Tuesday, July 2, 2024
Homeರಾಷ್ಟ್ರೀಯ9 ವೈಷ್ಣೋದೇವಿ ಭಕ್ತರ ನರಮೇಧ ನಡೆಸಿದ್ದು ಎಲ್‌ಇಟಿ ಸಂಘಟನೆ

9 ವೈಷ್ಣೋದೇವಿ ಭಕ್ತರ ನರಮೇಧ ನಡೆಸಿದ್ದು ಎಲ್‌ಇಟಿ ಸಂಘಟನೆ

ನವದೆಹಲಿ,ಜೂ.10– ಕಾಶ್ಮೀರದಲ್ಲಿ ವೇಷ್ಣೋದೇವಿ ದರ್ಶನಕ್ಕೆ ತೆರಳುತ್ತಿದ್ದ ಯಾತ್ರಿಕರಿದ್ದ ಬಸ್‌‍ ಮೇಲೆ ದಾಳಿ ನಡೆಸಿ 9 ಮಂದಿಯನ್ನು ಹತೈಗೈದ ಉಗ್ರರನ್ನು ಪಾಕ್‌ ಮೂಲದ ಲಷ್ಕರ್‌-ಎ-ತಯ್ಯಿಬಾ ಸಂಘಟನೆಯವರು ಎಂದು ಗುರುತಿಸಲಾಗಿದೆ.

ಉನ್ನತ ಅಧಿಕೃತ ಮೂಲಗಳ ಪ್ರಕಾರ, ರಿಯಾಸಿಯಲ್ಲಿ ಮೋದಿ 3.0 ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಗಿದೆ ಮತ್ತು ದುಷ್ಕರ್ಮಿಗಳು ಸುಮಾರು 12 ಜಿಹಾದಿಗಳು ರಜೌರಿ-ಪೂಂಚ್‌ ಅರಣ್ಯದೊಳಗೆ ಮೂರು ಅಥವಾ ಎರಡು ಗುಂಪುಗಳಾಗಿ ಜಮು ಪ್ರದೇಶಕ್ಕೆ ಬಂದು ಇಂತಹ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.

ಈ ಭಯೋತ್ಪಾದಕ ಗುಂಪು ಎಲ್‌ಒಸಿಯಾದ್ಯಂತ ಹಲವಾರು ಪಾಕಿಸ್ತಾನಿ ಪ್ರಜೆಗಳನ್ನು ಒಳಗೊಂಡಿದೆ ಮತ್ತು ಗಡಿ-ಎಲ್‌ಒಸಿ ಸುರಂಗದ ಮೂಲಕ ಆಗಮಿಸಿರುವ ಸಾಧ್ಯತೆಯಿದೆ ಆದರೆ ಇದನ್ನು ಭಾರತೀಯ ಭದ್ರತಾ ಪಡೆಗಳು ಮತ್ತು ಭಾರತೀಯ ಸೇನೆಯು ತೀವ್ರವಾಗಿ ನಿರಾಕರಿಸಿದೆ.

ಕಳೆದ ಐದು ವರ್ಷಗಳಲ್ಲಿ, ಪೂಂಚ್‌-ರಜೌರಿ ಸೆಕ್ಟರ್‌ ಭಾರತೀಯ ಸೇನೆ ಮತ್ತು ಜಿಹಾದಿಗಳ ನಡುವೆ ಹಲವಾರು ಗುಂಡಿನ ಕಾಳಗಗಳನ್ನು ಕಂಡಿದೆ ಮತ್ತು ಭಯೋತ್ಪಾದಕರು ಆಶ್ಚರ್ಯಕರ ಮತ್ತು ವೇಗದ ಚಲನೆಯ ಪ್ರಯೋಜನವನ್ನು ಹೊಂದಿದ್ದು, ಭಾರತದ ಕಡೆಯಿಂದ ಸಾವುನೋವುಗಳು ಹೆಚ್ಚಾಗಿವೆ. ಜೂನ್‌ 29 ರಿಂದ ಅಮರನಾಥ ಯಾತ್ರೆ ಆರಂಭವಾಗುತ್ತಿದ್ದಂತೆ ಗಹ ಸಚಿವ ಅಮಿತ್‌ ಶಾ ಸೇರಿದಂತೆ ಮೋದಿ ಸರ್ಕಾರ ರಿಯಾಸಿ ದಾಳಿಯನ್ನು ಗಂಭೀರವಾಗಿ ಪರಿಗಣಿಸಿದೆ.

RELATED ARTICLES

Latest News