್ಆರ್‌ಟಿಸಿಯಿಂದ 2000ಕ್ಕೂ ಹೆಚ್ಚು ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಅ. 20ಂದ ಅ.26ರವರೆಗೆ ಬೆಂಗಳೂರಿನಿಂದ ರಾಜ್ಯದ ಮತ್ತು ಅಂತರ ರಾಜ್ಯದ ವಿವಿಧ ಸ್ಥಳಗಳಿಗೆ 2000ಕ್ಕೂ ಹೆಚ್ಚು ಬಸ್‍ಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ.

ಹೆಚ್ಚುವರಿ ಬಸ್‍ಗಳು ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ತೆರಳಲಿವೆ. ನಂತರ ರಾಜ್ಯದ ಮತ್ತು ಅಂತರ ರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಅ.24 ರಿಂದ ಅ.29ರವರೆಗೆ ಪ್ರಯಾಣಿಕರು ಮರಳಿ ಬರಲು ಅನುಕೂಲವಾಗುವತೆ ವಿಶೇಷ ಬಸ್‍ಗಳನ್ನು ಕಾರ್ಯಾಚರಣೆ ಮಾಡಲಾಗುವುದು.

ಹಮಾಸ್ ನೆರವಿಗೆ ನಿಂತ ಇರಾನ್ ಬೆಂಬಲಿತ ಹಿಜ್ಬುಲ್ಲಾ

ರಾಜ್ಯದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಹಾಗೂ ನೆರೆ ರಾಜ್ಯಗಳಲ್ಲಿನ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಪೂನಾ, ಏರ್ನಾಕುಲಂ, ಪಾಲ್ಗಾಟ್ ಹಾಗೂ ಇತರೆ ಸ್ಥಳಗಳಿಗೆ ವಿಶೇಷ ಬಸ್‍ಗಳ ವ್ಯವಸ್ಥೆ ಕಲ್ಪಿಸುವುದಾಗಿ ಕೆಎಸ್‍ಆರ್‍ಟಿಸಿ ಪ್ರಕಟಣೆ ತಿಳಿಸಿದೆ.

600 ವಿಶೇಷ ಬಸ್ ವ್ಯವಸ್ಥೆ: ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕವಾಗಿ 250ಹೆಚ್ಚುವರಿ ಬಸ್‍ಗಳ ಕಾರ್ಯಾಚರಣೆ ಹಾಗೂ ಮೈಸೂರಿನ ಸುತ್ತ ಮುತ್ತಲಿನ ಪ್ರೇಕ್ಷಣೀಯ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಾದ ಚಾಮುಂಡಿಬೆಟ್ಟ, ಕೆ.ಆರ್.ಎಸ್.ಅಣೆಕಟ್ಟು/ಬೃಂದಾವನ ಉದ್ಯಾನ, ಶ್ರೀರಂಗಪಟ್ಟಣ, ನಂಜನಗೂಡು ಸೇರಿದಂತೆ ಮಡಿಕೇರಿ, ಮಂಡ್ಯ, ಮಳವಳ್ಳಿ, ಹೆಚ್.ಡಿ.ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್.ನಗರ, ಗುಂಡ್ಲುಪೇಟೆ ಇತ್ಯಾದಿ ಸ್ಥಳಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು 350 ಹೆಚ್ಚುವರಿ ಬಸ್‍ಗಳು ಸೇರಿದಂತೆ ಒಟ್ಟಾರೆ 600ದಸರಾ ವಿಶೇಷ ಬಸ್‍ಗಳನ್ನು ಕಾರ್ಯಾಚರಿಸಲು ಯೋಜಿಸಲಾಗಿದೆ.

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಫ್ಲೈ ಬಸ್ ಮೂಲಕ ನೇರ ಸಾರಿಗೆ ಸೌಲಭ್ಯ ಕಲ್ಪಿಸಲಾಗಿರುತ್ತದೆ. ಇ-ಟಿಕೇಟ್ ಬುಕಿಂಗ್ ಅನ್ನು ನಿಗಮದ ವೆಬ್ ಸೈಟ್ ಅಥವಾ ಮೊಬೈಲ್ ಮುಖಾಂತರ ಮಾಡಬಹುದಾಗಿದೆ. ಮೈಸೂರು ಗ್ರಾಮಾಂತರ ಹಾಗೂ ನಗರ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಹಾಗೂ ಪ್ರವಾಸಿಗರಿಗೆ ನಿಗಮದ ಸಾರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಮಾಹಿ ತಿಕೇಂದ್ರವನ್ನು ಪ್ರತ್ಯೇಕವಾಗಿ ತೆರೆಯಲಾಗುವುದು ಎಂದು ತಿಳಿಸಿದೆ.

ಮಧ್ಯರಾತ್ರಿ ಬಂದು ಹಣ್ಣು ಕದ್ದ ಕಳ್ಳ

ಸಾರ್ವಜನಿಕ ಪ್ರಯಾಣಿಕರುಕರ್ನಾಟಕ ಹಾಗೂ ನೆರೆರಾಜ್ಯಗಳಾದ ಆಂಧ್ರ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ತುಳುನಾಡು, ಮಹಾರಾಷ್ಟ್ರ ಹಾಗೂ ಪುದುಚೇರಿ ರಾಜ್ಯಗಳಲ್ಲಿರುವ ಒಟ್ಟು703ಗಣಕೀಕೃತ ಮುಂಗಡ ಆಸನಗಳನ್ನು ಕಾ್ದುರಿಸುವ ಕೌಂಟರ್‍ಗಳ ಮೂಲಕ ನಿಗಮದ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾ್ದುರಿಸಬಹುದಾಗಿದೆ.

ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರುಒಟ್ಟಾಗಿ ಮುಂಗಡಟಿಕೇಟ್ ಕಾ್ದುರಿಸಿದಲ್ಲಿ ಶೇಕಡ5 ರಷ್ಟುರಿಯಾುತಿ ನೀಡಲಾಗುವುದು ಹಾಗೂ ಹೋಗುವ ಮತ್ತು ಬರುವ ಪ್ರಯಾಣದಟಿಕೇಟ್‍ನ್ನುಒಟ್ಟಿಗೆ ಕಾ್ದುರಿಸಿದಾಗ ಬರುವ ಪ್ರಯಾಣದರದಲ್ಲಿಶೇಕಡ 10 ರಷ್ಟುರಿಯಾುತಿ ನೀಡಲಾಗುವುದು. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾ್ದುರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡವಾಗಿಕಾ್ದುರಿಸಲಾಗಿರುವ ಟಿಕೇಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್‍ಅಪ್ ಪಾುಂಟ್‍ನ ಹೆಸರನ್ನು ಗಮನಿಸುವಂತೆಕೋರಲಾಗಿದೆ. ಅಲ್ಲದೇ, ನಿಗಮದಕಾರ್ಯಾಚರಣೆ ವ್ಯಾಪ್ತಿಯಲ್ಲಿನಎಲ್ಲಾತಾಲ್ಲೂಕು/ಜಿಲ್ಲಾ ಬಸ್ ನಿಲ್ದಾಣಗಳಿಂದ ಸಂಚಾರಒತ್ತಡಕ್ಕನುಗುಣವಾಗಿ ಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು.

ಇಸ್ರೇಲ್ ದಾಳಿಯಲ್ಲಿ ಪತ್ರಕರ್ತ ಸಾವು

ಟೆಲ್‍ಅವಿವ್,ಅ.14- ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆಯುತ್ತಿರುವ ಭೀಕರ ಕಾಳಗದಲ್ಲಿ ವಿಶ್ವದ ಪ್ರತಿಷ್ಠಿತ ರಾಯ್ಟರ್ಸ್ ಸುದ್ದಿಸಂಸ್ಥೆಯ ಪತ್ರಕರ್ತ ಹತ್ಯೆಗೀಡಾಗಿದ್ದಾನೆ. ಯುದ್ಧಪೀಡಿತ ಪ್ಯಾಲೆಸ್ತೇನ್‍ಗೆ ವರದಿ ಮಾಡಲು ರಾಯ್ಟರ್ಸ್ ಸುದ್ದಿಸಂಸ್ಥೆಯ ಪತ್ರಕರ್ತ ಇಸಾಂ ಅಬ್ದುಲ್ ಅವರು ಇಸ್ರೇಲ್ ಕಡೆಯಿಂದ ಹಾರಿದ ಕ್ಷಿಪಣಿಗೆ ಬಲಿಯಾಗಿದ್ದಾರೆ.

ಘಟನೆಯಲ್ಲಿ ವಿವಿಧ ಸುದ್ದಿಸಂಸ್ಥೆಗಳ ಆರು ಮಂದಿ ಪತ್ರಕರ್ತರು ಗಂಭೀರವಾಗಿ ಗಾಯಗೊಂಡಿದ್ದು, ಎಲ್ಲರನ್ನೂ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ಇಸ್ರೇಲ್ ಕ್ಷಿಪಣಿ ದಾಳಿಯಲ್ಲಿ ರಾಯ್ಟರ್ಸ್ ವಿಡಿಯೋ ಜರ್ನಲಿಸ್ಟ್ ಅಬ್ದುಲ್ಲ ಸಾವನ್ನಪ್ಪಿದ್ದಾರೆ. ಈ ಸುದ್ದಿಯನ್ನು ಅತ್ಯಂತ ವಿಶಾದದಿಂದ ಹೇಳುತ್ತಿದ್ದೇವೆ. ಅವರಿಗೆ ನಮ್ಮ ಅಂತಿಮ ನಮನಗಳು ಎಂದು ಹೇಳಿದೆ. ಘಟನೆಯಲ್ಲಿ ಫ್ರಾನ್ಸ್‍ನ ಆರು ಮಂದಿ ಪತ್ರಕರ್ತರು ಗಾಯಗೊಂಡಿದ್ದು, ಆಂಬುಲೆನ್ಸ್‍ಗಳಲ್ಲಿ ವಿವಿಧ ಕಡೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ಪಾರ್ವತಿಕುಂಡ್, ಜಾಗೇಶ್ವರ ದೇವಾಲಯಗಳ ಬಗ್ಗೆ ಮೋದಿ ಶ್ಲಾಘನೆ

ಯುದ್ಧಪೀಡಿತ ಪ್ಯಾಲೆಸ್ತೇನ್ ಮತ್ತು ಇಸ್ರೇಲ್‍ಗೆ ಹೊಂದಿಕೊಂಡಿರುವ ಅಲ್ಮ ಅಲ್-ಶಾಬ್ ಬಳಿ ಪತ್ರಕರ್ತರ ಗುಂಪು ಕಾರ್ಯ ನಿರ್ವಹಣೆ ಮಾಡುತ್ತಿತ್ತು. ಈ ಸ್ಥಳದಲ್ಲಿ ಇಸ್ರೇಲ್ ಮಿಲಿಟರಿ ಮತ್ತು ಲೆಮೆನಾನ್‍ನ ಮಿಲೇಶಿಯ ಹಿಜ್ಬುಲ್ಲಾ ಗುಂಪಿನ ನಡುವೆ ಭೀಕರ ರಣಕಾಳಗ ನಡೆಯುತ್ತಿದೆ. ಈ ವೇಳೆ ಕ್ಷಿಪಣಿಯಿಂದ ತೂರಿಬಂದು ಅಪ್ಪಳಿಸಿದ್ದರಿಂದ ರಾಯ್ಟರ್ಸ್ ಸುದ್ದಿಸಂಸ್ಥೆಯ ಪತ್ರಕರ್ತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಪ್ರಿಯಾಂಕಾ ವಾದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಇಂದೋರ್ (ಮಧ್ಯಪ್ರದೇಶ),ಅ.14- ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರ ವಿರುದ್ಧ ಭಾರತೀಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಮಾದರಿ ನೀತಿ ಸಂಹಿತೆ ಮತ್ತು ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಿಯಾಂಕಾ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ಒತ್ತಾಯಿಸಿದೆ.

ಬಿಜೆಪಿಯ ಮಾಜಿ ಕಾನೂನು ಘಟಕದ ಸಂಚಾಲಕ ವಕೀಲ ಪಂಕಜ್ ವಾಧ್ವಾನಿ ಮಾಧ್ಯಮದೊಂದಿಗೆ ಮಾತನಾಡಿ, ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಿರುದ್ಧ ಮಂಡ್ಲಾದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಯೋಜನೆಯನ್ನು ಘೋಷಿಸಿದ್ದಕ್ಕಾಗಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯನ್ನು ಉಲ್ಲೇಖಿಸಿ ದೂರು ದಾಖಲಿಸಲಾಗಿದೆ.

ಶುಕ್ರವಾರ ಚುನಾವಣಾ ಆಯೋಗಕ್ಕೆ ವಕೀಲ ವಧ್ವಾನಿ ದೂರು ನೀಡಿದ್ದು, ದೂರಿನಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರವೂ ಪ್ರಿಯಾಂಕ ಗಾಂಧಿ ವಿದ್ಯಾರ್ಥಿವೇತನ ಯೋಜನೆಯನ್ನು ಘೋಷಿಸಿರುವುದು ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಗಾಗಿ ಜನರನ್ನು ಮತಕ್ಕಾಗಿ ಓಲೈಸುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ.

ಪಾರ್ವತಿಕುಂಡ್, ಜಾಗೇಶ್ವರ ದೇವಾಲಯಗಳ ಬಗ್ಗೆ ಮೋದಿ ಶ್ಲಾಘನೆ

ಮಂಡ್ಲಾ ಜಿಲ್ಲೆಯಲ್ಲಿ ಅಕ್ಟೋಬರ್ 12 ರಂದು ಸಾರ್ವಜನಿಕ ಭಾಷಣ ಕಾರ್ಯಕ್ರಮವೊಂದು ನಡೆದಿದ್ದು ಆ ವೇಳೆ ಪ್ರಿಯಾಂಕಾ ಗಾಂಧಿ 1 ರಿಂದ 12 ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ರೂ 500 ರಿಂದ ರೂ 1,500 ನೀಡುವುದಾಗಿ ಹೇಳಿದ್ದರು. ಈ ಯೋಜನೆಯ ಪ್ಯಾಕೇಜ್ ಒಟ್ಟು 648.80 ಕೋಟಿ ರೂ. ಆಗಲಿದೆ. ಈ ಘೋಷಣೆ ಮಾದರಿ ಸಂಹಿತೆಯ ಉಲ್ಲಂಘನೆ ಮತ್ತು ಜನರನ್ನು ಮತ ನೀಡುವಂತೆ ಪ್ರೇರೇಪಿಸುವುದಾಗಿದೆ. ಅಲ್ಲದೇ ಮಧ್ಯಪ್ರದೇಶ ಪ್ರಾತಿನಿಧ್ಯ ಕಾಯ್ದೆಯ ಉಲ್ಲಂಘನೆಯೂ ಆಗಿದೆ.

ಈ ಕುರಿತು ದೂರನ್ನು ನವದೆಹಲಿಯ ನಿರ್ವಚನ ಸದನದಲ್ಲಿ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ. ದೂರನ್ನು ಪರಿಶೀಲಿಸಿ ತನಿಖೆ ಆರಂಭಿಸಲಾಗಿದೆ ಎಂದು ವಾಧ್ವಾನಿ ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ನವೆಂಬರ್ 17 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಯ ಮೂಲಕ ರಾಜ್ಯವು 230 ವಿಧಾನಸಭಾ ಕ್ಷೇತ್ರಗಳಿಂದ ಶಾಸಕರನ್ನು ಆಯ್ಕೆ ಮಾಡಲಿದೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಡಿ.3ರಂದು ಮತ ಎಣಿಕೆ ನಡೆಯಲಿದೆ.

ಪಂಜಾಬ್‍ನಲ್ಲಿ ಇಬ್ಬರು ಎಲ್‍ಇಟಿ ಉಗ್ರರ ಬಂಧನ

ಇನ್ನು ಈಗಾಗಲೇ ಪಂಚರಾಜ್ಯಗಳ ಚುನಾವಣೆ ಘೋಷಣೆಯಾಗಿದೆ. ನವೆಂಬರ್ 17 ರಂದು ಮಧ್ಯಪ್ರದೇಶ, ನವೆಂಬರ್ 7ಕ್ಕೆ ಮಿಜೋರಾಂ ಮತ್ತು ಛತ್ತೀಸ್ಗಢ, ನವೆಂಬರ್ 25ಕ್ಕೆ ರಾಜಸ್ಥಾನ, ನವೆಂಬರ್ 30ಕ್ಕೆ ತೆಲಂಗಾಣದಲ್ಲಿ ಮತದಾನ ನಡೆಯಲಿದೆ. ಹಾಗೇ ಇವೆಲ್ಲ ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 3ರಂದು ಪ್ರಕಟವಾಗಲಿದೆ.

ಮೊಬೈಲ್ ಚಟ ಪ್ರಶ್ನಿಸಿದ ತಾಯಿಯನ್ನೇ ಕೊಂದ ಮಗ

ಕಾಸರಗೋಡು, ಅ 14 (ಪಿಟಿಐ) – ಮೊಬೈಲ್ ಚಟವನ್ನು ಪ್ರಶ್ನಿಸಿದ ತಾಯಿಯನ್ನೇ ಮಗ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ. ಮಗನಿಂದ ತೀವ್ರ ಹಲ್ಲೇಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ 63 ವರ್ಷದ ಮಹಿಳೆ ರುಗ್ಮಿಣಿ ಕಣ್ಣೂರು ಜಿಲ್ಲೆಯ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ಕಣಿಚಿರ ರುಗ್ಮಿಣಿ ಎಂಬುವರು ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಮಗ ಸುಜಿತ್ ಅವರ ಮನೆಯಲ್ಲಿ ಗೋಡೆಗೆ ತಲೆ ಬಡಿದು ಹಲ್ಲೇ ನಡೆಸಿದ್ದ ಎನ್ನಲಾಗಿದೆ. ಅಪರಾಧ ವರದಿಯಾದ ಕೂಡಲೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತ-ಶ್ರೀಲಂಕಾ ಸಂಬಂಧದಲ್ಲಿ ಹೊಸ ಅಧ್ಯಾಯ ಆರಂಭ : ಮೋದಿ

ವಿಚಾರಣೆಯ ಸಮಯದಲ್ಲಿ, ವ್ಯಕ್ತಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಮತ್ತು ಅವನು ತನ್ನ ಮೊಬೈಲ್ ಫೋನ್ ಅನ್ನು ನಿರಂತರವಾಗಿ ಬಳಸುವುದನ್ನು ಪ್ರಶ್ನಿಸಿದ್ದರಿಂದ ಅವನು ತನ್ನ ತಾಯಿಯ ಮೇಲೆ ದಾಳಿ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಅವರು ಹೇಳಿದರು.

ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು, ಕೋಝಿಕ್ಕೋಡ್‍ನ ಕುತಿರವಟ್ಟಂನಲ್ಲಿರುವ ಸರ್ಕಾರಿ ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.